Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ

Gaalipata 2 Movie Review: ‘ಗಾಳಿಪಟ 2’ ಚಿತ್ರದಲ್ಲಿ ಹಲವು ಭಾವನೆಗಳಿವೆ. ಅವುಗಳನ್ನೇ ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ ಯೋಗರಾಜ್​ ಭಟ್.

Gaalipata 2 Review: ಇದು ಬಗೆಹರಿಯದ ಭಾವನೆಗಳ ‘ಹಾಡು’-ಪಾಡು ಆಗಿರಬಹುದು ಪ್ರಾಯಶಃ
’ಗಾಳಿಪಟ 2’
Follow us
|

Updated on:Aug 12, 2022 | 1:12 AM

ಚಿತ್ರ: ಗಾಳಿಪಟ 2

ನಿರ್ಮಾಣ: ರಮೇಶ್​ ರೆಡ್ಡಿ

ನಿರ್ದೇಶನ: ಯೋಗರಾಜ್​ ಭಟ್​

ಇದನ್ನೂ ಓದಿ
Image
Gaalipata 2: ಅಕ್ಷಯ್​ ಕುಮಾರ್​ ಚಿತ್ರವನ್ನೇ ಮೀರಿಸಿದ ‘ಗಾಳಿಪಟ 2’; ಬುಕ್​ ಮೈ ಶೋನಲ್ಲಿ ಭರ್ಜರಿ ಹವಾ
Image
Gaalipata 2: ‘ಗಾಳಿಪಟ 2’ ಅದ್ದೂರಿ ಪ್ರೀ-ರಿಲೀಸ್​ ಇವೆಂಟ್​; ಕಾರ್ಯಕ್ರಮದ ಲೈವ್​ ನೋಡಲು ಇಲ್ಲಿ ಕ್ಲಿಕ್​ ಮಾಡಿ
Image
‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​
Image
ಹೇಗಿತ್ತು ‘ಗಾಳಿಪಟ 2’ ಶೂಟಿಂಗ್​? ಇಲ್ಲಿದೆ ಮೇಕಿಂಗ್​ ವಿಡಿಯೋ

ಪಾತ್ರವರ್ಗ: ಗಣೇಶ್​, ದಿಗಂತ್​, ಪವನ್​ ಕುಮಾರ್​, ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ, ಅನಂತ್​ ನಾಗ್​ ಮುಂತಾದವರು.

ಸ್ಟಾರ್​: 3.5/5

ಯಾವುದೇ ಹಿಟ್​ ಸಿನಿಮಾದ ಸೀಕ್ವೆಲ್​ ಬರುತ್ತಿದೆ ಎಂದಾಗ ಪ್ರೇಕ್ಷಕರ ನಿರೀಕ್ಷೆ ಗರಿಗೆದರುತ್ತದೆ. ಅದೇ ರೀತಿ ‘ಗಾಳಿಪಟ 2’ ಚಿತ್ರ ಅನೌನ್ಸ್​ ಆದಾಗಲೂ ಸಿನಿಪ್ರಿಯರಿಗೆ ಕೌತುಕ ಮೂಡಿತ್ತು. ನಿರ್ದೇಶಕ ಯೋಗರಾಜ್​ ಭಟ್ (Yogaraj Bhat)​, ನಟರಾದ ಗೋಲ್ಡನ್​ ಸ್ಟಾರ್​ ಗಣೇಶ್​ (Golden Star Ganesh), ದಿಗಂತ್​ ಮಂಚಾಲೆ, ಅನಂತ್​ ನಾಗ್​ ಮುಂತಾದವರ ಕಾಂಬಿನೇಷನ್​ ಎಂದಾಗ ಸಹಜವಾಗಿಯೇ ಹೈಪ್​ ಕ್ರಿಯೇಟ್​ ಆಗಿತ್ತು. ಈಗ ‘ಗಾಳಿಪಟ 2’ (Gaalipata 2) ರಿಲೀಸ್​ ಆಗಿದೆ. ಹಾಗಾದರೆ ಅಭಿಮಾನಿಗಳ ನಿರೀಕ್ಷೆಯನ್ನು ತಲುಪುವಲ್ಲಿ ಈ ಚಿತ್ರ ಯಶಸ್ವಿ ಆಗಿದೆಯೇ? ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆ ಹೇಳಿದ್ದಾರೆ? ಒಟ್ಟಾರೆ ಸಿನಿಮಾ ಹೇಗಿದೆ? ಇಂಥ ಎಲ್ಲ ಪ್ರಶ್ನೆಗಳಿಗೆ ಈ ವಿಮರ್ಶೆಯಲ್ಲಿದೆ ಉತ್ತರ..

