AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ

ಬಿಗ್​ ಬಾಸ್​ ಮನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗೋಕೆ ಒಂದೊಂದು ಟಾಸ್ಕ್​ಗಳನ್ನು ನೀಡಲಾಗುತ್ತಿದೆ. ಈ ಟಾಸ್ಕ್​ನ ಮೇಲುಸ್ತುವಾರಿ ಹೊತ್ತಿದ್ದಾರೆ ದಿವ್ಯಾ ಉರುಡುಗ. ಪ್ರತಿ ಟಾಸ್ಕ್​ ಗೆದ್ದವರಿಗೆ ಪಾಯಿಂಟ್ಸ್​ ಸಿಗುತ್ತಾ ಹೋಗುತ್ತದೆ.

ಅರವಿಂದ್ ಗೆಲ್ಲಿಸೋಕೆ ಚಕ್ರವರ್ತಿಗೆ ಅನ್ಯಾಯ ಮಾಡಿದ್ರಾ ದಿವ್ಯಾ ಉರುಡುಗ? ಬಿಗ್​ ಬಾಸ್​ ಮನೆಯಲ್ಲಿ ಹೀಗೊಂದು ಪ್ರಶ್ನೆ
ದಿವ್ಯಾ ಉರುಡುಗ
TV9 Web
| Updated By: ಮದನ್​ ಕುಮಾರ್​

Updated on: Jul 07, 2021 | 7:16 AM

Share

ಅರವಿಂದ್ ಕೆ.ಪಿ. ಹಾಗೂ ದಿವ್ಯಾ ಉರುಡುಗ ಬಿಗ್​ ಬಾಸ್​ ಮನೆಯಲ್ಲಿ ತುಂಬಾನೇ ಕ್ಲೋಸ್​ ಆಗಿದ್ದಾರೆ. ಒಬ್ಬರನ್ನೊಬ್ಬರು ಬಿಟ್ಟು ಇರೋಕೆ ಸಾಧ್ಯವಿಲ್ಲ ಎಂಬಷ್ಟು ಬಾಂಧವ್ಯ ಇಬ್ಬರ ನಡುವೆ ಬೆಳೆದಿದೆ. ಆದರೆ, ಇದು ಟಾಸ್ಕ್​ ಮೇಲೂ ಪ್ರಭಾವ ಬೀರುತ್ತಿದೆಯೇ ಎನ್ನುವ ಅನುಮಾನ ಮನೆಯವರಲ್ಲಿ ಮೂಡಿದೆ.

ಕ್ಯಾಪ್ಟನ್ಸಿ ಟಾಸ್ಕ್​ಗೆ ಆಯ್ಕೆ ಆಗೋಕೆ ಬಿಗ್​ ಬಾಸ್​ ಮನೆಯಲ್ಲಿ ಒಂದು ಟಾಸ್ಕ್​ ನೀಡಲಾಗಿತ್ತು. ಈ ಟಾಸ್ಕ್​ನ ಮೇಲುಸ್ತುವಾರಿ ಕ್ಯಾಪ್ಟನ್​ ದಿವ್ಯಾ ಉರುಡುಗ ಅವರಿಗೆ ನೀಡಲಾಗಿತ್ತು. ಪ್ರತಿ ಟಾಸ್ಕ್​ ಗೆದ್ದವರಿಗೆ ಪಾಯಿಂಟ್ಸ್​ ಸಿಗುತ್ತಾ ಹೋಗುತ್ತದೆ. ಯಾರ ಬಳಿ ಹೆಚ್ಚು ಪಾಯಿಂಟ್ಸ್​ ಇರುತ್ತದೆಯೋ ಅವರು ಕ್ಯಾಪ್ಟನ್ಸಿ ಟಾಸ್ಕ್​ಗೆ ಅರ್ಹರಾಗುತ್ತಾರೆ.

ಇತ್ತೀಚೆಗಿನ ಎಪಿಸೋಡ್​ನಲ್ಲಿ ಸ್ಪರ್ಧಿಗಳಿಗೆ ಟಾಸ್ಕ್​ ಒಂದನ್ನು ನೀಡಲಾಗಿತ್ತು, ಅದುವೇ ಜಲ ಚಕ್ರ. ಈ ಟಾಸ್ಕ್​ನ ಅನುಸಾರ, ಎಲ್ಲರೂ ಗಾರ್ಡನ್​ ಏರಿಯಾದಲ್ಲಿ ವೃತ್ತಾಕಾರದಲ್ಲಿ ಕೂರಬೇಕು. ಮಧ್ಯದಲ್ಲಿ ಹಗ್ಗಕ್ಕೆ ಕಟ್ಟಿದ ನೀರು ತುಂಬಿದ ಬಲೂನ್​ಅನ್ನು ಕ್ಯಾಪ್ಟನ್​ ತೂಗಿ ಬಿಡುತ್ತಾರೆ. ಇದು ಯಾರ ದೇಹಕ್ಕೆ ತಾಗುತ್ತದೆಯೋ ಅವರು ಔಟ್​. ಅಂದಹಾಗೆ, ಇಲ್ಲಿ ಪ್ರತಿ ಸ್ಪರ್ಧಿಯ ಕಣ್ಣಿಗೆ ಪಟ್ಟಿ ಕಟ್ಟಲಾಗುತ್ತದೆ.

