AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ

Ninna Sanihake Review: ಸೂರಜ್​ ಗೌಡ ಮತ್ತು ಧನ್ಯಾ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ರಿಯಲ್​ ಲೈಫ್​ ಪ್ರೇಮಿಗಳೇನೋ ಎಂಬಷ್ಟರಮಟ್ಟಿಗೆ ಈ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.

‘ನಿನ್ನ ಸನಿಹಕೆ’ ವಿಮರ್ಶೆ: ಯಶಸ್ಸಿನ ಸನಿಹಕ್ಕೆ ಸೂರಜ್​, ಧನ್ಯಾ; ಇದು ಹೊಸ ತಲೆಮಾರಿನ ಪ್ರೇಮಕಥೆ
ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ
Follow us
ಮದನ್​ ಕುಮಾರ್​
|

Updated on: Oct 08, 2021 | 12:30 PM

ಚಿತ್ರ: ನಿನ್ನ ಸನಿಹಕೆ ನಿರ್ದೇಶನ: ಸೂರಜ್​ ಗೌಡ ನಿರ್ಮಾಣ: ಅಕ್ಷಯ್​ ರಾಜಶೇಖರ್​, ರಂಗನಾಥ್​ ಕೂಡ್ಲಿ ಪಾತ್ರವರ್ಗ: ಧನ್ಯಾ ರಾಮ್​ಕುಮಾರ್​, ಸೂರಜ್​ ಗೌಡ, ಅರುಣಾ ಬಾಲರಾಜ್​, ಮಂಜುನಾಥ್​ ಹೆಗಡೆ, ರಜನಿಕಾಂತ್, ಸೌಮ್ಯಾ ಭಟ್​ ಮುಂತಾದವರು.

ಸ್ಟಾರ್​: 3.5 / 5

ಡಾ. ರಾಜ್​ಕುಮಾರ್​ ಫ್ಯಾಮಿಲಿಯ ಮೊದಲ ಹೀರೋಯಿನ್​ ಎಂಬ ವಿಶೇಷಣವನ್ನು ಜೊತೆಯಲ್ಲಿ ಇಟ್ಟುಕೊಂಡು ಗಾಂಧಿನಗರಕ್ಕೆ ಕಾಲಿಟ್ಟಿದ್ದಾರೆ ನಟಿ ಧನ್ಯಾ ರಾಮ್​ಕುಮಾರ್​. ಅವರು ನಟಿಸಿದ ಮೊದಲ ಸಿನಿಮಾ ‘ನಿನ್ನ ಸನಿಹಕೆ’ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ನಟ ಸೂರಜ್​ ಗೌಡ ನಿರ್ದೇಶನ ಮಾಡಿದ್ದು, ನಾಯಕನಾಗಿಯೂ ನಟಿಸಿದ್ದಾರೆ. ಎರಡೂ ಜವಾಬ್ದಾರಿಯನ್ನು ಅವರು ಉತ್ತಮವಾಗಿ ನಿಭಾಯಿಸಿದ್ದಾರೆ. ಮೊದಲ ಪ್ರಯತ್ನದಲ್ಲೇ ಧನ್ಯಾ ಗಮನ ಸೆಳೆದಿದ್ದಾರೆ. ಹೊಸ ತಲೆಮಾರಿನ ಯುವಕ-ಯುವತಿಯರಿಗೆ ಇಷ್ಟ ಆಗುವಂತಹ ಕಹಾನಿಯನ್ನು ಈ ಸಿನಿಮಾ ಒಳಗೊಂಡಿದೆ.