‘ಗಾಳಿಪಟ 2’ ಎಂಬ ಟೈಟಲ್​ ಯಾಕೆ?

ಮೊದಲಿಗೆ ಸ್ಪಷ್ಟಪಡಿಸುವುದೇನೆಂದರೆ ಇದು ‘ಗಾಳಿಪಟ’ ಸಿನಿಮಾದ ಮುಂದುವರಿದ ಕಥೆ ಅಲ್ಲ. ಹಾಗಾದರೆ ‘ಗಾಳಿಪಟ 2’ ಎಂಬ ಟೈಟಲ್​ ಯಾಕೆ ಎಂಬ ಪ್ರಶ್ನೆ ಪ್ರೇಕ್ಷಕರಲ್ಲಿ ಮೂಡುವುದು ಸಹಜ? ಅದಕ್ಕೆ ಉತ್ತರ ಸಿಂಪಲ್​; ಮೊದಲನೇ ಗಾಳಿಪಟದ ಫ್ಲೇವರ್​ನಲ್ಲೇ ಈ ಹೊಸ ಗಾಳಿಪಟ ಮೂಡಿಬಂದಿದೆ. ಅಲ್ಲದೇ ಗಾಳಿಪಟ ಹಾರಿಸಲು ಹೋಗಿ ಕಾಣೆಯಾದ ಒಬ್ಬ ಹುಡುಗನ ಕಥೆಯೂ ಈ ಚಿತ್ರದಲ್ಲಿದೆ. ಯೋಗರಾಜ್​ ಭಟ್​ ಅವರ ಎಂದಿನ ಸೊಗಡು ಇಲ್ಲಿ ಕಾಣಿಸುತ್ತದೆ. ಅವರ ಶೈಲಿಯ ಸಿನಿಮಾವನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಗಾಳಿಪಟ 2’ ಆಕರ್ಷಿಸುತ್ತದೆ.

ಹಲವು ಭಾವನೆಗಳ ಕಹಾನಿ:

ಕನ್ನಡ ಕಲಿಯಬೇಕು ಎಂದು ‘ನೀರುಕೋಟೆ’ ಎಂಬ ಊರಿಗೆ ಬರುವ ಮೂವರು ಹುಡುಗರು (ಗಣೇಶ್​, ದಿಗಂತ್​, ಪವನ್​ಕುಮಾರ್​) ಬಹಳ ಉಡಾಫೆ ಬುದ್ಧಿಯವರು. ಈ ಮೂವರಿಗೂ ಒಂದೊಂದು ಲವ್ ಸ್ಟೋರಿ ಇದೆ. ಹಾಸ್ಟೆಲ್​ ಸಿಗದೇ ಇವರು ವಾಸ್ತವ್ಯ ಹೂಡುವುದು ಮೇಷ್ಟ್ರು (ಅನಂತ್​ ನಾಗ್​) ಮನೆಯಲ್ಲಿ. ಕನ್ನಡ ಕಲಿಯಬೇಕು ಎಂದು ಬಂದವರು ಬದುಕಿನ ಪಾಠ ಕಲಿತುಕೊಂಡು ಹೋಗುವುದೇ ‘ಗಾಳಿಪಟ 2’ ಕಥೆಯ ಜೀವಾಳ. ಇಲ್ಲಿ ಹಲವು ಭಾವನೆಗಳಿವೆ. ಅವುಗಳನ್ನೇ ಮುಂದಿಟ್ಟುಕೊಂಡು ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ನಗು-ಅಳುವಿನ ವಿಶ್ರಣ:

