Sign In

By signing in or creating an account, you agree with Associated Broadcasting Company's Terms & Conditions and Privacy Policy.

Jr NTR

Jr NTR

ಜೂನಿಯರ್ ಎನ್​ಟಿಆರ್​, ನಂದಮೂರಿ ತಾರಕ ರಾಮರಾವ್ ಎಂದೂ ಕರೆಯಲ್ಪಡುವ ಇವರು, ತೆಲುಗು ಚಿತ್ರರಂಗದ ಜನಪ್ರಿಯ ನಟ. ಜೂನಿಯರ್ ಎನ್​ಟಿಆರ್​ ಜನಿಸಿದ್ದು 1983ರ ಮೇ 20ರಂದು. ಹೈದರಾಬಾದ್‌ನಲ್ಲಿ ಜನಿಸಿದ ಅವರು ಫಿಲ್ಮಿ ಹಿನ್ನೆಲೆ ಕುಟುಂಬದಿಂದ ಬಂದವರು. ಜೂನಿಯರ್ ಎನ್‌ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ನಂತರ ಹೀರೋ ಪಾತ್ರಗಳಲ್ಲಿನ ಬಹುಮುಖ ಅಭಿನಯಕ್ಕಾಗಿ ಅಪಾರ ಮನ್ನಣೆಯನ್ನು ಗಳಿಸಿದರು. ಅವರ ಖಾತೆಯಲ್ಲಿ ಅನೇಕ ಹಿಟ್​ ಸಿನಿಮಾಗಳಿವೆ. ಅವರು ನಟಿಸಿದ ‘ಆರ್​ಆರ್​ಆರ್​’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು. ಆ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್​ ಪ್ರಶಸ್ತಿ ಸಿಕ್ಕಿತು. ಆ ಮೂಲಕ ಜೂನಿಯರ್​ ಎನ್​ಟಿಆರ್​ ಹೆಸರು ಇನ್ನಷ್ಟು ಫೇಮಸ್​ ಆಯಿತು. ನಟನೆ ಮಾತ್ರವಲ್ಲದೇ ಡ್ಯಾನ್ಸ್​ನಲ್ಲಿಯೂ ಅವರ ಪ್ರತಿಭೆ ಅಪಾರ. ಇನ್ನು, ಕೆಲವು ಟಿವಿ ಶೋಗಳನ್ನು ಕೂಡ ಅವರು ನಡೆಸಿಕೊಟ್ಟಿದ್ದಾರೆ. ಕನ್ನಡವನ್ನು ಅವರು ಚೆನ್ನಾಗಿ ಮಾತನಾಡಬಲ್ಲರು. ಅವರ ತಾಯಿ ಶಾಲಿನಿ, ಕರ್ನಾಟಕದ ಕುಂದಾಪುರದವರು.

ಇನ್ನೂ ಹೆಚ್ಚು ಓದಿ

ಜೂ. ಎನ್​ಟಿಆರ್​, ಪ್ರಶಾಂತ್ ನೀಲ್ ಸಿನಿಮಾ ಶೂಟಿಂಗ್; ಮೊದಲ ದಿನವೇ 2 ಸಾವಿರ ಜನರು ಭಾಗಿ

ಹೈದರಾಬಾದ್​ನಲ್ಲಿ ಬರೋಬ್ಬರಿ 2 ಸಾವಿರ ಜೂನಿಯರ್ ಆರ್ಟಿಸ್ಟ್​ಗಳ​ ಜೊತೆ ನಿರ್ದೇಶಕ ಪ್ರಶಾಂತ್ ನೀಲ್ ಅವರು ಚಿತ್ರೀಕರಣ ಶುರು ಮಾಡಿದ್ದಾರೆ. 2ನೇ ಹಂತದ ಶೂಟಿಂಗ್​ನಲ್ಲಿ ನಟ ಜೂ. ಎನ್​ಟಿಆರ್​ ಅವರು ಭಾಗಿಯಾಗಲಿದ್ದಾರೆ. ‘ಮೈತ್ರಿ ಮೂವೀ ಮೇಕರ್ಸ್​’ ಸಂಸ್ಥೆ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ.

