AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೇದಿಕೆ ಮೇಲೆ ಅಶ್ಲೀಲ ಹಾಡು: ನಾಯಕನ ವಿರುದ್ಧ ಕೇಸು ದಾಖಲು

Chandrahas song controversy: ಸಿನಿಮಾ ನಾಯಕರುಗಳು ಸಿನಿಮಾಗಳಲ್ಲಿ ಹಾಗೂ ನಿಜ ಜೀವನದಲ್ಲಿ ‘ನಾಯಕ’ರಾಗಿ ಉಳಿದಿಲ್ಲ. ನಾಯಕರೆಂದರೆ ರೌಡಿಗಳು, ಕತ್ತರಿಸುವವರು, ಕೊಲ್ಲವವರು ಆಗಿದ್ದಾರೆ. ನಿಜ ಜೀವನದಲ್ಲಿಯೂ ಕೆಲ ನಾಯಕ ನಟರು ಅದೇ ರೀತಿಯ ರೌಡಿ, ದುಷ್ಟ ವರ್ತನೆಗಳನ್ನು ತೋರುತ್ತಾರೆ. ಇಂಥಹಾ ‘ದುಷ್ಟ ನಾಯಕ’ರ ಪಟ್ಟಿಗೆ ಹೊಸ ಸೇರ್ಪಡೆ ಚಂದ್ರಹಾಸ್.

ವೇದಿಕೆ ಮೇಲೆ ಅಶ್ಲೀಲ ಹಾಡು: ನಾಯಕನ ವಿರುದ್ಧ ಕೇಸು ದಾಖಲು
Chandrahass
ಮಂಜುನಾಥ ಸಿ.
|

Updated on: Feb 05, 2026 | 7:15 PM

Share

ಸಿನಿಮಾ (Cinema) ನಾಯಕರುಗಳು ಸಿನಿಮಾಗಳಲ್ಲಿ ಹಾಗೂ ನಿಜ ಜೀವನದಲ್ಲಿ ‘ನಾಯಕ’ರಾಗಿ ಉಳಿದಿಲ್ಲ. ನಾಯಕರೆಂದರೆ ರೌಡಿಗಳು, ಕತ್ತರಿಸುವವರು, ಕೊಲ್ಲವವರು ಆಗಿದ್ದಾರೆ. ನಿಜ ಜೀವನದಲ್ಲಿಯೂ ಕೆಲ ನಾಯಕ ನಟರು ಅದೇ ರೀತಿಯ ರೌಡಿ, ದುಷ್ಟ ವರ್ತನೆಗಳನ್ನು ತೋರುತ್ತಾರೆ. ಇಂಥಹಾ ‘ದುಷ್ಟ ನಾಯಕ’ರ ಪಟ್ಟಿಗೆ ಹೊಸ ಸೇರ್ಪಡೆ ಚಂದ್ರಹಾಸ್. ತೆಲುಗಿನ ಈ ಹೊಸ ಹೀರೋ, ವೇದಿಕೆ ಮೇಲೆ ಅಸಭ್ಯವಾದ ಹಾಡು ಹಾಡಿದ್ದಲ್ಲದೆ, ಪ್ರಶ್ನೆ ಮಾಡಿದವರಿಗೆ ಬೆದರಿಕೆ ಸಹ ಹಾಕಿದ್ದಾರೆ.

ಆಟಿಟ್ಯೂಡ್ ಸ್ಟಾರ್ ಎಂದು ಅಡ್ಡ ಹೆಸರಿಟ್ಟುಕೊಂಡಿರುವ ಚಂದ್ರಹಾಸ್, ಹಿರಿಯ ನಟ ಇಟಿವಿ ಪ್ರಭಾಕರ್ ಅವರ ಪುತ್ರ. ಇದೀಗ ಅವರ ನಟನೆಯ ‘ಬರಾಬರ್ ಪ್ರೇಮಿಸ್ತ’ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ವೇದಿಕೆ ಏರಿದ ಚಂದ್ರಹಾಸ್, ಅಶ್ಲೀಲವಾದ ಹಾಡೊಂದನ್ನು ಹಾಡಿದ್ದರು. ಎದುರಿಗೆ ಸಿನಿಮಾದ ನಾಯಕಿ ಸೇರಿದಂತೆ ಹಲವು ಮಹಿಳೆಯರು, ಖ್ಯಾತ ನಟ ಜೆಡಿ ಚಕ್ರವರ್ತಿ ಸೇರಿದಂತೆ ಹಲವು ಹಿರಿಯರು ಕೂತಿದ್ದರೂ ಸಹ ನಟ ಚಂದ್ರಹಾಸ್ ಬಹಳ ಹೆಮ್ಮೆ, ಅಹಂನಿಂದ ಅಶ್ಲೀಲವಾದ ಹಾಡೊಂದನ್ನು ಹಾಡಿದ್ದಾರೆ.

ಇದನ್ನೂ ಓದಿ:‘ಧುರಂಧರ್’ ಸಿನಿಮಾ ನಿರ್ಮಾಪಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ

ಹಾಡಿನಲ್ಲಿ ಸೊಂಟದ ಕೆಳಗಿನ ಪದಗೆಳ ಬಳಕೆಯನ್ನು ಮಾಡಿದ್ದಾರೆ. ಇದು ಅತಿಥಿ ಜೆಡಿ ಚಕ್ರವರ್ತಿ ಸೇರಿದಂತೆ ಅಲ್ಲಿದ್ದ ಹಲವು ಮಹಿಳೆಯರಿಗೆ, ಪತ್ರಕರ್ತರಿಗೆ ಇರುಸು ಮುರುಸು ಉಂಟು ಮಾಡಿದೆ. ಹಾಡಿನ ಬಳಿಕ ಅಲ್ಲೇ ಇದ್ದ ಕೆಲ ಪತ್ರಕರ್ತರು ಅಸಭ್ಯ ಹಾಡಿನ ಔಚಿತ್ರವನ್ನು ಚಂದ್ರಹಾಸ್ ಬಳಿ ಪ್ರಶ್ನೆ ಮಾಡಿದಾಗ ಚಂದ್ರಹಾಸ್ ಸಿಟ್ಟಾಗಿ ಒಬ್ಬ ಪತ್ರಕರ್ತನಿಗೆ ಬೆದರಿಕೆ ಸಹ ಹಾಕಿದ್ದಾರೆ. ಅದರ ಬೆನ್ನಲ್ಲೆ ಚಂದ್ರಹಾಸ್ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಘಟನೆ ವಿವಾದದ ರೂಪ ಪಡೆಯುತ್ತಿದ್ದಂತೆ ‘ಬರಾಬರ್ ಪ್ರೇಮಿಸ್ತ’ ಚಿತ್ರದ ನಿರ್ದೇಶಕ ಸಂಪತ್ ರುದ್ರಾ ಮತ್ತು ನಿರ್ಮಾಪಕರು ಮಾಧ್ಯಮಗಳ ಮುಂದೆ ಬಂದು ಕ್ಷಮೆಯಾಚಿಸಿದ್ದಾರೆ. “ಆ ಹಾಡು ನಮ್ಮ ಸಿನಿಮಾದಲ್ಲಿಲ್ಲ, ನಮ್ಮ ಹೀರೋ ಅವರ ಅತಿ ಉತ್ಸಾಹದಿಂದ ಮಾಡಿದ ಕೆಲಸ ಅದು. ಇದರಿಂದ ನಮಗೂ ಆಘಾತವಾಗಿದೆ” ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ನಟ ಚಂದ್ರಹಾಸ್ ಮಾತ್ರ, ‘ನಾನು ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ. ನನ್ನ ಹಾಡಿನ ಕೆಲ ಭಾಗವನ್ನಷ್ಟೆ ಕಟ್ ಮಾಡಿ, ನನ್ನ ತೇಜೋವಧೆಗೆ ಬಳಸಲಾಗುತ್ತಿದೆ’ ಎಂದಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ
ಮಗ 49 ಕೋಟಿ ರೂ ಲಾಟರಿ ಗೆದ್ದ, ಕುಟುಂಬಸ್ಥರ ಸಂತೋಷ ಹೇಗಿತ್ತು ನೋಡಿ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವಾಗಲೇ ವಿಪಕ್ಷದಿಂದ ಸಭಾತ್ಯಾಗ
ಲಂಚ ನೀಡಲು ಹಣವಿಲ್ಲದ್ದಕ್ಕೆ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ
ಲಂಚ ನೀಡಲು ಹಣವಿಲ್ಲದ್ದಕ್ಕೆ ಮೂಲಂಗಿಯನ್ನೇ ತಾಲೂಕು ಕಚೇರಿಗೆ ತಂದ ರೈತ
ಶುಲ್ಕ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
ಶುಲ್ಕ ವಿವಾದ: ಸಂಶೋಧನಾ ಪ್ರಬಂಧ ಸುಟ್ಟುಹಾಕಿ ಕಣ್ಣೀರಿಟ್ಟ ವಿದ್ಯಾರ್ಥಿಗಳು
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
PM Modi Speech Live: ರಾಜ್ಯಸಭೆಯಲ್ಲಿ ಪ್ರಧಾನಿ ಮೋದಿ ಭಾಷಣದ ನೇರಪ್ರಸಾರ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾರು ಚಾಲಕನ ಮೇಲೆ ಬೈಕ್​​ ಸವಾರನ ದರ್ಪ: ಮಿರರ್​​ ಮುರಿದಿದ್ದಲ್ಲದೆ ನಿಂದನೆ
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಕಾವೇರಿ ನದಿ ತವರಲ್ಲೇ ಹನಿ ನೀರಿಗೂ ಹಾಹಾಕಾರ: ಕುಡಿಯಲು ಕೊಳಚೆ ನೀರೇ ಗತಿ!
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಇಬ್ಬಲೂರು ಜಂಕ್ಷನ್​ನಲ್ಲಿ ನಿರ್ಮಾಣವಾಗಲಿದೆ ಹೊಸ ಫ್ಲೈಓವರ್
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಅಕ್ರಮ ವಲಸಿಗರಿಗೆ ನಡುಕ ಶುರು: ರಾಜ್ಯ ಸರ್ಕಾರದಿಂದ ವಿಶೇಷ ಕಾರ್ಯಾಚರಣೆ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ
ಬಯಲಾಯ್ತು ಕಲಬುರಗಿ ಆರ್​ಟಿಒ ಕಚೇರಿ ಬ್ರಹ್ಮಾಂಡ ಭ್ರಷ್ಟಾಚಾರ