AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ

ನಿರ್ಮಾಪಕನಾಗಿ ರಕ್ಷಿತ್​ ಶೆಟ್ಟಿ ಅವರು ಸಾಕಷ್ಟು ಭರವಸೆ ಇಟ್ಟುಕೊಂಡ ಸಿನಿಮಾ ‘ಇಬ್ಬನಿ ತಬ್ಬಿದ ಇಳೆಯಲಿ’ ಈ ವಾರ (ಸೆಪ್ಟೆಂಬರ್​ 5) ಬಿಡುಗಡೆ ಆಗಿದೆ. ಟ್ರೇಲರ್​ ಮೂಲಕ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಹೇಗಿದೆ ಎಂಬುದು ಬಹಿರಂಗ ಆಗಿದೆ. ಅಂಕಿತಾ ಅಮರ್​, ವಿಹಾನ್​, ಮಯೂರಿ ನಟರಾಜ್​ ಮುಖ್ಯಪಾತ್ರ ಮಾಡಿದ ಈ ಸಿನಿಮಾದ ವಿಮರ್ಶೆ ಇಲ್ಲಿದೆ..

Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ
ಅಂಕಿತಾ ಅಮರ್​, ಮಯೂರಿ ನಟರಾಜ್, ವಿಹಾನ್
ಮದನ್​ ಕುಮಾರ್​
|

Updated on: Sep 05, 2024 | 3:45 PM

Share

ಸಿನಿಮಾ: ಇಬ್ಬನಿ ತಬ್ಬಿದ ಎಳೆಯಲಿ. ನಿರ್ಮಾಣ: ಜಿಎಸ್​. ಗುಪ್ತಾ, ರಕ್ಷಿತ್​ ಶೆಟ್ಟಿ. ನಿರ್ದೇಶನ: ಚಂದ್ರಜಿತ್ ಬೆಳ್ಳಿಯಪ್ಪ. ಪಾತ್ರವರ್ಗ: ವಿಹಾನ್, ಅಂಕಿತಾ ಅಮರ್​, ಮಯೂರಿ ನಟರಾಜ್​, ಗಿರಿಜಾ ಶೆಟ್ಟರ್​ ಮುಂತಾದವರು. ಸ್ಟಾರ್​. 3/5

ಕನ್ನಡದ ಯುವ ನಟ ವಿಹಾನ್​ ಅವರು ಲವ್​ ಸ್ಟೋರಿ ಸಿನಿಮಾಗಳಿಂದ ಗಮನ ಸೆಳೆಯುತ್ತಾರೆ. ಈ ಬಾರಿ ಅವರು ‘ಇಬ್ಬನಿ ತಬ್ಬಿದ ಇಳಿಯಲಿ’ ಸಿನಿಮಾ ಮೂಲಕ ಮತ್ತೊಂದು ಪ್ರೇಮ್​ ಕಹಾನಿಯನ್ನು ಪ್ರೇಕ್ಷಕರ ಎದುರು ತಂದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಮಾಮೂಲಿ ಕಥೆ. ಆದರೆ ಈ ಕಥೆಯನ್ನು ತುಂಬ ಭಾವನಾತ್ಮಕವಾಗಿ ಹೆಣೆದ ಕಾರಣಕ್ಕೆ ಕೊಂಚ ಸ್ಪೆಷಲ್​ ಎನಿಸಿಕೊಳ್ಳುತ್ತದೆ.

ಕಥೆ ಬಗ್ಗೆ ಹೇಳುವುದಾದರೆ, ಕಾಲೇಜಿನಲ್ಲಿ ನಾಯಕ ಸಿದ್ದಾರ್ಥ್​ ಅಶೋಕ್​ಗೆ ಅನಾಹಿತಾ ಎಂಬ ಹುಡುಗಿ ಮೇಲೆ ಲವ್​ ಅಟ್​ ಫಸ್ಟ್​ ಸೈಟ್​ ಆಗುತ್ತದೆ. ಆಕೆ ಯಾರು? ಹಿನ್ನೆಲೆ ಏನು? ಅವಳ ಇಷ್ಟ-ಕಷ್ಟ ಏನು ಎಂಬುದನ್ನು ತಿಳಿದುಕೊಳ್ಳುವ ಹಂಬಲ ಆತನಲ್ಲಿ ಬೆಳೆಯುತ್ತದೆ. ಹೇಗೋ ಪರಿಚಯ ಮಾಡಿಕೊಂಡ ನಂತರ ಸಲುಗೆ ಬೆಳೆಯುತ್ತದೆ. ಪ್ರಪೋಸ್​ ಮಾಡುವ ಸಮಯ ಬಂದಾಗ ಹೀರೋಗೆ ಶಾಕ್​ ಎದುರಾಗುತ್ತದೆ. ಅದೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇಷ್ಟಪಟ್ಟವಳಿಂದ ದೂರವಾಗಿ ಒಂದಷ್ಟು ವರ್ಷಗಳು ಕಳೆದರೂ ಕೂಡ ಸಿದ್ದಾರ್ಥ್​ಗೆ ಆಕೆಯ ನೆನಪು ಮಾಸುವುದೇ ಇಲ್ಲ. ಬೇರೆ ಹುಡುಗಿ ಜೊತೆ ಮದುವೆ ಫಿಕ್ಸ್​ ಆದರೂ ಹಳೆ ಹುಡುಗಿಯ ಮೇಲಿನ ಫೀಲಿಂಗ್​ ಕಡಿಮೆ ಆಗುವುದಿಲ್ಲ. ಅನಾಹಿತಾ ಎಲ್ಲಿದ್ದಾಳೆ ಎಂಬುದು ಕೂಡ ಆತನಿಗೆ ಈಗ ತಿಳಿದಿಲ್ಲ. ಆಕೆಯನ್ನು ಹುಡುಕಿಕೊಂಡು ಹೊರಟಾಗ ಎದುರಾಗುವುದು ಅತಿ ದೊಡ್ಡ ಟ್ವಿಸ್ಟ್​. ಅದನ್ನು ನೋಡಿ ಸಿನಿಮಾದಲ್ಲಿಯೇ ನೋಡಿದರೆ ಚೆನ್ನ. ಅಂತಿಮವಾಗಿ ಸಿದ್ದಾರ್ಥ್​ ಮದುವೆ ಆಗುವುದು ಯಾರನ್ನು ಎಂಬುದು ಕ್ಲೈಮ್ಯಾಕ್ಸ್ ಕೌತುಕ.

ಒಟ್ಟಾರೆ ಕಥೆಯಲ್ಲಿ ತುಂಬಾ ಫ್ರೆಶ್​ ಎನಿಸುವಂತಹ ಹೆಚ್ಚಿನ ಅಂಶಗಳು ಕಾಣಿಸಲ್ಲ. ಆದರೆ ಮುಖ್ಯ ಪಾತ್ರಗಳ ಪ್ರತಿ ಎಮೋಷನ್​ಗಳ ಮೇಲೂ ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ. ಚಿಕ್ಕ ಚಿಕ್ಕ ಅಂಶಗಳನ್ನು ಕೂಡ ಬಹಳ ಕಾಳಜಿ ವಹಿಸಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಅವಧಿ ಹೆಚ್ಚಾಗಿದೆ. ಹರಿಬರಿಯಲ್ಲಿ ಇರುವ ಪ್ರೇಕ್ಷಕರಿಗೆ ಇದು ಕಿರಿಕಿರಿ ಎನಿಸಬಹುದು. ಆದರೆ ಎಲ್ಲವನ್ನೂ ತಾಳ್ಮೆಯಿಂದ ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೆ ಇಬ್ಬನಿಯ ರೀತಿ ಈ ಸಿನಿಮಾ ತಂಪಾದ ಅನುಭವ ನೀಡುತ್ತದೆ.

ಇಡೀ ಸಿನಿಮಾದಲ್ಲಿ ಹೆಚ್ಚು ಹೈಲೈಟ್​ ಆಗಿರುವುದೇ ಅಂಕಿರಾ ಅಮರ್​ ಮಾಡಿರುವ ಅನಾಹಿತಾ ಎಂಬ ಪಾತ್ರ. ಈ ಪಾತ್ರಕ್ಕೆ ಎರಡು ಶೇಡ್​ ಇದೆ. ಭಾವ ಲೋಕದಲ್ಲಿಯೇ ಹೆಚ್ಚಾಗಿ ಜೀವಿಸುವ ಅನಾಹಿತಾ ಸಾಹಿತ್ಯ ಪ್ರೇಮಿ. ಸದಾ ಕವಿತೆ ಬರೆಯುತ್ತಾ ಕಾಲ ಕಳೆಯುವ ಭಾವನಾ ಜೀವಿ ಆಕೆ. ಅಂಥ ಹುಡುಗಿಯ ಸೆಳೆತಕ್ಕೆ ಸಿಕ್ಕುವ ಸಿದ್ದಾರ್ಥ್​ ರಫ್​ ಆ್ಯಂಡ್​ ಟಫ್​ ಹುಡುಗ. ಹೀಗೆ ಎರಡು ಭಿನ್ನ ಗುಣಗಳಿರುವ ವ್ಯಕ್ತಿಗಳ ಪ್ರೀತಿಯನ್ನು ನಿರ್ದೇಶಕರು ಚಂದ್ರಜಿತ್​ ಬೆಳ್ಳಿಯಪ್ಪ ಕಟ್ಟಿಕೊಟ್ಟಿದ್ದಾರೆ. ನಟನೆಯಲ್ಲಿ ಅಂಕಿತಾ ಅಮರ್​ ಅವರಿಗೆ ಫುಲ್​ ಮಾರ್ಕ್​ ಸಲ್ಲುತ್ತದೆ. ಅವರು ಮಾತ್ರವಲ್ಲದೇ ವಿಹಾನ್​, ಮಯೂರಿ ನಟರಾಜ್​, ಗಿರಿಜಾ ಶೆಟ್ಟರ್​ ಮುಂತಾದವರು ಕೂಡ ಗಮನ ಸೆಳೆಯುವಂತೆ ನಟಿಸಿದ್ದಾರೆ.

