‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

Gaalipata 2 Exam Song Teaser: ‘ಗಾಳಿಪಟ 2’ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೋಗರಾಜ್​ ಭಟ್​ ಬರೆದಿರುವ ‘ಎಕ್ಸಾಂ ಸಾಂಗ್​..’ ಏ.21ರಂದು ಬಿಡುಗಡೆ ಆಗಲಿದೆ.

‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​
ದಿಗಂತ್​, ಪವನ್ ಕುಮಾರ್​. ಗಣೇಶ್​, ಬುಲೆಟ್​ ಪ್ರಕಾಶ್​
Follow us
| Updated By: ಮದನ್​ ಕುಮಾರ್​

Updated on: Apr 19, 2022 | 7:58 AM

ನಿರ್ದೇಶಕ ಯೋಗರಾಜ್​ ಭಟ್​ ಮತ್ತು ನಟ ಗಣೇಶ್​ (Golden Star Ganesh) ಕಾಂಬಿನೇಷನ್​ ಎಂದರೆ ಸಿನಿಪ್ರಿಯರಿಗೆ ಏನೋ ಒಂದು ಥರ ಕುತೂಹಲ. ‘ಮುಂಗಾರು ಮಳೆ’ ಸಿನಿಮಾದಲ್ಲಿ ಈ ಜೋಡಿ ಮಾಡಿದ ಮೋಡಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಆ ಸಿನಿಮಾ ಟ್ರೆಂಡ್​ ಸೆಟರ್​ ಚಿತ್ರವಾಗಿ ಹೊರಹೊಮ್ಮಿತ್ತು. ನಂತರ ‘ಗಾಳಿಪಟ’ ಸಿನಿಮಾದಲ್ಲಿಯೂ ಅವರಿಬ್ಬರು ಕಮಾಲ್​ ಮಾಡಿದ್ದರು. ಆ ಚಿತ್ರದಲ್ಲಿ ನಟ ದಿಗಂತ್​ ಕೂಡ ಕೈ ಜೋಡಿಸಿದ್ದರು. ಈಗ ‘ಗಾಳಿಪಟ 2’ (Gaalipata 2) ಸಿನಿಮಾ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಾರಿ ಗಣೇಶ್​ ಮತ್ತು ದಿಗಂತ್​ ಜೊತೆ ಪವನ್​ ಕುಮಾರ್​ ಕೂಡ ಸೇರಿಕೊಂಡಿರುವುದು ಗೊತ್ತೇ ಇದೆ. ಈಗ ‘ಗಾಳಿಪಟ 2’ ಚಿತ್ರದ ಮೊದಲ ಸಾಂಗ್​ ರಿಲೀಸ್​ಗೆ ದಿನಾಂಕ ಫಿಕ್ಸ್​ ಆಗಿದೆ. ಎಂದಿನಂತೆ ಮೋಡಿ ಮಾಡಲು ಯೋಗರಾಜ್​ ಭಟ್ (Yogaraj Bhat)​ ಸಿದ್ಧರಾಗಿದ್ದಾರೆ. ಏ.21ರಂದು ‘ಎಕ್ಸಾಂ ಸಾಂಗ್​’ ಬಿಡುಗಡೆ ಆಗಲಿದ್ದು, ಅದು ಹೇಗಿರಲಿದೆ ಎಂಬುದರ ಝಲಕ್​ ತೋರಿಸಲು ಈಗ ಟೀಸರ್​ ಬಿಡಲಾಗಿದೆ. ಅದರಲ್ಲಿ ಗಣೇಶ್​, ದಿಗಂತ್​, ಪವನ್​ ಕುಮಾರ್​ ಮತ್ತು ಬುಲೆಟ್​ ಪ್ರಕಾಶ್​ ಬಾಯಿ ಬಡಿದುಕೊಂಡಿದ್ದಾರೆ!

