AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮೊದಲ ಬಾರಿ‘ ವಿದೇಶಕ್ಕೆ ಹೊರಟ ಪ್ರಶಾಂತ್ ನೀಲ್

Prashanth Neel-Jr NTR: ಪ್ರಶಾಂತ್ ನೀಲ್ ಅವರು ಜೂ ಎನ್​ಟಿಆರ್​ ಅವರಿಗಾಗಿ ಪಕ್ಕಾ ಆಕ್ಷನ್ ಸಿನಿಮಾ ಒಂದರ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಸಾಮಾನ್ಯವಾಗಿ ಸೆಟ್​ಗಳಲ್ಲಿಯೇ ಹೆಚ್ಚಾಗಿ ಶೂಟ್ ಮಾಡುವ ಪ್ರಶಾಂತ್ ನೀಲ್ ಇದೇ ಮೊದಲ ಬಾರಿಗೆ ವಿದೇಶದಲ್ಲಿ ಸಿನಿಮಾ ಚಿತ್ರೀಕರಣಕ್ಕೆ ಮುಂದಾಗಿದ್ದಾರೆ.

‘ಮೊದಲ ಬಾರಿ‘ ವಿದೇಶಕ್ಕೆ ಹೊರಟ ಪ್ರಶಾಂತ್ ನೀಲ್
Prashanth Neel
ಮಂಜುನಾಥ ಸಿ.
|

Updated on: Sep 03, 2025 | 11:46 AM

Share

ಪ್ರಶಾಂತ್ ನೀಲ್ (Prashant Neel) ಸಿನಿಮಾಗಳು ಭಿನ್ನವಾದ ಬಣ್ಣ, ಗುಣಮಟ್ಟ ಮತ್ತು ನಿರೂಪಣಾ ವಿಧಾನವನ್ನು ಹೊಂದಿರುತ್ತವೆ. ಸಂಭಾಷಣೆಗಳು ಬಹಳ ಕಡಿಮೆ, ಪ್ರತಿಯೊಂದು ಪಾತ್ರದ ಮಾತುಗಳು ಗುಂಡು ಹೊಡೆದಂತಿರುತ್ತದೆ. ಕತೆ ನಡೆಯುವ ಸ್ಥಳವೂ ಭಿನ್ನವಾಗಿರುತ್ತದೆ. ಅವರ ಸಿನಿಮಾಗಳು ಬಣ್ಣಗಳಿಂದ ತುಂಬಿರುವುದಿಲ್ಲ ಬದಲಿಗೆ ಕಪ್ಪು-ಬಿಳಿಯನ್ನು ಮಿಶ್ರಣ ಮಾಡಿದಂಥೆ ಕಾಣುತ್ತವೆ. ನೀಲ್ ಅವರು ತಮ್ಮ ಸಿನಿಮಾದ ಚಿತ್ರೀಕರಣವನ್ನು ಬಹುತೇಕ ಸೆಟ್​ಗಳಲ್ಲಿಯೇ ಮಾಡುತ್ತಾರೆ. ಅದ್ಧೂರಿ ಲೊಕೇಶನ್, ಹಸಿರು ತುಂಬಿದ ಹಿನ್ನೆಲೆಯ ದೃಶ್ಯಗಳು ಅವರ ಸಿನಿಮಾದಲ್ಲಿ ಇರುವುದಿಲ್ಲ.

ಆದರೆ ಇದೇ ಮೊದಲ ಬಾರಿಗೆ ಪ್ರಶಾಂತ್ ನೀಲ್, ತಮ್ಮ ‘ಕಂಪರ್ಟ್ ಜೋನ್’ ನಿಂದ ಹೊರಗೆ ಬಂದಂತಿದೆ. ಇದೇ ಮೊದಲ ಬಾರಿಗೆ ಅವರು ತಮ್ಮ ಸಿನಿಮಾದ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಲು ಮುಂದಾಗಿದ್ದಾರೆ. ಜೂ ಎನ್​ಟಿಆರ್ ನಟಿಸುತ್ತಿರುವ ಸಿನಿಮಾದ ಚಿತ್ರೀಕರಣದಲ್ಲಿ ಪ್ರಶಾಂತ್ ನೀಲ್ ತಮ್ಮನ್ನು ತೊಡಗಿಸಿಕೊಂಡಿದ್ದು, ಇದೀಗ ಸಿನಿಮಾ ಚಿತ್ರೀಕರಣಕ್ಕೆ ವಿದೇಶದ ಫ್ಲೈಟು ಹತ್ತಲು ಸಜ್ಜಾಗಿದ್ದಾರೆ.

ತಮ್ಮ ಕತೆಗಳಲ್ಲಿ ‘ಖಾನ್ಸಾರ್’, ‘ಕೆಜಿಎಫ್’ ರೀತಿಯ ಕಲ್ಪಿತ ನಗರಗಳನ್ನು ಸೃಷ್ಟಿಸುವ ನೀಲ್ ಇದೇ ಮೊದಲ ಬಾರಿಗೆ ವಿದೇಶಕ್ಕೆ ಹೋಗಿ ಅಲ್ಲಿನ ಲೊಕೇಶನ್​​ಗಳಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಆದರೆ, ಕತೆಗೆ ತಕ್ಕಂತೆ ನೀಲ್ ಅವರು ಈ ನಿರ್ಧಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಸಿನಿಮಾದ ಕತೆಯ ಕೆಲ ಭಾಗ ವಿದೇಶದಲ್ಲಿ ವಿಶೇಷವಾಗಿ ನಿರ್ದಿಷ್ಟ ದೇಶದಲ್ಲಿ ನಡೆಯುವ ಕಾರಣ ಆ ಭಾಗಗಳನ್ನು ಅಲ್ಲಿಗೇ ಹೋಗಿ ಶೂಟ್ ಮಾಡಲಾಗುತ್ತಿದೆ.

ಇದನ್ನೂ ಓದಿ:ರಾಜ್ ಬಿ. ಶೆಟ್ಟಿ ಸಿನಿಮಾ ಮೇಕಿಂಗ್​ನ ಮೊದಲೇ ಹೊಗಳಿದ್ದ ಪ್ರಶಾಂತ್ ನೀಲ್

ಈ ಹಿಂದೆ ನೀಲ್ ನಿರ್ದೇಶಿಸಿದ್ದ ‘ಕೆಜಿಎಫ್ 2’ ಸಿನಿಮಾನಲ್ಲಿಯೂ ಸಹ ನಾಯಕ ವಿದೇಶಕ್ಕೆ ಹೋಗುವ ದೃಶ್ಯವಿತ್ತು. ಆದರೆ ಆ ದೃಶ್ಯವನ್ನು ಕರ್ನಾಟಕದ ಬೀಚ್ ಒಂದರಲ್ಲಿ ಶೂಟ್ ಮಾಡಿದ್ದರು ನೀಲ್. ಆದರೆ ಈ ಬಾರಿ ನಾಯಕ ಜೂ ಎನ್​​ಟಿಆರ್ ಅವರನ್ನು ಕರೆದುಕೊಂಡು ವಿಮಾನ ಹತ್ತಿದ್ದಾರೆ. ಆದರೆ ನೀಲ್ ಅವರು ಯಾವ ದೇಶಕ್ಕೆ ಹೋಗುತ್ತಿದ್ದಾರೆ ಎಂಬ ಗುಟ್ಟು ಬಹಿರಂಗವಾಗಿಲ್ಲ.

ನೀಲ್ ಹಾಗೂ ಜೂ ಎನ್​​ಟಿಆರ್ ಸಿನಿಮಾಕ್ಕೆ ‘ಡ್ರ್ಯಾಗನ್’ ಎಂದು ಹೆಸರಿಡಲಾಗಿತ್ತು. ಆದರೆ ಸಿನಿಮಾದ ಹೆಸರು ಬದಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಸಿನಿಮಾದ ಬಳಿಕ ಜೂ ಎನ್​​ಟಿಆರ್ ತ್ರಿವಿಕ್ರಮ್ ನಿರ್ದೇಶನದ ಸಿನಿಮಾನಲ್ಲಿ ನಟಿಸಲಿದ್ದಾರೆ. ತಮಿಳಿನ ನೆಲ್ಸನ್ ಜೊತೆಗೂ ಒಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ‘ದೇವರ 2’ ಸಹ ಬಾಕಿ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ವೈಭವ್ ಸೂರ್ಯವಂಶಿ ವಿಕೆಟ್ ಹಾರಿಸಿದ ಕೊಹ್ಲಿಯ ಅಪ್ಪಟ ಅಭಿಮಾನಿ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ವಿಸ್ಮಯ: ಶಿವಲಿಂಗಕ್ಕೆ ಸೂರ್ಯರಶ್ಮಿ ಸ್ಪರ್ಶ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ತರಕಾರಿ ಮಾರಿದ ಹಣದಲ್ಲಿ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿ ಭೀಕರ ಹತ್ಯೆ
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಮೊದಲ ಪಂದ್ಯದಲ್ಲೇ 5 ವಿಕೆಟ್ ಉರುಳಿಸಿದ ಹೆನಿಲ್ ಪಟೇಲ್
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಶ್ರೀರಾಮನಿಗೆ ಮುಸ್ಲಿಂ ಶಾಸಕ ಪೂಜೆ , ಹಿಂದೂ ಧರ್ಮದ ಬಗ್ಗೆ ಹೇಳಿದ್ದಿಷ್ಟು
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಬೆಂಗಳೂರಿನ ಗವಿ ಗಂಗಾಧರೇಶ್ವರನಿಗೆ ಸೂರ್ಯದೇವನ ನಮನ, ಇಲ್ಲಿದೆ ನೇರಪ್ರಸಾರ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಪ್ರಯಾಗರಾಜ್​ನ ಮಾಘ ಮೇಳದಲ್ಲಿ ಭಕ್ತಸಾಗರ; ಡ್ರೋನ್ ವಿಡಿಯೋ ಇಲ್ಲಿದೆ
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ಸೀನಿಯರ್​​ನನ್ನೇ ಕೊಂದ ಜೂನಿಯರ್: SSLC ವಿದ್ಯಾರ್ಥಿ ಹತ್ಯೆಗೆ ಕಾರಣವೇನು?
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ನನಗೂ ಮುಖ್ಯಮಂತ್ರಿಯಾಗಬೇಕು ಎಂಬ ಆಸೆ ಇದೆ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ
ಅಪಘಾತವಾಗುವುದ ತಡೆದು ಒಂದು ಕುಟುಂಬವನ್ನು ರಕ್ಷಿಸಿದ ಯುವತಿ