Jr NTR
ಜೂನಿಯರ್ ಎನ್ಟಿಆರ್, ನಂದಮೂರಿ ತಾರಕ ರಾಮರಾವ್ ಎಂದೂ ಕರೆಯಲ್ಪಡುವ ಇವರು, ತೆಲುಗು ಚಿತ್ರರಂಗದ ಜನಪ್ರಿಯ ನಟ. ಜೂನಿಯರ್ ಎನ್ಟಿಆರ್ ಜನಿಸಿದ್ದು 1983ರ ಮೇ 20ರಂದು. ಹೈದರಾಬಾದ್ನಲ್ಲಿ ಜನಿಸಿದ ಅವರು ಫಿಲ್ಮಿ ಹಿನ್ನೆಲೆ ಕುಟುಂಬದಿಂದ ಬಂದವರು. ಜೂನಿಯರ್ ಎನ್ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ನಂತರ ಹೀರೋ ಪಾತ್ರಗಳಲ್ಲಿನ ಬಹುಮುಖ ಅಭಿನಯಕ್ಕಾಗಿ ಅಪಾರ ಮನ್ನಣೆಯನ್ನು ಗಳಿಸಿದರು. ಅವರ ಖಾತೆಯಲ್ಲಿ ಅನೇಕ ಹಿಟ್ ಸಿನಿಮಾಗಳಿವೆ. ಅವರು ನಟಿಸಿದ ‘ಆರ್ಆರ್ಆರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು. ಆ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತು. ಆ ಮೂಲಕ ಜೂನಿಯರ್ ಎನ್ಟಿಆರ್ ಹೆಸರು ಇನ್ನಷ್ಟು ಫೇಮಸ್ ಆಯಿತು. ನಟನೆ ಮಾತ್ರವಲ್ಲದೇ ಡ್ಯಾನ್ಸ್ನಲ್ಲಿಯೂ ಅವರ ಪ್ರತಿಭೆ ಅಪಾರ. ಇನ್ನು, ಕೆಲವು ಟಿವಿ ಶೋಗಳನ್ನು ಕೂಡ ಅವರು ನಡೆಸಿಕೊಟ್ಟಿದ್ದಾರೆ. ಕನ್ನಡವನ್ನು ಅವರು ಚೆನ್ನಾಗಿ ಮಾತನಾಡಬಲ್ಲರು. ಅವರ ತಾಯಿ ಶಾಲಿನಿ, ಕರ್ನಾಟಕದ ಕುಂದಾಪುರದವರು.
ನಿಂಗಿದೆ ಮಾರಿಹಬ್ಬ; ಮಹೇಶ್ ಬಾಬುಗೆ ಮೊದಲೇ ಎಚ್ಚರಿಸಿದ್ದ ಜೂ.ಎನ್ಟಿಆರ್
ರಾಜಮೌಳಿ ಅವರ ಪರಿಪೂರ್ಣತೆಯ ಬಗ್ಗೆ ಜೂನಿಯರ್ ಎನ್ಟಿಆರ್ ಮಹೇಶ್ ಬಾಬು ಅವರಿಗೆ ಎಚ್ಚರಿಕೆ ನೀಡಿದ್ದಾರೆ. 'RRR' ಸಮಯದಲ್ಲಿ ಅನುಭವಿಸಿದ ಸವಾಲುಗಳನ್ನು ನೆನಪಿಸಿಕೊಂಡ NTR, ರಾಜಮೌಳಿ ಜೊತೆ ಕೆಲಸ ಮಾಡುವುದು ಸುಲಭವಲ್ಲ ಎಂದು ಹೇಳಿದ್ದರು. 'ವಾರಣಾಸಿ' ಸಿನಿಮಾದಲ್ಲಿ ಮಹೇಶ್ ಬಾಬು ಇದೇ ಸವಾಲುಗಳನ್ನು ಎದುರಿಸುವ ನಿರೀಕ್ಷೆಯಿದೆ.
