AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​

‘ಪೆಪೆ’ ಸಿನಿಮಾದಲ್ಲಿ ಸಂಘರ್ಷದ ಕಥೆ ಇದೆ. ಇದರ ಮೂಲಕ ವಿನಯ್​ ರಾಜ್​ಕುಮಾರ್​ ಅವರು ಮಾಸ್​ ಅವತಾರದಲ್ಲಿ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಸರಳವಾಗಿ ಮನಮುಟ್ಟಬಹುದಾದ ಈ ಕಥೆಗೆ ನಿರ್ದೇಶಕರು ಸಾಕಷ್ಟು ಟ್ವಿಸ್ಟ್​ಗಳನ್ನು ನೀಡಿ, ತಮ್ಮದೇ ಫ್ಲೇವರ್​ ನೀಡಿದ್ದಾರೆ. ಒಟ್ಟಾರೆ ‘ಪೆಪೆ’ ಸಿನಿಮಾ ಹೇಗಿದೆ ತಿಳಿಯಲು ಈ ವಿಮರ್ಶೆ ಓದಿ..

Pepe Movie Review: ಹೊಡಿ-ಬಡಿ ಅವತಾರದಲ್ಲಿ ಬಂದ ‘ಪೆಪೆ’ ವಿನಯ್ ರಾಜ್​ಕುಮಾರ್​
ವಿನಯ್​ ರಾಜ್​ಕುಮಾರ್​
ಮದನ್​ ಕುಮಾರ್​
|

Updated on:Aug 30, 2024 | 5:49 PM

Share

ಸಿನಿಮಾ: ಪೆಪೆ. ನಿರ್ಮಾಣ: ಉದಯ್​ ಶಂಕರ್​ ಎಸ್​., ಬಿ.ಎಂ. ಶ್ರೀರಾಮ್​ ಕೋಲಾರ. ನಿರ್ದೇಶನ: ಶ್ರೀಲೇಶ್​ ಎಸ್​. ನಾಯರ್​. ಪಾತ್ರವರ್ಗ: ವಿನಯ್​ ರಾಜ್​ಕುಮಾರ್​, ಮಯೂರ್ ಪಟೇಲ್​, ನವೀನ್​ ಡಿ. ಪಡೀಲ್​, ಯಶ್​ ಶೆಟ್ಟಿ, ಕಾಜಲ್​ ಕುಂದರ್​, ಮೇದಿನಿ ಕೆಳಮನಿ, ಬಾಲರಾಜ್​ ವಾಡಿ, ಅರುಣಾ ಬಾಲ್​ರಾಜ್​, ಸಂಧ್ಯಾ ಅರೆಕೆರೆ ಮುಂತಾದವರು. ಸ್ಟಾರ್​: 3/5

ನಟ ವಿನಯ್ ರಾಜ್​ಕುಮಾರ್​ ಅವರು ಇದೇ ಮೊದಲ ಬಾರಿಗೆ ಸಖತ್​ ಮಾಸ್​ ಆಗಿ ಕಾಣಿಸಿಕೊಂಡ ಸಿನಿಮಾ ಎಂಬ ಕಾರಣಕ್ಕೆ ‘ಪೆಪೆ’ ನಿರೀಕ್ಷೆ ಮೂಡಿಸಿತ್ತು. ಟ್ರೆಲರ್​ ಬಿಡುಗಡೆ ಆದಾಗ ನಿರೀಕ್ಷೆ ಇನ್ನಷ್ಟು ಹೆಚ್ಚಾಯಿತು. ಈ ಚಿತ್ರದಲ್ಲಿ ಗಂಭೀರವಾದ ಕಹಾನಿಯನ್ನು ಹೇಳಲಾಗಿದೆ ಎಂಬುದು ಟ್ರೇಲರ್​ ಮೂಲಕ ಗೊತ್ತಾಗಿತ್ತು. ವಿನಯ್ ರಾಜ್​ಕುಮಾರ್​ ಮಾಸ್​ ಆಗಿ ಕಾಣಿಸಿಕೊಂಡಿರುವುದು ನಿಜ. ಗಂಭೀರ ಕಥಾವಸ್ತು ಇರುವುದು ಕೂಡ ನಿಜ. ಅವರನ್ನು ಈ ಅವತಾರದಲ್ಲಿ ನೋಡಲು ಇಷ್ಟಪಡುವ ಪ್ರೇಕ್ಷಕರಿಗೆ ‘ಪೆಪೆ’ ಸಿನಿಮಾ ಹಿಡಿಸುತ್ತದೆ.

ಜಾತಿ ಮತ್ತು ವರ್ಗ ಸಂಘರ್ಷ ಇರುವ ಕಥೆಯನ್ನು ‘ಪೆಪೆ’ ಸಿನಿಮಾದಲ್ಲಿ ತೋರಿಸಲಾಗಿದೆ. ತಲೆಮಾರುಗಳ ತನಕ ಸಾಗಿ ಬಂದ ದ್ವೇಷದ ಕಥೆ ಕೂಡ ಇದರಲ್ಲಿ ಇದೆ. ಇದನ್ನು ಪ್ರೇಕ್ಷಕರ ಎದುರು ಪ್ರಸ್ತುತಪಡಿಸುವಾಗ ಫ್ಲ್ಯಾಶ್​ ಬ್ಯಾಕ್ ತಂತ್ರದ ಮೊರೆ ಹೋಗಲಾಗಿದೆ. ಎಲ್ಲವನ್ನೂ ಒಮ್ಮೆಲೇ ಬಿಟ್ಟುಕೊಡದೇ ಹಂತ ಹಂತವಾಗಿ ಸಸ್ಪೆನ್ಸ್​ ರಿವೀಲ್​ ಮಾಡುವ ತಂತ್ರವನ್ನು ನಿರ್ದೇಶಕರು ಪ್ರಯೋಗಿಸಿದ್ದಾರೆ. ಒಟ್ಟಾರೆಯಾಗಿ ನೋಡುವಾಗ ಈ ಸಿನಿಮಾ ಬೇರೆಯದೇ ಫೀಲ್​ ನೀಡುತ್ತದೆ.

ಇದನ್ನೂ ಓದಿ: ಬೆಳ್ಳಗಿರೋದೆಲ್ಲ ‘ಪೌಡರ್​’ ಅಲ್ಲ: ಕಳೆದು ಹೋಗಿದ್ದನ್ನು ಹುಡುಕುವ ಪ್ರಯಾಸ ಪ್ರಸಂಗ

ರಿಯಲಿಸ್ಟಿಕ್​ ಅಂಶಗಳನ್ನು ಕೇಂದ್ರವಾಗಿ ಇಟ್ಟುಕೊಂಡು ಮೂಡಿಬಂದಿರುವ ಈ ಸಿನಿಮಾದಲ್ಲಿ ಸಾಮಾಜಿಕ ಪಿಡುಗಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸ ಆಗಿದೆ. ಜಾತಿ ತಾರತಮ್ಯದ ಜೊತೆಗೆ ಗೊಡ್ಡು ಸಂಪ್ರದಾಯಗಳನ್ನು ವಿರೋಧಿಸುವಂತಹ ಒಂದಷ್ಟು ಸನ್ನಿವೇಶಗಳು ಇವೆ. ಆ ಮೂಲಕ ಅಂಥ ಆಚರಣೆಗಳನ್ನು ಪ್ರಶ್ನಿಸುವ ಪ್ರಯತ್ನ ಈ ಸಿನಿಮಾದಲ್ಲಿ ಆಗಿದೆ.

ಇದನ್ನೂ ಓದಿ: ಸಮರ್ಜಿತ್​ ಲಂಕೇಶ್​ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾದ ‘ಗೌರಿ’ ಸಿನಿಮಾ

ಮೇಕಿಂಗ್​ ಗುಣಮಟ್ಟದ ಕಾರಣದಿಂದಲೂ ‘ಪೆಪೆ’ ಸಿನಿಮಾ ನೋಡಿಸಿಕೊಂಡು ಹೋಗುತ್ತದೆ. ಅಚ್ಚುಕಟ್ಟಾದ ಛಾಯಾಗ್ರಹಣ, ಚುರುಕಾದ ಸಂಕಲನ, ಸೆಳೆಯುವಂತಹ ಹಿನ್ನೆಲೆ ಸಂಗೀತದಿಂದಾಗಿ ಈ ಚಿತ್ರ ಇಷ್ಟ ಆಗುತ್ತದೆ. ವಿನಯ್​ ರಾಜ್​ಕುಮಾರ್​ ಅವರನ್ನು ಮಾಸ್​ ಆಗಿ ತೋರಿಸಬೇಕು ಎಂಬ ಉದ್ದೇಶ ಈಡೇರಿದೆ. ವಿನಯ್​ ರಾಜ್​ಕುಮಾರ್​ ಜೊತೆ ಕಾಜಲ್​ ಕುಂದರ್​, ಅರುಣಾ ಬಾಲರಾಜ್, ಮೇದಿನಿ ಕೆಳಮನಿ, ಮಯೂರ್​ ಪಟೇಲ್, ಬಾಲರಾಜ್​ ವಾಡಿ ಮುಂತಾದ ಕಲಾವಿದರ ನಟನೆಯಿಂದಾಗಿ ಸಿನಿಮಾದ ಮೆರುಗು ಜಾಸ್ತಿ ಆಗಿದೆ. ಮಾಮೂಲಿ ಪ್ಯಾಟರ್ನ್​​ ಬಿಟ್ಟು ಬೇರೆ ರೀತಿಯ ಸಂಭಾಷಣೆಗಳಿಂದಾಗಿ ಎಲ್ಲ ದೃಶ್ಯಗಳ ಸ್ವರೂಪ ಬದಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:58 pm, Fri, 30 August 24

ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