AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?

Love You Rachchu Review: ರಾಜ್ಯಾದ್ಯಂತ ‘ಲವ್​ ಯೂ ರಚ್ಚು’ ಚಿತ್ರ ಬಿಡುಗಡೆ ಆಗಿದೆ. ಅಜಯ್​ ರಾವ್​-ರಚಿತಾ ರಾಮ್​ ಜೋಡಿಯ ಈ ಸಿನಿಮಾ ಹೇಗಿದೆ ಎಂಬುದರ ವಿಮರ್ಶೆ ಇಲ್ಲಿದೆ..

‘ಲವ್​ ಯೂ ರಚ್ಚು’ ವಿಮರ್ಶೆ: ಕೌತುಕದ ಕಥೆಯಲ್ಲಿ ಟ್ವಿಸ್ಟ್​ ಓಕೆ; ಪ್ರೇಕ್ಷಕರ ರಂಜನೆಗೆ ಇಷ್ಟೇ ಸಾಕೆ?
ಅಜಯ್​ ರಾವ್​-ರಚಿತಾ ರಾಮ್​
ಮದನ್​ ಕುಮಾರ್​
|

Updated on:Dec 31, 2021 | 4:49 PM

Share

ಚಿತ್ರ: ಲವ್​ ಯೂ ರಚ್ಚು ನಿರ್ಮಾಣ: ಗುರು ದೇಶಪಾಂಡೆ ನಿರ್ದೇಶನ: ಶಂಕರ್ ಎಸ್​. ರಾಜ್​ ಪಾತ್ರವರ್ಗ: ಅಜಯ್​ ರಾವ್​, ರಚಿತಾ ರಾಮ್​, ರಘು ಶಿವಮೊಗ್ಗ, ಅರು ಗೌಡ, ಅಚ್ಯುತ್​ ಕುಮಾರ್​, ಅರವಿಂದ್​ ರಾವ್​ ಮುಂತಾದವರು. ಸ್ಟಾರ್​: 2.5 / 5

ಬಿಡುಗಡೆಗೂ ಮುನ್ನ ಭಾರಿ ಸದ್ದು ಮಾಡಿತ್ತು ‘ಲವ್​ ಯೂ ರಚ್ಚು’ (Love You Rachchu) ಸಿನಿಮಾ. ಅಜಯ್​ ರಾವ್ (Ajay Rao)​ ಮತ್ತು ರಚಿತಾ ರಾಮ್​ (Rachita Ram) ಜೋಡಿಯಾಗಿ ನಟಿಸಿರುವ ಈ ಚಿತ್ರಕ್ಕೆ ಶಂಕರ್​ ಎಸ್​. ರಾಜ್​ ನಿರ್ದೇಶನ ಮಾಡಿದ್ದಾರೆ. ಗುರು ದೇಶಪಾಂಡೆ ಅವರು ನಿರ್ಮಾಣ ಮಾಡುವುದರ ಜತೆಗೆ ಕ್ರಿಯೇಟಿವ್​ ಹೆಡ್​ ಆಗಿ ಕೆಲಸ ಮಾಡಿದ್ದಾರೆ. ಕಥೆ ಮತ್ತು ಸಂಭಾಷಣೆಯನ್ನು ಅನುಭವಿ ನಿರ್ದೇಶಕ ಶಶಾಂಕ್​ ಬರೆದಿದ್ದಾರೆ. ಇವರೆಲ್ಲರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ಲವ್​ ಯೂ ರಚ್ಚು’ ಚಿತ್ರ ಹೇಗಿದೆ? ಈ ಸಿನಿಮಾದ ಪ್ಲಸ್​ ಏನು? ಮೈನಸ್​ ಏನು ಎಂಬುದರ ಪೂರ್ತಿ ವಿಮರ್ಶೆ (Love You Rachchu Review) ಇಲ್ಲಿದೆ. ಫ್ಯಾಮಿಲಿ ಪ್ರೇಕ್ಷಕರನ್ನು ಗಮನದಲ್ಲಿ ಇಟ್ಟುಕೊಂಡು ಸಿದ್ಧವಾಗಿರುವ ಈ ಸಿನಿಮಾ ತನ್ನದೇ ಆದ ಒಂದಷ್ಟು ಇತಿಮಿತಿಗಳ ನಡುವೆ ರಂಜಿಸುವ ಪ್ರಯತ್ನ ಮಾಡಿದೆ.

