AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ, ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು ಕಣ್ಮಣಿ.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: May 02, 2021 | 3:20 PM

Share

ಬಿಗ್​ ಬಾಸ್​ 9ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾ ವೈರಸ್ ಹೆಚ್ಚಿರುವ ಕಾರಣದಿಂದ ಕರ್ನಾಟಕದಲ್ಲಿ ಕೊರೊನಾ ಕರ್ಫ್ಯೂ ಹೇರಲಾಗಿದೆ. ಹೀಗಾಗಿ ಶೂಟಿಂಗ್​ಗೆ ಅವಕಾಶವಿಲ್ಲ. ಈ ಕಾರಣಕ್ಕೆ ಸುದೀಪ್​ ಈ ವಾರ ಬಿಗ್ ಬಾಸ್​ ವೇದಿಕೆ ಏರಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಆದರೆ, ಬಿಗ್​ ಬಾಸ್​ ಮನರಂಜನೆಗೆ ಕೊರತೆ ಮಾಡಿಲ್ಲ. ಈ ವಾರ ಕಣ್ಮಣಿಯನ್ನು ಬಿಗ್​ ಬಾಸ್​ ಮನೆಗೆ ಪರಿಚಯ ಮಾಡಲಾಗಿದೆ! ಆಕೆಯ ಧ್ವನಿ ಕೇಳಿ ಎಲ್ಲರೂ ಫಿದಾ ಆಗಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಸ್ಪರ್ಧಿಗಳು ಕುಳಿತಿದ್ದರು. ಈ ವೇಳೆ ಧ್ವನಿ ಒಂದು ಕೇಳಿತ್ತು. ಈ ಧ್ವನಿ ಮೊದಲು ಪ್ರಶ್ನೆ ಕೇಳಿದ್ದು ಶಮಂತ್​ಗೆ. ನಾನು ಯಾರು ಹೇಳಿ ಎಂದು ಶಮಂತ್​ ಅವರನ್ನು ಕೇಳಿತು. ತಮಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ವೈಜಯಂತಿ ಅಡಿಗ ಇರಬಹುದು ಎಂದು ಅವರ ಹೆಸರನ್ನು ಶಮಂತ್​ ಹೇಳಿದರು. ಆದರೆ, ಉತ್ತರ ತಪ್ಪಾಗಿತ್ತು. ಮಾತನಾಡುತ್ತಿದ್ದ ಧ್ವನಿ ತಾನು ಕ್ಯಾಮೆರಾ ಎಂದು ಹೇಳಿಕೊಂಡಿತು. ಈ ಮೂಲಕ ಮನೆಯವರೆಲ್ಲರಿಗೂ ಸರ್​ಪ್ರೈಸ್​ ನೀಡಿತು.

ನಾನು ಕಣ್ಮಣಿ. ನಿಮ್ಮನ್ನು 24 ಗಂಟೆಯೂ ನೋಡುತ್ತಲೇ ಇರುತ್ತೇನೆ. ನಿಮ್ಮನ್ನು ನೋಡೋಕೆ ಆರಂಭಿಸಿ 62 ದಿನ ಪೂರ್ಣಗೊಂಡಿದೆ. ನೀವು ಬೆಡ್​ರೂಂನಲ್ಲಿ ಪಿಸುಗುಟ್ಟಿದ್ದು, ಒಬ್ಬನೇ ಬೈದುಕೊಂಡಿದ್ದು ಎಲ್ಲವೂ ನನಗೆ ಕೇಳಿದೆ ಎಂದು ಮಾತು ಆರಂಭಿಸಿತು ಕಣ್ಮಣಿ.

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ ನಾನು ರೋಬಾಟ್​. ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು. ಕಣ್ಮಣಿಯ ಮುದ್ದಾದ ಮಾತನ್ನು ಕೇಳಿ ಮನೆ ಮಂದಿ ಫಿದಾ ಆಗಿದ್ದಾರೆ. ಇನ್ನು, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ನೀವು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಚಕ್ರವರ್ತಿ ಶಪಥ ಮಾಡಿದ್ದಾರೆ.

ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಆ ಪ್ರಯತ್ನವನ್ನೇ ಅವರು ಕೈಬಿಟ್ಟರು. ಈಗ ಕಣ್ಮಣಿ ಹೆಸರಲ್ಲಿ ಬಿಗ್​ ಬಾಸ್ ಮಂದಿ ಶಮಂತ್​ಗೆ ಕಾಲೆಳೆಯುತ್ತಿದ್ದಾರೆ. ಕಣ್ಮಣಿಯನ್ನು ಶಮಂತ್​ ‘ಹೇಳು ಡಾರ್ಲಿಂಗ್​’ ಎಂದೇ ಸಂಬೋಧಿಸುತ್ತಿದ್ದಾರೆ.

ಇದನ್ನೂ ಒದಿ: ಇಂದು ನಡೆಯಬೇಕಿದ್ದ ಬಿಗ್​ಬಾಸ್​ ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು!

ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ಕನ್ಯಾಕುಮಾರಿಯಲ್ಲಿ 2025ರ ಕೊನೆಯ ಸೂರ್ಯಾಸ್ತದ ನೋಡಲು ಆಗಮಿಸಿದ ಜನಸಾಗರ
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ನ್ಯೂಇಯರ್ ಸೆಲೆಬ್ರೇಷನ್​​​ ಮುನ್ನ ಮಳೆ ಎಂಟ್ರಿ: ಪಾರ್ಟಿ ಪ್ರಿಯರಿಗೆ ಶಾಕ್!​
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಅಭಿಮಾನಿಗಳ ಜೊತೆ ಸಿನಿಮಾ ನೋಡುತ್ತಿರುವ ಉದ್ದೇಶ ಏನು? ಸುದೀಪ್ ಉತ್ತರ
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