AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​

ಪ್ರತಿ ವಾರ ಓರ್ವ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಹಾಗೂ ಅತ್ಯುತ್ತಮ ಎನ್ನುವ ಆಯ್ಕೆ ನೀಡಲಾಗುತ್ತದೆ. ಈ ಬಾರಿ ಪ್ರಶಾಂತ್​ ಅವರನ್ನು ಕಳಪೆ ಎಂದು ಮನೆಯವರು ನಿರ್ಧರಿಸಿದರು.

ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿಗೆ ಶಿಕ್ಷೆ ನೀಡಿದ ಬಿಗ್​ ಬಾಸ್​
ದಿವ್ಯಾ ಉರುಡುಗ
TV9 Web
| Edited By: ಆಯೇಷಾ ಬಾನು|

Updated on: Jul 11, 2021 | 8:03 AM

Share

ಬಿಗ್​ ಬಾಸ್​ ಮನೆಯಲ್ಲಿ ತಪ್ಪು ಮಾಡೋದು ಒಬ್ಬರಾದರೂ ಶಿಕ್ಷೆ ಮಾತ್ರ ಎಲ್ಲರಿಗೂ ಸಿಗುತ್ತದೆ. ಇದು ಈ ಮೊದಲು ಅನೇಕ ಬಾರಿ ಆಗಿದೆ. ಈಗ ಬಿಗ್​ ಬಾಸ್​ ಮನೆಯಲ್ಲಿ ದಿವ್ಯಾ ಉರುಡುಗ ಮಾಡಿದ ತಪ್ಪಿಗೆ ಮನೆ ಮಂದಿ ಎಲ್ಲರೂ ಶಿಕ್ಷೆ ಪಡೆದಿದ್ದಾರೆ. ಈ ವಿಚಾರದಲ್ಲಿ ಕೆಲವರು ದಿವ್ಯಾ ಬಗ್ಗೆ ಬೇಸರ ಹೊರ ಹಾಕಿದ್ದಾರೆ.

ಪ್ರತಿ ವಾರ ಓರ್ವ ಸ್ಪರ್ಧಿಯನ್ನು ಬಿಗ್​ ಬಾಸ್​ ಮನೆಯಲ್ಲಿ ಕಳಪೆ ಹಾಗೂ ಅತ್ಯುತ್ತಮ ಎನ್ನುವ ಆಯ್ಕೆ ನೀಡಲಾಗುತ್ತದೆ. ಈ ಬಾರಿ ಪ್ರಶಾಂತ್​ ಅವರನ್ನು ಕಳಪೆ ಎಂದು ಮನೆಯವರು ನಿರ್ಧರಿಸಿದರು. ಅವರು ವಿನಾಕಾರಣ ಜಗಳವಾಡುತ್ತಾರೆ ಎಂಬ ಕಾರಣವನ್ನು ನೀಡಲಾಯಿತು. ಅವರನ್ನು ಮನೆಯವರು ಜೈಲಿಗೂ ಕೂಡ ಕಳುಹಿಸಿದರು.

ಬಿಗ್​ ಬಾಸ್​ ನಿಯಮದ ಪ್ರಕಾರ ಕಳಪೆ ಪಟ್ಟ ಪಡೆದು ಜೈಲಿಗೆ ಹೋದ ಸ್ಪರ್ಧಿ ಅಡುಗೆಗೆ ತರಕಾರಿ ಕತ್ತರಿಸಿಕೊಡಬೇಕು. ಆದರೆ, ದಿವ್ಯಾ ಉರುಡುಗೆ ಇದು ನೆನಪಿಲ್ಲದೆ ತಾವೇ ಕತ್ತರಿಸಿ ಬಿಟ್ಟರು. ಕತ್ತರಿಸಿ ಆದ ನಂತರದಲ್ಲಿ ಈ ಬಗ್ಗೆ ಅವರಿಗೆ ಇದು ಅರಿವಾಗಿದೆ. ಬಿಗ್​ ಬಾಸ್ ನನ್ನ ಕಡೆಯಿಂದ ತಪ್ಪಾಗಿದೆ ಎಂದು ಕ್ಯಾಮೆರಾ ಎದುರು ನಿಂತು ಅವರು ಕೇಳಿಕೊಂಡರು.