- Shreelaxmi H
- Updated on: Nov 20, 2025
- 8:06 am
ಎನ್ಟಿಆರ್-ನೀಲ್ ಸಿನಿಮಾ ನಿಂತಿದೆ ಎಂದವರಿಗೆ ರವಿ ಬಸ್ರೂರು ಕೊಟ್ಟರು ಉತ್ತರ
ಪ್ರಶಾಂತ್ ನೀಲ್ ಮತ್ತು ಜೂನಿಯರ್ ಎನ್ಟಿಆರ್ ಸಿನಿಮಾ ನಿಂತಿದೆ ಎಂಬ ವದಂತಿಗಳಿಗೆ ಸಂಗೀತ ನಿರ್ದೇಶಕ ರವಿ ಬಸ್ರೂರು ತೆರೆ ಎಳೆದಿದ್ದಾರೆ. ಚಿತ್ರದ ಕೆಲಸಗಳು ಪ್ರಗತಿಯಲ್ಲಿವೆ ಎಂದು ಖಚಿತಪಡಿಸಿದ್ದಾರೆ. ಕೆಜಿಎಫ್ಗಿಂತ ಭಿನ್ನವಾದ, ಹೊಸ ರೀತಿಯ ಸಂಗೀತವನ್ನು ಈ ಚಿತ್ರ ಹೊಂದಿರಲಿದೆ ಎಂದು ರವಿ ಬಸ್ರೂರು ತಿಳಿಸಿದ್ದಾರೆ.
- Rajesh Duggumane
- Updated on: Nov 18, 2025
- 3:08 pm
ಪಾಪ ಜೂನಿಯರ್ ಎನ್ಟಿಆರ್ಗೆ ಏನಾಯ್ತು? ಲುಕ್ ನೋಡಿ ಫ್ಯಾನ್ಸ್ಗೆ ಆತಂಕ
ಜೂನಿಯರ್ ಎನ್ಟಿಆರ್ ಅವರ ಹೊಸ ತೆಳ್ಳನೆಯ ಲುಕ್ ವೈರಲ್ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ‘ಡ್ರ್ಯಾಗನ್’ ಚಿತ್ರಕ್ಕಾಗಿ ಅವರು ತೂಕ ಕಳೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬದಲಾವಣೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ನಾಗಾರ್ಜುನ ಅವರ ಚಿತ್ರದ ಪ್ರಚಾರ ವಿಡಿಯೋದಲ್ಲಿ ಅವರ ಹೊಸ ಅವತಾರ ಕಾಣಿಸಿತು.
- Shreelaxmi H
- Updated on: Nov 5, 2025
- 10:31 am
ಪ್ರಶಾಂತ್ ನೀಲ್ ನಿರ್ದೇಶನದ ಬಗ್ಗೆ ಜೂ.ಎನ್ಟಿಆರ್ ಅಸಮಾಧಾನ? ಸ್ಕ್ರಿಪ್ಟ್ ಬದಲಿಸಲು ಸೂಚನೆ
ಜೂ. ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ನಲ್ಲಿ ಸಿನಿಮಾ ಒಂದು ಮೂಡಿ ಬರುತ್ತಿದೆ.ಈ ಸಿನಿಮಾದ ಶೂಟಿಂಗ್ ಫೂಟೇಜ್ ಬಗ್ಗೆ NTR ಅತೃಪ್ತಿ ವ್ಯಕ್ತಪಡಿಸಿದ್ದಾರೆ ಎಂಬ ವದಂತಿಗಳು ಹರಡಿವೆ. ತಮ್ಮ ಹಿಂದಿನ ಸಿನಿಮಾಗಳ ನಂತರ, ಈ ಪ್ರಾಜೆಕ್ಟ್ ಬಗ್ಗೆ NTR ಹೆಚ್ಚಿನ ಕಾಳಜಿ ವಹಿಸುತ್ತಿದ್ದಾರೆ. ಅವರು ಕೆಲವು ಬದಲಾವಣೆಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ.
