ಮಾಧವನ್ ಹೊರತು ಇನ್ಯಾರೂ ‘ಧುರಂಧರ್’ನಲ್ಲಿ ನಟಿಸಲು ಒಪ್ಪಿರಲಿಲ್ಲ

Dhurandhar 2: ‘ಧುರಂಧರ್’ ಸಿನಿಮಾನಲ್ಲಿ ಬಾಲಿವುಡ್‌ನ ಘಟಾನುಘಟಿ ನಟರಾದ ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರುಗಳು ನಟಿಸಿದ್ದು, ನಾಯಕನಷ್ಟೆ ಮಹತ್ವದ ಪಾತ್ರಗಳು ಇವರದ್ದಾಗಿವೆ. ಆದರೆ, ಮಾಧವನ್ ಅವರ ಹೊರತಾಗಿ ಮೂರೂ ಮಂದಿ ಪ್ರಮುಖ ನಟರುಗಳು ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ಈ ಬಗ್ಗೆ ಸಿನಿಮಾದ ಕಾಸ್ಟಿಂಗ್ ನಿರ್ದೇಶಕ ಸಂದರ್ಶನದಲ್ಲಿ ಹೇಳಿದ್ದಾರೆ.

ಮಾಧವನ್ ಹೊರತು ಇನ್ಯಾರೂ ‘ಧುರಂಧರ್’ನಲ್ಲಿ ನಟಿಸಲು ಒಪ್ಪಿರಲಿಲ್ಲ
Dhurandhar

Updated on: Apr 01, 2026 | 6:56 PM

ಆದಿತ್ಯ ಧರ್ ನಿರ್ದೇಶಿಸಿ, ರಣ್ವೀರ್ ಸಿಂಗ್ ನಟಿಸಿರುವ ‘ಧುರಂಧರ್ 2’ (Dhurandhar 2) ಸಿನಿಮಾ ಭಾರಿ ಸದ್ದು ಮಾಡುತ್ತಿದೆ. ದೇಶ, ವಿದೇಶಗಳಲ್ಲಿ ಸಿನಿಮಾ ದೊಡ್ಡ ಬ್ಲಾಕ್ ಬಸ್ಟರ್ ಆಗಿದೆ. ಈ ಚಿತ್ರದಲ್ಲಿ ಬಾಲಿವುಡ್‌ನ ಘಟಾನುಘಟಿ ನಟರಾದ ಸಂಜಯ್ ದತ್, ಆರ್ ಮಾಧವನ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರುಗಳು ನಟಿಸಿದ್ದು, ನಾಯಕನಷ್ಟೆ ಮಹತ್ವದ ಪಾತ್ರಗಳು ಇವರದ್ದಾಗಿವೆ. ಆದರೆ, ಮಾಧವನ್ ಅವರ ಹೊರತಾಗಿ ಮೂರೂ ಮಂದಿ ಪ್ರಮುಖ ನಟರುಗಳು ಸಹ ‘ಧುರಂಧರ್’ ಸಿನಿಮಾನಲ್ಲಿ ನಟಿಸಲು ಒಪ್ಪಿರಲಿಲ್ಲವಂತೆ. ಈ ಬಗ್ಗೆ ಸಿನಿಮಾದ ಕಾಸ್ಟಿಂಗ್ ನಿರ್ದೇಶಕ ಸಂದರ್ಶನದಲ್ಲಿ ಹೇಳಿದ್ದಾರೆ.

‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಕ್ಕೆ ನಟರನ್ನು ಆಯ್ಕೆ ಮಾಡಿರುವುದು ಬಾಲಿವುಡ್​​ನ ಖ್ಯಾತ ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಛಾಬ್ರಾ. ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ಚಿತ್ರಕಥೆಯನ್ನು ಕೇಳಿದ ಕೂಡಲೇ ಯಾವುದೇ ಮುಲಾಜಿಲ್ಲದೆ ನಟಿಸಲು ಒಪ್ಪಿಕೊಂಡ ಏಕೈಕ ನಟ ಆರ್ ಮಾಧವನ್, ‘ನಾವು ಕಥೆ ಹೇಳಿದ ತಕ್ಷಣ ಮಾಧವನ್ ಗ್ರೀನ್ ಸಿಗ್ನಲ್ ನೀಡಿದರು. ಆದರೆ ಸಂಜಯ್ ದತ್, ಅಕ್ಷಯ್ ಖನ್ನಾ ಮತ್ತು ಅರ್ಜುನ್ ರಾಂಪಾಲ್ ಅವರು ಆರಂಭದಲ್ಲಿ ಈ ಚಿತ್ರದಲ್ಲಿ ನಟಿಸಲು ಕೊಂಚ ಹಿಂದೇಟು ಹಾಕಿದ್ದರು ಅಥವಾ ಗೊಂದಲದಲ್ಲಿದ್ದರು’ ಎಂದು ಮುಕೇಶ್ ತಿಳಿಸಿದ್ದಾರೆ.

ಈ ದೊಡ್ಡ ತಾರಾಗಣವನ್ನು ಒಟ್ಟುಗೂಡಿಸುವಲ್ಲಿ ಮುಕೇಶ್ ಛಾಬ್ರಾ ಅವರ ಪಾತ್ರ ದೊಡ್ಡದಿದೆ. ಆರಂಭದಲ್ಲಿ ನಿರ್ದೇಶಕ ಆದಿತ್ಯ ಧರ್ ಮತ್ತು ಮುಕೇಶ್ ಅವರು ಬೇರೆ ರೀತಿಯ ನಟರನ್ನು ಮನಸ್ಸಿನಲ್ಲಿಟ್ಟುಕೊಂಡಿದ್ದರು. ಆದರೆ ಕಥೆಯ ವ್ಯಾಪ್ತಿ ದೊಡ್ಡದಾಗಿದ್ದರಿಂದ, ದೊಡ್ಡ ತಾರೆಯರನ್ನೇ ಸಿನಿಮಾಕ್ಕೆ ಕರೆತರಬೇಕು ಎಂದು ಮುಕೇಶ್ ಅವರು ಆದಿತ್ಯ ಧರ್ ಅವರಿಗೆ ಧೈರ್ಯ ತುಂಬಿದರಂತೆ. ಹಾಗೂ ಸಿನಿಮಾವನ್ನು ದೊಡ್ಡ ಮಟ್ಟದಲ್ಲಿ ನಿರ್ಮಾಣ ಮಾಡಲು ಸಹ ತಾವೇ ಧೈರ್ಯ ನೀಡಿದ್ದಾಗಿಯೂ ಸಹ ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:‘ಧುರಂಧರ್ 2’ ಬಳಿಕ ಬರ್ತಿದೆ ಏಳೂವರೆ ಗಂಟೆ ಸಿನಿಮಾ; ಎರಡು ಇಂಟರ್​​ವಲ್

ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರು ಒಪ್ಪಿಕೊಳ್ಳದೇ ಇರಲು ಹಾಗೂ ಮಾಧವನ್ ಬೇಗನೆ ಒಪ್ಪಿಕೊಳ್ಳಲು ಕಾರಣವೂ ಇದೆ. ಅಕ್ಷಯ್, ಅರ್ಜುನ್ ರಾಂಪಾಲ್ ಮತ್ತು ಸಂಜಯ್ ದತ್ ಅವರದ್ದು ಪಾಕಿಸ್ತಾನಿಗಳ ಪಾತ್ರ, ಅದರಲ್ಲೂ ಅಕ್ಷಯ್ ಕುಮಾರ್ ಮತ್ತು ಅರ್ಜುನ್ ರಾಂಪಾಲ್ ಅವರದ್ದಂತೂ ಉಗ್ರವಾದಿ ನಾಯಕರ ಪಾತ್ರ. ಸಹಜವಾಗಿಯೇ ಅವರು ಆರಂಭದಲ್ಲಿ ಒಲ್ಲೆ ಎಂದಿದ್ದಾರೆ. ಆದರೆ ಮಾಧವನ್ ಅವರದ್ದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪಾತ್ರ, ಗೌರವ ಹೊಂದಿರುವ, ಹೀರೋಗಿರಿ ಉಳ್ಳ ಪಾತ್ರ ಹಾಗಾಗಿ ಅವರು ಸುಲಭವಾಗಿ ಸಿನಿಮಾನಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಸಿನಿಮಾನಲ್ಲಿ ಎಲ್ಲ ಪಾತ್ರಗಳಿಗೂ ಪ್ರಾಮುಖ್ಯತೆ ಸಿನಿಮಾದಲ್ಲಿದೆ. ಇದೇ ಕಾರಣಕ್ಕೆ ಉಗ್ರರ ಪಾತ್ರವಾದರೂ ಸಹ ಪ್ರೇಕ್ಷಕರು ಅಕ್ಷಯ್ ಖನ್ನಾ ಪಾತ್ರವನ್ನೂ ಸಹ ಸೆಲೆಬ್ರೇಟ್ ಮಾಡಿದ್ದಾರೆ, ಮೆಚ್ಚಿಕೊಂಡಿದ್ದಾರೆ. ಕಾಸ್ಟಿಂಗ್ ನಿರ್ದೇಶಕ ಮುಕೇಶ್ ಹೇಳಿರುವಂತೆ, ‘ಧುರಂಧರ್’ ಒಂದು ನಿಖರವಾದ ಕಾಸ್ಟಿಂಗ್ ಆಗಿರುವ ಸಿನಿಮಾ ಅಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us