AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​

ಪ್ರತಿ ವಾರ ಓರ್ವ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಹಾಗೂ ಅತ್ಯುತ್ತಮ ಎನ್ನುವ ಆಯ್ಕೆ ನೀಡಲಾಗುತ್ತದೆ. ಈ ಬಾರಿ ಪ್ರಶಾಂತ್​ ಅವರನ್ನು ಕಳಪೆ ಎಂದು ಮನೆಯವರು ನಿರ್ಧರಿಸಿದರು.

ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​
ದಿವ್ಯಾ ಉರುಡುಗ
TV9 Web
| Edited By: |

Updated on: Jul 11, 2021 | 8:03 AM

Share

ಬಿಗ್​ ಬಾಸ್​ ಮನೆಯಲ್ಲಿ ತಪ್ಪು ಮಾಡೋದು ಒಬ್ಬರಾದರೂ ಶಿಕ್ಷೆ ಮಾತ್ರ ಎಲ್ಲರಿಗೂ ಸಿಗುತ್ತದೆ. ಇದು ಈ ಮೊದಲು ಅನೇಕ ಬಾರಿ ಆಗಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿ ಎಲ್ಲರೂ ಶಿಕ್ಷೆ ಪಡೆದಿದ್ದಾರೆ. ಈ ವಿಚಾರದಲ್ಲಿ ಕೆಲವರು ದಿವ್ಯಾ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಪ್ರತಿ ವಾರ ಓರ್ವ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಹಾಗೂ ಅತ್ಯುತ್ತಮ ಎನ್ನುವ ಆಯ್ಕೆ ನೀಡಲಾಗುತ್ತದೆ. ಈ ಬಾರಿ ಪ್ರಶಾಂತ್​ ಅವರನ್ನು ಕಳಪೆ ಎಂದು ಮನೆಯವರು ನಿರ್ಧರಿಸಿದರು. ಅವರು ವಿನಾಕಾರಣ ಜಗಳವಾಡುತ್ತಾರೆ ಎಂಬ ಕಾರಣವನ್ನು ನೀಡಲಾಯಿತು. ಅವರನ್ನು ಮನೆಯವರು ಜೈಲಿಗೂ ಕೂಡ ಕಳುಹಿಸಿದರು.

ಬಿಗ್​ ಬಾಸ್​ ನಿಯಮದ ಪ್ರಕಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದ ಸ್ಪರ್ಧಿ ಅಡುಗೆಗೆ ತರಕಾರಿ ಕತ್ತರಿಸಿಕೊಡಬೇಕು. ಆದರೆ, ದಿವ್ಯಾ ಉರುಡುಗೆ ಇದು ನೆನಪಿಲ್ಲದೆ ತಾವೇ ಕತ್ತರಿಸಿ ಬಿಟ್ಟರು. ಕತ್ತರಿಸಿ ಆದ ನಂತರದಲ್ಲಿ ಈ ಬಗ್ಗೆ ಅವರಿಗೆ ಇದು ಅರಿವಾಗಿದೆ. ಬಿಗ್​ ಬಾಸ್ ನನ್ನ ಕಡೆಯಿಂದ ತಪ್ಪಾಗಿದೆ ಎಂದು ಕ್ಯಾಮೆರಾ ಎದುರು ನಿಂತು ಅವರು ಕೇಳಿಕೊಂಡರು.

ಇದಾದ ಬೆನ್ನಲ್ಲೇ ಬಿಗ್​ ಬಾಸ್ ಮನೆಯಿಂದ ಆದೇಶವೊಂದು ಬಂತು. ಇದನ್ನು ಕೇಳಿ ಬಿಗ್​ ಬಾಸ್​ ಮನೆಯವರು ಶಾಕ್​ಗೆ ಒಳಗಾದರು. ‘ದಿವ್ಯಾ ಕತ್ತರಿಸಿದ ನುಗ್ಗೇಕಾಯಿ, ಆಲೂಗಡ್ಡೆ, ಕ್ಯಾರೆಟ್​ ಜತೆಗೆ ಫ್ರಿಡ್ಜ್​ನಲ್ಲಿರುವ​ ನುಗ್ಗೇಕಾಯಿ, ಆಲೂಗಡ್ಡೆ, ಕ್ಯಾರೆಟ್ ಕೂಡ ಸ್ಟೋರೂಮ್​ಗೆ ಇಡಬೇಕು’ ಎನ್ನುವ ಆದೇಶವನ್ನು ಬಿಗ್ ಬಾಸ್​ ಮಾಡಿದರು. ಈ ಮೂಲಕ ಆ ತರಕಾರಿಗಳನ್ನು ಬಳಸುವುದರಿಂದ ಮನೆಯವರು ವಂಚಿತರಾದರು.

ನಂತರ, ರೆಫ್ರಿಜರೇಟರ್​ನಲ್ಲಿದ್ದ ಬೀನ್ಸ್​, ಟೊಮ್ಯಾಟೋವನ್ನು ಪ್ರಶಾಂತ್​ಗೆ ಕತ್ತರಿಸೋಕೆ ನೀಡಿದರು. ‘ನಾನು ಕತ್ತರಿಸೋದಿಲ್ಲ. ನನ್ನ ಪಾಲಿಂದನ್ನು ನೀವೆ ಕತ್ತರಿಸಿದ್ದೀರಿ’ ಎಂದು ಪ್ರಶಾಂತ್​ ಅವಾಜ್​ ಹಾಕಿದರು. ನಂತರ ಸ್ವಲ್ಪ ಸತಾಯಿಸಿ ತರಕಾರಿ ಕತ್ತರಿಸಿದರು.

ಇದನ್ನೂ ಓದಿ: Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