AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದಾತ್ಮಕ ಕಮಿಡಿಯನ್ ಜೊತೆ ಪ್ರಕಾಶ್ ರೈ, ತಮಿಳುನಾಡಿಗೆ ದಾರಿ ಕೇಳಿದ್ದು ಏಕೆ?

Prakash Rai-Kunal Kamra: ಕಮಿಡಿಯನ್ ಕುನಾಲ್ ಕಾಮ್ರಾ ಇತ್ತೀಚೆಗಷ್ಟೆ ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ಶಿಂಧೆ, ಪ್ರಧಾನಿ ಮೋದಿ, ಅಂಬಾನಿ-ಅದಾನಿ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಇದೀಗ ನಟ ಪ್ರಕಾಶ್ ರೈ, ಕಾಮ್ರಾಗೆ ಬೆಂಬಲ ನೀಡಿದ್ದು, ಕಾಮ್ರಾ ಅವರೊಟ್ಟಿಗೆ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ತಮಿಳುನಾಡಿಗೆ ದಾರಿ ಕೇಳಿರುವುದು ಏಕೆ?

ವಿವಾದಾತ್ಮಕ ಕಮಿಡಿಯನ್ ಜೊತೆ ಪ್ರಕಾಶ್ ರೈ, ತಮಿಳುನಾಡಿಗೆ ದಾರಿ ಕೇಳಿದ್ದು ಏಕೆ?
Kunal Kamra Prakash Raj
ಮಂಜುನಾಥ ಸಿ.
|

Updated on: Apr 13, 2025 | 8:58 AM

Share

ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ಸ್ಟಾಂಡಪ್ ಕಮಿಡಿಯನ್ ಕುನಾಲ್ ಕಾಮ್ರಾ ಜೊತೆಗೆ ನಟ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಕುನಾಲ್ ಕಾಮ್ರಾ ಜೊತೆಗೆ ಚಿತ್ರವೊಂದನ್ನು ಪ್ರಕಾಶ್ ರೈ ಅಪ್​ಲೋಡ್ ಮಾಡಿದ್ದಾರೆ. ಆ ಮೂಲಕ ಕುನಾಲ್ ಕಾಮ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುನಾಲ್ ಕಾಮ್ರಾ ಜೊತೆಯಾಗಿರುವ ಚಿತ್ರ ಅಪ್​ಲೋಡ್ ಮಾಡಿರುವ ಪ್ರಕಾಶ್ ರೈ, ‘ತಮಿಳುನಾಡಿಗೆ ತಲುಪುವುದು ಹೇಗೆ?’ ಎಂದು ಪ್ರಶ್ನೆ ಕೇಳಿ ಅದಕ್ಕೆ ‘ಸಿಂಪಲ್ ಆಟೋದಲ್ಲಿ’ ಎಂದು ತಾವೇ ಉತ್ತರಿಸಿದ್ದಾರೆ.

ಇತ್ತೀಚೆಗಷ್ಟೆ ಕುನಾಲ್ ಕಾಮ್ರಾ, ಮುಂಬೈನ ಹಾಬಿಟಾಟ್ ಕ್ಲಬ್​ನಲ್ಲಿ ಸ್ಟಾಂಡಪ್ ಕಾಮಿಡಿ ಶೋ ಮಾಡಿದ್ದರು. ಅದರ ವಿಡಿಯೋ ಅನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದರು. ಪೊಲಿಟಿಕಲ್ ಸಟೈರಿಕ್ ಕಮಿಡಿಯನ್ ಆಗಿರುವ ಕಾಮ್ರಾ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ, ಏಕನಾಥ ಶಿಂಧೆ, ಅಮಿತ್ ಶಾ, ಅಂಬಾನಿ-ಅದಾನಿ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಂಧೆ ಬೆಂಬಲಿಗರು ಹಾಬಿಟಾಟ್​ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು, ಮುಂಬೈ ಪೊಲೀಸರು ಕಾಮ್ರಾ ಮೇಲೆ ಕೇಸು ದಾಖಲಿಸಿಕೊಂಡಿದ್ದು, ಸಮನ್ಸ್ ಜಾರಿ ಮಾಡಿದ್ದಾರೆ. ಬುಕ್​ ಮೈ ಶೋನವರು ಕಾಮ್ರಾ ಅವರ ಶೋನ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ

ವಿವಾದದ ಬಳಿಕ ಕಾಮ್ರಾಗೆ ಶಿವಸೇನೆ (ಶಿಂಧೆ ಬಣ)ದ ಹಲವು ಕಾರ್ಯಕರ್ತರು ಕರೆ ಮಾಡಿ ಕೊಲೆ ಬೆದರಿಕೆಗಳನ್ನು ಹಾಕಿದ್ದು, ಕೆಲವು ಕರೆಗಳ ರೆಕಾರ್ಡ್ ವೈರಲ್ ಆಗಿವೆ. ಅದರಲ್ಲಿ ಒಬ್ಬ ವ್ಯಕ್ತಿ, ಕಾಮ್ರಾಗೆ ಕರೆ ಮಾಡಿ, ‘ಎಲ್ಲಿದ್ದೀಯ ನೀನು?’ ಎಂದು ಕೇಳಿದ್ದಾನೆ, ಅದಕ್ಕೆ ಕಾಮ್ರಾ, ‘ತಮಿಳುನಾಡಿಗೆ ಬಾ’ ಎಂದಿದ್ದಾರೆ. ಅದಕ್ಕೆ ಹತಾಷೆ ವ್ಯಕ್ತಪಡಿಸಿದ ಶಿವಸೇನೆ ಕಾರ್ಯಕರ್ತ ‘ತಮಿಳುನಾಡು ಕೊ ಕೈಸಾ ಆಯೆಗಾ ಭಾಯ್?’ (ತಮಿಳುನಾಡಿಗೆ ಹೇಗೆ ಬರೋಕಾಗುತ್ತೆ ಅಣ್ಣಾ?) ಎನ್ನುತ್ತಾನೆ. ಈ ಆಡಿಯೋ ಇದೀಗ ವೈರಲ್ ಆಗಿದೆ. ಇದೇ ಸಾಲನ್ನು ಪ್ರಕಾಶ್ ರೈ ತಮ್ಮ ಹಾಗೂ ಕಾಮ್ರಾರ ಫೋಟೊಕ್ಕೆ ಕ್ಯಾಪ್ಷನ್ ಹಾಕಿದ್ದು, ತಮಿಳುನಾಡಿಗೆ ಆಟೋದಲ್ಲಿ ಬರುವಂತೆ ಸಲಹೆ ನೀಡಿದ್ದಾರೆ.

ಪ್ರಕಾಶ್ ರೈ ಈ ಹಿಂದೆಯೂ ಸಹ ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ನಿಲ್ಲುವ ಹೋರಾಟಗಾರರಿಗೆ, ರಾಜಕಾರಣಿಗಳಿಗೆ, ಕಮಿಡಿಯನ್​ಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಮೋದಿ ಅವರನ್ನು ಎದುರು ಹಾಕಿಕೊಂಡಿದ್ದ ಕನ್ಹಯ್ಯ ಕುಮಾರ್ ಹಾಗೂ ಇನ್ನೂ ಕೆಲವರಿಗೆ ಪ್ರಕಾಶ್ ರೈ ಬೆಂಬಲ ನೀಡಿದ್ದರು. ಕೇಂದ್ರದ ವಿರುದ್ಧ ಸೋನಮ್ ವಾಂಗ್ಚುಕ್ ನಡೆಸಿದ್ದ ಹೋರಾಟದಲ್ಲಿಯೂ ಪ್ರಕಾಶ್ ರೈ ಭಾಗಿ ಆಗಿದ್ದರು. ಕೇಂದ್ರದ ವಿರುದ್ಧ ಹೋರಾಡಿ ಪ್ರಕರಣದಲ್ಲಿ ಸಿಲುಕಿರುವ ಉಮರ್ ಖಾಲಿದ್​ಗೆ ಬೆಂಬಲ ನೀಡಿ ಅವರ ಕುಟುಂಬವನ್ನು ಭೇಟಿ ಮಾಡಿದ್ದರು. ಇದೀಗ ಕುನಾಲ್ ಕಾಮ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅರ್ಧಕ್ಕೆ ಕೈಕೊಟ್ಟ ಇಂಡಿಗೋ ವಿಮಾನ: ಅಯ್ಯಪ್ಪ ಮಾಲಾಧಾರಿಗಳು ಕಂಗಾಲು
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