AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bawaal: ‘ಬವಾಲ್’ ಸಿನಿಮಾವನ್ನು ತೆಗೆಯುವಂತೆ ಜ್ಯೂ ಸಮುದಾಯದ ಒತ್ತಾಯ

Bawaal: ಇತ್ತೀಚೆಗಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆದ ವರುಣ್ ಧವನ್ ನಟನೆಯ 'ಬವಾಲ್' ಸಿನಿಮಾಕ್ಕೆ ಜ್ಯೂ ಸಮುದಾಯದ ವಿರೋಧ ಎದುರಾಗಿದೆ.

Bawaal: 'ಬವಾಲ್' ಸಿನಿಮಾವನ್ನು ತೆಗೆಯುವಂತೆ ಜ್ಯೂ ಸಮುದಾಯದ ಒತ್ತಾಯ
ಬವಾಲ್
ಮಂಜುನಾಥ ಸಿ.
|

Updated on: Jul 27, 2023 | 8:23 PM

Share

ವರುಣ್ ಧವನ್ (Varun Dhawan), ಜಾನ್ಹವಿ ಕಪೂರ್ (Janhvi Kapoor) ನಟನೆಯ ‘ಬವಾಲ್’ ಸಿನಿಮಾ ಕಳೆದ ವಾರವಷ್ಟೆ ಅಮೆಜಾನ್ ಪ್ರೈಂನಲ್ಲಿ ಬಿಡುಗಡೆ ಆಗಿದೆ. ‘ಬವಾಲ್’ ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಇದರ ಬೆನ್ನಲ್ಲೆ ಸಿನಿಮಾವನ್ನು ಅಮೆಜಾನ್ ಪ್ರೈಂ ವೇದಿಕೆಯಿಂದ ತೆಗೆಯಬೇಕು ಎಂದು ಒತ್ತಾಯಿಸಲಾಗುತ್ತಿದೆ. ಜರ್ಮನಿಯಲ್ಲಿ ನಡೆದ ಹಿಟ್ಲರ್​ನ ನರಮೆಧದ ದೃಶ್ಯಗಳು ಸಹ ಈ ಸಿನಿಮಾದಲ್ಲಿದ್ದು, ಇದೇ ಕಾರಣಕ್ಕೆ ಸಿನಿಮಾವನ್ನು ನರಮೇಧದ ಸಂತ್ರಸ್ತರಾದ ಜ್ಯೂಯಿಷ್ ಜನರು ವಿರೋಧಿಸಿದ್ದಾರೆ.

ಸಿನಿಮಾದಲ್ಲಿ ಹಿಟ್ಲರ್​ನ ಜ್ಯೂ ಜನರ ನರಮೇಧವನ್ನು ರೂಪಕವನ್ನಾಗಿ ಬಳಸಲಾಗಿದೆ. ಲಖನೌನ ಯುವಕನೋರ್ವ, ಹೊಸದಾಗಿ ಮದುವೆಯಾದ ಪತ್ನಿಯನ್ನು ಯೂರೋಪ್​ ಟ್ರಿಪ್​ಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಅವನ ಹಾಗೂ ಪತ್ನಿಯ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಅವರಿಬ್ಬರ ಸಂಬಂಧವನ್ನು ಹಿಟ್ಲರ್​ನ ಆಸ್ವಿಟ್ಜ್​ ನರಮೇಧ ಹಾಗೂ ವಿಶ್ವಯುದ್ಧ ಎರಡರ ಜೊತೆ ಹೋಲಿಕೆ ಮಾಡುವಂಥಹಾ ದೃಶ್ಯಗಳು ಬರುತ್ತವೆ. ಆದರೆ ಈ ದೃಶ್ಯಗಳ ಬಗ್ಗೆ ಜ್ಯೂ ಜನರ ಸಂಘಟನೆಯಾದ ಸಿಮೊನ್ ವೀಸಂತಲ್ ಸೆಂಟರ್ ವಿರೋಧಿಸಿದೆ. ಬಹಿರಂಗ ಪತ್ರವನ್ನು ಬರೆದು ಸಿನಿಮಾವನ್ನು ಕೂಡಲೇ ಅಮೆಜಾನ್ ಪ್ರೈಂನಿಂದ ತೆಗೆಯಬೇಕು ಎಂದು ಮನವಿ ಮಾಡಿದೆ.