ಯೋಗರಾಜ್​ ಭಟ್​ ಅವರ ಬಹುತೇಕ ಸಿನಿಮಾದಲ್ಲಿ ಕೆಲವು ಪಾತ್ರಗಳು ಹೆಂಗೆಂಗೋ ಆಡುತ್ತವೆ. ಅದು ‘ಗಾಳಿಪಟ 2’ ಚಿತ್ರದಲ್ಲಿಯೂ ಮುಂದುವರಿದಿದೆ. ಅದರಿಂದ ಒಂದಷ್ಟು ಹಾಸ್ಯ ಉಕ್ಕುತ್ತದೆ. ಯೋಗರಾಜ್​ ಭಟ್ಟರ ಈ ಶೈಲಿಯನ್ನು ಇಷ್ಟಪಡುವ ಪ್ರೇಕ್ಷಕರಿಗೆ ಇದು ಹೇಳಿ ಮಾಡಿಸಿದ ಸಿನಿಮಾ. ಹಾಗಂತ ಅಷ್ಟಕ್ಕೇ ನಿರ್ದೇಶಕರು ಸೀಮಿತವಾಗಿಲ್ಲ. ನೋಡುಗರನ್ನು ಭಾವುಕರನ್ನಾಗಿಸುವ ಕೆಲವು ದೃಶ್ಯಗಳ ಮೂಲಕ ಅವರು ಸೆಳೆಯಲು ಪ್ರಯತ್ನಿಸಿದ್ದಾರೆ. ಅವರಿಗೆ ಎಲ್ಲ ಕಲಾವಿದರು ಸಾಥ್​ ನೀಡಿದ್ದಾರೆ. ಮೊದಲು ಏನೋ ಅನಿಸುವ ಕಥೆಯು ಕ್ಲೈಮ್ಯಾಕ್ಸ್​ ವೇಳೆಗೆ ಇನ್ನೇನೋ ಆಗಿ ಪ್ರೇಕ್ಷಕರನ್ನು ಆವರಿಸುತ್ತದೆ. ಅದು ಈ ಚಿತ್ರದ ವಿಶೇಷ.

ದೊಡ್ಡದಾಗಿದೆ ಗಾಳಿಪಟದ ಗ್ಯಾಂಗ್​: ತರಲೆ, ತುಂಟ, ಮಾತಿನ ಮಲ್ಲ, ಒಂದೇ ಕ್ಷಣದಲ್ಲಿ ಪ್ರೀತಿಯಲ್ಲಿ ಬೀಳುವ ಯುವಕನ ಪಾತ್ರಕ್ಕೆ ಗಣೇಶ್​ ಜೀವ ತುಂಬಿದ್ದಾರೆ. ಪ್ರೇಮಿಯಾಗಿ, ಅರೆಬರೆ ಅಘೋರಿಯಾಗಿ ದಿಗಂತ್​ ಸಹ ಗಮನ ಸೆಳೆದಿದ್ದಾರೆ. ಗಾಳಿಪಟ ಗ್ಯಾಂಗ್​ಗೆ ಹೊಸದಾಗಿ ಸೇರ್ಪಡೆ ಆಗಿರುವ ಪವನ್​ ಕುಮಾರ್​ ಅವರಿಗೆ ಇದರಲ್ಲೊಂದು ಮಜವಾದ ಪಾತ್ರವಿದೆ. ಎಮೋಷನಲ್​ ಆಗಿ ಆವರಿಸಿಕೊಳ್ಳುವ ಗುಣ ಅನಂತ್​ ನಾಗ್​ ಅವರ ಪಾತ್ರಕ್ಕಿದೆ. ಕೆಲವೇ ದೃಶ್ಯಗಳಲ್ಲಿ ಕಾಣಿಸಿಕೊಂಡರೂ ರಂಗಾಯಣ ರಘು ನಗಿಸುತ್ತಾರೆ, ನಂತರ ಅಳಿಸುತ್ತಾರೆ.

