AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುಕ ಹುಟ್ಟಿಸುವ ಹಾರರ್​ ಸಿನಿಮಾ ‘ಶೈತಾನ್​’; ಒಟಿಟಿ ಎಂಟ್ರಿಗೆ ಸಮಯ ನಿಗದಿ

ಅಜಯ್​ ದೇವಗನ್​ ಮತ್ತು ಆರ್​. ಮಾಧವನ್​ ಅವರು ‘ಶೈತಾನ್​’ ಸಿನಿಮಾದಲ್ಲಿ ಮುಖಾಮುಖಿ ಆಗಿದ್ದಾರೆ. ವಶೀಕರಣದ ಕಹಾನಿ ಈ ಸಿನಿಮಾದಲ್ಲಿದೆ. ಚಿತ್ರಮಂದಿರದಲ್ಲಿ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಿದ ‘ಶೈತಾನ್​’ ಸಿನಿಮಾ ಈಗ ಒಟಿಟಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ಹಾರರ್​ ಸಿನಿಮಾ ಇಷ್ಟಪಡುವ ಪ್ರೇಕ್ಷಕರಿಗೆ ಈ ಚಿತ್ರ ಸಖತ್​ ಥ್ರಿಲ್​ ನೀಡಲಿದೆ.

ನಡುಕ ಹುಟ್ಟಿಸುವ ಹಾರರ್​ ಸಿನಿಮಾ ‘ಶೈತಾನ್​’; ಒಟಿಟಿ ಎಂಟ್ರಿಗೆ ಸಮಯ ನಿಗದಿ
ಜಾನಕಿ ಬೋಡಿವಾಲಾ, ಆರ್​. ಮಾಧವನ್​
ಮದನ್​ ಕುಮಾರ್​
|

Updated on: May 03, 2024 | 5:10 PM

Share

ಈ ವರ್ಷ ಬಿಡುಗಡೆಯಾಗಿ ಸೂಪರ್ ಹಿಟ್​ ಎನಿಸಿಕೊಂಡ ಕೆಲವೇ ಸಿನಿಮಾಗಳಲ್ಲಿ ‘ಶೈತಾನ್​’ (Shaitaan) ಕೂಡ ಇದೆ. ಅಜಯ್​ ದೇವಗನ್​ (Ajay Devgn), ಆರ್​. ಮಾಧವನ್​, ಜ್ಯೋತಿಕಾ, ಜಾನಕಿ ಬೋಡಿವಾಲಾ ಮುಂತಾದವರು ನಟಿಸಿದ ಈ ಸಿನಿಮಾದಲ್ಲಿ ಹಾರರ್​​ ಕಥಾಹಂದರ ಇದೆ. ಯುವತಿಯನ್ನು ವಶೀಕರಣ ಮಾಡುವ ಕಥೆಯನ್ನು ಕೇಂದ್ರವಾಗಿಟ್ಟುಕೊಂಡು ‘ಶೈತಾನ್​’ ಸಿನಿಮಾ ಮೂಡಿಬಂದಿದೆ. ಚಿತ್ರಮಂದಿರದಲ್ಲಿ ಗೆದ್ದು ಬೀಗಿದ ಈ ಸಿನಿಮಾ ಈಗ ಒಟಿಟಿಗೆ (Shaitaan OTT Release) ಎಂಟ್ರಿ ನೀಡುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ಮೇ 4ರಿಂದ ‘ಶೈತಾನ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ.

ಟ್ರೇಲರ್​ ಬಿಡುಗಡೆ ಆಗುವ ತನಕ ‘ಶೈತಾನ್​’ ಬಗ್ಗೆ ಅಷ್ಟೇನೂ ಹೈಪ್​ ಇರಲಿಲ್ಲ. ಆದರೆ ಟ್ರೇಲರ್​ ರಿಲೀಸ್​ ಆದ ನಂತರ ಪ್ರೇಕ್ಷಕರಲ್ಲಿ ಭಾರಿ ನಿರೀಕ್ಷೆ ಮೂಡಿತು. ಹಾರರ್​ ಸಿನಿಮಾಗಳನ್ನು ಇಷ್ಟಪಡುವ ಪ್ರೇಕ್ಷಕರಿಗೆ ‘ಶೈತಾನ್​’ ಅತ್ಯುತ್ತಮ ಆಯ್ಕೆ. ಮಾರ್ಚ್​ 8ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆದ ಈ ಚಿತ್ರಕ್ಕೆ ಬರೋಬ್ಬರಿ 149 ಕೋಟಿ ರೂಪಾಯಿ ಕಲೆಕ್ಷನ್​ ಆಯಿತು.

