Jr NTR
ಜೂನಿಯರ್ ಎನ್ಟಿಆರ್, ನಂದಮೂರಿ ತಾರಕ ರಾಮರಾವ್ ಎಂದೂ ಕರೆಯಲ್ಪಡುವ ಇವರು, ತೆಲುಗು ಚಿತ್ರರಂಗದ ಜನಪ್ರಿಯ ನಟ. ಜೂನಿಯರ್ ಎನ್ಟಿಆರ್ ಜನಿಸಿದ್ದು 1983ರ ಮೇ 20ರಂದು. ಹೈದರಾಬಾದ್ನಲ್ಲಿ ಜನಿಸಿದ ಅವರು ಫಿಲ್ಮಿ ಹಿನ್ನೆಲೆ ಕುಟುಂಬದಿಂದ ಬಂದವರು. ಜೂನಿಯರ್ ಎನ್ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ನಂತರ ಹೀರೋ ಪಾತ್ರಗಳಲ್ಲಿನ ಬಹುಮುಖ ಅಭಿನಯಕ್ಕಾಗಿ ಅಪಾರ ಮನ್ನಣೆಯನ್ನು ಗಳಿಸಿದರು. ಅವರ ಖಾತೆಯಲ್ಲಿ ಅನೇಕ ಹಿಟ್ ಸಿನಿಮಾಗಳಿವೆ. ಅವರು ನಟಿಸಿದ ‘ಆರ್ಆರ್ಆರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು. ಆ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತು. ಆ ಮೂಲಕ ಜೂನಿಯರ್ ಎನ್ಟಿಆರ್ ಹೆಸರು ಇನ್ನಷ್ಟು ಫೇಮಸ್ ಆಯಿತು. ನಟನೆ ಮಾತ್ರವಲ್ಲದೇ ಡ್ಯಾನ್ಸ್ನಲ್ಲಿಯೂ ಅವರ ಪ್ರತಿಭೆ ಅಪಾರ. ಇನ್ನು, ಕೆಲವು ಟಿವಿ ಶೋಗಳನ್ನು ಕೂಡ ಅವರು ನಡೆಸಿಕೊಟ್ಟಿದ್ದಾರೆ. ಕನ್ನಡವನ್ನು ಅವರು ಚೆನ್ನಾಗಿ ಮಾತನಾಡಬಲ್ಲರು. ಅವರ ತಾಯಿ ಶಾಲಿನಿ, ಕರ್ನಾಟಕದ ಕುಂದಾಪುರದವರು.
ಜೂ. ಎನ್ಟಿಆರ್, ಪ್ರಶಾಂತ್ ನೀಲ್ ಸಿನಿಮಾ ಸ್ಥಗಿತ? ಗಾಳಿ ಸುದ್ದಿಗೆ ಬ್ರೇಕ್ ಹಾಕಿದ ನಿರ್ಮಾಪಕರು
ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನ ಸಿನಿಮಾ ಶೂಟಿಂಗ್ ನಿಂತಿದೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತು. ಆ ಬಗ್ಗೆ ನಿರ್ಮಾಣ ಸಂಸ್ಥೆ ‘ಮೈತ್ರಿ ಮೂವೀ ಮೇಕರ್ಸ್’ ಕಡೆಯಿಂದ ಸ್ಪಷ್ಟನೆ ಸಿಕ್ಕಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.
- Madan Kumar
- Updated on: Apr 8, 2026
- 4:06 pm
‘ಡ್ರ್ಯಾಗನ್’ ಸಿನಿಮಾ ಶೂಟಿಂಗ್ ನಿಲ್ಲಿಸಿದ ಪ್ರಶಾಂತ್ ನೀಲ್, ಜೂ. ಎನ್ಟಿಆರ್; ಕಾರಣ ಏನು?
ಬಹುನಿರೀಕ್ಷಿತ ‘ಡ್ರ್ಯಾಗನ್’ ಸಿನಿಮಾದ ಚಿತ್ರೀಕರಣವನ್ನು ದಿಢೀರ್ ನಿಲ್ಲಿಸಲಾಗಿದೆ. ಅದಕ್ಕೆ ಬಲವಾದ ಕಾರಣವೂ ಇದೆ. ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಅವರು ಲುಕ್ ಟೆಸ್ಟ್ ವಿಷಯದಲ್ಲಿ ರಾಜಿಯಾಗುತ್ತಿಲ್ಲ. ಸರಿಯಾದ ಲುಕ್ ನಿರ್ಧಾರ ಆಗುವ ತನಕ ಶೂಟಿಂಗ್ ನಿಲ್ಲಿಸಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ.
