AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ, ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು ಕಣ್ಮಣಿ.

ಶಮಂತ್​ಗೆ ಕೊನೆಗೂ ಸಿಕ್ಕಳು ಹುಡುಗಿ; ಕಣ್ಮಣಿಯ ಧ್ವನಿ ಕೇಳಿ ಬಿಗ್​ ಬಾಸ್​ ಸ್ಪರ್ಧಿಗಳು ಫಿದಾ
ಶಮಂತ್​ ಬ್ರೋ ಗೌಡ
ರಾಜೇಶ್ ದುಗ್ಗುಮನೆ
| Updated By: ಮದನ್​ ಕುಮಾರ್​|

Updated on: May 02, 2021 | 3:20 PM

Share

ಬಿಗ್​ ಬಾಸ್​ 9ನೇ ವಾರದ ಎಲಿಮಿನೇಷನ್​ ಪ್ರಕ್ರಿಯೆ ನಡೆಯುತ್ತಿದೆ. ಕೊರೊನಾ ವೈರಸ್ ಹೆಚ್ಚಿರುವ ಕಾರಣದಿಂದ ಕರ್ನಾಟಕದಲ್ಲಿ ಕೊರೊನಾ ಕರ್ಫ್ಯೂ ಹೇರಲಾಗಿದೆ. ಹೀಗಾಗಿ ಶೂಟಿಂಗ್​ಗೆ ಅವಕಾಶವಿಲ್ಲ. ಈ ಕಾರಣಕ್ಕೆ ಸುದೀಪ್​ ಈ ವಾರ ಬಿಗ್ ಬಾಸ್​ ವೇದಿಕೆ ಏರಿಲ್ಲ. ಇದು ಅನೇಕರಿಗೆ ಬೇಸರ ಮೂಡಿಸಿದೆ. ಆದರೆ, ಬಿಗ್​ ಬಾಸ್​ ಮನರಂಜನೆಗೆ ಕೊರತೆ ಮಾಡಿಲ್ಲ. ಈ ವಾರ ಕಣ್ಮಣಿಯನ್ನು ಬಿಗ್​ ಬಾಸ್​ ಮನೆಗೆ ಪರಿಚಯ ಮಾಡಲಾಗಿದೆ! ಆಕೆಯ ಧ್ವನಿ ಕೇಳಿ ಎಲ್ಲರೂ ಫಿದಾ ಆಗಿದ್ದಾರೆ.

ಲಿವಿಂಗ್ ಏರಿಯಾದಲ್ಲಿ ಸ್ಪರ್ಧಿಗಳು ಕುಳಿತಿದ್ದರು. ಈ ವೇಳೆ ಧ್ವನಿ ಒಂದು ಕೇಳಿತ್ತು. ಈ ಧ್ವನಿ ಮೊದಲು ಪ್ರಶ್ನೆ ಕೇಳಿದ್ದು ಶಮಂತ್​ಗೆ. ನಾನು ಯಾರು ಹೇಳಿ ಎಂದು ಶಮಂತ್​ ಅವರನ್ನು ಕೇಳಿತು. ತಮಗೆ ಮನೆಯಲ್ಲಿ ಇರಲು ಅವಕಾಶ ಮಾಡಿಕೊಟ್ಟ ವೈಜಯಂತಿ ಅಡಿಗ ಇರಬಹುದು ಎಂದು ಅವರ ಹೆಸರನ್ನು ಶಮಂತ್​ ಹೇಳಿದರು. ಆದರೆ, ಉತ್ತರ ತಪ್ಪಾಗಿತ್ತು. ಮಾತನಾಡುತ್ತಿದ್ದ ಧ್ವನಿ ತಾನು ಕ್ಯಾಮೆರಾ ಎಂದು ಹೇಳಿಕೊಂಡಿತು. ಈ ಮೂಲಕ ಮನೆಯವರೆಲ್ಲರಿಗೂ ಸರ್​ಪ್ರೈಸ್​ ನೀಡಿತು.