ಸಸ್ಪೆನ್ಸ್​ ಥ್ರಿಲ್ಲರ್​ ಕಥೆ:

ಟ್ರೇಲರ್​ನಲ್ಲಿ ಗೊತ್ತಾದಂತೆ ಇದೊಂದು ಮರ್ಡರ್​ ಮಿಸ್ಟರಿ ಕಥೆ. ಆಕಸ್ಮಿಕವಾದ ಒಂದು ಕೊಲೆಯ ಜಾಲದಲ್ಲಿ ಗಂಡ-ಹೆಂಡತಿ ಸಿಕ್ಕಿಕೊಳ್ಳುತ್ತಾರೆ. ಆ ಕೊಲೆಯ ಹಿಂದೆ ಇರುವ ಅಸಲಿ ವಿಷಯ ಏನು? ಕೊಲೆಗೆ ಕಾರಣವಾದ ಆ ವ್ಯಕ್ತಿ ಯಾರು ಎಂಬ ಕುತೂಹಲವನ್ನು ಇಟ್ಟುಕೊಂಡು ಕಥೆ ಸಾಗುತ್ತದೆ. ಒಟ್ಟಾರೆ ಆ ಪ್ರಕರಣದಿಂದ ಹೊರಬರಲು ಹೀರೋ-ಹೀರೋಯಿನ್​ ಏನೆಲ್ಲ ಮಾಡ್ತಾರೆ ಎಂಬುದನ್ನು ತಿಳಿಯಲು ಪೂರ್ತಿ ಸಿನಿಮಾ ನೋಡಬೇಕು.

ಫ್ಯಾಮಿಲಿ ಪ್ರೇಕ್ಷಕರೇ ಟಾರ್ಗೆಟ್​:

ಇದು ಕಾಲೇಜ್​ ಹುಡುಗ-ಹುಡುಗಿಯ ಎಳೆ ವಯಸ್ಸಿನ ಲವ್​ಸ್ಟೋರಿ ಸಿನಿಮಾ ಅಲ್ಲ. ಆತ ತಾನೇ ಮದುವೆಯಾಗಿ ಸಂಸಾರ ಶುರುಮಾಡಿಕೊಂಡಿರುವ ಪತಿ-ಪತ್ನಿಯರ ಕಥೆ. ಒಂದು ಸುಂದರ ಸಂಸಾರದಲ್ಲಿ ಏನಿರಬೇಕು, ಏನಿರಬಾರದು ಎಂಬುದನ್ನು ವಿವರಿಸುವ ಕಥೆ. ಹಾಗಾಗಿ ಫ್ಯಾಮಿಲಿ ಪ್ರೇಕ್ಷಕರಿಗೆ ಈ ಸಿನಿಮಾ ಹೆಚ್ಚು ಕನೆಕ್ಟ್​ ಆಗುತ್ತದೆ. ಕಥೆಯ ಮೂಲಕ ಸಂಬಂಧಗಳ ಮೌಲ್ಯಗಳನ್ನು ತಿಳಿಸಿಕೊಡಲು ಪ್ರಯತ್ನಿಸಲಾಗಿದೆ.

ಇದ್ದರೂ ಇಲ್ಲದಂತಹ ಟ್ವಿಸ್ಟ್​ಗಳು:

ಮರ್ಡರ್​ ಮಿಸ್ಟರಿ ಕಥೆಯಲ್ಲಿ ಸಹಜವಾಗಿ ಬರುವಂತೆ ಈ ಸಿನಿಮಾದಲ್ಲಿಯೂ ಒಂದಷ್ಟು ಟ್ವಿಸ್ಟ್​ಗಳು ಎದುರಾಗುತ್ತವೆ. ಆದರೆ ಅವುಗಳನ್ನು ಪ್ರೇಕ್ಷಕರು ಸುಲಭವಾಗಿ ಊಹಿಸಬಹುದು. ಆ ನಿಟ್ಟಿನಲ್ಲಿ ಕಥೆ ಇನ್ನಷ್ಟು ಗಟ್ಟಿಯಾಗಿ ಇರಬೇಕಿತ್ತು. ಹೊಸತನದ ರೋಚಕತೆಯನ್ನು ಬಯಸುವ ಪ್ರೇಕ್ಷಕರಿಗೆ ಈ ಸಿನಿಮಾದಿಂದ ಕೊಂಚ ನಿರಾಸೆ ಆಗಬಹುದು.

ಪಾತ್ರಧಾರಿಗಳ ನಟನೆ ಹೇಗಿದೆ?

ಸಿನಿಮಾದ ಬಹುತೇಕ ದೃಶ್ಯಗಳನ್ನು ಅಜಯ್​ ರಾವ್​ ಮತ್ತು ರಚಿತಾ ರಾಮ್​ ಆವರಿಸಿಕೊಂಡಿದ್ದಾರೆ. ಪಾತ್ರಗಳಿಗೆ ನ್ಯಾಯ ಒದಗಿಸಲು ಅವರು ಪ್ರಯತ್ನಿಸಿದ್ದಾರೆ. ಆ್ಯಕ್ಷನ್​ ದೃಶ್ಯಗಳಲ್ಲಿ ಅಜಯ್​ ರಾವ್​ ಅಬ್ಬರಿಸಿದ್ದಾರೆ. ಎರಡೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ರಘು ಶಿವಮೊಗ್ಗ ಗಮನ ಸೆಳೆಯುತ್ತಾರೆ. ಅಚ್ಯುತ್​ ಕುಮಾರ್​ ಅವರಂಥ ಪ್ರತಿಭಾವಂತ ಕಲಾವಿದನಿಗೆ ಹೆಚ್ಚು ಸ್ಕ್ರೀನ್​ ಸ್ಪೇಸ್​ ಸಿಕ್ಕಿಲ್ಲ. ಅರು ಗೌಡ ಈ ಸಿನಿಮಾದ ಸರ್ಪ್ರೈಸ್​. ಅರವಿಂದ್​ ರಾವ್​ ಖಡಕ್​ ಪಾತ್ರದಲ್ಲಿ ಮಿಂಚಿದ್ದಾರೆ.

