AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿವಾದಾತ್ಮಕ ಕಮಿಡಿಯನ್ ಜೊತೆ ಪ್ರಕಾಶ್ ರೈ, ತಮಿಳುನಾಡಿಗೆ ದಾರಿ ಕೇಳಿದ್ದು ಏಕೆ?

Prakash Rai-Kunal Kamra: ಕಮಿಡಿಯನ್ ಕುನಾಲ್ ಕಾಮ್ರಾ ಇತ್ತೀಚೆಗಷ್ಟೆ ಮಹಾರಾಷ್ಟ್ರ ಉಪ ಮುಖ್ಯ ಮಂತ್ರಿ ಶಿಂಧೆ, ಪ್ರಧಾನಿ ಮೋದಿ, ಅಂಬಾನಿ-ಅದಾನಿ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿ ವಿವಾದಕ್ಕೆ ಸಿಲುಕಿದ್ದಾರೆ. ಇದೀಗ ನಟ ಪ್ರಕಾಶ್ ರೈ, ಕಾಮ್ರಾಗೆ ಬೆಂಬಲ ನೀಡಿದ್ದು, ಕಾಮ್ರಾ ಅವರೊಟ್ಟಿಗೆ ಫೋಟೊ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆದರೆ ತಮಿಳುನಾಡಿಗೆ ದಾರಿ ಕೇಳಿರುವುದು ಏಕೆ?

ವಿವಾದಾತ್ಮಕ ಕಮಿಡಿಯನ್ ಜೊತೆ ಪ್ರಕಾಶ್ ರೈ, ತಮಿಳುನಾಡಿಗೆ ದಾರಿ ಕೇಳಿದ್ದು ಏಕೆ?
Kunal Kamra Prakash Raj
Follow us
ಮಂಜುನಾಥ ಸಿ.
|

Updated on: Apr 13, 2025 | 8:58 AM

ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂಧೆ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿ ವಿವಾದಕ್ಕೆ ಸಿಲುಕಿಕೊಂಡಿರುವ ಸ್ಟಾಂಡಪ್ ಕಮಿಡಿಯನ್ ಕುನಾಲ್ ಕಾಮ್ರಾ ಜೊತೆಗೆ ನಟ ಪ್ರಕಾಶ್ ರೈ ಕಾಣಿಸಿಕೊಂಡಿದ್ದಾರೆ. ಕುನಾಲ್ ಕಾಮ್ರಾ ಜೊತೆಗೆ ಚಿತ್ರವೊಂದನ್ನು ಪ್ರಕಾಶ್ ರೈ ಅಪ್​ಲೋಡ್ ಮಾಡಿದ್ದಾರೆ. ಆ ಮೂಲಕ ಕುನಾಲ್ ಕಾಮ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಕುನಾಲ್ ಕಾಮ್ರಾ ಜೊತೆಯಾಗಿರುವ ಚಿತ್ರ ಅಪ್​ಲೋಡ್ ಮಾಡಿರುವ ಪ್ರಕಾಶ್ ರೈ, ‘ತಮಿಳುನಾಡಿಗೆ ತಲುಪುವುದು ಹೇಗೆ?’ ಎಂದು ಪ್ರಶ್ನೆ ಕೇಳಿ ಅದಕ್ಕೆ ‘ಸಿಂಪಲ್ ಆಟೋದಲ್ಲಿ’ ಎಂದು ತಾವೇ ಉತ್ತರಿಸಿದ್ದಾರೆ.