ಇದನ್ನೂ ಓದಿ: ನೆಟ್​ಫ್ಲಿಕ್ಸ್​ ಟ್ರೆಂಡಿಂಗ್​ನಲ್ಲಿ ನಂಬರ್​ ಒನ್​ ಆಯ್ತು ‘ಲಾಪತಾ ಲೇಡೀಸ್​’ ಸಿನಿಮಾ

ಕೆಲವರು ಥಿಯೇಟರ್​ನಲ್ಲಿ ‘ಶೈತಾನ್​’ ಚಿತ್ರವನ್ನು ಮಿಸ್​ ಮಾಡಿಕೊಂಡಿದ್ದಾರೆ. ಅಂಥವರೆಲ್ಲ ಒಟಿಟಿಯಲ್ಲಿ ನೋಡಲು ಕಾದಿದ್ದರು. ಈಗ ಒಟಿಟಿ ಪ್ರೇಕ್ಷಕರಿಗೆ ಚಿತ್ರತಂಡದ ಕಡೆಯಿಂದ ಗುಡ್​ ನ್ಯೂಸ್​ ಸಿಕ್ಕಿದೆ. ‘ಶೈತಾನ್​’ ಸಿನಿಮಾದ ಒಟಿಟಿ ಪ್ರಸಾರ ಹಕ್ಕುಗಳು ನೆಟ್​ಫ್ಲಿಕ್​ ಪಾಲಾಗಿವೆ. ಮೇ 3ರ ಮಧ್ಯ ರಾತ್ರಿಯಿಂದಲೇ ಇದರ ಪ್ರಸಾರ ಆರಂಭ ಆಗಲಿದೆ. ಒಟಿಟಿ ಪ್ರೇಕ್ಷಕರು ಈ ಚಿತ್ರಕ್ಕೆ ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ.

ಮಗಳನ್ನು ರಕ್ಷಿಸಿಕೊಳ್ಳಲು ಹೋರಾಡುವ ತಂದೆಯ ಪಾತ್ರವನ್ನು ಅಜಯ್​ ದೇವಗನ್​ ಅವರು ‘ದೃಶ್ಯಂ’ ಸಿನಿಮಾದಲ್ಲಿ ಮಾಡಿದ್ದರು. ಈಗ ‘ಶೈತಾನ್​’ ಸಿನಿಮಾದಲ್ಲೂ ತಂದೆ-ಮಗಳ ಪಾತ್ರ ಹೈಲೈಟ್​ ಆಗಿದೆ. ಆದರೆ ಈ ಸಿನಿಮಾದಲ್ಲಿ ಹಾರರ್​ ಅಂಶಗಳು ಹೈಲೈಟ್​ ಆಗಿವೆ. ವಶೀಕರಣಕ್ಕೆ ಒಳಗಾದ ಮಗಳನ್ನು ರಕ್ಷಿಸಿಕೊಳ್ಳಲು ಕಥಾನಾಯಕ ಕಷ್ಟಪಡತ್ತಾನೆ. ಮಗಳ ಪಾತ್ರಕ್ಕೆ ಜಾನಕಿ ಬೋಡಿವಾಲ ಬಣ್ಣ ಹಚ್ಚಿದ್ದಾರೆ. ವಿಲನ್​ ಪಾತ್ರದಲ್ಲಿ ಆರ್​. ಮಾಧವನ್​ ಕಾಣಿಸಿಕೊಂಡಿದ್ದಾರೆ. ನಟ ಅಜಯ್​ ದೇವಗನ್​ ಅವರಿಗೆ ಈ ಸಿನಿಮಾದಿಂದ ಗೆಲುವು ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಆಗಸ್ಟ್ 24 ರಿಂದ 30 ರವರೆಗಿನ ದ್ವಾದಶ ರಾಶಿಗಳ ಫಲಾಫಲ ಇಲ್ಲಿದೆ
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಇಂದು ಏಕಾದಶಿ; ಯಾವೆಲ್ಲಾ ರಾಶಿಗಳ ಅದೃಷ್ಟ ಹೇಗಿದೆ?
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ಹೈದರಾಬಾದ್​​ನಲ್ಲಿ ‘ಟಾಕ್ಸಿಕ್’ ಇವೆಂಟ್​​, ಯಶ್ ನೋಡಲು ಬಂದ ಜನಸಾಗರ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ದೆಹಲಿಯಲ್ಲಿ ಬಿಜೆಪಿ ನೂತನ ಪದಾಧಿಕಾರಿಗಳ ಜೊತೆ ಪ್ರಧಾನಿ ಮೋದಿ ಸಂವಾದ
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ನಾಪತ್ತೆಯಾಗಿದ್ದ IAS ಅಧಿಕಾರಿಯ ಸುಳಿವು ಪತ್ತೆ: ಸ್ಥಳದ ಮಾಹಿತಿ ಲಭ್ಯ!
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು
ಬರ, ರೈತರ ಸಾಲಮನ್ನಾ ಬಗ್ಗೆ ಕೃಷಿ ಸಚಿವ ನರೇಂದ್ರಸ್ವಾಮಿ ಹೇಳಿದ್ದಿಷ್ಟು