- Madan Kumar
- Updated on: Apr 7, 2026
- 4:44 pm
ಯುದ್ಧದಿಂದ ಜೋರ್ಡನ್ ಅಲ್ಲಿ ‘NTR-Neel’ ಚಿತ್ರಕ್ಕೆ ತೊಂದರೆ? ಸಹಾಯಕ್ಕೆ ಬಂದ್ರಂತೆ ಟ್ರಂಪ್
ಪ್ರಶಾಂತ್ ನೀಲ್ ನಿರ್ದೇಶನದ, ಜೂನಿಯರ್ NTR ನಟನೆಯ ಬಹು ನಿರೀಕ್ಷಿತ ಚಿತ್ರದ ಕುರಿತು ಛಾಯಾಗ್ರಾಹಕ ಭುವನ್ ಗೌಡ ಹೊಸ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಜೋರ್ಡನ್ನಲ್ಲಿ ಚಿತ್ರೀಕರಣ ನಡೆಸಿದ್ದಾಗಿ ಅವರು ದೃಢಪಡಿಸಿದ್ದಾರೆ. 'ಡ್ರ್ಯಾಗನ್' ಎಂಬ ಟೈಟಲ್ಗೆ ಭುವನ್ ಆಕ್ಷೇಪಿಸದೇ ಇರುವುದು, ಅದೇ ಚಿತ್ರದ ಶೀರ್ಷಿಕೆಯಾಗಿರಬಹುದು ಎಂಬ ಕುತೂಹಲ ಮೂಡಿಸಿದೆ.
- Rajesh Duggumane
- Updated on: Mar 17, 2026
- 9:00 am
ಬೆಂಗಳೂರಲ್ಲಿ ಮಾತನಾಡಲು ಬಿಡದ ಫ್ಯಾನ್ಸ್ಗೆ ಎಚ್ಚರಿಕೆ ನೀಡಿದ ಜೂ.ಎನ್ಟಿಆರ್
ಜೂನಿಯರ್ ಎನ್ಟಿಆರ್ ಬೆಂಗಳೂರಿನ ಕಿಮ್ಸ್ ಆಸ್ಪತ್ರೆ ಹೊಸ ಘಟಕ ಉದ್ಘಾಟನೆಗೆ ಆಗಮಿಸಿದ್ದರು. ವೇದಿಕೆ ಮೇಲೆ ಭಾಷಣ ಮಾಡುವಾಗ ಅಭಿಮಾನಿಗಳು ಜೋರಾಗಿ ಕೂಗಿದ್ದಕ್ಕೆ, ಮೌನ ವಹಿಸುವಂತೆ ಖಡಕ್ ಎಚ್ಚರಿಕೆ ನೀಡಿದರು. ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ಗೌರವ ನೀಡುವ ಬಗ್ಗೆ ಮಾತನಾಡಿದ ಜೂ. ಎನ್ಟಿಆರ್, ಕಿಮ್ಸ್ ಜೊತೆ ತನಗಿರುವ ವೈಯಕ್ತಿಕ ನಂಟನ್ನೂ ಸ್ಮರಿಸಿದರು.
- Rajesh Duggumane
- Updated on: Mar 9, 2026
- 7:47 am
ಬೆಂಗಳೂರಿನಲ್ಲಿ ಜೂ. ಎನ್ಟಿಆರ್ ನೋಡಲು ಮುಗಿಬಿದ್ದ ಜನ; ಪೊಲೀಸ್ ಲಾಠಿ ಚಾರ್ಜ್
ಟಾಲಿವುಡ್ ನಟ ಜೂನಿಯರ್ ಎನ್ಟಿಆರ್ ಅವರಿಗೆ ಬೆಂಗಳೂರಿನಲ್ಲೂ ಅಭಿಮಾನಿಗಳು ಇದ್ದಾರೆ. ಇಂದು (ಮಾ.8) ಮಹಾದೇವಪುರದ ಕಿಮ್ಸ್ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ ಎನ್ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಮುಗಿಬಿದ್ದರು. ಆಸ್ಪತ್ರೆಯ ಎದುರು ಅಪಾರ ಸಂಖ್ಯೆಯ ಅಭಿಮಾನಿಗಳು ಜಮಾಯಿಸಿದ್ದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ..
- Madan Kumar
- Updated on: Mar 8, 2026
- 1:43 pm
ಅಂದುಕೊಂಡ ಸಮಯಕ್ಕೆ ಬರಲ್ಲ ನೀಲ್- ಎನ್ಟಿಆರ್ ಸಿನಿಮಾ?
ಜೂನಿಯರ್ ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ ನಿರೀಕ್ಷಿತ ದಿನಾಂಕಕ್ಕೆ ತೆರೆ ಕಾಣುವುದು ಕಷ್ಟಕರವಾಗಿದೆ. ಜೂನ್ನಲ್ಲಿ ಬಿಡುಗಡೆಯಾಗಬೇಕಿದ್ದ ಚಿತ್ರ ಇದೀಗ ದೀಪಾವಳಿ ಅಥವಾ ಕ್ರಿಸ್ಮಸ್ಗೆ ಮುಂದೂಡಿಕೆಯಾಗುವ ಸಾಧ್ಯತೆಯಿದೆ. ಚಿತ್ರೀಕರಣ ಇನ್ನೂ ಪೂರ್ಣಗೊಂಡಿಲ್ಲ. ಜೋರ್ಡಾನ್ನಲ್ಲಿ ಅಂತಿಮ ಹಂತದ ಚಿತ್ರೀಕರಣ ನಡೆಯುತ್ತಿದೆ .
- Rajesh Duggumane
- Updated on: Feb 18, 2026
- 7:33 am
ದಕ್ಷಿಣದ ಆ ನಟ ನಟಿಯರನ್ನು ತೆರೆಮೇಲೂ ಕೀಳಾಗಿ ಕಾಣಲು ಇಷ್ಟಪಡಲ್ಲ; ಬಾಲಿವುಡ್ ನಟಿ
ಪೂಜಾ ಬೇಡಿ ಜೂನಿಯರ್ ಎನ್ಟಿಆರ್ ಬಗ್ಗೆ ಆಸಕ್ತಿದಾಯಕ ಸಂಗತಿ ಹಂಚಿಕೊಂಡಿದ್ದಾರೆ. 'ಶಕ್ತಿ' ಚಿತ್ರೀಕರಣದ ವೇಳೆ, ಎನ್ಟಿಆರ್ ಮಹಿಳೆಯರ ಮೇಲೆ ಕೈ ಎತ್ತಲು ನಿರಾಕರಿಸಿದರು. ಅವರ ಈ ಮಹಿಳಾ ಗೌರವವನ್ನು ಪೂಜಾ ಬೇಡಿ ಶ್ಲಾಘಿಸಿದ್ದಾರೆ. ಇಂದಿನ ಚಿತ್ರರಂಗದಲ್ಲಿ ಇಂತಹ ಮೌಲ್ಯಗಳು ಅಪರೂಪ ಎಂದಿದ್ದಾರೆ.
- Shreelaxmi H
- Updated on: Feb 7, 2026
- 11:24 am
‘ವಾರ್ 2’ ಸೋತ ಬಳಿಕ ಮತ್ತೊಮ್ಮೆ ಬಾಲಿವುಡ್ ಕದ ತಟ್ಟಿದ ಜೂನಿಯರ್ ಎನ್ಟಿಆರ್?
ಆರ್ಆರ್ಆರ್ ನಂತರ ಜೂನಿಯರ್ ಎನ್ಟಿಆರ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದಾರೆ. 'ವಾರ್ 2' ಚಿತ್ರದ ನಂತರ, ಅವರು ಶಾರುಖ್ ಖಾನ್ ಜೊತೆ 'ಪಠಾಣ್ 2' ನಲ್ಲಿ ನಟಿಸಲಿದ್ದಾರೆ ಎಂಬ ವದಂತಿಗಳು ಹಬ್ಬಿವೆ.ಎನ್ಟಿಆರ್ ಅವರ 'ವಾರ್ 2' ಪಾತ್ರ 'ಪಠಾಣ್ 2' ನಲ್ಲೂ ಮುಂದುವರಿಯುವ ಸಾಧ್ಯತೆಯಿದೆ. ಆದರೆ ಅಂತಿಮ ನಿರ್ಧಾರ ಇನ್ನೂ ಸ್ಪಷ್ಟವಾಗಿಲ್ಲ.
