
ಪ್ರಶಾಂತ್ ನೀಲ್ ಹಾಗೂ ಜೂನಿಯರ್ ಎನ್ಟಿಆರ್ (JR NTR) ಸಿನಿಮಾ ಬಗ್ಗೆ ಇತ್ತೀಚೆಗೆ ಸುದ್ದಿ ಒಂದು ಹರಿದಾಡಿತ್ತು. ಈ ಸಿನಿಮಾ ದೃಶ್ಯಗಳ ಬಗ್ಗೆ ಜೂನಿಯರ್ ಎನ್ಟಿಆರ್ಗೆ ಖುಷಿ ಇಲ್ಲ ಎಂದು ಹೇಳಿದ್ದಾಗಿ ವರದಿ ಆಗಿತ್ತು. ಈ ಕಾರಣದಿಂದಲೇ ಸಿನಿಮಾ ನಿಂತಿದೆ ಎಂದೂ ಹೇಳಲಾಗಿತ್ತು. ಇದು ಅಭಿಮಾನಿಗಳ ಆತಂಕಕ್ಕೆ ಕಾರಣ ಆಗಿತ್ತು. ಕೊನೆಗೂ ಈ ವದಂತಿಗೆ ತೆರೆ ಬಿದ್ದಿದೆ. ಈ ಚಿತ್ರದ ಸಂಗೀತ ಸಂಯೋಜಕ, ಕನ್ನಡಿಗ ರವಿ ಬಸ್ರೂರು ಅವರು ಉತ್ತರ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ರವಿ ಬಸ್ರೂರು ಅವರು ಪ್ರಶಾಂತ್ ನೀಲ್ ಜೊತೆ ಹಲವು ವರ್ಷಗಳಿಂದ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ‘ಉಗ್ರಂ’ ಸಿನಿಮಾದಲ್ಲಿ ಇದೇ ಜೋಡಿ ಕೆಲಸ ಮಾಡಿತ್ತು. ‘ಕೆಜಿಎಫ್’ ಹಾಡು ಹಾಗೂ ಬಿಜಿಎಂ ಸಿನಿಮಾನ ಬೇರೆ ಹಂತಕ್ಕೆ ತೆಗೆದುಕೊಂಡು ಹೋಗಿತ್ತು. ಈ ಕಾರಣದಿಂದಲೇ ಪ್ರಶಾಂತ್ ನೀಲ್ ತಮ್ಮ ನಿರ್ದೇಶನದ ಸಿನಿಮಾಗಳ ಸಂಗೀತದ ಜವಾಬ್ದಾರಿಯನ್ನು ರವಿ ಬಸ್ರೂರು ಅವರಿಗೆ ನೀಡುತ್ತಾರೆ. ಈಗ ರವಿ ಅವರು ತಮ್ಮ ಮುಂದಿನ ಸಿನಿಮಾ ಬಗ್ಗೆ ಹೇಳಿದ್ದಾರೆ.
‘ಜೂನಿಯರ್ ಎನ್ಟಿಆರ್ ಹಾಗೂ ನೀಲ್ ಸಿನಿಮಾ ಸಂಗೀತ ಹಾಗೂ ದೃಶ್ಯದಲ್ಲಿ ಅದ್ಭುತವಾಗಿ ಮೂಡಿ ಬರಲಿದೆ. ಕೆಜಿಎಫ್ ಹಾಗೂ ಸಲಾರ್ಗಿಂತ ಈ ಚಿತ್ರದ ಮ್ಯೂಸಿಕ್ ಭಿನ್ನವಾಗಿ ಇರಲಿದೆ. ಹೊಸ ರೀತಿಯ ವಾದ್ಯ, ಎನರ್ಜಿ ಇರಲಿದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್
ಜೂನಿಯರ್ ಎನ್ಟಿಆರ್ ನಟನೆಯ ‘ದೇವರ’ ಸಾಧಾರಣ ಎನಿಸಿಕೊಂಡಿತು. ಆ ಬಳಿಕ ಜೂನಿಯರ್ ಎನ್ಟಿಆರ್ ಅವರು ‘ವಾರ್ 2’ ಸಿನಿಮಾದಲ್ಲಿ ನಟಿಸಿದರು. ಈ ಸಿನಿಮಾ ಡಿಸಾಸ್ಟರ್ ಎನಿಸಿಕೊಂಡಿತು. ಹೀಗಾಗಿ, ಜೂನಿಯರ್ ಎನ್ಟಿಆರ್ ಅಭಿಮಾನಿಗಳು ಈ ಚಿತ್ರದಿಂದ ಹೆಚ್ಚಿನದ್ದನ್ನು ನಿರೀಕ್ಷೆ ಮಾಡುತ್ತಿದ್ದಾರೆ. ಹೀಗಿರುವಾಗಲೇ ಸಿನಿಮಾ ನಿಂತಿದೆ ಎಂಬ ವದಂತಿ ಕೇಳಿ ಅವರು ಆತಂಕಗೊಂಡಿದ್ದರು. ಈಗ ಎಲ್ಲದಕ್ಕೂ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಸಿನಿಮಾದ ಕೆಲಸಗಳು ಪ್ರಗತಿಯಲ್ಲಿವೆಯಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:06 pm, Tue, 18 November 25