AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?

ಈ ವಾರದ ಎಪಿಸೋಡ್​ನಲ್ಲಿ ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು.

ಅವಾಚ್ಯ ಶಬ್ದಗಳನ್ನು ಬಳಸಿದ ಚಕ್ರವರ್ತಿ ಚಂದ್ರಚೂಡ್​ಗೆ ಸುದೀಪ್​ ಹೇಳಿದ್ದೇನು?
ಅಶ್ಲೀಲ ಸನ್ನೆ ಮಾಡಿ ಸಮತೋಲನದ ನೆಪ ಹೇಳಿದ ಚಕ್ರವರ್ತಿಗೆ ಸುದೀಪ್ ಸಖತ್​ ಕ್ಲಾಸ್​
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 10, 2021 | 10:32 PM

Share

ಚಕ್ರವರ್ತಿ ಚಂದ್ರಚೂಡ್​ ಈ ವಾರ ಮಿತಿಮೀರಿ ಮಾತನಾಡಿದ್ದರು. ಪ್ರಶಾಂತ್​ ಸಂಬರಗಿ-ವೈಷ್ಣವಿ ಗೌಡ ಬಗ್ಗೆ ಸುಳ್ಳು ಹೇಳಿ ಸಿಕ್ಕಿ ಬಿದ್ದಿದ್ದರು. ಇದಾದ ನಂತರದಲ್ಲಿ ಉಂಟಾದ ಜಗಳದಲ್ಲಿ ಅವರು ಕೆಟ್ಟ ಶಬ್ದಗಳನ್ನು ಬಳಕೆ ಮಾಡಿದ್ದರು. ಇದಕ್ಕೆ ಸುದೀಪ್​ ಅಸಮಾಧಾನಗೊಂಡಿದ್ದಾರೆ. ವೀಕೆಂಡ್​ನಲ್ಲಿ ನಡೆದ ಪಂಚಾಯ್ತಿಯಲ್ಲಿ ಸರಿಯಾಗಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಈ ವಾರದ ಎಪಿಸೋಡ್​ನಲ್ಲಿ ಪ್ರಶಾಂತ್ ಸಂಬರಗಿ ಮುಂದೊಂದು ಹಿಂದೊಂದು ಮಾಡುತ್ತಾರೆ ಎಂದು ಚಕ್ರವರ್ತಿ ಆರೋಪಿಸಿದರು. ಇಬ್ಬರ ಜಗಳ ತಾರಕಕ್ಕೇರಿತ್ತು. ‘ಪ್ರಶಾಂತ್ ಸರ್​ ನಾನು ನಿಮ್ಮೊಂದಿಗೆ ಇನ್ನು ಮಾತನ್ನೇ ಆಡುವುದಿಲ್ಲ. ನೀನು ಮಾಡಿರೋದು ತಪ್ಪಾದ ಕೆಲಸ. ಗೆಳೆಯರ ನಡುವೆ ನಡೆದ ಮಾತನ್ನು ಮೂರನೇಯವನಿಗೆ ಹೇಳೋದು ದ್ರೋಹದ ಕೆಲಸ’ ಎಂದು ಹೇಳುವ ಮೂಲಕ ಪ್ರಶಾಂತ್​ ಜತೆ ಮಾತನಾಡುವುದಿಲ್ಲ ಎಂದರು ಚಕ್ರವರ್ತಿ. ಈ ವೇಳೆ ಕೆಲ ಸಮಯಗಳ ಕಾಲ ಇಬ್ಬರು ನಡುವೆ ಬಳಕೆ ಆದ ಶಬ್ದಗಳಿಗೆ ಬಿಗ್​ ಬಾಸ್​ ಬೀಪ್​ ಹಾಕಿದ್ದರು. ಈ ವಿಚಾರವನ್ನು ಸುದೀಪ್​ ಪ್ರಸ್ತಾಪಿಸಿದ್ದಾರೆ.

‘ಹೋದವಾರ ಒಂದು ಮಾತು ಹೇಳಿದ್ರಿ. ನಿಮ್ಮ ಕಣ್ಣಲ್ಲಿ ಬೀಳಲ್ಲ ಅಂದಿದ್ರಿ. ಈಗ ನನ್ನ ಕಣ್ಣಲ್ಲಿ ಸುಳ್ಳು ಹೇಳಿದ್ರಿ. ವೈಷ್ಣವಿ ವಿಚಾರದಲ್ಲಿ ನೀವು ಸುಳ್ಳು ಹೇಳಿದ್ರಿ. ನನ್ನ ಕಣ್ಣಲ್ಲೇ ಕಣ್ಣಿಟ್ಟು ಸುಳ್ಳು ಹೇಳಿದ್ರಿ. ತಪ್ಪನ್ನು ಮಾಡಿದ್ರೆ ತಪ್ಪಲ್ಲ ಅಂತ ಹೇಳ್ತೀರಾ. ಶನಿವಾರ ಎಲ್ಲವೂ ಕ್ಲಿಪ್​ಗಳನ್ನು ಇಟ್ಟುಕೊಂಡು ಬರ್ಲಾ? ಈ ರೀತಿ ಮಾಡೋದ್ರಿಂದ ನನಗೆ ಲಾಭನಷ್ಟ ಎರಡೂ ಇಲ್ಲ’ ಎಂದು ಚಕ್ರವರ್ತಿಗೆ ಪ್ರಶ್ನಿಸದರು ಸುದೀಪ್​.

ಇನ್ನು, ಚಕ್ರವರ್ತಿ ಅವಾಚ್ಯ ಶಬ್ದಗಳನ್ನು ಬಳಕೆ ಮಾಡಿದ್ದಕ್ಕೆ ಸುದೀಪ್​ ಕ್ಲಾಸ್​ ತೆಗೆದುಕೊಂಡರು. ‘ಅದೆಷ್ಟು ಬಾರಿ ಬೀಪ್​ ಬಳಕೆ ಮಾಡಬೇಕು. ಈ ಕಾರ್ಯಕ್ರಮವನ್ನು ಮನೆಯವರೆಲ್ಲರೂ ಕುಳಿತು ನೋಡಬೇಕು. ಆದರೆ, ನೀವು ಕೆಟ್ಟ ಶಬ್ದ ಬಳಕೆ ಮಾಡಿದ್ದು ಸರಿಯಿಲ್ಲ. ನಿಮ್ಮ ಜ್ಞಾನಕ್ಕೆ ಇನ್ನೊಂದಷ್ಟು ಜನರು ಕಲಿಯಿರಿ ಎಂದೆ. ಅದಾದ ನಂತರ ಬಂದ ಭಾಷೆ ಏನು? ನಿಮ್ಮ ಭಾಷೆ ಬಗ್ಗೆ ನಿಜಕ್ಕೂ ಬೇಜಾರಾಗುತ್ತಿದೆ’ ಎಂದು ಚಕ್ರವರ್ತಿಗೆ ಹೇಳಿದರು ಸುದೀಪ್​.

ಇದನ್ನೂ ಓದಿ: ಪ್ರಶಾಂತ್​-ಅರವಿಂದ್ ಕೈ ಮಿಲಾಯಿಸಿಕೊಳ್ಳುವುದನ್ನು ತಪ್ಪಿಸಿದ ಮನೆ ಮಂದಿ; ಬಿಗ್​ ಬಾಸ್​ ಮನೆಯಲ್ಲಿ ದೊಡ್ಡ ಜಗಳ

ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ದೈತ್ಯ ಹೆಬ್ಬಾವು ರಕ್ಷಣೆ, ನಿಟ್ಟುಸಿರು ಬಿಟ್ಟ ರೈತರು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು