AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ, ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು ಕಣ್ಮಣಿ.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Edited By: |

Updated on: May 02, 2021 | 3:20 PM

Share

ಬಿಗ್​ ಬಾಸ್​ 9ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾ ವೈರಸ್ ಹೆಚ್ಚಿರುವ ಕಾರಣದಿಂದ ಕರ್ನಾಟಕದಲ್ಲಿ ಕೊರೊನಾ ಕರ್ಫ್ಯೂ ಹೇರಲಾಗಿದೆ. ಹೀಗಾಗಿ ಶೂಟಿಂಗ್​ಗೆ ಅವಕಾಶವಿಲ್ಲ. ಈ ಕಾರಣಕ್ಕೆ ಸುದೀಪ್​ ಈ ವಾರ ಬಿಗ್ ಬಾಸ್​ ವೇದಿಕೆ ಏರಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಆದರೆ, ಬಿಗ್​ ಬಾಸ್​ ಮನರಂಜನೆಗೆ ಕೊರತೆ ಮಾಡಿಲ್ಲ. ಈ ವಾರ ಕಣ್ಮಣಿಯನ್ನು ಬಿಗ್​ ಬಾಸ್​ ಮನೆಗೆ ಪರಿಚಯ ಮಾಡಲಾಗಿದೆ! ಆಕೆಯ ಧ್ವನಿ ಕೇಳಿ ಎಲ್ಲರೂ ಫಿದಾ ಆಗಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಸ್ಪರ್ಧಿಗಳು ಕುಳಿತಿದ್ದರು. ಈ ವೇಳೆ ಧ್ವನಿ ಒಂದು ಕೇಳಿತ್ತು. ಈ ಧ್ವನಿ ಮೊದಲು ಪ್ರಶ್ನೆ ಕೇಳಿದ್ದು ಶಮಂತ್​ಗೆ. ನಾನು ಯಾರು ಹೇಳಿ ಎಂದು ಶಮಂತ್​ ಅವರನ್ನು ಕೇಳಿತು. ತಮಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ವೈಜಯಂತಿ ಅಡಿಗ ಇರಬಹುದು ಎಂದು ಅವರ ಹೆಸರನ್ನು ಶಮಂತ್​ ಹೇಳಿದರು. ಆದರೆ, ಉತ್ತರ ತಪ್ಪಾಗಿತ್ತು. ಮಾತನಾಡುತ್ತಿದ್ದ ಧ್ವನಿ ತಾನು ಕ್ಯಾಮೆರಾ ಎಂದು ಹೇಳಿಕೊಂಡಿತು. ಈ ಮೂಲಕ ಮನೆಯವರೆಲ್ಲರಿಗೂ ಸರ್​ಪ್ರೈಸ್​ ನೀಡಿತು.

ನಾನು ಕಣ್ಮಣಿ. ನಿಮ್ಮನ್ನು 24 ಗಂಟೆಯೂ ನೋಡುತ್ತಲೇ ಇರುತ್ತೇನೆ. ನಿಮ್ಮನ್ನು ನೋಡೋಕೆ ಆರಂಭಿಸಿ 62 ದಿನ ಪೂರ್ಣಗೊಂಡಿದೆ. ನೀವು ಬೆಡ್​ರೂಂನಲ್ಲಿ ಪಿಸುಗುಟ್ಟಿದ್ದು, ಒಬ್ಬನೇ ಬೈದುಕೊಂಡಿದ್ದು ಎಲ್ಲವೂ ನನಗೆ ಕೇಳಿದೆ ಎಂದು ಮಾತು ಆರಂಭಿಸಿತು ಕಣ್ಮಣಿ.

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ ನಾನು ರೋಬಾಟ್​. ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು. ಕಣ್ಮಣಿಯ ಮುದ್ದಾದ ಮಾತನ್ನು ಕೇಳಿ ಮನೆ ಮಂದಿ ಫಿದಾ ಆಗಿದ್ದಾರೆ. ಇನ್ನು, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ನೀವು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಚಕ್ರವರ್ತಿ ಶಪಥ ಮಾಡಿದ್ದಾರೆ.

ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಆ ಪ್ರಯತ್ನವನ್ನೇ ಅವರು ಕೈಬಿಟ್ಟರು. ಈಗ ಕಣ್ಮಣಿ ಹೆಸರಲ್ಲಿ ಬಿಗ್​ ಬಾಸ್ ಮಂದಿ ಶಮಂತ್​ಗೆ ಕಾಲೆಳೆಯುತ್ತಿದ್ದಾರೆ. ಕಣ್ಮಣಿಯನ್ನು ಶಮಂತ್​ ‘ಹೇಳು ಡಾರ್ಲಿಂಗ್​’ ಎಂದೇ ಸಂಬೋಧಿಸುತ್ತಿದ್ದಾರೆ.

ಇದನ್ನೂ ಒದಿ: ಇಂದು ನಡೆಯಬೇಕಿದ್ದ ಬಿಗ್​ಬಾಸ್​ ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು!

Follow Us
Rajesh Duggumane
Rajesh Duggumane

ಪತ್ರಿಕೋದ್ಯಮಕ್ಕೆ ಕಾಲಿಟ್ಟು 9 ವರ್ಷ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದೇನೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ನನ್ನ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದೇನೆ.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು