AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೆ ಬರುತ್ತಿದ್ದಾನೆ ರಾಣಾ ನಾಯ್ಡು, ಹಿಂದಿಯಲ್ಲಿ ಕಮಾಲ್ ಮಾಡಲಿದೆ ತೆಲುಗು ಜೋಡಿ

Rana Naidu: 2023 ರಲ್ಲಿ ಬಿಡುಗಡೆ ಆಗಿದ್ದ ರಾಣಾ ದಗ್ಗುಬಾಟಿ, ವೆಂಕಟೇಶ್ ಒಟ್ಟಿಗೆ ನಟಿಸಿದ್ದ ‘ರಾಣಾ ನಾಯ್ಡು’ ವೆಬ್ ಸರಣಿ ದೊಡ್ಡ ಹಿಟ್ ಆಗಿತ್ತು. ಇದೀಗ ‘ರಾಣಾ ನಾಯ್ಡು’ ಸೀಸನ್ 2 ಘೋಷಣೆ ಮಾಡಲಾಗಿದೆ. ಈ ವೆಬ್ ಸರಣಿಯಲ್ಲಿ ಅರ್ಜುನ್ ರಾಮ್​ಪಾಲ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ. ಶೀಘ್ರವೇ ವೆಬ್ ಸರಣಿ ಬಿಡುಗಡೆ ಆಗಲಿದೆ.

ಮತ್ತೆ ಬರುತ್ತಿದ್ದಾನೆ ರಾಣಾ ನಾಯ್ಡು, ಹಿಂದಿಯಲ್ಲಿ ಕಮಾಲ್ ಮಾಡಲಿದೆ ತೆಲುಗು ಜೋಡಿ
Rana Naidu
ಮಂಜುನಾಥ ಸಿ.
|

Updated on: May 21, 2025 | 11:54 AM

Share

ರಾಣಾ ನಾಯ್ಡು (Rana Naidu), ನೆಟ್​ಫ್ಲಿಕ್ಸ್​ನಲ್ಲಿ (Netflix) ಪ್ರಸಾರವಾಗಿದ್ದ ವೆಬ್ ಸರಣಿ ತನ್ನ ಭಿನ್ನತೆ, ಹಸಿ-ಬಿಸಿ ದೃಶ್ಯಗಳಿಂದ ಸಖತ್ ಜನಪ್ರಿಯತೆ ಗಳಿಸಿತ್ತು. ಬಾಲಿವುಡ್​ನ ಕರಾಳ ಮುಖಗಳ ಪರಿಚಯ ಮಾಡಿಸಿದ್ದ ಈ ಶೋನಲ್ಲಿ. ತೆಲುಗಿನ ಇಬ್ಬರು ಸ್ಟಾರ್ ನಟರು ನಟಿಸಿದ್ದರು. ಬಲ್ಲಾಳದೇವ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ತೆಲುಗಿನ ಸ್ಟಾರ್ ನಟ ವೆಂಕಟೇಶ್. ಪರಸ್ಪರ ವಿರೋಧಿಗಳಾದ ಅಪ್ಪ-ಮಗನ ಪಾತ್ರದಲ್ಲಿ ಈ ಇಬ್ಬರೂ ಸಹ ನಟಿಸಿದ್ದರು. ಶೋ ಭಾರಿ ಯಶಸ್ಸು ಗಳಿಸಿತ್ತು.

ಇದೀಗ ‘ರಾಣಾ ನಾಯ್ಡು’ ಎರಡನೇ ಸೀಸನ್ ಬರಲಿದೆ. ಎರಡನೇ ಸೀಸನ್ ಅನ್ನು ನೆಟ್​ಫ್ಲಿಕ್ಸ್​ ಈಗಾಗಲೇ ಘೋಷಿಸಿದೆ. ಮೊದಲ ಸೀಸನ್​ನಲ್ಲಿ ನಟಿಸಿದ್ದ ಕೆಲ ಮುಖ್ಯ ಪಾತ್ರಗಳು ಎರಡನೇ ಸೀಸನ್​ನಲ್ಲಿಯೂ ನಟಿಸಲಿದ್ದಾರೆ. ಜೊತೆಗೆ ಎರಡನೇ ಸೀಸನ್​ಗೆ ಅರ್ಜುನ್ ರಾಮ್​ಪಾಲ್ ವಿಲನ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಸಿನಿಮಾದ ಪೋಸ್ಟರ್ ಈಗಾಗಲೇ ಬಿಡುಗಡೆ ಆಗಿದ್ದು, ವೆಬ್ ಸರಣಿ ಜೂನ್ 13 ರಂದು ನೆಟ್​ಫ್ಲಿಕ್ಸ್​ನಲ್ಲಿ ಬಿಡುಗಡೆ ಆಗಲಿದೆ.

ಸೀಸನ್ 1 ಬಿಡುಗಡೆ ಆದಾಗ ಹಿಟ್ ಆಗಿತ್ತಾದರೂ ವೆಬ್ ಸರಣಿಯಲ್ಲಿನ ಲೈಂಗಿಕ ದೃಶ್ಯಗಳು, ಅಶ್ಲೀಲ ಭಾಷೆ ಬಳಕೆ ಬಗ್ಗೆ ತೀವ್ರ ಆಕ್ರೋಶವೂ ವ್ಯಕ್ತವಾಗಿತ್ತು. ಫ್ಯಾಮಿಲಿ ಹೀರೋ ಆಗಿರುವ ವೆಂಕಟೇಶ್ ಅವರನ್ನು ಅಂಥಹಾ ಪಾತ್ರದಲ್ಲಿ ನೋಡಿ ತೆಲುಗು ಪ್ರೇಕ್ಷಕರು ಅಚ್ಚರಿ ವ್ಯಕ್ತಪಡಿಸಿದ್ದರು. ಟೀಕೆ ಸಹ ಮಾಡಿದ್ದರು. ಆ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ವೆಂಕಟೇಶ್, ಮುಂದಿನ ಸೀಸನ್​ನಲ್ಲಿ ಭಾಷೆಯ ಬಗ್ಗೆ ಹಿಡಿತ ಇರುವಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು. ಈಗ ಎರಡನೇ ಸೀಸನ್ ಘೋಷಣೆ ಆಗಿದ್ದು, ಇದು ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ:ಪರಸ್ಪರ ಕಾಲೆಳೆದುಕೊಂಡ ಸಮಂತಾ-ರಾಣಾ, ನಕ್ಕು ಸುಸ್ತಾದ ಸೆಲೆಬ್ರಿಟಿಗಳು

‘ರಾಣಾ ನಾಯ್ಡು’ ವೆಬ್ ಸರಣಿಯ ಮೊದಲ ಸೀಸನ್​ನಲ್ಲಿ ರಾಣಾ ದಗ್ಗುಬಾಟಿ, ವೆಂಕಟೇಶ್ ದಗ್ಗುಬಾಟಿ ಜೊತೆಗೆ ಸುರ್ವೀನ್ ಚಾವ್ಲಾ, ಸುಚಿತ್ರಾ ಪಿಲ್ಲೈ, ಹಿರಿಯ ನಟ ಸುಶಾಂತ್ ಸಿಂಗ್, ಡಿನೊ ಮೊರಿಯೊ ಇನ್ನೂ ಕೆಲವರು ನಟಿಸಿದ್ದರು. ಇದೀಗ ಎರಡನೇ ಸೀಸನ್​ನಲ್ಲಿ ಅರ್ಜುನ್ ರಾಮ್​ಪಾಲ್, ಕೃತಿ ಕರಬಂಧ ಸೇರಿದಂತೆ ಇನ್ನೂ ಕೆಲ ಮುಖ್ಯ ನಟರುಗಳು ಎಂಟ್ರಿ ನೀಡಿದ್ದಾರೆ. ಮೊದಲ ಸರಣಿ ನಿರ್ದೇಶಿಸಿದ್ದ ಕರಣ್ ಅಂಶುಮನ್ ಅವರೇ ಈ ವೆಬ್ ಸರಣಿಯನ್ನೂ ನಿರ್ದೇಶನ ಮಾಡಿದ್ದಾರೆ. ಈ ವೆಬ್ ಸರಣಿ ಇಂಗ್ಲೀಷ್​ನ ‘ರೇ ಡೊನೊವನ್’ ಸೀರೀಸ್ ಅನ್ನು ಆಧರಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Manjunatha C
Manjunatha C

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ‘ಶಿವ ತಾಂಡವ’ ರಂಗು!
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಐಪಿಎಲ್ ಫೈನಲ್: ಬೆಂಗಳೂರಿನಲ್ಲಿ ಖಾಕಿ ಸರ್ಪಗಾವಲು; ತೀವ್ರ ಕಟ್ಟೆಚ್ಚರ
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಬಾಗೇಪಲ್ಲಿ ಭೀಕರ ರಸ್ತೆ ಅಪಘಾತ ಪ್ರಕರಣ: ಎಸ್‌ಪಿ ಬಿಗ್ ಸ್ಟೇಟ್‌ಮೆಂಟ್
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪ್ರಮಾಣವಚನ ದಿನವೇ ಕಾಂಗ್ರೆಸ್ ಭವನ ಶಂಕುಸ್ಥಾಪನೆಗೆ ಡಿಕೆಶಿ ಪ್ಲ್ಯಾನ್​
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಪವರ್​ ಪ್ಲೇನಲ್ಲೇ ಗುಜರಾತ್ ಪವರ್ ಕಸಿದ ಆರ್​ಸಿಬಿ
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಆರ್​​ಸಿಬಿ ಫ್ಯಾನ್ಸ್‌ಗೆ ಬೆಂಗಳೂರು ಕಮಿಷನರ್ ಕಠಿಣ ವಾರ್ನಿಂಗ್!
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಬಿಗ್​​ ಅಪ್ಡೇಡ್​​ ನೀಡಿದ ಡಿ.ಕೆ ಶಿವಕುಮಾರ್
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಶ್ರೀ ಕೃಷ್ಣನ ಸನ್ನಿಧಾನದಲ್ಲಿ ವಸಿಷ್ಠ ಸಿಂಹ, ಹರಿಪ್ರಿಯ ದಂಪತಿ: ವಿಡಿಯೋ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ಪುತ್ರಿ ರೂಪಾ ಶಶಿಧರ್ ಸಚಿವ ಸ್ಥಾನ ನೀಡುವ ಬಗ್ಗೆ ಮಹತ್ವದ ಹೇಳಿಕೆ
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​
ವಿಜಯೇಂದ್ರ ಮತ್ತು ಅಶೋಕ್​ಗೆ ಹುಷಾರ್​​ ಆಗಿರಿ ಎಂದಿದ್ದೇಕೆ ಯತ್ನಾಳ್​