ಶರ್ಮಿಳಾ ಮಾಂಡ್ರೆ, ವೈಭವಿ ಶಾಂಡಿಲ್ಯ ಅವರ ಪಾತ್ರಗಳಿಗೂ ಸೂಕ್ತ ಸ್ಕ್ರೀನ್​ ಸ್ಪೇಸ್​ ಸಿಕ್ಕಿದೆ. ಸುಧಾ ಬೆಳವಾಡಿ, ಪದ್ಮಜಾ ರಾವ್​, ನಿಶ್ವಿಕಾ ನಾಯ್ಡು, ವಿಜಯ್​ ಸೂರ್ಯ, ಶ್ರೀನಾಥ್​ ಸೇರಿದಂತೆ ಹಲವು ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಕೆಲವೇ ನಿಮಿಷ ಕಾಣಿಸಿಕೊಳ್ಳುವ ಪಾತ್ರಗಳು ಕೂಡ ಹೈಲೈಟ್​ ಆಗಿವೆ. ಎಲ್ಲವನ್ನೂ ಬ್ಯಾಲೆನ್ಸ್​ ಮಾಡುವಲ್ಲಿ ಯೋಗರಾಜ್​ ಭಟ್​ ಯಶಸ್ವಿ ಆಗಿದ್ದಾರೆ.

ಹಾಡುಗಳ ಮೇಲೆ ವಿಶೇಷ ಕಾಳಜಿ:

ಗಣೇಶ್​-ಯೋಗರಾಜ್​ ಭಟ್​ ಕಾಂಬಿನೇಷನ್​ ಸಿನಿಮಾ ಎಂದರೆ ಅಲ್ಲಿ ಹಾಡುಗಳು ಹೈಲೈಟ್​ ಆಗಲೇಬೇಕು ಎಂಬುದು ಅಲಿಖಿತ ನಿಯಮ. ಆ ನಿಯಮವನ್ನು ಚೆನ್ನಾಗಿ ಪಾಲಿಸಲಾಗಿದೆ. ‘ನೀನು ಬಗೆಹರಿಯದ ಹಾಡು..’, ‘ನಾನಾಡದ ಮಾತೆಲ್ಲವ ಕದ್ದಾಲಿಸು..’, ‘ನಾವು ಬದುಕಿರಬಹುದು ಪ್ರಾಯಶಃ..’ ಹಾಡುಗಳಿಂದ ಸಿನಿಮಾದ ಮೆರುಗು ಹೆಚ್ಚಿದೆ. ಅರ್ಜುನ್​ ಜನ್ಯ ಅವರಿಗೆ ಅದರ ಕ್ರೆಡಿಟ್​ ಸಲ್ಲುತ್ತದೆ. ಸಾಹಿತ್ಯ ಬರೆದ ಯೋಗರಾಜ್​ ಭಟ್​, ಜಯಂತ್​ ಕಾಯ್ಕಿಣಿ ಅವರಿಗೂ ಅದರಲ್ಲಿ ಪಾಲಿದೆ.

ಅದ್ದೂರಿತನಕ್ಕೆ ಇಲ್ಲ ಕೊರತೆ:

ಮೇಕಿಂಗ್​ ವಿಚಾರದಲ್ಲಿ ಯೋಗರಾಜ್​ ಭಟ್​ ಎಲ್ಲಿಯೂ ರಾಜಿ ಆಗಿಲ್ಲ. ಅದ್ದೂರಿಯಾಗಿಯೇ ಸಿನಿಮಾವನ್ನು ಕಟ್ಟಿಕೊಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಶ್ರೀಮಂತವಾಗಿದೆ. ಹಲವು ದೃಶ್ಯಗಳನ್ನು ವಿದೇಶದಲ್ಲಿ ಚಿತ್ರಿಸಲಾಗಿದೆ. ಸಂತೋಷ್​ ರೈ ಪಾತಾಜೆ ಕ್ಯಾಮೆರಾ ಕಣ್ಣಿನಲ್ಲಿ ಮಲೆನಾಡಿನ ಮಳೆಯಿಂದ ಹಿಡಿದು ವಿದೇಶದ ಹಿಮದ ಹಾಸಿನವರೆಗೆ ಎಲ್ಲವೂ ಸುಂದರವಾಗಿ ಸೆರೆಯಾಗಿವೆ.

