Sign In

By signing in or creating an account, you agree with Associated Broadcasting Company's Terms & Conditions and Privacy Policy.

ಫಿಯಾನ್ಸೆ ಸುಮಂತ್​ ಸಂಪರ್ಕಿಸೋಕೆ ಶುಭಾಗೆ ಐಡಿಯಾ ಕೊಟ್ಟ ಮಂಜು ಪಾವಗಡ

Bigg Boss Kannada: ಮಂಜು ಜೊತೆ ಮಾತನಾಡುವಾಗ, ಮುಂದಿನ ವಾರ ಫ್ಯಾಮಿಲಿ ವೀಕ್​ ಇದೆ. ಚಿನ್ನಿ ಬಾಂಬ್​ ಬರಬಹುದು ಎನ್ನುವ ಆಸೆಯನ್ನು ಶುಭಾ ವ್ಯಕ್ತಪಡಿಸಿದರು.

ಫಿಯಾನ್ಸೆ ಸುಮಂತ್​ ಸಂಪರ್ಕಿಸೋಕೆ ಶುಭಾಗೆ ಐಡಿಯಾ ಕೊಟ್ಟ ಮಂಜು ಪಾವಗಡ
ಮಂಜು ಪಾವಗಡ- ಶುಭಾ ಪೂಂಜಾ - ಸುಮಂತ್​
Follow us
ರಾಜೇಶ್ ದುಗ್ಗುಮನೆ
|

Updated on:May 08, 2021 | 3:44 PM

ಬಿಗ್​ ಬಾಸ್​ ಮನೆ ಒಳಗೆ ಹೋದರೆ ಎಲಿಮಿನೇಟ್​ ಆದ ನಂತರವೇ ಹೊರ ಜಗತ್ತಿನ ಸಂಪರ್ಕಕ್ಕೆ ಬರೋದು. ಕ್ಯಾಪ್ಟನ್​ ಆದಾಗ ಮಾತ್ರ ಸ್ಪರ್ಧಿಗಳಿಗೆ ಕುಟುಂಬದವರ ವಾಯ್ಸ್​ ನೋಟ್​ ಕೇಳಿಸುತ್ತದೆ. ಅಲ್ಲಿಯವರೆಗೆ ಸ್ಪರ್ಧಿಗಳು ಯಾವುದೇ ರೀತಿಯಲ್ಲೂ ಹೊರ ಜಗತ್ತಿನೊಂದಿಗೆ ಸಂಪರ್ಕ ಮಾಡೋಕೆ ಸಾಧ್ಯವಿಲ್ಲ. ಈಗ ಶುಭಾ ಪೂಂಜಾಗೆ ಫಿಯಾನ್ಸೆ ಸುಮಂತ್ ಅವರನ್ನು ಸಂಪರ್ಕಿಸೋದು ಹೇಗೆ ಎನ್ನುವ ಬಗ್ಗೆ ಮಂಜು ಐಡಿಯಾ ಒಂದನ್ನು ಕೊಟ್ಟಿದ್ದಾರೆ.

ಸುಮಂತ್​ ಅವರನ್ನು ಶುಭಾ ಪ್ರೀತಿಯಿಂದ ಚಿನ್ನಿ ಬಾಂಬ್​ ಎಂದು ಕರೆಯುತ್ತಾರೆ. ಬೇಸರವಾದಾಗೆಲ್ಲ ಕ್ಯಾಮೆರಾ ಎದುರು ಬರುವ ಶುಭಾ, ಚಿನ್ನಿ ಬಾಂಬ್​ ವಾಯ್ಸ್​ ಕೇಳಿಸಿ. ನನಗೆ ಆತನ ಧ್ವನಿ ಕೇಳಬೇಕು. ನಾನು ಅವನನ್ನು ತುಂಬಾನೇ ಮಿಸ್​ ಮಾಡಿಕೊಳ್ಳುತ್ತಿದ್ದೀನಿ ಎಂದು ಬಿಗ್​ ಬಾಸ್​ ಎದುರು ಬೇಡಿಕೆ ಇಡುತ್ತಿರುತ್ತಾರೆ. ಮೇ 7ರ ಎಪಿಸೋಡ್​ನಲ್ಲೂ ಹೀಗೆಯೇ ಆಗಿದೆ. ಕ್ಯಾಮೆರಾ ಬಳಿ ಬಂದ ಶುಭಾ ಅದೇ ಕ್ಯಾಸೆಟ್​ಅನ್ನು ಮತ್ತೆ ರಿಪೀಟ್​ ಮಾಡಿದ್ದಾರೆ. ಇದು ಮಂಜು ಪಾವಗಡ ಗಮನಕ್ಕೆ ಬಂದಿದೆ.

