ಕಾಡುತ್ತಿದೆ ‘ಕೊಲೆಯ ನೆನಪು’ ಈ ಬಾರಿ ಜಾರ್ಜ್ ಕುಟ್ಟಿಯ ಪ್ಲ್ಯಾನ್ ಏನು?

Drishyam 3 trailer: ಮೋಹನ್​​ಲಾಲ್ ನಟಿಸಿ, ಜಿತು ಜೋಸೆಫ್ ನಿರ್ದೇಶನ ಮಾಡಿದ್ದ ಈ ಸಿನಿಮಾದ ಎರಡನೇ ಭಾಗ 2022 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾದ ಮೂರನೇ ಭಾಗ ನಿರ್ಮಾಣವಾಗಿದ್ದು, ಬಿಡುಗಡೆಗೆ ರೆಡಿಯಾಗಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಉಂಟು ಮಾಡಿದೆ.

ಕಾಡುತ್ತಿದೆ ‘ಕೊಲೆಯ ನೆನಪು’ ಈ ಬಾರಿ ಜಾರ್ಜ್ ಕುಟ್ಟಿಯ ಪ್ಲ್ಯಾನ್ ಏನು?
ದೃಶ್ಯಂ 3
Image Credit source: Drishyam 3

Updated on: May 09, 2026 | 9:48 PM

‘ದೃಶ್ಯಂ’ (Drishyam) ಸಿನಿಮಾ ಭಾರತ ಸಿನಿಮಾ ಇತಿಹಾಸದಲ್ಲೇ ಅತಿ ಹೆಚ್ಚು ರೀಮೇಕ್​​ಗಳನ್ನು ಕಂಡ ಸಿನಿಮಾ. ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಹ ಹೌದು. ಆ ಸಿನಿಮಾದ ಭಿನ್ನತೆ, ಸರಳತೆಗೆ ಪ್ರೇಕ್ಷಕರು ಫಿದಾ ಆಗಿದ್ದರು. ಮೋಹನ್​​ಲಾಲ್ ನಟಿಸಿ, ಜಿತು ಜೋಸೆಫ್ ನಿರ್ದೇಶನ ಮಾಡಿದ್ದ ಈ ಸಿನಿಮಾದ ಎರಡನೇ ಭಾಗ 2022 ರಲ್ಲಿ ನೇರವಾಗಿ ಒಟಿಟಿಯಲ್ಲಿ ಬಿಡುಗಡೆ ಆಗಿತ್ತು. ಇದೀಗ ಈ ಸಿನಿಮಾದ ಮೂರನೇ ಭಾಗ ನಿರ್ಮಾಣವಾಗಿದ್ದು, ಬಿಡುಗಡೆಗೆ ರೆಡಿಯಾಗಿದೆ. ಇದೀಗ ಈ ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸಿನಿಮಾದ ಬಗ್ಗೆ ಸಾಕಷ್ಟು ಕುತೂಹಲ ಉಂಟು ಮಾಡಿದೆ.

ಈಗ ಬಿಡುಗಡೆ ಆಗಿರುವ ‘ದೃಶ್ಯಂ 3’ ಟ್ರೈಲರ್‌ನಲ್ಲಿ ಜಾರ್ಜ್‌ಕುಟ್ಟಿ ತನ್ನ ಹಿಂದಿನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಪಡುತ್ತಿರುವುದು ಕಂಡುಬರುತ್ತದೆ. ತನ್ನ ಮಕ್ಕಳು ತನ್ನನ್ನು ಒಬ್ಬ ಅಪರಾಧಿ ಎಂದು ಭಾವಿಸುತ್ತಿರಬಹುದೇ ಎಂಬ ಆತಂಕ ಅವನನ್ನು ಕಾಡುತ್ತಿದೆ. ಪೊಲೀಸರಿಂದ ತನ್ನ ಕುಟುಂಬವನ್ನು ರಕ್ಷಿಸಲು ಹೂತಿದ್ದ ಸತ್ಯಗಳು ಈಗ ಮತ್ತೆ ಮುನ್ನೆಲೆಗೆ ಬರುತ್ತಿದ್ದು, ಈ ಬಾರಿ ತನ್ನನ್ನು ಮತ್ತು ತನ್ನ ಕುಟುಂಬವನ್ನು ಕಾನೂನಿನಿಂದ ತಪ್ಪಿಸಲು ಜಾರ್ಜ್‌ಕುಟ್ಟಿ ಈ ಬಾರಿ ಯಾವ ರೀತಿಯ ಹೊಸ ತಂತ್ರಗಳನ್ನು ರೂಪಿಸುತ್ತಾನೆ ಎಂಬುದು ಕಥೆಯ ಮುಖ್ಯ ಎಳೆಯಾಗಿದೆ.