- Rajesh Duggumane
- Updated on: Oct 21, 2025
- 7:07 am
ನಾನು ಬಾಲ್ಯದಲ್ಲಿ ಕುಂದಾಪುರದ ಬಗ್ಗೆ ಕೇಳಿದ ಕಥೆಯನ್ನು ರಿಷಬ್ ಸಿನಮಾ ಮಾಡಿದ್ದಾರೆ ಎಂದ ಜೂ. ಎನ್ಟಿಆರ್
ದಸರಾ ಪ್ರಯುಕ್ತ ‘ಕಾಂತಾರ ಚಾಪ್ಟರ್ 1’ ಬಿಡುಗಡೆಗೆ ಸಿದ್ಧವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಪ್ರೀಕ್ವೆಲ್ ಚಿತ್ರದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಜೂ.NTR ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ತಮ್ಮ ಬಾಲ್ಯದ ಕಥೆಗಳನ್ನು ನೆನೆದ ತಾರಕ್, ರಿಷಬ್ ಶೆಟ್ಟಿಯವರ ನಿರ್ದೇಶನ ಮತ್ತು ಪ್ರತಿಭೆಯನ್ನು ಅಪಾರವಾಗಿ ಹೊಗಳಿದರು.
- Shreelaxmi H
- Updated on: Sep 29, 2025
- 9:05 am
‘ಕಾಂತಾರ: ಚಾಪ್ಟರ್ 1’ ಪ್ರೀ-ರಿಲೀಸ್ ಕಾರ್ಯಕ್ರಮಕ್ಕೆ ಜೂ. ಎನ್ಟಿಆರ್ ಅತಿಥಿ
ಹೈದರಾಬಾದ್ನಲ್ಲಿ ‘ಕಾಂತಾರ: ಚಾಪ್ಟರ್ 1’ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ಅದ್ದೂರಿಯಾಗಿ ನಡೆಯಲಿದೆ. ತೆಲುಗು ಚಿತ್ರರಂಗದ ಸ್ಟಾರ್ ನಟ ಜೂನಿಯರ್ ಎನ್ಟಿಆರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಈ ಇವೆಂಟ್ ಜರುಗಲಿದೆ. ಆ ಕುರಿತು ಇಲ್ಲಿದೆ ಇನ್ನಷ್ಟು ಮಾಹಿತಿ..
- Madan Kumar
- Updated on: Sep 26, 2025
- 9:12 pm
ಸಿಕ್ಕಾಪಟ್ಟೆ ಸ್ಲಿಮ್ ಆದ ಜೂನಿಯರ್ ಎನ್ಟಿಆರ್; ಇದಕ್ಕೆ ಕಾರಣ ಪ್ರಶಾಂತ್ ನೀಲ್
ಪ್ರಶಾಂತ್ ನೀಲ್, ಜೂನಿಯರ್ ಎನ್ಟಿಆರ್ ಕಾಂಬಿನೇಷನ್ನ ಸಿನಿಮಾದಲ್ಲಿ ಭರ್ಜರಿ ಆ್ಯಕ್ಷನ್ ಇರಲಿದೆ. ಈ ಸಿನಿಮಾ ಸಲುವಾಗಿ ಜೂನಿಯರ್ ಎನ್ಟಿಆರ್ ಅವರು ಸಿಕ್ಕಾಪಟ್ಟೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಅವರ ಬದ್ಧತೆ ಹೇಗಿದೆ ಎಂಬುದಕ್ಕೆ ಸಾಕ್ಷಿಯಾಗಿ ಒಂದು ವಿಡಿಯೋ ವೈರಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..
- Madan Kumar
- Updated on: Sep 16, 2025
- 10:47 pm
‘ವಾರ್ 2’ ಸೋಲಿನ ಬಳಿಕ ಜೂ. ಎನ್ಟಿಆರ್ ಮುಂದಿನ ಚಿತ್ರಕ್ಕೆ ಬ್ರೇಕ್ ಹಾಕಿದ ಯಶ್ ರಾಜ್ ಫಿಲ್ಮ್ಸ್?