ಮಂಜು ಜೊತೆ ಮಾತನಾಡುವಾಗ, ಮುಂದಿನ ವಾರ ಫ್ಯಾಮಿಲಿ ವೀಕ್​ ಇದೆ. ಚಿನ್ನಿ ಬಾಂಬ್​ ಬರಬಹುದು ಎನ್ನುವ ಆಸೆಯನ್ನು ಶುಭಾ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಮಂಜು, ಅಲ್ಲಿ ನಿನಗೆ ಸಿಗೋದು ಕೇವಲ ಐದು ನಿಮಿಷ ಮಾತ್ರ ಎಂದರು.

ನಂತರ ಮಾತು ಮುಂದುವರಿಸಿದ ಮಂಜು, ಈಗಲೂ ಕಾಲಾವಕಾಶ ಇದೆ. ಇನ್ನು ಎರಡೇ ದಿನದಲ್ಲಿ ನಿನ್ನ ಚಿನ್ನಿ ಬಾಂಬ್​ ಹತ್ತಿರ ಹೋಗಬಹುದು ಎಂದರು. ಶುಭಾಗೆ ಇದು ಅಚ್ಚರಿ ಮೂಡಿಸಿತ್ತು. ಅದು ಹೇಗೆ ಎಂದು ಪ್ರಶ್ನೆ ಇತ್ತರು. ಆಗ ಮಂಜು ‘ಸ್ವಯಂ ನಿರ್ಗಮನ’ ಎನ್ನುವ ಉತ್ತರ ಕೊಟ್ಟರು.

‘ಎಲ್ಲಾ ಕ್ಯಾಮೆರಾಗಳು ದಿನದ 24 ಗಂಟೆ ಆನ್​ ಆಗಿಯೇ ಇರುತ್ತವೆ. ರಾತ್ರಿ 5 ನಿಮಿಷ ಒಂದೊಂದು ಕ್ಯಾಮೆರಾ ಹತ್ತಿರ ಹೋಗು. ನಾನು ಮನೆಗೆ ಹೋಗುತ್ತೇನೆ ಎಂದು ಹೇಳು. ಈ ವಾರ ನೀನೇ ಮನೆಯಿಂದ ಹೋಗುತ್ತೀಯಾ. ಇದೊಂದು ಒಳ್ಳೆಯ ಅವಕಾಶ. ಅದನ್ನು ಬಳಸಿಕೋ ಎಂದರು. ನಿನಗೆ ಕೌನ್ಸಲಿಂಗ್​ ಅಗತ್ಯವಿದೆ ಎಂದು ಶುಭಾ ನಕ್ಕರು.

ಕನ್ನಡ ಬಿಗ್​ ಬಾಸ್​ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸ್ವಯಂ ನಿರ್ಗಮನವಾಗಿದೆ. ನಟಿ ವೈಜಯಂತಿ ಅಡಿಗ ಬಿಗ್​ ಬಾಸ್​ ಮನೆ ಸೇರಿದ ಕೆಲವೇ ದಿನಗಳಲ್ಲಿ ಸ್ವ ಇಚ್ಛೆಯಿಂದ ಮನೆಯಿಂದ ಹೊರ ಬಂದಿದ್ದರು. ಇದಾದ ನಂತರ ಮನೆಯಲ್ಲಿ ಅನೇಕ ಬಾರಿ ಸ್ವಯಂ ನಿರ್ಗಮದ ಚರ್ಚೆ ಹಾಸ್ಯ ರೂಪದಲ್ಲಿ ಬರುತ್ತಲೇ ಇದೆ.

ಇದನ್ನೂ ಓದಿ: Bigg Boss 8: ಬಿಗ್​ ಬಾಸ್​​​ನಿಂದ ಅರ್ಧಕ್ಕೆ ಹೊರಹೋದ ದಿವ್ಯಾ ಉರುಡುಗ ಹಿಂದಿರುಗಿ ಬರಲ್ಲ?

ರಿಯಾಲಿಟಿ ಶೋ, ಸೀರಿಯಲ್​ ಶೂಟಿಂಗ್​ ಸ್ಥಗಿತ; ನಿಯಮ ಮೀರಿದ್ರೆ ಕ್ರಮ: ಟಿವಿ​ ಅಸೋಸಿಯೇಷನ್​ ಅಧ್ಯಕ್ಷ ಎಸ್​.ವಿ. ಶಿವಕುಮಾರ್

Published On - 3:41 pm, Sat, 8 May 21

ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಸ್ಪೈಸ್‌ಜೆಟ್ ಪ್ರಯಾಣಿಕರೊಂದಿಗೆ ಡ್ಯಾನ್ಸ್ ಮಾಡಿ ಹೋಳಿ ಆಚರಿಸಿದ ಸಿಬ್ಬಂದಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ಬೆಂಗಳೂರಿನಲ್ಲಿ ಶ್ವಾನದ ಮೇಲೆ ಅತ್ಯಾಚಾರವೆಸಗಿ ವಿಕೃತಿ
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ವೇದಿಕೆ ಮೇಲೆಯೇ ವಾಗ್ವಾದಕ್ಕಿಳಿದ ಸಂಸದ ಪಿಸಿ ಮೋಹನ್​, ಪ್ರದೀಪ್​ ಈಶ್ವರ್
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಆಶೀರ್ವಾದ ರೂಪದಲ್ಲಿ ಹಣ ನೀಡುವುದು ಮಠದ ಸಂಪ್ರದಾಯ: ಸ್ವಾಮೀಜಿ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಗೋರಖ್‌ಪುರದಲ್ಲಿ ಬಣ್ಣ ಎರಚಿ ಸಿಎಂ ಯೋಗಿ ಆದಿತ್ಯನಾಥ್ ಹೋಳಿ ಸಂಭ್ರಮ
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ಆಮಿರ್- ರಣ್​ಬೀರ್ ನಡುವೆ ಬಿರುಕು ಮೂಡಿಸಿದ ರಿಷಭ್ ಪಂತ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ನೀವೆಲ್ಲ ಬರುವಂಗಿದಿದ್ರೆ ನಿಮ್ಮನ್ನೂ ಊಟಕ್ಕೆ ಕರೀಬಹುದಿತ್ತು: ಶಿವಕುಮಾರ್
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಶಾಸಕರು ಬಣ್ಣದಾಟ ಆಡುವಾಗ ಕೃಷ್ಣ ಭೈರೇಗೌಡ ತಪ್ಪಿಸಿಕೊಂಡಿದ್ದು ಹೇಗೆ ಗೊತ್ತಾ?
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಪತಿ ಸೂರ್ಯ ಸಾವಿನ ಹಿಂದೆ ಶ್ವೇತಾಳ ಕೈವಾಡವಿದೆ ಎಂದ ಪತ್ನಿ ದೀಪಿಕಾ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ
ಸಿಐಡಿ ತನಿಖೆ ರಾಜ್ಯ ಸರ್ಕಾರ ಹಿಂತೆಗೆದುಕೊಂಡ ಕಾರಣ ಗೊತ್ತಿಲ್ಲ: ಅಣ್ಣಾಮಲೈ