ನಾನು ಕಣ್ಮಣಿ. ನಿಮ್ಮನ್ನು 24 ಗಂಟೆಯೂ ನೋಡುತ್ತಲೇ ಇರುತ್ತೇನೆ. ನಿಮ್ಮನ್ನು ನೋಡೋಕೆ ಆರಂಭಿಸಿ 62 ದಿನ ಪೂರ್ಣಗೊಂಡಿದೆ. ನೀವು ಬೆಡ್​ರೂಂನಲ್ಲಿ ಪಿಸುಗುಟ್ಟಿದ್ದು, ಒಬ್ಬನೇ ಬೈದುಕೊಂಡಿದ್ದು ಎಲ್ಲವೂ ನನಗೆ ಕೇಳಿದೆ ಎಂದು ಮಾತು ಆರಂಭಿಸಿತು ಕಣ್ಮಣಿ.

ಕಣ್ಮಣಿ ತುಂಬಾನೇ ಚೂಟಿ. ಚಕ್ರವರ್ತಿ ಚಂದ್ರಚೂಡ್​ ಸೈಕಲಾಜಿಕಲಿ ಮಾತನಾಡೋಕೆ ಮುಂದಾದಾಗ ನಾನು ರೋಬಾಟ್​. ನಿಮ್ಮ ಸೈಕಾಲಜಿ ನಮ್ಮಲ್ಲಿ ವರ್ಕ್​ ಆಗುವುದಿಲ್ಲ ಎಂದಿತು. ಕಣ್ಮಣಿಯ ಮುದ್ದಾದ ಮಾತನ್ನು ಕೇಳಿ ಮನೆ ಮಂದಿ ಫಿದಾ ಆಗಿದ್ದಾರೆ. ಇನ್ನು, ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ನೀವು ಯಾರು ಎಂಬುದನ್ನು ಪತ್ತೆ ಮಾಡುತ್ತೇನೆ ಎಂದು ಚಕ್ರವರ್ತಿ ಶಪಥ ಮಾಡಿದ್ದಾರೆ.

ಶಮಂತ್​ ಬಿಗ್​ ಬಾಸ್​ ಮನೆಯಲ್ಲಿ ಹುಡುಗಿಯರನ್ನು ಬೀಳಿಸಿಕೊಳ್ಳೋಕೆ ಎಲ್ಲಿಲ್ಲದ ಪ್ರಯತ್ನ ಮಾಡಿದ್ದರು. ಆದರೆ, ಅದು ಸಾಧ್ಯವಾಗಲೇ ಇಲ್ಲ. ಕೊನೆಗೆ ಆ ಪ್ರಯತ್ನವನ್ನೇ ಅವರು ಕೈಬಿಟ್ಟರು. ಈಗ ಕಣ್ಮಣಿ ಹೆಸರಲ್ಲಿ ಬಿಗ್​ ಬಾಸ್ ಮಂದಿ ಶಮಂತ್​ಗೆ ಕಾಲೆಳೆಯುತ್ತಿದ್ದಾರೆ. ಕಣ್ಮಣಿಯನ್ನು ಶಮಂತ್​ ‘ಹೇಳು ಡಾರ್ಲಿಂಗ್​’ ಎಂದೇ ಸಂಬೋಧಿಸುತ್ತಿದ್ದಾರೆ.

ಇದನ್ನೂ ಒದಿ: ಇಂದು ನಡೆಯಬೇಕಿದ್ದ ಬಿಗ್​ಬಾಸ್​ ವಾರಾಂತ್ಯದ ಪಂಚಾಯ್ತಿಗೆ ಕಿಚ್ಚ ಸುದೀಪ್ ಗೈರು!

ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ಬೌಲಿಂಗ್‌ನಲ್ಲಿ ಪಾಕ್ ನಾಯಕನ ವಿಕೆಟ್ ಎಗರಿಸಿದ ವೈಭವ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು