SS Rajamouli: ಆಸ್ಕರ್ ಪ್ರಶಸ್ತಿ ಪಡೆಯಲು ರಾಜಮೌಳಿ ಏಕೆ ವೇದಿಕೆ ಏರಿಲ್ಲ? ಇಲ್ಲಿದೆ ಉತ್ತರ

|

Updated on: Mar 13, 2023 | 10:44 AM

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲುವುದಕ್ಕೂ ಮೊದಲು ಈ ವೇದಿಕೆ ಮೇಲೆ ಹಾಡಿನ ಪರ್ಫಾರ್ಮೆನ್ಸ್ ನಡೆಯಿತು. ದೀಪಿಕಾ ಪಡುಕೋಣೆ ಅವರು ‘ನಾಟು ನಾಟು..’ ಹಾಡಿನ ವಿಶೇಷತೆ ಏನು ಎಂಬುದನ್ನು ವಿವರಿಸಿದರು.

SS Rajamouli: ಆಸ್ಕರ್ ಪ್ರಶಸ್ತಿ ಪಡೆಯಲು ರಾಜಮೌಳಿ ಏಕೆ ವೇದಿಕೆ ಏರಿಲ್ಲ? ಇಲ್ಲಿದೆ ಉತ್ತರ
ಚಂದ್ರಬೋಸ್​,ಕೀರವಾಣಿ, ರಾಜಮೌಳಿ
Follow us on

ರಾಜಮೌಳಿ (SS Rajamouli) ನಿರ್ದೇಶನದ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಪ್ರಶಸ್ತಿ ಪಡೆದಿದೆ. ರಾಜಮೌಳಿ ಅವರ ಕನಸು ಈ ಚಿತ್ರದಿಂದ ನನಸಾಗಿದೆ. ಅಮೆರಿಕದ ಲಾಸ್ ಏಂಜಲಿಸ್​ನ ಡಾಲ್ಬಿ ಥಿಯೇಟರ್​ನಲ್ಲಿ ನಡೆದ ಅದ್ದೂರಿ ವೇದಿಕೆ ಏರಿ ಎಂಎಂ ಕೀರವಾಣಿ (MM Keeravani) ಹಾಗೂ ಹಾಡಿಗೆ ಸಾಹಿತ್ಯ ಬರೆದ ಚಂದ್ರಬೋಸ್ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಆದರೆ, ರಾಜಮೌಳಿ ಅವರು ವೇದಿಕೆ ಹತ್ತಿಲ್ಲ.

‘ನಾಟು ನಾಟು..’ ಹಾಡು ಆಸ್ಕರ್ ಗೆಲ್ಲುವುದಕ್ಕೂ ಮೊದಲು ಈ ವೇದಿಕೆ ಮೇಲೆ ಹಾಡಿನ ಪರ್ಫಾರ್ಮೆನ್ಸ್ ನಡೆಯಿತು. ದೀಪಿಕಾ ಪಡುಕೋಣೆ ಅವರು ‘ನಾಟು ನಾಟು..’ ಹಾಡಿನ ವಿಶೇಷತೆ ಏನು ಎಂಬುದನ್ನು ವಿವರಿಸಿದರು. ಆಸ್ಕರ್ ಪಡೆದುಕೊಳ್ಳಲು ರಾಜಮೌಳಿ ವೇದಿಕೆ ಏಕೆ ಏರಿಲ್ಲ ಎನ್ನುವ ಪ್ರಶ್ನೆ ಅನೇಕರಲ್ಲಿದೆ.

ಆಸ್ಕರ್​ ಇದು ಹಾಲಿವುಡ್​ ಪ್ರಶಸ್ತಿ. ಇಲ್ಲಿ ಭಾರತದ ಸಿನಿಮಾಗಳು ರೇಸ್​ಗೆ ಇಳಿಯೋದು, ಪ್ರಶಸ್ತಿ ಬಾಚಿಕೊಳ್ಳೋದು ಅಷ್ಟು ಸುಲಭದ ಮಾತಲ್ಲ. ಹೀಗಿದ್ದರೂ ‘ಆರ್​ಆರ್​ಆರ್​’ ಚಿತ್ರದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಸಿಕ್ಕಿದೆ.  ‘ಫಾರ್ ಯುವರ್ ಕನ್ಸಿಡರೇಷನ್​’ ಕ್ಯಾಂಪೇನ್ ಮಾಡಿ ರಾಜಮೌಳಿ ಅವರು ‘ನಾಟು ನಾಟು..’ ಹಾಡನ್ನು ಆಸ್ಕರ್​ ಅವಾರ್ಡ್​ಗೆ ತೆಗೆದುಕೊಂಡರು. ಇದಕ್ಕಾಗಿ ಅವರು ಬರೋಬ್ಬರಿ 83 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ ಎಂಬ ಮಾತಿದೆ. ಆದರೂ, ಅವರು ಪ್ರಶಸ್ತಿ ಪಡೆಯಲು ವೇದಿಕೆ ಏರಿಲ್ಲ. ಇದಕ್ಕೆ ಕಾರಣವೂ ಇದೆ.

