Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ

Prakash Raj: ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಣಿತಾ ಸುಭಾಷ್, ಮಂಚು ಲಕ್ಷ್ಮಿ, ಪ್ರಕಾಶ್ ರೈ ಇನ್ನೂ ಹಲವಾರು ನಟರ ವಿರುದ್ಧ ಬೆಟ್ಟಿಂಗ್ ಆಪ್ ಪ್ರಚಾರದ ಪ್ರಕರಣ ದಾಖಲಿಸಲಾಗಿದೆ. ಇದೀಗ ನಟ ಪ್ರಕಾಶ್ ರೈ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ಬೆಟ್ಟಿಂಗ್ ಆಪ್ ಪ್ರಚಾರ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಬೆಟ್ಟಿಂಗ್ ಆಪ್ ಪ್ರಕರಣ: ವಿಡಿಯೋ ಮೂಲಕ ಉತ್ತರ ಕೊಟ್ಟ ಪ್ರಕಾಶ್ ರೈ
Prakash Raj
Follow us
ಮಂಜುನಾಥ ಸಿ.
|

Updated on:Mar 20, 2025 | 7:48 PM

ತೆಲುಗು ಚಿತ್ರರಂಗದ (Tollywood) ಹಲವು ಖ್ಯಾತ ನಟ-ನಟಿಯರ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಬೆಟ್ಟಿಂಗ್ ಆಪ್​ನ ಪ್ರಚಾರ ಮಾಡಿದ್ದಾರೆಂದು ಸುಮಾರು 25 ಸಿನಿಮಾ ಮತ್ತು ಸಾಮಾಜಿಕ ಜಾಲತಾಣ ಸೆಲೆಬ್ರಿಟಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಟಾರ್ ನಟರಾದ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಣಿತಾ ಸುಭಾಷ್, ಮಂಚು ಲಕ್ಷ್ಮಿ ಇನ್ನೂ ಹಲವು ಜನಪ್ರಿಯ ಸಿನಿಮಾ ನಟ, ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ನಟ ಪ್ರಕಾಶ್ ರೈ ವಿರುದ್ಧವೂ ದೂರು ದಾಖಲಾಗಿದೆ. ಇದೀಗ ಪ್ರಕಾಶ್ ರೈ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡಿದ್ದು ಸ್ಪಷ್ಟನೆ ನೀಡಿದ್ದಾರೆ.

‘ಸಾಮಾಜಿಕ ಜಾಲತಾಣಗಳ ಮೂಲಕ ನನಗೆ ಬೆಟ್ಟಿಂಗ್ ಆಪ್ ವಿಷಯ ನನಗೆ ತಿಳಿಯಿತು. ನನಗೆ ಪೊಲೀಸರಿಂದ ಈ ವರೆಗೆ ಯಾವುದೇ ನೋಟೀಸ್ ನನಗೆ ದೊರೆತಿಲ್ಲ. ಆದರೆ ನಾನು ಎಲ್ಲರಿಗೂ ಪ್ರಶ್ನೆಗಳನ್ನು ಕೇಳುತ್ತಿರುತ್ತೇನೆ, ಹಾಗಾಗಿ ಇಂಥಹಾ ಆರೋಪಗಳು ಬಂದಾಗ ಅದಕ್ಕೆ ಉತ್ತರಿಸುವುದು ನನ್ನ ಕರ್ತವ್ಯ ಅನಿಸಿದ ಕಾರಣ ಈ ಸ್ಪಷ್ಟನೆ ನೀಡುತ್ತಿದ್ದೇನೆ’ ಎಂದು ಹೇಳಿ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ನಾನು 2016 ರಲ್ಲಿ ಬೆಟ್ಟಿಂಗ್ ಅಪ್ಲಿಕೇಶನ್ ಆಗಿರುವ ಜಂಗ್ಲಿ ರಮ್ಮಿ ಅವರ ಜಾಹೀರಾತಿನಲ್ಲಿ ನಟಿಸಿದ್ದೆ. ಆಗ ಅದು ಕಾನೂನು ಬದ್ಧವಾಗಿತ್ತು. ಆದರೆ ಆ ಜಾಹೀರಾತಿನಲ್ಲಿ ನಟಿಸಿದ ಕೆಲ ತಿಂಗಳ ಬಳಿಕ ನನಗೆ ನಾನು ಮಾಡಿದ್ದು ಸರಿಯಲ್ಲ ಎನಿಸಿತು’ ಎಂದಿದ್ದಾರೆ ಪ್ರಕಾಶ್ ರೈ.