ನಿರ್ದೇಶಕ ಜೀತು ಜೋಸೆಫ್ ಈ ಭಾಗದಲ್ಲಿ ಕಥೆಯನ್ನು ಮತ್ತಷ್ಟು ರೋಚಕಗೊಳಿಸಿದ್ದಾರೆ. ಟ್ರೈಲರ್‌ನಲ್ಲಿ ತೋರಿಸಿರುವಂತೆ, ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಳ್ಳಲು ಜಾರ್ಜ್‌ಕುಟ್ಟಿ ಮಾಡುವ ಪ್ರತಿಯೊಂದು ನಡೆ ಕೂಡ ಅನಿರೀಕ್ಷಿತ ತಿರುವುಗಳಿಂದ ಕೂಡಿದೆ. ತನ್ನ ಕುಟುಂಬದ ಮೇಲಿನ ಪ್ರೀತಿ ಮತ್ತು ಸಮಾಜದಲ್ಲಿ ಗೌರವ ಉಳಿಸಿಕೊಳ್ಳುವ ಹೋರಾಟದ ನಡುವೆ ಅವನು ಸಿಲುಕಿಕೊಂಡಿದ್ದಾನೆ. ಆದರೆ ಈ ಬಾರಿ ಪೊಲೀಸರ ಜೊತೆಗೆ ಪತ್ರಕರ್ತರು ಇನ್ನೂ ಕೆಲವರು ಜಾರ್ಜ್ ಕುಟ್ಟಿಯ ಹಿಂದೆ ಬಿದ್ದಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ

ಮೋಹನ್ ಲಾಲ್ ಅವರು ಜಾರ್ಜ್‌ಕುಟ್ಟಿಯ ಪಾತ್ರದಲ್ಲಿ ಎಂದಿನಂತೆ ಅದ್ಭುತವಾಗಿ ನಟಿಸಿದ್ದು, ಅವರ ಮುಖದಲ್ಲಿನ ಆತಂಕ ಮತ್ತು ಸ್ಥಿತಪ್ರಜ್ಞೆ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಚಿತ್ರದ ಮೊದಲ ಎರಡು ಭಾಗಗಳು ಸೂಪರ್ ಹಿಟ್ ಆಗಿರುವುದರಿಂದ, ಈ ಮೂರನೇ ಭಾಗದ ಮೇಲೆ ಚಿತ್ರರಂಗದಲ್ಲಿ ಮತ್ತು ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆಗಳಿವೆ. ಪೊಲೀಸರು ಜಾರ್ಜ್‌ಕುಟ್ಟಿಯನ್ನು ಈ ಬಾರಿ ಹೇಗೆ ಹಿಡಿಯುತ್ತಾರೆ ಅಥವಾ ಅವನು ಮತ್ತೆ ತನ್ನ ಬುದ್ಧಿವಂತಿಕೆಯಿಂದ ಪಾರಾಗುತ್ತಾನೆಯೇ ಎಂಬ ಪ್ರಶ್ನೆಗೆ ಸಿನಿಮಾ ಉತ್ತರ ನೀಡಲಿದೆ. ಟ್ರೈಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಲಯಾಳಂ ಚಿತ್ರರಂಗದ ಈ ಕ್ರೈಮ್ ಥ್ರಿಲ್ಲರ್ ಸಿನಿಮಾ ನೋಡಲು ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾ ಮೇ 21 ರಂದು ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us