ಯೋಗರಾಜ್​ ಭಟ್​ ಅವರ ಸಿನಿಮಾ ಯಾವಾಗಲೂ ಡಿಫರೆಂಟ್​ ಆಗಿರುತ್ತವೆ. ಅವರ ಸಾಹಿತ್ಯವಂತೂ ಇನ್ನೂ ಡಿಫರೆಂಟ್​. ಜನಸಾಮಾನ್ಯರ ನಡುವಿನ ಸಾಮಾನ್ಯ ಸಂಗತಿಯೇ ಅವರ ಸಾಹಿತ್ಯದ ಮುಖ್ಯವಸ್ತು. ಅದನ್ನು ತುಂಬ ಚೆನ್ನಾಗಿ ಪ್ರಸ್ತುತಪಡಿಸುವ ಕಲೆ ಅವರಿಗೆ ಒಲಿದಿದೆ. ಈ ಬಾರಿ ಕೂಡ ಅವರು ಅಂಥದ್ದೇ ವಿಷಯವನ್ನು ಆಯ್ಕೆ ಮಾಡಿಕೊಂಡಂತಿದೆ. ಸದ್ಯಕ್ಕಂತೂ ಇದು ಎಕ್ಸಾಂ ಬರೆಯುವ ಮತ್ತು ಎಕ್ಸಾಂ ರಿಸಲ್ಟ್​ಗಾಗಿ ಕಾಯುವ ಸಮಯ. ಈ ಸಂದರ್ಭಕ್ಕೆ ಸರಿಯಾಗಿ ‘ಗಾಳಿಪಟ 2’ ಚಿತ್ರತಂಡದಿಂದ ‘ಎಕ್ಸಾಂ ಸಾಂಗ್​..’ ರಿಲೀಸ್​ ಆಗುತ್ತಿದೆ. ವಿದ್ಯಾರ್ಥಿಗಳ ಪಾತ್ರದಲ್ಲಿ ಗಣೇಶ್​, ಪವನ್​ ಕುಮಾರ್​, ದಿಗಂತ್​ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ರಿಲೀಸ್​ ಆಗಿರುವ ಸಾಂಗ್​ ಟೀಸರ್​ನಲ್ಲಿ ಎಲ್ಲ ಸಬ್ಜೆಕ್ಟ್​​ನಲ್ಲಿ ಫೇಲ್​ ಆದ ಹುಡುಗರ ಕಥೆಯನ್ನು ಯೋಗರಾಜ್​ ಭಟ್​ ಅವರು ಹೇಳಿದ್ದಾರೆ. ಅದು ಕೂಡ ಎಂದಿನ ಅವರ ಫನ್ನಿ ಶೈಲಿಯಲ್ಲಿ. ಟೀಸರ್​ನಲ್ಲಿ ಬರುವ ಡೈಲಾಗ್​ ಈ ರೀತಿ ಇದೆ..

ಏ.. ನಿಂದು ಎಷ್ಟು ಸಬ್ಜೆಕ್ಟ್​ ಹೋಯ್ತು?

ಮ್ಯಾತ್ಸ್​ ಹೋದ್ವು, ಸೈನ್ಸ್​ ಹೋದ್ವು, ಕನ್ನಡ-ಹಿಂದಿ ಹೋದ್ವು, ಸೋಶಿಯಲ್ಸ್​ ಹೋದ್ವು. ಇಂಗ್ಲಿಷ್​ ಹೋಗಾಕಾ ಬೇಕು ಹೋತು.

ಎಲ್ಲವೂ ಹೊಂಟೋಯ್ತಲ್ಲೋ.. ಅದನ್ನ್ಯಾಕೆ ಸಪರೇಟ್​ ಸಪರೇಟ್​ ಹೇಳ್ತಾ ಇದೀಯಾ?