ಇತ್ತೀಚೆಗಷ್ಟೆ ಕುನಾಲ್ ಕಾಮ್ರಾ, ಮುಂಬೈನ ಹಾಬಿಟಾಟ್ ಕ್ಲಬ್​ನಲ್ಲಿ ಸ್ಟಾಂಡಪ್ ಕಾಮಿಡಿ ಶೋ ಮಾಡಿದ್ದರು. ಅದರ ವಿಡಿಯೋ ಅನ್ನು ಯೂಟ್ಯೂಬ್​ನಲ್ಲಿ ಅಪ್​ಲೋಡ್ ಮಾಡಿದ್ದರು. ಪೊಲಿಟಿಕಲ್ ಸಟೈರಿಕ್ ಕಮಿಡಿಯನ್ ಆಗಿರುವ ಕಾಮ್ರಾ ಶೋನಲ್ಲಿ ಪ್ರಧಾನಿ ನರೇಂದ್ರ ಮೋದಿ, ಏಕನಾಥ ಶಿಂಧೆ, ಅಮಿತ್ ಶಾ, ಅಂಬಾನಿ-ಅದಾನಿ ಇನ್ನೂ ಕೆಲವರ ಬಗ್ಗೆ ಜೋಕುಗಳನ್ನು ಮಾಡಿದ್ದರು. ವಿಡಿಯೋ ವೈರಲ್ ಆಗುತ್ತಿದ್ದಂತೆ ಶಿಂಧೆ ಬೆಂಬಲಿಗರು ಹಾಬಿಟಾಟ್​ಗೆ ನುಗ್ಗಿ ದಾಂಧಲೆ ಎಬ್ಬಿಸಿದ್ದರು, ಮುಂಬೈ ಪೊಲೀಸರು ಕಾಮ್ರಾ ಮೇಲೆ ಕೇಸು ದಾಖಲಿಸಿಕೊಂಡಿದ್ದು, ಸಮನ್ಸ್ ಜಾರಿ ಮಾಡಿದ್ದಾರೆ. ಬುಕ್​ ಮೈ ಶೋನವರು ಕಾಮ್ರಾ ಅವರ ಶೋನ ಟಿಕೆಟ್ ಮಾರಾಟ ಮಾಡುವುದಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ

ವಿವಾದದ ಬಳಿಕ ಕಾಮ್ರಾಗೆ ಶಿವಸೇನೆ (ಶಿಂಧೆ ಬಣ)ದ ಹಲವು ಕಾರ್ಯಕರ್ತರು ಕರೆ ಮಾಡಿ ಕೊಲೆ ಬೆದರಿಕೆಗಳನ್ನು ಹಾಕಿದ್ದು, ಕೆಲವು ಕರೆಗಳ ರೆಕಾರ್ಡ್ ವೈರಲ್ ಆಗಿವೆ. ಅದರಲ್ಲಿ ಒಬ್ಬ ವ್ಯಕ್ತಿ, ಕಾಮ್ರಾಗೆ ಕರೆ ಮಾಡಿ, ‘ಎಲ್ಲಿದ್ದೀಯ ನೀನು?’ ಎಂದು ಕೇಳಿದ್ದಾನೆ, ಅದಕ್ಕೆ ಕಾಮ್ರಾ, ‘ತಮಿಳುನಾಡಿಗೆ ಬಾ’ ಎಂದಿದ್ದಾರೆ. ಅದಕ್ಕೆ ಹತಾಷೆ ವ್ಯಕ್ತಪಡಿಸಿದ ಶಿವಸೇನೆ ಕಾರ್ಯಕರ್ತ ‘ತಮಿಳುನಾಡು ಕೊ ಕೈಸಾ ಆಯೆಗಾ ಭಾಯ್?’ (ತಮಿಳುನಾಡಿಗೆ ಹೇಗೆ ಬರೋಕಾಗುತ್ತೆ ಅಣ್ಣಾ?) ಎನ್ನುತ್ತಾನೆ. ಈ ಆಡಿಯೋ ಇದೀಗ ವೈರಲ್ ಆಗಿದೆ. ಇದೇ ಸಾಲನ್ನು ಪ್ರಕಾಶ್ ರೈ ತಮ್ಮ ಹಾಗೂ ಕಾಮ್ರಾರ ಫೋಟೊಕ್ಕೆ ಕ್ಯಾಪ್ಷನ್ ಹಾಕಿದ್ದು, ತಮಿಳುನಾಡಿಗೆ ಆಟೋದಲ್ಲಿ ಬರುವಂತೆ ಸಲಹೆ ನೀಡಿದ್ದಾರೆ.

