‘ಪವರ್​ ಇಲ್ಲದವರಿಗೆ ಪವರ್​ ಸ್ಟಾರ್​ ಅಂತ ಯಾಕೆ ಕರೆಯುತ್ತೀರಿ’? ಪವನ್​ ಕಲ್ಯಾಣ್​ ಟಾಂಗ್​ ಕೊಟ್ಟಿದ್ದು ಯಾರಿಗೆ?

| Updated By: ಮದನ್​ ಕುಮಾರ್​

Updated on: Sep 26, 2021 | 3:44 PM

‘ಇನ್ನೂ ಯಾಕೆ ಪವರ್​ ಸ್ಟಾರ್​ ಅಂತ ಕರೆಯುತ್ತಿದ್ದೀರಿ? ಯಾವುದೇ ಪವರ್ ಇಲ್ಲದೆ ಪವರ್​ ಸ್ಟಾರ್​ ಅಂತ ಕರೆಸಿಕೊಳ್ಳುವುದರಲ್ಲಿ ಏನು ಅರ್ಥವಿದೆ’ ಎಂದು ನಟ ಪವನ್​ ಕಲ್ಯಾಣ್​ ಅವರು ಬಹಿರಂಗವಾಗಿಯೇ ಪ್ರಶ್ನೆ ಮಾಡಿದ್ದಾರೆ.

‘ಪವರ್​ ಇಲ್ಲದವರಿಗೆ ಪವರ್​ ಸ್ಟಾರ್​ ಅಂತ ಯಾಕೆ ಕರೆಯುತ್ತೀರಿ’? ಪವನ್​ ಕಲ್ಯಾಣ್​ ಟಾಂಗ್​ ಕೊಟ್ಟಿದ್ದು ಯಾರಿಗೆ?
ಪವನ್ ಕಲ್ಯಾಣ್
Follow us on

ನಟ ಪವನ್​ ಕಲ್ಯಾಣ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಅವರು ಸಕ್ರಿಯರಾಗಿದ್ದಾರೆ. ಅವರನ್ನು ಅಭಿಮಾನಿಗಳು ಪ್ರೀತಿಯಿಂದ ‘ಪವರ್​ ಸ್ಟಾರ್​’ ಎಂದು ಕರೆಯುತ್ತಾರೆ. ಕನ್ನಡದಲ್ಲಿ ಪುನೀತ್​ ರಾಜ್​ಕುಮಾರ್​ ಅವರಿಗೂ ಈ ಬಿರುದು ಇದೆ. ಪವನ್​ ಕಲ್ಯಾಣ್​​ ಯಾವುದೇ ಸಾರ್ವಜನಿಕ ಸಮಾರಂಭದಲ್ಲಿ ಭಾಗವಹಿಸಿದರೂ ಅಲ್ಲಿ ನೆರೆದಿರುವ ಜನರು ‘ಪವರ್​ ಸ್ಟಾರ್​ ಪವರ್​ ಸ್ಟಾರ್​’ ಎಂದು ಜೋರಾಗಿ ಘೋಷಣೆ ಕೂಗುತ್ತಾರೆ. ಅಲ್ಲದೇ ಅವರು ಜನಸೇನಾ ಪಕ್ಷದ ಮೂಲಕ ರಾಜಕೀಯದಲ್ಲಿ ಸಕ್ರಿಯವಾದ ನಂತರ ‘ಸಿಎಂ’ ಎಂದು ಕೂಡ ಅಭಿಮಾನಿಗಳು ಘೋಷಣೆ ಕೂಗಲು ಆರಂಭಿಸಿದರು. ಇದರ ಬಗ್ಗೆ ಪವನ್​ ಕಲ್ಯಾಣ್​ ಪ್ರತಿಕ್ರಿಯೆ ನೀಡಿದ್ದಾರೆ.

ಪವನ್​ ಕಲ್ಯಾಣ್​ ಅಳಿಯ ಸಾಯಿ ಧರಮ್​ ತೇಜ್​ ಅವರಿಗೆ ಕೆಲವೇ ದಿನಗಳ ಹಿಂದೆ ಬೈಕ್ ಅಪಘಾತ ಆಯಿತು. ಅವರು ನಟಿಸಿದ ‘ರಿಪಬ್ಲಿಕ್​’ ಸಿನಿಮಾ ಬಿಡುಗಡೆ ಸಿದ್ಧವಾಗಿದೆ. ಅದರ ಪ್ರೀ ರಿಲೀಸ್​ ಇವೆಂಟ್​ನಲ್ಲಿ ಪವನ್​ ಕಲ್ಯಾಣ್​ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ವೇದಿಕೆ ಮೇಲೆ ಅವರು ಮಾತನಾಡಲು ಆರಂಭಿಸಿದ ತಕ್ಷಣ ಅಭಿಮಾನಿಗಳು ಎಂದಿನಂತೆ ‘ಪವರ್​ ಸ್ಟಾರ್​ ಪವರ್​ ಸ್ಟಾರ್​’ ಎಂದು ಕೂಗಲು ಆರಂಭಿಸಿದರು. ಅದಕ್ಕೆ ಪವನ್​ ಕಲ್ಯಾಣ್​ ಖಡಕ್​ ಆಗಿ ಪ್ರತಿಕ್ರಿಯಿಸಿದರು.

‘ಇನ್ನೂ ಯಾಕೆ ನನ್ನನ್ನು ಪವರ್​ ಸ್ಟಾರ್​ ಅಂತ ಕರೆಯುತ್ತಿದ್ದೀರಿ? ನನ್ನ ಬಳಿ ಯಾವುದೇ ಪವರ್ (ಅಧಿಕಾರ) ಇಲ್ಲ. ಪವರ್​ ಸ್ಟಾರ್​ ಅಂತ ಕರೆಸಿಕೊಳ್ಳುವುದರಲ್ಲಿ ಏನು ಅರ್ಥವಿದೆ? ನಿಮ್ಮಿಂದ ಪವರ್​ ಸ್ಟಾರ್​ ಅಥವಾ ಸಿಎಂ ಎಂದು ಜೈಕಾರ ಹಾಕಿಸಿಕೊಳ್ಳಲು ನಾನಿಲ್ಲಿಗೆ ಬಂದಿಲ್ಲ’ ಎಂದು ಪವನ್​ ಕಲ್ಯಾಣ್​ ಕೊಂಚ ಖಾರವಾಗಿಯೇ ಹೇಳಿದರು. ಮುಂಬರುವ ಸಿನಿಮಾಗಳ ಟೈಟಲ್​ ಕಾರ್ಡ್​ಗಳಲ್ಲಿ ಕೂಡ ತಮ್ಮ ಹೆಸರಿನ ಜೊತೆ ‘ಪವರ್​ ಸ್ಟಾರ್​’ ಎಂಬ ಬಿರುದನ್ನು ಸೇರಿಸಬಾರದು ಎಂದು ಚಿತ್ರತಂಡಗಳಿಗೆ ಅವರು ತಾಕೀತು ಮಾಡಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬಂದಿದೆ.

2019ರ ಚುನಾವಣೆಯಲ್ಲಿ ಪವನ್​ ಕಲ್ಯಾಣ್​ ಅವರು ಸೋಲು ಅನುಭವಿಸಿದ್ದರು. ಪ್ರೀತಿಯಿಂದ ‘ಪವರ್​ ಸ್ಟಾರ್​’ ಎಂದು ಕರೆಯುವ ಅಭಿಮಾನಿಗಳು ನಿರೀಕ್ಷಿತ ಪ್ರಮಾಣದಲ್ಲಿ ಮತ ನೀಡದ ಕಾರಣ ಅವರಿಗೆ ಪವರ್​ (ಅಧಿಕಾರ) ಸಿಗಲಿಲ್ಲ. ಆ ಕಾರಣದಿಂದಲೇ ಈಗ ಅಭಿಮಾನಿಗಳಿಗೆ ಪವನ್​ ಕಲ್ಯಾಣ್​ ಮಾತಿನ ಮೂಲಕ ಟಾಂಗ್​ ಕೊಟ್ಟಿದ್ದಾರೆ. ಸದ್ಯ ಅವರು ನಟಿಸಿರುವ ‘ಭೀಮ್ಲಾ ನಾಯಕ್​’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. 2022ರ ಜನವರಿ 12ರಂದು ಈ ಚಿತ್ರ ರಿಲೀಸ್​ ಆಗಲಿದೆ. ಇದರಲ್ಲಿ ರಾಣಾ ದಗ್ಗುಬಾಟಿ ಕೂಡ ಪ್ರಮುಖ ಪಾತ್ರ ಮಾಡಿದ್ದಾರೆ.

ಇದನ್ನೂ ಓದಿ:

Pawan Kalyan: ಪವನ್​ ಕಲ್ಯಾಣ್​ ಸಿನಿಮಾದ ಡೈಲಾಗ್​ ಹೊಡೆದ ವೀರೇಂದ್ರ ಸೆಹ್ವಾಗ್; ಇಲ್ಲಿದೆ ವೈರಲ್​ ವಿಡಿಯೋ

Pawan Kalyan: ಪವನ್​ ಕಲ್ಯಾಣ್​ ಬರ್ತ್​ಡೇ; ಟಾಲಿವುಡ್​ ‘ಪವರ್​ ಸ್ಟಾರ್​’ ಬಳಿ ಇರುವ ಐಷಾರಾಮಿ ವಸ್ತುಗಳೇನು?