ಇದನ್ನೂ ಓದಿ
Oscar 2023 Winners List: ಈ ವರ್ಷ ಆಸ್ಕರ್ ಗೆದ್ದವರ ಸಂಪೂರ್ಣ ಪಟ್ಟಿ ಇಲ್ಲಿದೆ
Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ
The Elephant Whisperers: ಭಾರತಕ್ಕೆ ಆಸ್ಕರ್​: ‘ದಿ ಎಲಿಫೆಂಟ್​ ವಿಸ್ಪರರ್ಸ್​’ಗೆ ಅಕಾಡೆಮಿ ಪ್ರಶಸ್ತಿ 

‘ಆರ್​ಆರ್​ಆರ್​’ ಚಿತ್ರವನ್ನು ನಿರ್ದೇಶನ ಮಾಡಿದ್ದು ರಾಜಮೌಳಿ. ಆಸ್ಕರ್ ಗೆದ್ದ ‘ನಾಟು ನಾಟು..’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ್ದು ಎಂ.ಎಂ. ಕೀರವಾಣಿ. ‘ಬೆಸ್ಟ್ ಒರಿಜಿನಲ್ ಸಾಂಗ್’ ವಿಭಾಗದಲ್ಲಿ ಈ ಪ್ರಶಸ್ತಿ ಪಡೆದುಕೊಂಡಿದೆ. ಅವಾರ್ಡ್ ಪಡೆದುಕೊಳ್ಳುವಾಗ ಅದಕ್ಕೆ ಸಂಬಂಧಿಸಿದ ಕೆಲವೇ ಕೆಲವರು ವೇದಿಕೆ ಏರಬೇಕು. ಈ ಕಾರಣಕ್ಕೆ ‘ನಾಟು ನಾಟು..’ ಹಾಡಿಗೆ ಸಂಗೀತ ಸಂಯೋಜನೆ ಮಾಡಿದ ಕೀರವಾಣಿ ಹಾಗೂ ಹಾಡಿಗೆ ಸಾಹಿತ್ಯ ಬರೆದ ಚಂದ್ರಬೋಸ್ ಮಾತ್ರ ಆಸ್ಕರ್ ವೇದಿಕೆ ಏರಿದ್ದಾರೆ. ಆಸ್ಕರ್​ ಅವಾರ್ಡ್​ ಕಾರ್ಯಕ್ರಮ ತುಂಬಾನೇ ಅಚ್ಚುಕಟ್ಟಾಗಿ ನಡೆಯುತ್ತದೆ. ಪ್ರಶಸ್ತಿ ಪಡೆದುಕೊಂಡವರು ದೀರ್ಘವಾಗಿ ಭಾಷಣ ಮಾಡುವಂತಿಲ್ಲ. ಹೀಗಾಗಿ, ಅಕಾಡೆಮಿ ಅವಾರ್ಡ್ ಪಡೆದ ನಂತರ ಕೆಲವೇ ನಿಮಿಷಗಳಲ್ಲಿ ತಮ್ಮ ಮಾತು ಮುಗಿಸುತ್ತಾರೆ.

ಇದನ್ನೂ ಓದಿ: Oscar 2023: ಆಸ್ಕರ್ ಗೆದ್ದು ಬೀಗಿದ ‘ನಾಟು ನಾಟು..’ ಹಾಡು; ರಾಜಮೌಳಿ ಚಿತ್ರಕ್ಕೆ ಮತ್ತೊಂದು ಕಿರೀಟ

ವೇದಿಕೆ ಏರಿದ ಕೀರವಾಣಿ ಏನ್ ಅಂದ್ರು?

‘ನಾಟು ನಾಟು ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಕ್ಕಿದ್ದಕ್ಕೆ ಖುಷಿಯಾಗಿದೆ.  ಆಸ್ಕರ್​ ಪ್ರಶಸ್ತಿಯ ಗರಿ ಪ್ರತಿ ಭಾರತೀಯ ಹೆಮ್ಮೆಪಡುವ ವಿಷಯ. ನನ್ನ ಮನಸ್ಸಿನಲ್ಲಿ ಒಂದೇ ಒಂದು ಆಸೆ ಇತ್ತು. ಆರ್​ಆರ್​ಆರ್​ ಚಿತ್ರ ಗೆಲ್ಲಬೇಕು, ಪ್ರತಿ ಭಾರತೀಯ ಹೆಮ್ಮೆ ಪಡಬೇಕು.  ಈ ಆಸೆ ಈಡೇರಿದೆ’ ಎಂದಿದ್ದಾರೆ ಕೀರವಾಣಿ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