‘ಆ ಬಳಿಕ ಆ ಕಂಪೆನಿಯವರು ನನ್ನ ಕಾಂಟ್ರಾಕ್ಟ್ ರಿನೀವಲ್ ಮಾಡಿಸಲು ಬಂದಾಗ ನಾನು ಸ್ಪಷ್ಟವಾಗಿ ನಿರಾಕರಿಸಿದೆ ಮಾತ್ರವಲ್ಲದೆ, ನನಗೆ ಇದು ಸರಿಬರುತ್ತಿಲ್ಲ. ಇಂಥಹಾ ಜಾಹೀರಾತುಗಳಲ್ಲಿ ನಾನು ನಟಿಸುವುದಿಲ್ಲ ಎಂದಿದ್ದೆ. ಆದರೆ 2021 ರಲ್ಲಿ ಬಹುಷಃ ಆ ಕಂಪೆನಿಯನ್ನು ಬೇರೊಬ್ಬರು ಖರೀದಿ ಮಾಡಿದರು. ಹೊಸ ಮಾಲೀಕರು ನಾನು ನಟಿಸಿದ್ದ ಜಾಹೀರಾತನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಳಸಿದ್ದನ್ನು ಗಮನಿಸಿ ಅವರಿಗೆ ನೊಟೀಸ್ ಸಹ ಕಳಿಸಿದ್ದೆ. ಆ ನಂತರ ಅವರು ಅದನ್ನು ಹಿಂಪಡೆದುಕೊಂಡಿದ್ದರು’ ಎಂದಿದ್ದಾರೆ ಪ್ರಕಾಶ್ ರೈ.

ಒಂಬತ್ತು ವರ್ಷಗಳ ಹಿಂದೆ ಬೆಟ್ಟಿಂಗ್ ಜಾಹೀರಾತಿನಲ್ಲಿ ನಟಿಸಿದ್ದ ನಾನು ಆ ನಂತರ ಪ್ರಜ್ಞಾಪೂರ್ವಕವಾಗಿ ಅಂಥಹಾ ಜಾಹೀರಾತುಗಳಲ್ಲಿ ನಟಿಸಿಲ್ಲ. ಆ ಬಳಿಕವೂ ಅಂಥಹವೇ ಹಲವು ಜಾಹೀರಾತುಗಳು ನನಗೆ ಬಂದಿದ್ದವು ಆದರೆ ನಾನು ಅವುಗಳಿಂದ ದೂರವೇ ಉಳಿದಿದ್ದೆ. ಕಾನೂನು ಬದ್ಧ ಆಗಿರಲಿ, ಆಗದೇ ಇರಲಿ ಜೂಜು ಸರಿಯಲ್ಲ. ಯುವಕರು ಇಂಥಹಾ ದುಷ್ಚಟಗಳಿಗೆ ಬಲಿ ಆಗಬಾರದು ಎಂಬುದೇ ನನ್ನ ಮನವಿ. ನಾನು ಒಂಬತ್ತು ವರ್ಷಗಳ ಹಿಂದೆ ಮಾಡಿದ್ದ ತಪ್ಪನ್ನು ಕ್ಷಮಿಸುತ್ತೀರೆಂದು ನಂಬುತ್ತೇನೆ, ಕ್ಷಮೆ ಇರಲಿ’ ಎಂದಿದ್ದಾರೆ ಪ್ರಕಾಶ್ ರೈ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:47 pm, Thu, 20 March 25

ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸ್ಪೀಕರ್ ವರ್ತನೆ ಸರಿಯಾ ತಪ್ಪಾ ಅಂತ ಜನ ತೀರ್ಮಾನಿಸುತ್ತಾರೆ: ಯುಟಿ ಖಾದರ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸರ್ಕಾರದ ಕ್ರಮವನ್ನು ಹೈಕೋರ್ಟ್​​ನಲ್ಲಿ ಪ್ರಶ್ನಿಸುತ್ತೇವೆ: ಬಸನಗೌಡ ಯತ್ನಾಳ್
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸದನದ ಗೌರವ ಕಾಪಾಡಲು ನಾವು ಹೋರಾಟ ಮಾಡಿದ್ದು: ಅಶೋಕ
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
ಸಸ್ಪೆಂಡ್ ಮಾಡುವ ಪ್ರಸ್ತಾವನೆ ಮಂಡಿಸಿದ ಸಂಸದೀಯ ವ್ಯವಹಾರಗಳ ಸಚಿವ ಪಾಟೀಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
18 ಬಿಜೆಪಿ ಶಾಸಕರು ಅಮಾನತು: ಕೈಕಾಲು ಹಿಡ್ದು ಮುನಿರತ್ನನ ಹೊರಹಾಕಿದ ಮಾರ್ಷಲ್
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಭಲೇ ಕಳ್ಳರು! ಜಡ್ಜ್ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನ, ಖದೀಮರ ವಿಡಿಯೋ ನೋಡಿ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಸಿದ್ದರಾಮಯ್ಯ ಮತ್ತು ಶಿವಕುಮಾರ್ ಆಗಮನದ ನಂತರ ಹೆಚ್ಚಿದ ಗಲಾಟೆ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ಕಾಂಗ್ರೆಸ್ 2009ರಲ್ಲಿ ಸ್ಪೀಕರ್ ಜೊತೆ ನಡೆದುಕೊಂಡ ರೀತಿ ಗೊತ್ತಿದೆ: ಶಾಸಕ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ರಾಮಲಿಂಗಾರೆಡ್ಡಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯೆ ನೀಡುತ್ತಾರೆ
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?
ಕರ್ನಾಟಕ ಬಂದ್: ನಾಳೆ ಕೆಎಸ್​ಆರ್​ಟಿಸಿ, ಬಿಎಂಟಿಸಿ ಬಸ್ ಸಂಚಾರ ಇರುತ್ತಾ?