ಕಥೆಯ ಎಳೆ ಹೀಗಿದೆ…

ಬೆಂಗಳೂರಿನಂತಹ ಮಹಾನಗರದಲ್ಲಿ ಲಿವ್​-ಇನ್​-ರಿಲೇಷನ್​ಶಿಪ್​ ಸಹಜ. ಆದರೆ ಎಲ್ಲ ವರ್ಗದವರೂ ಅದಕ್ಕೆ ತೆರೆದುಕೊಂಡಿಲ್ಲ. ಅಮೃತಾ (ಧನ್ಯಾ) ಎಂಬ ಡೆಂಟಿಸ್ಟ್​, ಆದಿ (ಸೂರಜ್​) ಎಂಬ ಇಂಜಿನಿಯರ್​ ಜೊತೆಗೆ ಪ್ರೀತಿಯಲ್ಲಿ ಬಿದ್ದ ಬಳಿಕ ಲಿವ್​-ಇನ್​-ರಿಲೇಷನ್​ಶಿಪ್​ನಲ್ಲಿ ಇರುತ್ತಾರೆ. ಇಂಥ ಸಂಬಂಧದಲ್ಲಿ ಇರುವ ಏಳು-ಬೀಳುಗಳೇನು? ಎದುರಾಗುವ ಸಮಸ್ಯೆಗಳೇನು? ಅದನ್ನು ಅವರು ಹೇಗೆ ಪರಿಹರಿಸಿಕೊಳ್ಳುತ್ತಾರೆ? ಕಡೆಗೂ ಅವರ ಪ್ರೀತಿ ಉಳಿಯುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಪೂರ್ತಿ ಸಿನಿಮಾ ನೋಡಿದಾಗ ಉತ್ತರ ಸಿಗಲಿದೆ.

ನಟನೆಯಲ್ಲೂ-ನಿರ್ದೇಶನದಲ್ಲೂ ಸೂರಜ್​ ಸೈ

ನಟನಾಗಿ ಒಂದೆರಡು ಸಿನಿಮಾ ಮಾಡಿರುವ ಸೂರಜ್​ ಅವರಿಗೆ ನಿರ್ದೇಶನದಲ್ಲಿ ಇದು ಮೊದಲ ಪ್ರಯತ್ನ. ಈ ಚಿತ್ರದಲ್ಲಿ ಅವರು ಈ ಎರಡೂ ಜವಾಬ್ದಾರಿಯನ್ನು ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ ನಿರ್ದೇಶನದ ಮೇಲೆ ಅವರು ಇನ್ನಷ್ಟು ಹಿಡಿತ ಸಾಧಿಸುವ ಅವಶ್ಯಕತೆ ಇದೆ. ಪ್ರೇಕ್ಷಕರ ನಾಡಿಮಿಡಿತ ಅರ್ಥ ಮಾಡಿಕೊಂಡರೆ, ಮತ್ತಷ್ಟು ಹೋಮ್​ವರ್ಕ್​ ಮಾಡಿಕೊಂಡರೆ ಅವರಿಗೆ ನಿರ್ದೇಶನದಲ್ಲಿ ಒಳ್ಳೆಯ ಭವಿಷ್ಯ ಖಂಡಿತವಾಗಿ ಇದೆ ಎಂಬುದು ‘ನಿನ್ನ ಸನಿಹಕೆ’ ನೋಡಿದಾಗ ಸ್ಪಷ್ಟವಾಗುತ್ತದೆ.

ರಘು ದೀಕ್ಷಿತ್​ಗೂ ಬಹುಪರಾಕ್​

ಪ್ರೇಕ್ಷಕರಿಗೆ ‘ನಿನ್ನ ಸನಿಹಕೆ’ ಇಷ್ಟವಾಗಲು ರಘು ದೀಕ್ಷಿತ್​ ಅವರ ಸಂಗೀತ ಕೂಡ ಮುಖ್ಯ ಕಾರಣ. ಕಥೆಗೆ ಒಪ್ಪುವಂತಹ ಹಾಡುಗಳನ್ನು ಅವರು ನೀಡಿದ್ದಾರೆ. ಪ್ರೇಮಕಥೆಯ ಅಂದ ಹೆಚ್ಚಿಸಲು ಎಲ್ಲ ಹಾಡುಗಳು ಸಹಕಾರಿ ಆಗಿವೆ. ಹಿನ್ನೆಲೆ ಸಂಗೀತ ಕೂಡ ಚಿತ್ರಕ್ಕೆ ಪ್ಲಸ್​ ಪಾಯಿಂಟ್​ ಆಗಿದೆ.