ಸಪರೇಟ್​ ಸಪರೇಟ್​ ಹೇಳಿದ್ರೆ ಯಾವುದಾದರೂ ಒಂದು ಪಾಸ್ ಆಗೈತಿ ಅಂದುಕೊಳ್ತಾರಲೇ.. ಹೊಯ್ಕಾ ಸುಮ್ನಾ.

ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಮಾ ಎಂ. ರಮೇಶ್​ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಂತೋಷ್​ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಗಾಳಿಪಟ’ ಚಿತ್ರ ಹಿಟ್ ಆಗಿತ್ತು. ಆ ಕಾರಣದಿಂದ ‘ಗಾಳಿಪಟ 2’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ ಎಂಬ ಕೌತುಕ ಮೂಡಿದೆ. ಬುಲೆಟ್​ ಪ್ರಕಾಶ್​, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ಗಣೇಶ್​ ಪುತ್ರಿ ಚಾರಿತ್ರ್ಯ ಬರ್ತ್​ಡೇ ಪಾರ್ಟಿ ಫೋಟೋಗಳು; ಮುದ್ದು ಮಗಳಿಗೆ ‘ಗೋಲ್ಡನ್​ ಸ್ಟಾರ್​’ ವಿಶ್​

ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

ತಾಜಾ ಸುದ್ದಿ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ಅಸ್ಸಾಂನಲ್ಲಿ ಭೀಕರ ಪ್ರವಾಹ; ಪ್ರಾಣ ಒತ್ತೆಯಿಟ್ಟು ಕರುವನ್ನು ಕಾಪಾಡಿದ ಜನ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ರಾತ್ರಿ ಆದ್ರೂ ಜನಸಾಗರ ಕಂಡು ಕೈ ಎತ್ತಿ ಮುಗಿದ ರೋಹಿತ್, ಕೊಹ್ಲಿ
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಟೀಂ ಇಂಡಿಯಾ ವಿಜಯೋತ್ಸವದಲ್ಲಿ ಅಂಬ್ಯುಲೆನ್ಸ್‌ಗೆ ದಾರಿ ಮಾಡಿಕೊಟ್ಟ ಫ್ಯಾನ್ಸ್
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಮುಂಬೈನಲ್ಲಿ ಜನಸಾಗರ ಮಧ್ಯೆ ಕಪ್ ಹಿಡಿದು ಕುಣಿದ ಬ್ಯೂ ಬಾಯ್ಸ್: ವಿಡಿಯೋ ನೋಡಿ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಬ್ರಹ್ಮಾವರ ತಾಲ್ಲೂಕಿನ ಮಡಿಸಾಲು ಹಳ್ಳ ಉಕ್ಕಿ ತಗ್ಗುಪ್ರದೇಶಗಳು ಜಲಾವೃತ
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ಮುಂಬೈ ಏರ್‌ಪೋರ್ಟ್‌ನಲ್ಲಿ ಟೀಂ ಇಂಡಿಯಾದ ಆಟಗಾರರಿಗೆ ವಾಟರ್ ಸೆಲ್ಯೂಟ್‌
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ದರ್ಶನ್ ಹಾಗೆ ಮಾಡಿರಲು ಸಾಧ್ಯವಿಲ್ಲ: ಸುಮಲತಾ ಅಂಬರೀಶ್
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಮುಂಬೈ ಬಂದ ಟೀಮ್ ಇಂಡಿಯಾಗೆ ಭವ್ಯ ಸ್ವಾಗತ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ಟೀಂ ಇಂಡಿಯಾ ವಿಜಯೋತ್ಸವಕ್ಕೆ ಕಡಲ ಕಿನಾರೆಯಲ್ಲಿ ಜನ ಸಾಗರ: ವಿಹಂಗಮ ನೋಟ
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್
ದರ್ಶನ್ ಕುಟುಂಬ  ಜೊತೆ ನಿರಂತರವಾಗಿ ಸಂಪರ್ಕದಲ್ಲಿರುವೆ: ಸುಮಲತಾ ಅಂಬರೀಶ್