ಈ ಆಟದಲ್ಲಿ ಒಬ್ಬೊಬ್ಬೋರಾಗಿ ಔಟ್​ ಆಗುತ್ತಾ ಬಂದರು. ಕೊನೆಯಲ್ಲಿ ಉಳಿದುಕೊಂಡಿದ್ದು ಚಕ್ರವರ್ತಿ ಹಾಗೂ ಅರವಿಂದ್. ಇಬ್ಬರ ನಡುವೆ ಆಟ ನಡೆಯುವಾಗ ಚಕ್ರವರ್ತಿ ಫೌಲ್​ ಎಂದು ದಿವ್ಯಾ ಉರುಡುಗ ಘೋಷಣೆ ಮಾಡಿದರು. ಹೀಗಾಗಿ, ಒಂದು ಕ್ಷಣ ಚಕ್ರವರ್ತಿ ಗಾಬರಿಗೊಳಗಾದರು. ಈ ವೇಳೆ ಆ ಬಾಲ್​ ಆಕಾರದ ವಸ್ತು ಬಂದು ಇವರಿಗೆ ತಾಗಿದೆ. ಈ ಮೂಲಕ ಅರವಿಂದ್ ಗೆದ್ದಿದ್ದಾರೆ.

ದಿವ್ಯಾ ಫೌಲ್​ ಎಂದು ಘೋಷಿಸಿದ್ದಕ್ಕೆ ನಿಂತೆ ಎಂದು ಚಕ್ರವರ್ತಿ ಹೇಳಿದರು. ಆಗ ದಿವ್ಯಾ, ನಾನು ಉದ್ದೇಶಪೂರ್ವಕವಾಗಿ ಇದನ್ನು ಮಾಡಿಲ್ಲ. ನಾನು ನಿಯಮ ಪಾಲಿಸಿದ್ದೇನೆ ಅಷ್ಟೇ ಎಂದು ಹೇಳುವ ಮೂಲಕ ತಮ್ಮ ವಿರುದ್ಧದ ಆರೋಪಕ್ಕೆ ಸ್ಪಷ್ಟನೆ ನೀಡಿದರು. ಅರವಿಂದ್ ಅವರನ್ನು ಗೆಲ್ಲಿಸುವ ಉದ್ದೇಶದಿಂದ ದಿವ್ಯಾ ಈ ರೀತಿ ಮಾಡಿದರು ಎನ್ನುವ ಬಗ್ಗೆ ಚರ್ಚೆ ನಡೆದಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಮನೆಯಿಂದ ಹೊರ ಹೋಗುವುದಕ್ಕೂ ಮೊದಲು ಅರವಿಂದ್​ ವಿರುದ್ಧ ಸೇಡು ತೀರಿಸಿಕೊಂಡ ನಿಧಿ ಸುಬ್ಬಯ

ಅಂಡಾಣು ಶೇಖರಣೆ ಪ್ರಕ್ರಿಯೆಗೆ ಒಳಗಾದ ನಂತರ ಎದುರಾದ ತೊಂದರೆಗಳನ್ನು ಹೇಳಿಕೊಂಡ ಬಿಗ್​ ಬಾಸ್​ ಸ್ಪರ್ಧಿ

2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
2 ದಿನಗಳ ಘಾನಾ ಭೇಟಿ ಮುಗಿಸಿ ಟ್ರಿನಿಡಾಡ್ ಮತ್ತು ಟೊಬೆಗೊಗೆ ತೆರಳಿದ ಮೋದಿ
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಹೊಳೆ ನೀರಿನ ಮಧ್ಯದಲ್ಲೇ ಕೆಟ್ಟು ನಿಂತ ಲಾಂಚ್..ಮುಂದೇನಾಯ್ತು..!
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಆನ್‍ಲೈನ್ ಗೇಮ್‍ನಲ್ಲಿ ಹಣ ಕಳೆದುಕೊಂಡ:ವಿಡಿಯೋ ಮಾಡಿಟ್ಟು ನೇಣಿಗೆ ಶರಣಾದ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಅಮರನಾಥ ಯಾತ್ರೆ; ಕಾಲ್ನಡಿಗೆಯಲ್ಲೇ ಬೋಲೆನಾಥನ ದರ್ಶನ ಪಡೆದ ಶೋಭಾ ಕರಂದ್ಲಾಜೆ
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಸಿಎಂ ಬದಲಾವಣೆ ಟಿವಿ ಡಿಬೇಟ್​ಗಳನ್ನು ವೀಕ್ಷಿಸುತ್ತಿದ್ದೇನೆ: ಹರಿಪ್ರಸಾದ್
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಅಮರನಾಥ ಗುಹೆಯ ಹಿಮಲಿಂಗಕ್ಕೆ ಇಂದು ಮೊದಲ ಆರತಿ; ಭಕ್ತರ ಹರ್ಷೋದ್ಘಾರ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಜನರಿಗೆ ತಮ್ಮ ಮನೆಯಲ್ಲೇ ಭೂದಾಖಲೆಗಳು ಸಿಗುವಂತಾಗಬೇಕು: ಕೃಷ್ಣ ಭೈರೇಗೌಡ
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಆಸ್ಪತ್ರೆಯಲ್ಲಿ ಡೇಟಾ ಆಪರೇಟರ್ ಆಗಿದ್ದ ಹರೀಶ್​ಗೆ ಮದುವೆ ಇಷ್ಟವಿರಲಿಲ್ಲವೇ?
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಹಾಸನ ವ್ಯಕ್ತಿಯ ಮರಣೋತ್ತರ ಪರೀಕ್ಷೆಯಲ್ಲಿ ಸ್ಫೋಟಕ ಅಂಶ ಬಯಲು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು
ಕೆಪಿಸಿಸಿಯಿಂದ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು