‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ

Ninna Sanihake Review: ಸೂರಜ್​ ಗೌಡ ಮತ್ತು ಧನ್ಯಾ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ರಿಯಲ್​ ಲೈಫ್​ ಪ್ರೇಮಿಗಳೇನೋ ಎಂಬಷ್ಟರಮಟ್ಟಿಗೆ ಈ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.

‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ
ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ
Follow us
|

Updated on: Oct 08, 2021 | 12:30 PM

ಚಿತ್ರ: ನಿನ್ನ ಸನಿಹಕೆ ನಿರ್ದೇಶನ: ಸೂರಜ್​ ಗೌಡ ನಿರ್ಮಾಣ: ಅಕ್ಷಯ್​ ರಾಜಶೇಖರ್​, ರಂಗನಾಥ್​ ಕೂಡ್ಲಿ ಪಾತ್ರವರ್ಗ: ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ, ಅರುಣಾ ಬಾಲರಾಜ್​, ಮಂಜುನಾಥ್​ ಹೆಗಡೆ, ರಜನಿಕಾಂತ್, ಸೌಮ್ಯಾ ಭಟ್​ ಮುಂತಾದವರು.

ಸ್ಟಾರ್​: 3.5 / 5

ಡಾ. ರಾಜ್​ಕುಮಾರ್​ ಫ್ಯಾಮಿಲಿಯ ಮೊದಲ ಹೀರೋಯಿನ್​ ಎಂಬ ವಿಶೇಷಣವನ್ನು ಜೊತೆಯಲ್ಲಿ ಇಟ್ಟುಕೊಂಡು ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ ನಟಿ ಧನ್ಯಾ ರಾಮ್​ಕುಮಾರ್​. ಅವರು ನಟಿಸಿದ ಮೊದಲ ಸಿನಿಮಾ ‘ನಿನ್ನ ಸನಿಹಕೆ’ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ನಟ ಸೂರಜ್​ ಗೌಡ ನಿರ್ದೇಶನ ಮಾಡಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ಎರಡೂ ಜವಾಬ್ದಾರಿಯನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಧನ್ಯಾ ಗಮನ ಸೆಳೆದಿದ್ದಾರೆ. ಹೊಸ ತಲೆಮಾರಿನ ಯುವಕ-ಯುವತಿಯರಿಗೆ ಇಷ್ಟ ಆಗುವಂತಹ ಕಹಾನಿಯನ್ನು ಈ ಸಿನಿಮಾ ಒಳಗೊಂಡಿದೆ.

ಕಥೆಯ ಎಳೆ ಹೀಗಿದೆ…

ಬೆಂಗಳೂರಿನಂತಹ ಮಹಾನಗರದಲ್ಲಿ ಲಿವ್​-ಇನ್​-ರಿಲೇಷನ್​ಶಿಪ್​ ಸಹಜ. ಆದರೆ ಎಲ್ಲ ವರ್ಗದವರೂ ಅದಕ್ಕೆ ತೆರೆದುಕೊಂಡಿಲ್ಲ. ಅಮೃತಾ (ಧನ್ಯಾ) ಎಂಬ ಡೆಂಟಿಸ್ಟ್​, ಆದಿ (ಸೂರಜ್​) ಎಂಬ ಇಂಜಿನಿಯರ್​ ಜೊತೆಗೆ ಪ್ರೀತಿಯಲ್ಲಿ ಬಿದ್ದ ಬಳಿಕ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇರುತ್ತಾರೆ. ಇಂಥ ಸಂಬಂಧದಲ್ಲಿ ಇರುವ ಏಳು-ಬೀಳುಗಳೇನು? ಎದುರಾಗುವ ಸಮಸ್ಯೆಗಳೇನು? ಅದನ್ನು ಅವರು ಹೇಗೆ ಪರಿಹರಿಸಿಕೊಳ್ಳುತ್ತಾರೆ? ಕಡೆಗೂ ಅವರ ಪ್ರೀತಿ ಉಳಿಯುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಪೂರ್ತಿ ಸಿನಿಮಾ ನೋಡಿದಾಗ ಉತ್ತರ ಸಿಗಲಿದೆ.

ನಟನೆಯಲ್ಲೂ-ನಿರ್ದೇಶನದಲ್ಲೂ ಸೂರಜ್​ ಸೈ

ನಟನಾಗಿ ಒಂದೆರಡು ಸಿನಿಮಾ ಮಾಡಿರುವ ಸೂರಜ್​ ಅವರಿಗೆ ನಿರ್ದೇಶನದಲ್ಲಿ ಇದು ಮೊದಲ ಪ್ರಯತ್ನ. ಈ ಚಿತ್ರದಲ್ಲಿ ಅವರು ಈ ಎರಡೂ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ನಿರ್ದೇಶನದ ಮೇಲೆ ಅವರು ಇನ್ನಷ್ಟು ಹಿಡಿತ ಸಾಧಿಸುವ ಅವಶ್ಯಕತೆ ಇದೆ. ಪ್ರೇಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡರೆ, ಮತ್ತಷ್ಟು ಹೋಮ್​ವರ್ಕ್​ ಮಾಡಿಕೊಂಡರೆ ಅವರಿಗೆ ನಿರ್ದೇಶನದಲ್ಲಿ ಒಳ್ಳೆಯ ಭವಿಷ್ಯ ಖಂಡಿತವಾಗಿ ಇದೆ ಎಂಬುದು ‘ನಿನ್ನ ಸನಿಹಕೆ’ ನೋಡಿದಾಗ ಸ್ಪಷ್ಟವಾಗುತ್ತದೆ.

ರಘು ದೀಕ್ಷಿತ್​ಗೂ ಬಹುಪರಾಕ್​

ಪ್ರೇಕ್ಷಕರಿಗೆ ‘ನಿನ್ನ ಸನಿಹಕೆ’ ಇಷ್ಟವಾಗಲು ರಘು ದೀಕ್ಷಿತ್​ ಅವರ ಸಂಗೀತ ಕೂಡ ಮುಖ್ಯ ಕಾರಣ. ಕಥೆಗೆ ಒಪ್ಪುವಂತಹ ಹಾಡುಗಳನ್ನು ಅವರು ನೀಡಿದ್ದಾರೆ. ಪ್ರೇಮಕಥೆಯ ಅಂದ ಹೆಚ್ಚಿಸಲು ಎಲ್ಲ ಹಾಡುಗಳು ಸಹಕಾರಿ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಭರವಸೆ ಮೂಡಿಸಿದ ಧನ್ಯಾ ರಾಮ್​ಕುಮಾರ್​

ನಟಿ ಧನ್ಯಾ ರಾಮ್​ಕುಮಾರ್​ ಅವರಿಗೆ ಈ ಪಾತ್ರ ತುಂಬ ಚೆನ್ನಾಗಿ ಹೊಂದಿಕೆ ಆಗಿದೆ. ಪ್ರೀತಿ, ಅನುಮಾನ, ಹೊಟ್ಟೆಕಿಚ್ಚು, ದುಃಖ ಸೇರಿದಂತೆ ಹಲವು ಭಾವಗಳನ್ನು ಹೊಮ್ಮಿಸುವ ಈ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಸೂರಜ್​ ಗೌಡ ಮತ್ತು ಧನ್ಯಾ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ರಿಯಲ್​ ಲೈಫ್​ ಪ್ರೇಮಿಗಳೇನೋ ಎಂಬಷ್ಟರಮಟ್ಟಿಗೆ ಈ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.

ಚಿತ್ರದ ಪ್ಲಸ್​ ಪಾಯಿಂಟ್​ಗಳೇನು?

ಇಡೀ ಸಿನಿಮಾದಲ್ಲಿ ನಗುವಿಗೆ ಕೊರತೆ ಇಲ್ಲ. ಕಥೆಯಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ಕೊಡಲಾಗಿದೆ. ಟೆನ್ಷನ್​ ಮರೆತು ಸಿನಿಮಾ ನೋಡಲು ಬರುವವರಿಗೆ ಭರ್ಜರಿ ಮನರಂಜನೆ ಸಿಗಲಿದೆ. ನಗು ಉಕ್ಕಿಸುವ ಡೈಲಾಗ್​ಗಳು ಆಗಾಗ ಕೇಳಿಸುತ್ತವೆ. ಸಂಗೀತಮಯವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಪೋಷಕ ಪಾತ್ರಗಳಲ್ಲಿ ಇರುವ ಅರುಣಾ ಬಾಲರಾಜ್​, ಮಂಜುನಾಥ್​ ಹೆಗಡೆ, ರಜನಿಕಾಂತ್, ಸೌಮ್ಯಾ ಭಟ್​ ಮುಂತಾದವರು ಗಮನ ಸೆಳೆಯುತ್ತಾರೆ.

ಮೈನಸ್​ ಅಂಶಗಳೇನು?

ಈ ಸಿನಿಮಾದ ಅವಧಿ 2 ಗಂಟೆ 35 ನಿಮಿಷ. ಇದು ಕೊಂಚ ದೀರ್ಘವಾಯ್ತು ಎನಿಸದೇ ಇರದು. ಈ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಅನಗತ್ಯ ಎಳೆದಾಟಕ್ಕೆ ಕತ್ತರಿಹಾಕುವ ಅವಶ್ಯಕತೆ ಇತ್ತು. ಚಿತ್ರಕಥೆಯಲ್ಲಿ ಒಂಚೂರು ಗಟ್ಟಿತನ ಬೇಕಿತ್ತು ಎಂಬ ಅಭಿಪ್ರಾಯ ಮೂಡುತ್ತದೆ. ಸಾಹಸ ದೃಶ್ಯಗಳನ್ನು ಸೇರಿಸಿರುವ ಕಡೆಗಳಲ್ಲಿ ಕಥೆ ಕೊಂಚ ದಾರಿ ತಪ್ಪಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಎಲ್ಲ ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ ‘ನಿನ್ನ ಸನಿಹಕೆ’ ಚಿತ್ರ ಪ್ರೇಕ್ಷಕರ ಮನಸ್ಸಿಗೆ ಹತ್ತಿರ ಆಗುತ್ತದೆ.

ಇದನ್ನೂ ಓದಿ:

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

‘ಮದುವೆ ಆಗದೇ ಮಕ್ಕಳು ಮಾಡಿಕೊಂಡವರು ಇದ್ದಾರೆ’; ‘ನಿನ್ನ ಸನಿಹಕೆ’ ಚಿತ್ರದ ಬಗ್ಗೆ ರಘು ದೀಕ್ಷಿತ್​ ಮಾತು

ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಅಭಿಮಾನಿಗಳ ಜೊತೆ ‘ಉಪೇಂದ್ರ’ ಸಿನಿಮಾ ನೋಡಿದ ರಿಯಲ್ ಸ್ಟಾರ್  
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?