Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​

Gaalipata 2 Exam Song Teaser: ‘ಗಾಳಿಪಟ 2’ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಯೋಗರಾಜ್​ ಭಟ್​ ಬರೆದಿರುವ ‘ಎಕ್ಸಾಂ ಸಾಂಗ್​..’ ಏ.21ರಂದು ಬಿಡುಗಡೆ ಆಗಲಿದೆ.

‘ಗಾಳಿಪಟ 2’ ಹುಡುಗರ ಎಲ್ಲ ಸಬ್ಜೆಕ್ಟ್​ ಫೇಲ್​; ಬಾಯಿ ಬಡಿದುಕೊಂಡ ಗಣೇಶ್​, ದಿಗಂತ್​, ಪವನ್​
ದಿಗಂತ್​, ಪವನ್ ಕುಮಾರ್​. ಗಣೇಶ್​, ಬುಲೆಟ್​ ಪ್ರಕಾಶ್​
Follow us
TV9 Web
| Updated By: ಮದನ್​ ಕುಮಾರ್​

Updated on: Apr 19, 2022 | 7:58 AM

ನಿರ್ದೇಶಕ ಯೋಗರಾಜ್​ ಭಟ್​ ಮತ್ತು ನಟ ಗಣೇಶ್​ (Golden Star Ganesh) ಕಾಂಬಿನೇಷನ್​ ಎಂದರೆ ಸಿನಿಪ್ರಿಯರಿಗೆ ಏನೋ ಒಂದು ಥರ ಕುತೂಹಲ. ‘ಮುಂಗಾರು ಮಳೆ’ ಸಿನಿಮಾದಲ್ಲಿ ಈ ಜೋಡಿ ಮಾಡಿದ ಮೋಡಿಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ಚಿತ್ರರಂಗದಲ್ಲಿ ಆ ಸಿನಿಮಾ ಟ್ರೆಂಡ್​ ಸೆಟರ್​ ಚಿತ್ರವಾಗಿ ಹೊರಹೊಮ್ಮಿತ್ತು. ನಂತರ ‘ಗಾಳಿಪಟ’ ಸಿನಿಮಾದಲ್ಲಿಯೂ ಅವರಿಬ್ಬರು ಕಮಾಲ್​ ಮಾಡಿದ್ದರು. ಆ ಚಿತ್ರದಲ್ಲಿ ನಟ ದಿಗಂತ್​ ಕೂಡ ಕೈ ಜೋಡಿಸಿದ್ದರು. ಈಗ ‘ಗಾಳಿಪಟ 2’ (Gaalipata 2) ಸಿನಿಮಾ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಸೃಷ್ಟಿ ಆಗಿದೆ. ಈ ಬಾರಿ ಗಣೇಶ್​ ಮತ್ತು ದಿಗಂತ್​ ಜೊತೆ ಪವನ್​ ಕುಮಾರ್​ ಕೂಡ ಸೇರಿಕೊಂಡಿರುವುದು ಗೊತ್ತೇ ಇದೆ. ಈಗ ‘ಗಾಳಿಪಟ 2’ ಚಿತ್ರದ ಮೊದಲ ಸಾಂಗ್​ ರಿಲೀಸ್​ಗೆ ದಿನಾಂಕ ಫಿಕ್ಸ್​ ಆಗಿದೆ. ಎಂದಿನಂತೆ ಮೋಡಿ ಮಾಡಲು ಯೋಗರಾಜ್​ ಭಟ್ (Yogaraj Bhat)​ ಸಿದ್ಧರಾಗಿದ್ದಾರೆ. ಏ.21ರಂದು ‘ಎಕ್ಸಾಂ ಸಾಂಗ್​’ ಬಿಡುಗಡೆ ಆಗಲಿದ್ದು, ಅದು ಹೇಗಿರಲಿದೆ ಎಂಬುದರ ಝಲಕ್​ ತೋರಿಸಲು ಈಗ ಟೀಸರ್​ ಬಿಡಲಾಗಿದೆ. ಅದರಲ್ಲಿ ಗಣೇಶ್​, ದಿಗಂತ್​, ಪವನ್​ ಕುಮಾರ್​ ಮತ್ತು ಬುಲೆಟ್​ ಪ್ರಕಾಶ್​ ಬಾಯಿ ಬಡಿದುಕೊಂಡಿದ್ದಾರೆ!