ಪ್ರಶಾಂತ್ ನೀಲ್-ಜೂನಿಯರ್ ಎನ್​ಟಿಆರ್​ ಸಿನಿಮಾ ಶೂಟಿಂಗ್ ಯಾವಾಗ? ಇಲ್ಲಿದೆ ಅಪ್​ಡೇಟ್

‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್ ನೀಲ್ ಅವರು ಪ್ರಭಾಸ್ ಜೊತೆ ‘ಸಲಾರ್’ ಸಿನಿಮಾ ಮಾಡಿ ಗೆಲುವು ಕಂಡರು. ಈಗ ಅವರು ಜೂನಿಯರ್​ ಎನ್​ಟಿಆರ್​ ಜೊತೆ ಸಿನಿಮಾ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಯಾವಾಗ ಶುರು ಆಗಲಿದೆ ಎಂಬ ಕುರಿತು ಒಂದು ಹೊಸ ನ್ಯೂಸ್ ಕೇಳಿಬಂದಿದೆ.

ಅಲ್ಲು ಅರ್ಜುನ್ ವಿವಾದ ತಣ್ಣಗಾಗುವ ಮೊದಲೇ ದೊಡ್ಡ ನಿರ್ಧಾರ ತೆಗೆದುಕೊಂಡ ಜೂನಿಯರ್ ಎನ್​ಟಿಆರ್

‘ಪುಷ್ಪ 2’ ಪ್ರೀಮಿಯರ್‌ನಲ್ಲಿ ನಡೆದ ದುರ್ಘಟನೆಯ ನಂತರ, ತೆಲುಗು ಚಿತ್ರರಂಗದಲ್ಲಿ ಅಭಿಮಾನಿಗಳನ್ನು ಭೇಟಿ ಮಾಡುವುದು ದೊಡ್ಡ ಸವಾಲಾಗಿದೆ. ಈ ಹಿನ್ನೆಲೆಯಲ್ಲಿ, ಜೂನಿಯರ್ ಎನ್​ಟಿಆರ್ ಅವರು ಅಭಿಮಾನಿಗಳನ್ನು ಭೇಟಿ ಮಾಡಲು ಯೋಜನೆ ರೂಪಿಸಿದ್ದಾರೆ. ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಸೂಕ್ತ ಅನುಮತಿ ಪಡೆದ ನಂತರವೇ ಈ ಭೇಟಿ ನಡೆಯಲಿದೆ.

‘RRR’ ಚಿತ್ರದ ರೀತಿ ‘ವಾರ್ 2’ನಲ್ಲೂ ಇರಲಿದೆ ಭರ್ಜರಿ ಡ್ಯಾನ್ಸ್; ಮತ್ತೊಂದು ಆಸ್ಕರ್ ಮೇಲೆ ಕಣ್ಣು?

‘ವಾರ್ 2’ ಚಿತ್ರದಲ್ಲಿ ಹೃತಿಕ್ ರೋಷನ್ ಮತ್ತು ಜೂನಿಯರ್ ಎನ್​ಟಿಆರ್ ಡ್ಯಾನ್ಸ್ ಇರಲಿದೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ‘ಆರ್‌ಆರ್‌ಆರ್’ ಚಿತ್ರದ ನಾಟು ನಾಟು ಹಾಡಿನ ಯಶಸ್ಸಿನ ನಂತರ, ಜೂನಿಯರ್ ಎನ್​​ಟಿಆರ್ ಅವರ ಡ್ಯಾನ್ಸ್ ಮತ್ತೊಮ್ಮೆ ಗಮನ ಸೆಳೆಯಲಿದೆ .

ಜೂ ಎನ್​ಟಿಆರ್​ ಹೊಸಬ ಎಂಬ ಬಾಲಿವುಡ್ ನಿರ್ಮಾಪಕನ ಬೆವರಿಳಿಸಿದ ಸಿದ್ಧಾರ್ಥ್

Jr NTR: ಬಾಲಿವುಡ್ ಸಿನಿಮಾಗಳನ್ನು ಎಲ್ಲ ರೀತಿಯಲ್ಲಿಯೂ ದಕ್ಷಿಣ ಭಾರತದ ಸಿನಿಮಾಗಳು ಹಿಂದಿಕ್ಕಿವೆ. ಭಾರತೀಯ ಸಿನಿಮಾಗಳು ಎಂದರೆ ಅವು ದಕ್ಷಿಣದ ಸಿನಿಮಾಗಳು ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೂ ಕೆಲವು ಬಾಲಿವುಡ್ ನಿರ್ಮಾಪಕರು ಈಗಲೂ ದಕ್ಷಿಣ ಭಾರತದ ಸಿನಿಮಾಗಳನ್ನು ನಟರನ್ನು ದ್ವಿತೀಯ ದರ್ಜೆ ನಟರಂತೆ ನೋಡುವುದು ಬಿಟ್ಟಿಲ್ಲ.

ಒಟಿಟಿ ಪ್ರಿಯರಿಗೆ ಈ ವಾರ ಬಂಪರ್; ರಿಲೀಸ್ ಆಗ್ತಿವೆ ಹಲವು ಸಿನಿಮಾಗಳು

ಜೂನಿಯರ್ ಎನ್​ಟಿಆರ್ ನಟನೆಯ ‘ದೇವರ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಸಾಧಾರಣ ಗಳಿಕೆ ಮಾಡಿತು. ಈ ಚಿತ್ರ ಮಿಶ್ರ ಪ್ರತಿಕ್ರಿಯೆ ಪಡೆದಿದ್ದು ಸಿನಿಮಾ ಕಲೆಕ್ಷನ್ ಕುಗ್ಗಲು ಪ್ರಮುಖ ಕಾರಣ. ಈ ಚಿತ್ರವನ್ನು ಒಟಿಟಿಯಲ್ಲಿ ನೋಡಲು ಅನೇಕರು ಕಾದಿದ್ದಾರೆ. ಅವರಿಗೆ ಗುಡ್​ನ್ಯೂಸ್ ಸಿಕ್ಕಿದೆ.

‘ದೇವರ’ ಸಿನಿಮಾ ಒಟಿಟಿ ರಿಲೀಸ್​ಗೆ ದಿನಾಂಕ ನಿಗದಿ; ನ.8ಕ್ಕೆ ನೆಟ್​ಫ್ಲಿಕ್ಸ್​ನಲ್ಲಿ ಪ್ರಸಾರ

ಜೂನಿಯರ್ ಎನ್‌ಟಿಆರ್ ನಟನೆಯ ‘ದೇವರ: ಪಾರ್ಟ್​ 1’ ಸಿನಿಮಾ ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ. ನೆಟ್‌ಫ್ಲಿಕ್ಸ್ ಈ ಸಿನಿಮಾದ ಒಟಿಟಿ ಹಕ್ಕುಗಳನ್ನು ಪಡೆದುಕೊಂಡಿದ್ದು, ನವೆಂಬರ್ 8 ರಿಂದ ಒಟಿಟಿಯಲ್ಲಿ ಪ್ರಸಾರವಾಗಲಿದೆ. ಚಿತ್ರದ ಯಶಸ್ಸು ಮತ್ತು ಒಟಿಟಿ ರಿಲೀಸ್ ಬಗ್ಗೆ ಇಲ್ಲಿ ಸಂಪೂರ್ಣ ವಿವರಗಳಿವೆ.

ಜೂನಿಯರ್​ ಎನ್​ಟಿಆರ್​ಗೆ ಕನ್ನಡದ ಮೇಲೆ ಇದೆ ವಿಶೇಷ ಪ್ರೀತಿ..