ಇದನ್ನೂ ಓದಿ: Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​

ಇದು ಎಮೋಷನ್ಸ್​ಗೆ ಹೆಚ್ಚು ಒತ್ತು ನೀಡಿದ ಸಿನಿಮಾ ಆದ್ದರಿಂದ ಗಗನ್​ ಬಡೇರಿಯಾ ಅವರ ಸಂಗೀತ ಇಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಡುಗಳು ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಅವರು ದೃಶ್ಯಗಳ ಮೆರುಗು ಹೆಚ್ಚಿಸಿದ್ದಾರೆ. ಶ್ರೀವತ್ಸನ್​ ಸೆಲ್ವರಾಜನ್​ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಸ್ಫೋಟಕ ಬ್ಯಾಟರ್​ಗಳನ್ನು ಪೆವಿಲಿಯನ್​ಗಟ್ಟಿದ ಶ್ರೇಯಾಂಕ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಪೊಲೀಸ್ ಠಾಣೆಗೆ ಬೆಂಕಿ ಹಚ್ಚುತ್ತೇನೆ; ಬಜರಂಗದಳದ ವ್ಯಕ್ತಿಯಿಂದ ಬೆದರಿಕೆ
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಬಸ್​​ನಲ್ಲಿ 240 ಗ್ರಾಂ ಚಿನ್ನ ಕದ್ದಾಕೆ ಸಿಕ್ಕಿಬಿದ್ದಿದ್ಹೇಗೆ ಗೊತ್ತಾ?
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಸಿದ್ದರಾಮಯ್ಯ ಅಧಿಕಾರದಿಂದ ಇಳಿಯೋದು ಯಾವಾಗ?: ಕೋಡಿಮಠ ಶ್ರೀ ಸ್ಪೋಟಕ ಭವಿಷ್ಯ
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ಕೂಲಿ ಕಾರ್ಮಿಕ ಮಹಿಳೆ ಜತೆ ಲವ್ವಿಡವ್ವಿ: ಗುತ್ತಿಗೆದಾರನನ್ನ ಕೊಚ್ಚಿ ಕೊಂದ್ರು
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ನಮ್ಮಿಂದ ತಪ್ಪಾಗಿದೆ ಕ್ಷಮಿಸಿ: ಕನ್ನಡಿಗರ ಕ್ಷಮೆಯಾಚಿಸಿದ ಬೆಂಗಳೂರಿನ ಕಂಪನಿ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ರಿಜ್ವಾನ್ ಬ್ಯಾಟಿಂಗ್‌ ಅರ್ಧಕ್ಕೆ ನಿಲ್ಲಿಸಿ ವಾಪಸ್ ಕರೆಸಿಕೊಂಡ ನಾಯಕ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಸಿದ್ರಾಮಯ್ಯ ಮೈಸೂರು, ಡಿಕೆಶಿ ಕನಕಪುರ ಇದ್ದಂಗೆ ನಮ್ಗೆ ಆಗ್ಬೇಕು ಎಂದ ಖರ್ಗೆ
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಲಕ್ಕುಂಡಿಯಲ್ಲಿ ಸಿಕ್ಕ ನಿಧಿಗೆ ವಾರಸುದಾರರು ಯಾರು? ಕಾಯ್ದೆ ಹೇಳೋದೇನು?
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ
ಹಿಮಾಚಲದ ಕಟ್ಟಡದಲ್ಲಿ ಬೆಂಕಿ ಅವಘಡ; 8 ವರ್ಷದ ಮಗು ಸಾವು, ಹಲವರಿಗೆ ಗಾಯ