ಇದಾದ ಬೆನ್ನಲ್ಲೇ ಬಿಗ್​ ಬಾಸ್ ಮನೆಯಿಂದ ಆದೇಶವೊಂದು ಬಂತು. ಇದನ್ನು ಕೇಳಿ ಬಿಗ್​ ಬಾಸ್​ ಮನೆಯವರು ಶಾಕ್​ಗೆ ಒಳಗಾದರು. ‘ದಿವ್ಯಾ ಕತ್ತರಿಸಿದ ನುಗ್ಗೇಕಾಯಿ, ಆಲೂಗಡ್ಡೆ, ಕ್ಯಾರೆಟ್​ ಜತೆಗೆ ಫ್ರಿಡ್ಜ್​ನಲ್ಲಿರುವ​ ನುಗ್ಗೇಕಾಯಿ, ಆಲೂಗಡ್ಡೆ, ಕ್ಯಾರೆಟ್ ಕೂಡ ಸ್ಟೋರೂಮ್​ಗೆ ಇಡಬೇಕು’ ಎನ್ನುವ ಆದೇಶವನ್ನು ಬಿಗ್ ಬಾಸ್​ ಮಾಡಿದರು. ಈ ಮೂಲಕ ಆ ತರಕಾರಿಗಳನ್ನು ಬಳಸುವುದರಿಂದ ಮನೆಯವರು ವಂಚಿತರಾದರು.

ನಂತರ, ರೆಫ್ರಿಜರೇಟರ್​ನಲ್ಲಿದ್ದ ಬೀನ್ಸ್​, ಟೊಮ್ಯಾಟೋವನ್ನು ಪ್ರಶಾಂತ್​ಗೆ ಕತ್ತರಿಸೋಕೆ ನೀಡಿದರು. ‘ನಾನು ಕತ್ತರಿಸೋದಿಲ್ಲ. ನನ್ನ ಪಾಲಿಂದನ್ನು ನೀವೆ ಕತ್ತರಿಸಿದ್ದೀರಿ’ ಎಂದು ಪ್ರಶಾಂತ್​ ಅವಾಜ್​ ಹಾಕಿದರು. ನಂತರ ಸ್ವಲ್ಪ ಸತಾಯಿಸಿ ತರಕಾರಿ ಕತ್ತರಿಸಿದರು.

ಇದನ್ನೂ ಓದಿ: Divya Uruduga: ಕನ್ನಡ ಬಿಗ್​ ಬಾಸ್​ ಸೀಸನ್​ 8ರಲ್ಲಿ ಹೊಸ ದಾಖಲೆ ಬರೆದ ದಿವ್ಯಾ ಉರುಡುಗ

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

Follow Us
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ದಾಳಿಯನ್ನೇ ದೊಡ್ಡ ಸಾಧನೆಯಂತೆ ಬಿಂಬಿಸಿಕೊಳ್ತಿದೆ ಇಡಿ: ವಿಜಯ್ ಮಲ್ಯ ಟೀಕೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಚಂದ್ರ ಕನ್ಯಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ಮೊಬೈಲ್ ನೋಡುತ್ತಾ ಹೋಗುತ್ತಿದ್ದಾಗ ಫ್ಲೋರ್​ನಿಂದ ಕೆಳಗೆ ಬಿದ್ದ ವ್ಯಕ್ತಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ನಿಮ್ಮ ಏರಿಯಾದಲ್ಲಿ ಗಣೇಶ ಕೂರಿಸ್ಬೇಕಾ? ಹಾಗಾದರೆ ಈ ವಿಡಿಯೋ ನೋಡಿ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಒಂದು ವಾರದಲ್ಲಿ ಮಂಜ ಕಾಮಿಡಿ ಪೀಸ್ ಆಗ್ತಾನೆ; ತಾಂಡವ್ ರಾಮ್ ಭವಿಷ್ಯ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಫಿಲಿಪೈನ್ಸ್ ದೋಣಿ ಬೆಂಕಿ ದುರಂತ; ಮೃತರ ಸಂಖ್ಯೆ 35ಕ್ಕೆ ಏರಿಕೆ
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಹಾಸನದಲ್ಲಿ ಬೆಚ್ಚಿಬೀಳಿಸಿದ ಸರಣಿ ಹೃದಯಘಾತ ಪ್ರಕರಣಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್‌ನ ಅಪರಾಧ ಚಟುವಟಿಕೆಗಳು