Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ

ನಿರ್ಮಾಪಕನಾಗಿ ರಕ್ಷಿತ್​ ಶೆಟ್ಟಿ ಅವರು ಸಾಕಷ್ಟು ಭರವಸೆ ಇಟ್ಟುಕೊಂಡ ಸಿನಿಮಾ ‘ಇಬ್ಬನಿ ತಬ್ಬಿದ ಇಳೆಯಲಿ’ ಈ ವಾರ (ಸೆಪ್ಟೆಂಬರ್​ 5) ಬಿಡುಗಡೆ ಆಗಿದೆ. ಟ್ರೇಲರ್​ ಮೂಲಕ ನಿರೀಕ್ಷೆ ಮೂಡಿಸಿದ್ದ ಈ ಸಿನಿಮಾ ಹೇಗಿದೆ ಎಂಬುದು ಬಹಿರಂಗ ಆಗಿದೆ. ಅಂಕಿತಾ ಅಮರ್​, ವಿಹಾನ್​, ಮಯೂರಿ ನಟರಾಜ್​ ಮುಖ್ಯಪಾತ್ರ ಮಾಡಿದ ಈ ಸಿನಿಮಾದ ವಿಮರ್ಶೆ ಇಲ್ಲಿದೆ..

Ibbani Tabbida lleyali Review: ಇಬ್ಬನಿಯಂತೆ ತಂಪಾದರೂ ದೀರ್ಘ ಎನಿಸುವ ಎಮೋಷನಲ್ ಪ್ರೇಮಕಥೆ
ಅಂಕಿತಾ ಅಮರ್​, ಮಯೂರಿ ನಟರಾಜ್, ವಿಹಾನ್
Follow us
|

Updated on: Sep 05, 2024 | 3:45 PM

ಸಿನಿಮಾ: ಇಬ್ಬನಿ ತಬ್ಬಿದ ಎಳೆಯಲಿ. ನಿರ್ಮಾಣ: ಜಿಎಸ್​. ಗುಪ್ತಾ, ರಕ್ಷಿತ್​ ಶೆಟ್ಟಿ. ನಿರ್ದೇಶನ: ಚಂದ್ರಜಿತ್ ಬೆಳ್ಳಿಯಪ್ಪ. ಪಾತ್ರವರ್ಗ: ವಿಹಾನ್, ಅಂಕಿತಾ ಅಮರ್​, ಮಯೂರಿ ನಟರಾಜ್​, ಗಿರಿಜಾ ಶೆಟ್ಟರ್​ ಮುಂತಾದವರು. ಸ್ಟಾರ್​. 3/5

ಕನ್ನಡದ ಯುವ ನಟ ವಿಹಾನ್​ ಅವರು ಲವ್​ ಸ್ಟೋರಿ ಸಿನಿಮಾಗಳಿಂದ ಗಮನ ಸೆಳೆಯುತ್ತಾರೆ. ಈ ಬಾರಿ ಅವರು ‘ಇಬ್ಬನಿ ತಬ್ಬಿದ ಇಳಿಯಲಿ’ ಸಿನಿಮಾ ಮೂಲಕ ಮತ್ತೊಂದು ಪ್ರೇಮ್​ ಕಹಾನಿಯನ್ನು ಪ್ರೇಕ್ಷಕರ ಎದುರು ತಂದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಮಾಮೂಲಿ ಕಥೆ. ಆದರೆ ಈ ಕಥೆಯನ್ನು ತುಂಬ ಭಾವನಾತ್ಮಕವಾಗಿ ಹೆಣೆದ ಕಾರಣಕ್ಕೆ ಕೊಂಚ ಸ್ಪೆಷಲ್​ ಎನಿಸಿಕೊಳ್ಳುತ್ತದೆ.

ಕಥೆ ಬಗ್ಗೆ ಹೇಳುವುದಾದರೆ, ಕಾಲೇಜಿನಲ್ಲಿ ನಾಯಕ ಸಿದ್ದಾರ್ಥ್​ ಅಶೋಕ್​ಗೆ ಅನಾಹಿತಾ ಎಂಬ ಹುಡುಗಿ ಮೇಲೆ ಲವ್​ ಅಟ್​ ಫಸ್ಟ್​ ಸೈಟ್​ ಆಗುತ್ತದೆ. ಆಕೆ ಯಾರು? ಹಿನ್ನೆಲೆ ಏನು? ಅವಳ ಇಷ್ಟ-ಕಷ್ಟ ಏನು ಎಂಬುದನ್ನು ತಿಳಿದುಕೊಳ್ಳುವ ಹಂಬಲ ಆತನಲ್ಲಿ ಬೆಳೆಯುತ್ತದೆ. ಹೇಗೋ ಪರಿಚಯ ಮಾಡಿಕೊಂಡ ನಂತರ ಸಲುಗೆ ಬೆಳೆಯುತ್ತದೆ. ಪ್ರಪೋಸ್​ ಮಾಡುವ ಸಮಯ ಬಂದಾಗ ಹೀರೋಗೆ ಶಾಕ್​ ಎದುರಾಗುತ್ತದೆ. ಅದೇನು ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇಷ್ಟಪಟ್ಟವಳಿಂದ ದೂರವಾಗಿ ಒಂದಷ್ಟು ವರ್ಷಗಳು ಕಳೆದರೂ ಕೂಡ ಸಿದ್ದಾರ್ಥ್​ಗೆ ಆಕೆಯ ನೆನಪು ಮಾಸುವುದೇ ಇಲ್ಲ. ಬೇರೆ ಹುಡುಗಿ ಜೊತೆ ಮದುವೆ ಫಿಕ್ಸ್​ ಆದರೂ ಹಳೆ ಹುಡುಗಿಯ ಮೇಲಿನ ಫೀಲಿಂಗ್​ ಕಡಿಮೆ ಆಗುವುದಿಲ್ಲ. ಅನಾಹಿತಾ ಎಲ್ಲಿದ್ದಾಳೆ ಎಂಬುದು ಕೂಡ ಆತನಿಗೆ ಈಗ ತಿಳಿದಿಲ್ಲ. ಆಕೆಯನ್ನು ಹುಡುಕಿಕೊಂಡು ಹೊರಟಾಗ ಎದುರಾಗುವುದು ಅತಿ ದೊಡ್ಡ ಟ್ವಿಸ್ಟ್​. ಅದನ್ನು ನೋಡಿ ಸಿನಿಮಾದಲ್ಲಿಯೇ ನೋಡಿದರೆ ಚೆನ್ನ. ಅಂತಿಮವಾಗಿ ಸಿದ್ದಾರ್ಥ್​ ಮದುವೆ ಆಗುವುದು ಯಾರನ್ನು ಎಂಬುದು ಕ್ಲೈಮ್ಯಾಕ್ಸ್ ಕೌತುಕ.

ಒಟ್ಟಾರೆ ಕಥೆಯಲ್ಲಿ ತುಂಬಾ ಫ್ರೆಶ್​ ಎನಿಸುವಂತಹ ಹೆಚ್ಚಿನ ಅಂಶಗಳು ಕಾಣಿಸಲ್ಲ. ಆದರೆ ಮುಖ್ಯ ಪಾತ್ರಗಳ ಪ್ರತಿ ಎಮೋಷನ್​ಗಳ ಮೇಲೂ ನಿರ್ದೇಶಕರು ಹೆಚ್ಚು ಒತ್ತು ನೀಡಿದ್ದಾರೆ. ಚಿಕ್ಕ ಚಿಕ್ಕ ಅಂಶಗಳನ್ನು ಕೂಡ ಬಹಳ ಕಾಳಜಿ ವಹಿಸಿ ತೆರೆಗೆ ತರುವ ಪ್ರಯತ್ನ ಮಾಡಿದ್ದಾರೆ. ಆ ಕಾರಣದಿಂದಲೇ ಸಿನಿಮಾದ ಅವಧಿ ಹೆಚ್ಚಾಗಿದೆ. ಹರಿಬರಿಯಲ್ಲಿ ಇರುವ ಪ್ರೇಕ್ಷಕರಿಗೆ ಇದು ಕಿರಿಕಿರಿ ಎನಿಸಬಹುದು. ಆದರೆ ಎಲ್ಲವನ್ನೂ ತಾಳ್ಮೆಯಿಂದ ಕಣ್ತುಂಬಿಕೊಳ್ಳುವ ಪ್ರೇಕ್ಷಕರಿಗೆ ಇಬ್ಬನಿಯ ರೀತಿ ಈ ಸಿನಿಮಾ ತಂಪಾದ ಅನುಭವ ನೀಡುತ್ತದೆ.

ಇಡೀ ಸಿನಿಮಾದಲ್ಲಿ ಹೆಚ್ಚು ಹೈಲೈಟ್​ ಆಗಿರುವುದೇ ಅಂಕಿರಾ ಅಮರ್​ ಮಾಡಿರುವ ಅನಾಹಿತಾ ಎಂಬ ಪಾತ್ರ. ಈ ಪಾತ್ರಕ್ಕೆ ಎರಡು ಶೇಡ್​ ಇದೆ. ಭಾವ ಲೋಕದಲ್ಲಿಯೇ ಹೆಚ್ಚಾಗಿ ಜೀವಿಸುವ ಅನಾಹಿತಾ ಸಾಹಿತ್ಯ ಪ್ರೇಮಿ. ಸದಾ ಕವಿತೆ ಬರೆಯುತ್ತಾ ಕಾಲ ಕಳೆಯುವ ಭಾವನಾ ಜೀವಿ ಆಕೆ. ಅಂಥ ಹುಡುಗಿಯ ಸೆಳೆತಕ್ಕೆ ಸಿಕ್ಕುವ ಸಿದ್ದಾರ್ಥ್​ ರಫ್​ ಆ್ಯಂಡ್​ ಟಫ್​ ಹುಡುಗ. ಹೀಗೆ ಎರಡು ಭಿನ್ನ ಗುಣಗಳಿರುವ ವ್ಯಕ್ತಿಗಳ ಪ್ರೀತಿಯನ್ನು ನಿರ್ದೇಶಕರು ಚಂದ್ರಜಿತ್​ ಬೆಳ್ಳಿಯಪ್ಪ ಕಟ್ಟಿಕೊಟ್ಟಿದ್ದಾರೆ. ನಟನೆಯಲ್ಲಿ ಅಂಕಿತಾ ಅಮರ್​ ಅವರಿಗೆ ಫುಲ್​ ಮಾರ್ಕ್​ ಸಲ್ಲುತ್ತದೆ. ಅವರು ಮಾತ್ರವಲ್ಲದೇ ವಿಹಾನ್​, ಮಯೂರಿ ನಟರಾಜ್​, ಗಿರಿಜಾ ಶೆಟ್ಟರ್​ ಮುಂತಾದವರು ಕೂಡ ಗಮನ ಸೆಳೆಯುವಂತೆ ನಟಿಸಿದ್ದಾರೆ.

ಇದನ್ನೂ ಓದಿ: Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​

ಇದು ಎಮೋಷನ್ಸ್​ಗೆ ಹೆಚ್ಚು ಒತ್ತು ನೀಡಿದ ಸಿನಿಮಾ ಆದ್ದರಿಂದ ಗಗನ್​ ಬಡೇರಿಯಾ ಅವರ ಸಂಗೀತ ಇಲ್ಲಿ ಮಹತ್ವದ ಪಾತ್ರ ವಹಿಸಿದೆ. ಹಾಡುಗಳು ಹಾಗೂ ಹಿನ್ನೆಲೆ ಸಂಗೀತದಿಂದಾಗಿ ಅವರು ದೃಶ್ಯಗಳ ಮೆರುಗು ಹೆಚ್ಚಿಸಿದ್ದಾರೆ. ಶ್ರೀವತ್ಸನ್​ ಸೆಲ್ವರಾಜನ್​ ಅವರ ಛಾಯಾಗ್ರಹಣ ಕೂಡ ಗಮನ ಸೆಳೆಯುತ್ತದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಪ್ಯಾಲೆಸ್ತೀನ್ ಧ್ವಜ ಹಿಡಿದರೆ ತಪ್ಪೇನು? ಸಚಿವ ಜಮೀರ್ ಅಹ್ಮದ್ ಪ್ರಶ್ನೆ
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಅಮೆಜಾನ್ ವಿಶೇಷ ಆಫರ್ ಸೇಲ್ ಮುಂದಿನ ವಾರವೇ ಆರಂಭ!
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಭಾವ್​ನಗರದಲ್ಲಿ ಗುಜರಾತ್​ನ ಮೊಟ್ಟಮೊದಲ ಧಾನ್ಯಗಳ ಎಟಿಎಂ ಸ್ಥಾಪನೆ
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಬರೋಬ್ಬರಿ 124 ಮೀಟರ್ ಸಿಕ್ಸ್ ಸಿಡಿಸಿದ ಶಕ್ಕೆರೆ ಪ್ಯಾರಿಸ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಪ್ರಧಾನಿ ಮೋದಿ ಬಗ್ಗೆ ಅಪಾರ ಗೌರವ ಇದೆ ಎಂದ ಡಿಕೆ ಸುರೇಶ್
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಹೀಗೂ ಉಂಟು! ಸಾರಿಗೆ ಬಸ್ಸಿಗೂ ಗ್ರಾಮಸ್ಥರಿಂದ ಭಾವನಾತ್ಮಕ ಬೀಳ್ಕೊಡುಗೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಸಿಎಂ ಸಿದ್ದರಾಮಯ್ಯಗೆ ಧನ್ಯವಾದ ಹೇಳಿದ ದುನಿಯಾ ವಿಜಯ್; ಕಾರಣವೇನು?
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