ನಿರೀಕ್ಷಿಸಿದಂತೆ ಆಗಿದ್ದರೆ ‘ವಾರ್ 2’ ಸಿನಿಮಾ ಸಾವಿರಾರು ಕೋಟಿ ರೂಪಾಯಿ ಕಲೆಕ್ಷನ್ ಮಾಡಬೇಕಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಈ ಸಿನಿಮಾದ ಸೋಲಿನಿಂದ ನಿರ್ಮಾಪಕರಿಗೆ ಭಾರಿ ನಷ್ಟ ಆಗಿದೆ. ಹಾಗಾಗಿ ಜೂನಿಯರ್ ಎನ್ಟಿಆರ್ ಮಾಡಬೇಕಿದ್ದ ಮತ್ತೊಂದು ಹಿಂದಿ ಸಿನಿಮಾ ಸದ್ಯಕ್ಕೆ ಹೋಲ್ಡ್ ಆಗಲಿದೆ.
- Madan Kumar
- Updated on: Aug 25, 2025
- 7:56 am
‘ವಾರ್ 2’ ಸೋಲು: 450 ಕೋಟಿ ರೂ. ಸುರಿದ ನಿರ್ಮಾಪಕರಿಗೆ ಆದ ನಷ್ಟ ಎಷ್ಟು?
ಬಹಳ ಅದ್ದೂರಿಯಾಗಿ ವಿಶ್ವಾದ್ಯಂತ ಬಿಡುಗಡೆ ಆದ ‘ವಾರ್ 2’ ಸಿನಿಮಾ ಸೋಲು ಕಂಡಿದೆ. ಗಲ್ಲಾಪೆಟ್ಟಿಗೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಲೆಕ್ಷನ್ ಮಾಡಲು ಈ ಚಿತ್ರಕ್ಕೆ ಸಾಧ್ಯವಾಗಿಲ್ಲ. ಸ್ಟಾರ್ ಕಲಾವಿದರು ನಟಿಸಿದ್ದರೂ ಕೂಡ ಹಾಕಿದ ಬಜೆಟ್ ಮರಳಿ ಬಂದಿಲ್ಲ. ನಿರ್ಮಾಪಕರು ಈ ಚಿತ್ರದಿಂದ ಕೈ ಸುಟ್ಟುಕೊಂಡಿದ್ದಾರೆ.
- Madan Kumar
- Updated on: Aug 21, 2025
- 7:04 pm
ಬಾಲಿವುಡ್ ಮೇಲೆ ಮುನಿಸಿಕೊಂಡ ರಾಜಮೌಳಿ? ಕಾರಣ ಏನು?
ರಾಜಮೌಳಿ ಅವರು 'ವಾರ್ 2' ಚಿತ್ರದ ಕಳಪೆ ವಿಎಫ್ಎಕ್ಸ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 'ವಾರ್ 2' ಚಿತ್ರದಲ್ಲಿನ ಕೆಲವು ದೃಶ್ಯಗಳ ಗ್ರಾಫಿಕ್ಸ್ ಗುಣಮಟ್ಟ ಕಡಿಮೆಯಿದ್ದು, ಇದರಿಂದ ರಾಜಮೌಳಿ ಅವರು ಬೇಸರಗೊಂಡಿದ್ದಾರೆ. ಜೂನಿಯರ್ NTR ಅವರ ಬಾಲಿವುಡ್ ಪ್ರಯತ್ನದ ಯಶಸ್ಸು ಕಡಿಮೆಯಾಗಿರುವುದರಿಂದಲೂ ಅವರು ನಿರಾಶರಾಗಿದ್ದಾರೆ ಎನ್ನಲಾಗಿದೆ.
- Shreelaxmi H
- Updated on: Aug 21, 2025
- 7:50 am