ಯೋಗರಾಜ್​ ಭಟ್​ ಅವರ ಸಿನಿಮಾ ಯಾವಾಗಲೂ ಡಿಫರೆಂಟ್​ ಆಗಿರುತ್ತವೆ. ಅವರ ಸಾಹಿತ್ಯವಂತೂ ಇನ್ನೂ ಡಿಫರೆಂಟ್​. ಜನಸಾಮಾನ್ಯರ ನಡುವಿನ ಸಾಮಾನ್ಯ ಸಂಗತಿಯೇ ಅವರ ಸಾಹಿತ್ಯದ ಮುಖ್ಯವಸ್ತು. ಅದನ್ನು ತುಂಬ ಚೆನ್ನಾಗಿ ಪ್ರಸ್ತುತಪಡಿಸುವ ಕಲೆ ಅವರಿಗೆ ಒಲಿದಿದೆ. ಈ ಬಾರಿ ಕೂಡ ಅವರು ಅಂಥದ್ದೇ ವಿಷಯವನ್ನು ಆಯ್ಕೆ ಮಾಡಿಕೊಂಡಂತಿದೆ. ಸದ್ಯಕ್ಕಂತೂ ಇದು ಎಕ್ಸಾಂ ಬರೆಯುವ ಮತ್ತು ಎಕ್ಸಾಂ ರಿಸಲ್ಟ್​ಗಾಗಿ ಕಾಯುವ ಸಮಯ. ಈ ಸಂದರ್ಭಕ್ಕೆ ಸರಿಯಾಗಿ ‘ಗಾಳಿಪಟ 2’ ಚಿತ್ರತಂಡದಿಂದ ‘ಎಕ್ಸಾಂ ಸಾಂಗ್​..’ ರಿಲೀಸ್​ ಆಗುತ್ತಿದೆ. ವಿದ್ಯಾರ್ಥಿಗಳ ಪಾತ್ರದಲ್ಲಿ ಗಣೇಶ್​, ಪವನ್​ ಕುಮಾರ್​, ದಿಗಂತ್​ ಕಾಣಿಸಿಕೊಳ್ಳುತ್ತಿದ್ದಾರೆ.

ಸದ್ಯಕ್ಕೆ ರಿಲೀಸ್​ ಆಗಿರುವ ಸಾಂಗ್​ ಟೀಸರ್​ನಲ್ಲಿ ಎಲ್ಲ ಸಬ್ಜೆಕ್ಟ್​​ನಲ್ಲಿ ಫೇಲ್​ ಆದ ಹುಡುಗರ ಕಥೆಯನ್ನು ಯೋಗರಾಜ್​ ಭಟ್​ ಅವರು ಹೇಳಿದ್ದಾರೆ. ಅದು ಕೂಡ ಎಂದಿನ ಅವರ ಫನ್ನಿ ಶೈಲಿಯಲ್ಲಿ. ಟೀಸರ್​ನಲ್ಲಿ ಬರುವ ಡೈಲಾಗ್​ ಈ ರೀತಿ ಇದೆ..

ಏ.. ನಿಂದು ಎಷ್ಟು ಸಬ್ಜೆಕ್ಟ್​ ಹೋಯ್ತು?

ಮ್ಯಾತ್ಸ್​ ಹೋದ್ವು, ಸೈನ್ಸ್​ ಹೋದ್ವು, ಕನ್ನಡ-ಹಿಂದಿ ಹೋದ್ವು, ಸೋಶಿಯಲ್ಸ್​ ಹೋದ್ವು. ಇಂಗ್ಲಿಷ್​ ಹೋಗಾಕಾ ಬೇಕು ಹೋತು.

ಎಲ್ಲವೂ ಹೊಂಟೋಯ್ತಲ್ಲೋ.. ಅದನ್ನ್ಯಾಕೆ ಸಪರೇಟ್​ ಸಪರೇಟ್​ ಹೇಳ್ತಾ ಇದೀಯಾ?

ಸಪರೇಟ್​ ಸಪರೇಟ್​ ಹೇಳಿದ್ರೆ ಯಾವುದಾದರೂ ಒಂದು ಪಾಸ್ ಆಗೈತಿ ಅಂದುಕೊಳ್ತಾರಲೇ.. ಹೊಯ್ಕಾ ಸುಮ್ನಾ.