ಭರವಸೆ ಮೂಡಿಸಿದ ಧನ್ಯಾ ರಾಮ್​ಕುಮಾರ್​

ನಟಿ ಧನ್ಯಾ ರಾಮ್​ಕುಮಾರ್​ ಅವರಿಗೆ ಈ ಪಾತ್ರ ತುಂಬ ಚೆನ್ನಾಗಿ ಹೊಂದಿಕೆ ಆಗಿದೆ. ಪ್ರೀತಿ, ಅನುಮಾನ, ಹೊಟ್ಟೆಕಿಚ್ಚು, ದುಃಖ ಸೇರಿದಂತೆ ಹಲವು ಭಾವಗಳನ್ನು ಹೊಮ್ಮಿಸುವ ಈ ಪಾತ್ರವನ್ನು ಅವರು ಸಮರ್ಥವಾಗಿ ನಿಭಾಯಿಸಿದ್ದಾರೆ. ಸೂರಜ್​ ಗೌಡ ಮತ್ತು ಧನ್ಯಾ ಕೆಮಿಸ್ಟ್ರೀ ಚೆನ್ನಾಗಿ ಮೂಡಿಬಂದಿದೆ. ಇಬ್ಬರೂ ರಿಯಲ್​ ಲೈಫ್​ ಪ್ರೇಮಿಗಳೇನೋ ಎಂಬಷ್ಟರಮಟ್ಟಿಗೆ ಈ ಪಾತ್ರಗಳಿಗೆ ಅವರು ಜೀವ ತುಂಬಿದ್ದಾರೆ.

ಚಿತ್ರದ ಪ್ಲಸ್​ ಪಾಯಿಂಟ್​ಗಳೇನು?

ಇಡೀ ಸಿನಿಮಾದಲ್ಲಿ ನಗುವಿಗೆ ಕೊರತೆ ಇಲ್ಲ. ಕಥೆಯಲ್ಲಿ ಕಾಮಿಡಿಗೆ ಹೆಚ್ಚು ಮಹತ್ವ ಕೊಡಲಾಗಿದೆ. ಟೆನ್ಷನ್​ ಮರೆತು ಸಿನಿಮಾ ನೋಡಲು ಬರುವವರಿಗೆ ಭರ್ಜರಿ ಮನರಂಜನೆ ಸಿಗಲಿದೆ. ನಗು ಉಕ್ಕಿಸುವ ಡೈಲಾಗ್​ಗಳು ಆಗಾಗ ಕೇಳಿಸುತ್ತವೆ. ಸಂಗೀತಮಯವಾಗಿ ಸಿನಿಮಾ ಕಟ್ಟಿಕೊಡಲಾಗಿದೆ. ಪೋಷಕ ಪಾತ್ರಗಳಲ್ಲಿ ಇರುವ ಅರುಣಾ ಬಾಲರಾಜ್​, ಮಂಜುನಾಥ್​ ಹೆಗಡೆ, ರಜನಿಕಾಂತ್, ಸೌಮ್ಯಾ ಭಟ್​ ಮುಂತಾದವರು ಗಮನ ಸೆಳೆಯುತ್ತಾರೆ.

ಮೈನಸ್​ ಅಂಶಗಳೇನು?

ಈ ಸಿನಿಮಾದ ಅವಧಿ 2 ಗಂಟೆ 35 ನಿಮಿಷ. ಇದು ಕೊಂಚ ದೀರ್ಘವಾಯ್ತು ಎನಿಸದೇ ಇರದು. ಈ ಬಗ್ಗೆ ನಿರ್ದೇಶಕರು ಗಮನ ಹರಿಸಬೇಕಿತ್ತು. ಅನಗತ್ಯ ಎಳೆದಾಟಕ್ಕೆ ಕತ್ತರಿಹಾಕುವ ಅವಶ್ಯಕತೆ ಇತ್ತು. ಚಿತ್ರಕಥೆಯಲ್ಲಿ ಒಂಚೂರು ಗಟ್ಟಿತನ ಬೇಕಿತ್ತು ಎಂಬ ಅಭಿಪ್ರಾಯ ಮೂಡುತ್ತದೆ. ಸಾಹಸ ದೃಶ್ಯಗಳನ್ನು ಸೇರಿಸಿರುವ ಕಡೆಗಳಲ್ಲಿ ಕಥೆ ಕೊಂಚ ದಾರಿ ತಪ್ಪಿರುವುದು ಸ್ಪಷ್ಟವಾಗಿ ಕಾಣುತ್ತದೆ. ಈ ಎಲ್ಲ ಅಂಶಗಳನ್ನು ಬದಿಗಿಟ್ಟು ನೋಡುವುದಾದರೆ ‘ನಿನ್ನ ಸನಿಹಕೆ’ ಚಿತ್ರ ಪ್ರೇಕ್ಷಕರ ಮನಸ್ಸಿಗೆ ಹತ್ತಿರ ಆಗುತ್ತದೆ.