- Shreelaxmi H
- Updated on: Dec 18, 2025
- 7:45 am
ನಿಂಗಿದೆ ಮಾರಿಹಬ್ಬ; ಮಹೇಶ್ ಬಾಬುಗೆ ಮೊದಲೇ ಎಚ್ಚರಿಸಿದ್ದ ಜೂ.ಎನ್ಟಿಆರ್
ರಾಜಮೌಳಿ ಅವರ ಪರಿಪೂರ್ಣತೆಯ ಬಗ್ಗೆ ಜೂನಿಯರ್ ಎನ್ಟಿಆರ್ ಮಹೇಶ್ ಬಾಬು ಅವರಿಗೆ ಎಚ್ಚರಿಕೆ ನೀಡಿದ್ದಾರೆ. 'RRR' ಸಮಯದಲ್ಲಿ ಅನುಭವಿಸಿದ ಸವಾಲುಗಳನ್ನು ನೆನಪಿಸಿಕೊಂಡ NTR, ರಾಜಮೌಳಿ ಜೊತೆ ಕೆಲಸ ಮಾಡುವುದು ಸುಲಭವಲ್ಲ ಎಂದು ಹೇಳಿದ್ದರು. 'ವಾರಣಾಸಿ' ಸಿನಿಮಾದಲ್ಲಿ ಮಹೇಶ್ ಬಾಬು ಇದೇ ಸವಾಲುಗಳನ್ನು ಎದುರಿಸುವ ನಿರೀಕ್ಷೆಯಿದೆ.
- Shreelaxmi H
- Updated on: Nov 20, 2025
- 8:06 am
ಎನ್ಟಿಆರ್-ನೀಲ್ ಸಿನಿಮಾ ನಿಂತಿದೆ ಎಂದವರಿಗೆ ರವಿ ಬಸ್ರೂರು ಕೊಟ್ಟರು ಉತ್ತರ
ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಸಿನಿಮಾ ನಿಂತಿದೆ ಎಂಬ ವದಂತಿಗಳಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ತೆರೆ ಎಳೆದಿದ್ದಾರೆ. ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ ಎಂದು ಖಚಿತಪಡಿಸಿದ್ದಾರೆ. ಕೆಜಿಎಫ್ಗಿಂತ ಭಿನ್ನವಾದ, ಹೊಸ ರೀತಿಯ ಸಂಗೀತವನ್ನು ಈ ಚಿತ್ರ ಹೊಂದಿರಲಿದೆ ಎಂದು ರವಿ ಬಸ್ರೂರು ತಿಳಿಸಿದ್ದಾರೆ.
- Rajesh Duggumane
- Updated on: Nov 18, 2025
- 3:08 pm
ಪಾಪ ಜೂನಿಯರ್ ಎನ್ಟಿಆರ್ಗೆ ಏನಾಯ್ತು? ಲುಕ್ ನೋಡಿ ಫ್ಯಾನ್ಸ್ಗೆ ಆತಂಕ
ಜೂನಿಯರ್ ಎನ್ಟಿಆರ್ ಅವರ ಹೊಸ ತೆಳ್ಳನೆಯ ಲುಕ್ ವೈರಲ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರಕ್ಕಾಗಿ ಅವರು ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ನಾಗಾರ್ಜುನ ಅವರ ಚಿತ್ರದ ಪ್ರಚಾರ ವಿಡಿಯೋದಲ್ಲಿ ಅವರ ಹೊಸ ಅವತಾರ ಕಾಣಿಸಿತು.
- Shreelaxmi H
- Updated on: Nov 5, 2025
- 10:31 am
ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಜೂ.ಎನ್ಟಿಆರ್ ಅಸಮಾಧಾನ? ಸ್ಕ್ರಿಪ್ಟ್ ಬದಲಿಸಲು ಸೂಚನೆ
ಜೂ. ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಿನಿಮಾ ಒಂದು ಮೂಡಿ ಬರುತ್ತಿದೆ.ಈ ಸಿನಿಮಾದ ಶೂಟಿಂಗ್ ಫೂಟೇಜ್ ಬಗ್ಗೆ NTR ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಹರಡಿವೆ. ತಮ್ಮ ಹಿಂದಿನ ಸಿನಿಮಾಗಳ ನಂತರ, ಈ ಪ್ರಾಜೆಕ್ಟ್ ಬಗ್ಗೆ NTR ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ.
- Rajesh Duggumane
- Updated on: Oct 21, 2025
- 7:07 am