ಇದನ್ನೂ ಓದಿ:ಲೈಂಗಿಕ ಕ್ರಿಯೆ ನಡೆಸುವಾಗ ಭಗವದ್ಗೀತೆ ಹಿಡಿದ ಯುವತಿ; ವಿವಾದಾತ್ಮಕ ದೃಶ್ಯವನ್ನು ಪ್ರಶ್ನಿಸಿದ ವರುಣ್ ಧವನ್

ನರಮೇಧದ ದೃಶ್ಯಗಳನ್ನು ರೂಪಕ ಎಂಬಂತೆ ಬಳಸಿಕೊಂಡಿರುವುದು ನರಮೇಧದಿಂದ ಬಾಧಿತರಾಗಿರುವ ಲಕ್ಷಾಂತರ ಕುಟುಂಬಗಳಿಗೆ ಘಾಸಿ ಮಾಡಿದೆ. ಅಲ್ಲದೆ ಸಿನಿಮಾದಲ್ಲಿ ನಾಯಕಿ, ಎಲ್ಲರಲ್ಲೂ ಒಬ್ಬೊಬ್ಬ ಹಿಟ್ಲರ್ ಇದ್ದಾನೆ ಎನ್ನುತ್ತಾಳೆ. ಇದು ಸಂಪೂರ್ಣವಾಗಿಯೂ ತಪ್ಪು. ಎಲ್ಲದಕ್ಕೂ ಮಿಗಿಲಾಗಿ ನರಮೇಧ ಎಂಬುದು ರೂಪಕ ಅಲ್ಲ, ಅದು, ಮನುಷ್ಯ ಮನುಷ್ಯನ ಮೇಲೆ ಮಾಡಿರುವ ಮನುಷ್ಯ ಇತಿಹಾಸದ ಅತ್ಯಂತ ಕೆಟ್ಟ ಪ್ರಯೋಗ ಎಂದಿದ್ದಾರೆ.

”ಆಸ್ವಿಟ್ಜ್​ನ ನರಮೇಧ ಮನುಷ್ಯ ಎಷ್ಟು ಕ್ರೂರಿಯಾಗಿ ವರ್ತಿಸಬಲ್ಲ ಎಂಬುದರ ನಿಜವಾದ ಸಾಕ್ಷಿ. ನಿರ್ದೇಶಕರು ನಾಜಿ ಕ್ಯಾಂಪ್​ನಲ್ಲಿ ಫ್ಯಾಂಟಸಿ ದೃಶ್ಯಗಳನ್ನು ಸೇರಿಸಿ, ತೋರಿಸಿ ತಮ್ಮ ಸಿನಿಮಾಕ್ಕೆ ತಮಗೆ ಪ್ರಚಾರ ಗಿಟ್ಟಿಸಬೇಕು ಎಂದುಕೊಂಡಿದ್ದರೆ ಅವರ ಯಶಸ್ವಿಯಾಗಿದ್ದಾರೆ. ಆದರೆ ಮನುಷ್ಯನ ಕ್ರೂರತೆಯನ್ನು ಪ್ರತಿ ವ್ಯಕ್ತಿಯ ಅಹಂಗೆ ಹೋಲಿಸಿ ತೆಳುವು ಮಾಡುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಅಮೆಜಾನ್ ಪ್ರೈಂ ಈ ಕೂಡಲೇ ‘ಬವಾಲ್’ ಸಿನಿಮಾವನ್ನು ಸ್ಟ್ರೀಮಿಂಗ್ ವೇದಿಕೆಯಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದೆ.

‘ಬವಾಲ್’ ಸಿನಿಮಾವನ್ನು ನಿತೀಶ್ ತಿವಾರಿ ನಿರ್ದೇಶನ ಮಾಡಿದ್ದಾರೆ. ನಿತೇಶ್ ತಿವಾರಿ ಈ ಹಿಂದೆ ‘ದಂಗಲ್’, ‘ಚಿಚೋರೆ’ ಅಂಥಹಾ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಆದರೆ ‘ಬವಾಲ್’ ಸಿನಿಮಾಕ್ಕೆ ಅವರಿಗೆ ವಿರೋಧ ಎದುರಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?