ಪ್ರಕಾಶ್ ರೈ ಈ ಹಿಂದೆಯೂ ಸಹ ಬಿಜೆಪಿ, ಆರ್​ಎಸ್​ಎಸ್​ ವಿರುದ್ಧ ನಿಲ್ಲುವ ಹೋರಾಟಗಾರರಿಗೆ, ರಾಜಕಾರಣಿಗಳಿಗೆ, ಕಮಿಡಿಯನ್​ಗಳಿಗೆ ಬೆಂಬಲ ನೀಡುತ್ತಲೇ ಬಂದಿದ್ದಾರೆ. ಮೋದಿ ಅವರನ್ನು ಎದುರು ಹಾಕಿಕೊಂಡಿದ್ದ ಕನ್ಹಯ್ಯ ಕುಮಾರ್ ಹಾಗೂ ಇನ್ನೂ ಕೆಲವರಿಗೆ ಪ್ರಕಾಶ್ ರೈ ಬೆಂಬಲ ನೀಡಿದ್ದರು. ಕೇಂದ್ರದ ವಿರುದ್ಧ ಸೋನಮ್ ವಾಂಗ್ಚುಕ್ ನಡೆಸಿದ್ದ ಹೋರಾಟದಲ್ಲಿಯೂ ಪ್ರಕಾಶ್ ರೈ ಭಾಗಿ ಆಗಿದ್ದರು. ಕೇಂದ್ರದ ವಿರುದ್ಧ ಹೋರಾಡಿ ಪ್ರಕರಣದಲ್ಲಿ ಸಿಲುಕಿರುವ ಉಮರ್ ಖಾಲಿದ್​ಗೆ ಬೆಂಬಲ ನೀಡಿ ಅವರ ಕುಟುಂಬವನ್ನು ಭೇಟಿ ಮಾಡಿದ್ದರು. ಇದೀಗ ಕುನಾಲ್ ಕಾಮ್ರಾಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಪ್ರಧಾನಿ ಹೇಳಿದಂತೆ ಪಾಕ್​ ಅನ್ನು ನುಗ್ಗಿ ವೈರಿಗಳನ್ನು ಸದೆಬಡಿಯಬೇಕು: ಅರುಣ್
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಇದು ಮನವಿ ಅಲ್ಲ ಎಚ್ಚರಿಕೆ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿಜ್ಞೆ ಎಂದ ಡಿಕೆಶಿ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಪ್ರವಾದಿ, ಬಸವಣ್ಣ ಬಗ್ಗೆ ಯತ್ನಾಳ್​ಗೇನು ಗೊತ್ತು: ಕಾಶಪ್ಪನವರ್, ಶಾಸಕ
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಸಿಎಂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ನಿಜವಾದ ರಾಯಭಾರಿ!: ಆರ್ ಅಶೋಕ್
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮುಸ್ಲಿಮರ ಓಟಿಗೆ ಮಾರಿಕೊಂಡ ಕಾಂಗ್ರೆಸ್ ಸರ್ಕಾರ: ತೇಜಸ್ವಿ ಸೂರ್ಯ ವಾಗ್ದಾಳಿ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಮಂಜುನಾಥ್, ಭರತ್ ಮಕ್ಕಳಿಗೆ ಉಚಿತ ಶಿಕ್ಷಣ, ಆರೋಗ್ಯ ಸೇವೆ: ತೇಜಸ್ವಿ ಸೂರ್ಯ
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಯತ್ನಾಳ್ ವಿರುದ್ಧ ಮುಸ್ಲಿಮರ ಪ್ರತಿಭಟನೆಯಲ್ಲಿ ಹಿಂದೂ ಸ್ವಾಮೀಜಿಗಳು!
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ನಿಜ: ಮಂಜುನಾಥ್ ಪತ್ನಿ ಪಲ್ಲವಿ
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಭಾರತದಲ್ಲಿರುವ ಪಾಕಿಸ್ತಾನಿ ಹಿಂದೂಗಳ ಕತೆಯೇನು? ವಾಪಸ್ಸಾಗಲು ಮನಸ್ಸಿಲ್ಲ!
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್
ಪ್ರತಿಭಟನೆ ಹಿನ್ನೆಲೆ ಎಸ್ಪಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್