ಈ ಸಿನಿಮಾಗೆ ಅರ್ಜುನ್​ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಉಮಾ ಎಂ. ರಮೇಶ್​ ರೆಡ್ಡಿ ನಿರ್ಮಾಣ ಮಾಡಿದ್ದಾರೆ. ಸಂತೋಷ್​ ರೈ ಪಾತಾಜೆ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸಿದ್ದಾರೆ. ‘ಗಾಳಿಪಟ’ ಚಿತ್ರ ಹಿಟ್ ಆಗಿತ್ತು. ಆ ಕಾರಣದಿಂದ ‘ಗಾಳಿಪಟ 2’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿದೆ. ಈ ಬಾರಿ ಯೋಗರಾಜ್​ ಭಟ್​ ಅವರು ಯಾವ ಕಥೆಯನ್ನು ಜನರ ಮುಂದಿರಿಸುತ್ತಿದ್ದಾರೆ ಎಂಬ ಕೌತುಕ ಮೂಡಿದೆ. ಬುಲೆಟ್​ ಪ್ರಕಾಶ್​, ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಅನಂತ್ ನಾಗ್​ ಮುಂತಾದವರು ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ:

ಗಣೇಶ್​ ಪುತ್ರಿ ಚಾರಿತ್ರ್ಯ ಬರ್ತ್​ಡೇ ಪಾರ್ಟಿ ಫೋಟೋಗಳು; ಮುದ್ದು ಮಗಳಿಗೆ ‘ಗೋಲ್ಡನ್​ ಸ್ಟಾರ್​’ ವಿಶ್​

ದಿಗಂತ್​ ಖಾತೆಯಿಂದ ಮಾಯವಾಯ್ತು ಹಣ; ಕೋರ್ಟ್​​ಗೆ​ ಅಲೆಯೋಕೆ ಶುರು ಹಚ್ಚಿಕೊಂಡ ನಟ

Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
Daily Devotional: ಪೂಜೆ ಸಮಯದಲ್ಲಿ ಅಗರಬತ್ತಿ ಬಳಕೆಯ ಮಹತ್ವ ತಿಳಿಯಿರಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
ಸುನಿತಾ ವಿಲಿಯಮ್ಸ್, ವಿಲ್ಮೋರ್ ಲ್ಯಾಂಡಿಂಗ್: ಅದ್ಭುತ ವಿಡಿಯೋ ಇಲ್ಲಿದೆ ನೋಡಿ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
Daily Horoscope: ಮಿಥುನ ರಾಶಿಯವರಿಗೆ ಆರು ಗ್ರಹಗಳ ಶುಭಫಲವಿದೆ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪುನೀತ್ ರಾಜ್​ಕುಮಾರ್ ಬಗ್ಗೆ ಅರ್ಧಗಂಟೆ ಮಾತನಾಡಿದ ರಶ್ಮಿಕಾ ಮಂದಣ್ಣ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಪತಿಯೊಂದಿಗೆ ಜಗಳವಾಡಿ ವಿದ್ಯುತ್ ಟವರ್ ಹತ್ತಿ ಆತ್ಮಹತ್ಯೆಗೆ ಯತ್ನಿಸಿದ ಪತ್ನಿ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಶಿವಪುರಿಯ ಮಾತಟಿಲಾ ಡ್ಯಾಂನಲ್ಲಿ ಮುಳುಗಿದ ದೋಣಿ; 7 ಜನ ಸಾವನ್ನಪ್ಪಿರುವ ಶಂಕೆ
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಕೋರ್ಟ್​ ಆದೇಶ ಹಾಗೂ ವ್ಯಕ್ತಿ ಪ್ರಾಣಕ್ಕೂ ಬೆಲೆ ಕೊಡದ KSRTC, ಬಸ್ ಜಪ್ತಿ!
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಚಂದನ್ ಶೆಟ್ಟಿ ಜೊತೆ ಮದುವೆ ಗಾಸಿಪ್, ಸ್ಪಷ್ಟನೆ ಕೊಟ್ಟ ಸಂಜನಾ
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಕುಮಾರಸ್ವಾಮಿ ನನ್ನನ್ನು ಬಯ್ಯದೆ ಬೇರೆ ಯಾರನ್ನು ಬಯ್ಯಲು ಸಾಧ್ಯ? ಶಿವಕುಮಾರ್
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ
ಜಾರ್ಖಂಡ್‌ನ ದಿಯೋಘರ್‌ನಲ್ಲಿ ಇಂಡಿಯನ್ ಆಯಿಲ್ ಸ್ಥಾವರದಲ್ಲಿ ಬೆಂಕಿ ಅವಘಡ