ಹೀಗೊಂದು ಪ್ರಯೋಗ ಮತ್ತು ಫಿಲಾಸಫಿ:

ಇಡೀ ಬದುಕನ್ನು ಗಂಭೀರವಾಗಿ ಕಳೆಯಲಾದೀತೆ? ಅಥವಾ ಬರೀ ಲಘುವಾಗಿಯೇ ಪರಿಗಣಿಸಲಾದೀತೆ? ಜೀವನದ ತಿರುವುಗಳಿಗೆ ಈ ಎರಡರ ಪೈಕಿ ಯಾವುದೇ ರೀತಿಯಲ್ಲಿ ಪ್ರತಿಕ್ರಿಯಿಸಿದರೂ ಅದರ ಫಲಿತಾಂಶ ಒಂದೆಯೇ? ಇಂಥ ಬಗೆಹರಿಯದ ಹಲವು ಪ್ರಶ್ನೆಗಳನ್ನು ನೋಡುಗನ ಮನಸ್ಸಿನಲ್ಲಿ ಮೂಡಿಸುತ್ತದೆ ಈ ಸಿನಿಮಾ. ಆರಂಭದಿಂದ ಎಲ್ಲವನ್ನೂ ಲಘುವಾಗಿಯೇ ತೋರಿಸಿ, ಅಂತ್ಯ ಸಮೀಪಿಸುವ ವೇಳೆಗೆ ಎಲ್ಲವನ್ನೂ ಗಂಭೀರವಾಗಿಸಿದ್ದಾರೆ ಭಟ್ಟರು. ಹೇಳಲು ಹೊರಟ ಫಿಲಾಸಫಿಯನ್ನು ಪ್ರಯೋಗದ ಮೂಲಕ ಜನರ ಮುಂದಿರಿಸುವ ಕೆಲಸ ಈ ಚಿತ್ರದಲ್ಲಾಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 1:10 am, Fri, 12 August 22

ತಾಜಾ ಸುದ್ದಿ
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಒಂದು ಕುಟುಂಬದ ಮೇಲಿನ ದ್ವೇಷಕ್ಕಾಗಿ ಹಾಸನದ ಮಾನ ಹರಾಜಾಯಿತು: ದೇವರಾಜೇಗೌಡ 
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ಸಿದ್ದರಾಮಯ್ಯರೆಡೆ ವಿಜಯಾನಂದ ಕಾಶಪ್ಪನವರ್ ಧೋರಣೆ ಬದಲಾಗಿದೆಯೇ?
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ನಮಗಿರುವ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ ಸಾಕು: ಕೃಷ್ಣ ಭೈರೇಗೌಡ
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಪವಿತ್ರಾ ಗೌಡ ಗೆಳತಿ ಸಮತಾ ದರ್ಶನ್​ರನ್ನು ಭೇಟಿಯಾಗಬೇಕೆಂದಾಗ ನಟ ಒಪ್ಪಿದರು
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿದ್ದರಾಮಯ್ಯ ಸರ್ಕಾರ ಹಗರಣ, ಭ್ರಷ್ಟಾಚಾರಗಳಲ್ಲಿ ಮುಳುಗಿದೆ: ಸುನೀಲ ಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ಸಿಎಂ ಪತ್ನಿಯವರ ಜಮೀನು ಸ್ವಾಧೀನ ಆಗಿದ್ದು ಬಿಜೆಪಿ ಅಧಿಕಾರದಲ್ಲಿ: ಶಿವಕುಮಾರ್
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯ ಉದ್ದೇಶಿಸಿ ಮೋದಿ ಮಾತು
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಪ್ರಜ್ವಲ್ ಭೇಟಿಯಾಗಲ್ಲ; ನಮಗೆ ದೇವರು, ನ್ಯಾಯಾಂಗವೇ ಗತಿಯೆಂದ ರೇವಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ಸಿದ್ದರಾಮಯ್ಯ ಏಯ್ ಭೀಮ ಅಂತ ಕೂಗಿದಾಗ ಓಡಿಬಂದಿದ್ದು ಕೋಟುಧಾರಿ ಕೆಎನ್ ರಾಜಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ
ನನ್ನ ಮಗ ಸೂರಜ್ ದೈವಭಕ್ತ, ತಾಯಿ ಚಾಮುಂಶೇಶ್ವರಿ ಕೃಪೆ ಅವನ ಮೇಲಿದೆ: ರೇವಣ್ಣ