ಇದನ್ನೂ ಓದಿ:

‘ನಿನ್ನ ಸನಿಹಕೆ’ ಚಿತ್ರ ನೋಡಲಿರುವ ರಜನಿಕಾಂತ್​; ಧನ್ಯಾ ರಾಮ್​ಕುಮಾರ್​-ಸೂರಜ್​ಗೆ ತಲೈವಾ ಬೆಂಬಲ

‘ಮದುವೆ ಆಗದೇ ಮಕ್ಕಳು ಮಾಡಿಕೊಂಡವರು ಇದ್ದಾರೆ’; ‘ನಿನ್ನ ಸನಿಹಕೆ’ ಚಿತ್ರದ ಬಗ್ಗೆ ರಘು ದೀಕ್ಷಿತ್​ ಮಾತು

ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ದುಬೈನ 67 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅವಘಡ; 3,820 ನಿವಾಸಿಗಳ ಸ್ಥಳಾಂತರ
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ಟೆಸ್ಟ್‌ ಚಾಂಪಿಯನ್​ಶಿಪ್ ಗೆಲ್ಲುತ್ತಿದ್ದಂತೆ ಭಾವುಕರಾದ ಆಫ್ರಿಕಾ ಆಟಗಾರರು
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ನೀರು ಹುಡುಕುತ್ತಾ ಒಣಗಿದ ಬಾವಿಗೆ ಬಿದ್ದ ಚಿರತೆ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಮಂಗಳೂರಿನಲ್ಲಿ ಭಾರೀ ಮಳೆ: ಪಂಪ್‌ವೆಲ್ ಮತ್ತೆ ಮುಳುಗಡೆ, ವಿಡಿಯೋ ನೋಡಿ
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಖಾದಿಗಳಿಗಿಂತ ಖಾಕಿಗಳು ಬ್ಯಾಟ್ ಚೆನ್ನಾಗಿ ಬೀಸಬಲ್ಲರು!
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ಉಪನ್ಯಾಸಕ ಕನ್ನಡದಲ್ಲಿ ಮಾತನಾಡಿದ್ದಕ್ಕೆ ಕೆಲಸದಿಂದ ತೆಗೆದ RV ಕಾಲೇಜು ಮಂಡಳಿ
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ವಿಶ್ವಾಸ್ ಕುಮಾರ್ ರಮೇಶ್​ ಆರೋಗ್ಯವನ್ನೂ ವಿಚಾರಿಸಿದ ಕಾಂಗ್ರೆಸ್ ನಾಯಕರು
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ಮಳೆಹಾನಿ ಪ್ರದೇಶಗಳಿಗೆ ಭೇಟಿ ನೀಡಿದಾಗ ಗ್ರಾಮಸ್ಥರಿಂದ ಶಾಸಕನಿಗೆ ತರಾಟೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ವಿಮಾನದ ಕರ್ಕಶ ಶಬ್ದ ಕೇಳಿ ಪತನ ನಿಶ್ಚಿತ ಅಂದುಕೊಂಡಿದ್ದೆ: ಮತ್ತೊಬ್ಬ ಮಹಿಳೆ
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!
ಭಾರೀ ಮಳೆ: ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಕುಸಿಯುತ್ತಿರುವ ಗುಡ್ಡ!