ತಾಂತ್ರಿಕವಾಗಿ ಮೆಚ್ಚಬಹುದಾದ ಚಿತ್ರ:

ಮೇಕಿಂಗ್​ ವಿಚಾರದಲ್ಲಿ ‘ಲವ್​ ಯೂ ರಚ್ಚು’ ಚಿತ್ರ ಗುಣಮಟ್ಟ ಕಾಯ್ದುಕೊಂಡಿದೆ. ಶ್ರೀ ಕ್ರೇಜಿಮೈಂಡ್ಸ್​ ಛಾಯಾಗ್ರಹಣ ಮತ್ತು ಸಂಕಲನ ಅಚ್ಚುಕಟ್ಟಾಗಿದೆ. ಮಣಿಕಾಂತ್​ ಕದ್ರಿ ಅವರ ಸಂಗೀತ ಈ ಸಿನಿಮಾಗೆ ಬಲ ನೀಡಿದೆ. ತಾಂತ್ರಿಕ ಗುಣಮಟ್ಟಕ್ಕೆ ನೀಡಿದಷ್ಟೇ ಮಹತ್ವನ್ನು ಸಿನಿಮಾದ ಕಥೆ ಮತ್ತು ಅದನ್ನು ನಿರೂಪಿಸುವ ಶೈಲಿಗೂ ನೀಡಿದ್ದರೆ ಈ ಚಿತ್ರಕ್ಕೆ ಹೆಚ್ಚಿನ ಅಂಕ ಸಿಗುತ್ತಿತ್ತು.

ಇದನ್ನೂ ಓದಿ:

83 Movie Review: ಇದು ಬರೀ ಸಿನಿಮಾ ಅಲ್ಲ; ಕ್ರಿಕೆಟ್​ಪ್ರಿಯರ ಎಮೋಷನ್​, ವಿಶ್ವಕಪ್​ ಗೆಲುವಿನ ಹೊಸ ಸೆಲೆಬ್ರೇಷನ್​

GGVV Review: ಹೀಗೂ ಇರಬಹುದಾ ಕ್ರೈಮ್​ ಲೋಕ? ಇದು ರಾಜ್​ ಬಿ. ಶೆಟ್ಟಿ ಇನ್ನೊಂದು ಮುಖ

Published On - 4:48 pm, Fri, 31 December 21

Follow Us
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಜಾನಕಮ್ಮ ಸ್ಮಾರಕಕ್ಕೆ ಬೇಡಿಕೆ: ಶೀಘ್ರದಲ್ಲೇ ತೀರ್ಮಾನ ಮಾಡ್ತೀವಿ ಎಂದ ಯತೀಂದ್
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಪ್ರವೀಣ್ ನೆಟ್ಟಾರು ಪ್ರಕರಣ: NIA ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಆರೋಪಿಗಳು
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್. ಜಾನಕಿ ಪಾರ್ಥಿವ ಶರೀರ ನೋಡಿ ಬಿಕ್ಕಿ ಬಿಕ್ಕಿ ಅತ್ತ ವಾಣಿ ಹರಿಕೃಷ್ಣ
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್.ಜಾನಕಿಯವರ ಅಂತಿಮ ದರ್ಶನ ಪಡೆದು ಭಾವುಕರಾದ ಗಾಯಕ ವಿಜಯ್ ಪ್ರಕಾಶ್
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಎಸ್​​. ಜಾನಕಿ ನಿಧನಕ್ಕೆ ಲಂಡನ್​​ನಿಂದಲೇ ಇಳಯರಾಜ್ ಸಂತಾಪ
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ಜಾನಕಮ್ಮಗೆ ಮೈಸೂರಿನ ನಂಟು ಹೇಗೆ? ನವೀನ್ ಕೇರ್​ಟೇಕರ್ ಆಗಿದ್ಯಾಕೆ?
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಯುವ ಕಾಂಗ್ರೆಸ್​​ನಿಂದ ಸೈಕಲ್ ಜಾಥಾ
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಎಸ್. ಜಾನಕಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ಅಭಿಮಾನಿಗಳು
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಜುಲೈ 13 ರಿಂದ 19 ರವರೆಗಿನ ದ್ವಾದಶ ರಾಶಿಗಳ ವಾರ ಭವಿಷ್ಯ ಇಲ್ಲಿದೆ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ
ಎಸ್​​. ಜಾನಕಿ ಅಂತಿಮ ದರ್ಶನದ ನೇರಪ್ರಸಾರ