ಜೂನಿಯರ್ ಎನ್​ಟಿಆರ್ ಅವರು ತೆಲುಗು ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲಿ ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆ ಇದೆ. ಅವರಿಗೆ ಕನ್ನಡದ ಬಗ್ಗೆ ನಂಟು ಬೆಳೆದಿದ್ದು ಚಿಕ್ಕ ವಯಸ್ಸಿನಿಂದಲೇ. ಇದಕ್ಕೆ ಕಾರಣವೂ ಇದೆ. ಜೂನಿಯರ್​ ಎನ್​ಟಿಆರ್ ಅವರ ತಾಯಿ ಕನ್ನಡದವರು.

ತೆಲುಗು ಬಿಗ್ ಬಾಸ್ ವೇದಿಕೆ ಮೇಲೆ ಕನ್ನಡದಲ್ಲೇ ಮಾತನಾಡಿದ್ದ ಜೂನಿಯರ್ ಎನ್​ಟಿಆರ್

ಜೂನಿಯರ್ ಎನ್ಟಿಆರ್ ಅವರಿಗೆ ಕರ್ನಾಟಕದಲ್ಲಿ ದೊಡ್ಡ ಅಭಿಮಾನಿ ಬಳಗವಿದೆ. ಅವರ ತಾಯಿ ಕುಂದಾಪುರದವರು ಎಂಬುದು ಅವರ ಕನ್ನಡದೊಂದಿಗಿನ ನಂಟನ್ನು ಸೂಚಿಸುತ್ತದೆ. ಬಿಗ್ ಬಾಸ್ ಕನ್ನಡದಲ್ಲಿ ಅವರ ಭಾಗವಹಿಸುವಿಕೆ ಮತ್ತು ಕನ್ನಡ ಕಲಾವಿದರೊಂದಿಗಿನ ಸಂಬಂಧಗಳು ಅವರ ಕನ್ನಡ ಪ್ರೀತಿಯನ್ನು ತೋರಿಸುತ್ತವೆ.

ಜೂನಿಯರ್​ ಎನ್​ಟಿಆರ್ ಚಿತ್ರದಲ್ಲಿ ಶಾರುಖ್ ಖಾನ್; ಸಿಕ್ತು ಬಿಗ್ ಅಪ್​ಡೇಟ್

ಯಶ್ ರಾಜ್ ಫಿಲ್ಮ್ಸ್​ ಸಂಸ್ಥೆ ‘ವಾರ್ 2’ ಚಿತ್ರಕ್ಕೆ ದೊಡ್ಡ ಮಟ್ಟದ ಬಂಡವಾಳ ಹೂಡುತ್ತಿದೆ. ಈ ಚಿತ್ರದ ಆ್ಯಕ್ಷನ್ ದೃಶ್ಯಗಳನ್ನು ಮುಂಬೈನಲ್ಲಿ ಶೂಟ್ ಮಾಡಲಾಗುತ್ತಿದೆ. 40ಕ್ಕೂ ಅಧಿಕ ಮಂದಿಯ ಜೊತೆ ಜೂನಿಯರ್ ಎನ್​ಟಿಆರ್ ಫೈಟ್ ಮಾಡುವ ದೃಶ್ಯ ಇರಲಿದೆ.  

ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
ರಾಜಸ್ಥಾನದ ರಾಜ್ಯಪಾಲ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್​ನಲ್ಲಿ ಬೆಂಕಿ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
‘ಕೆಡಿ’ ಸಿನಿಮಾದ ನಿಜವಾದ ‘ಹೀರೋ’ ಅನ್ನು ಕೊಂಡಾಡಿದ ಧ್ರುವ ಸರ್ಜಾ
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಹೊಸ ಚೆಂಡಿನಲ್ಲಿ ನಾನೇ ಬೆಸ್ಟ್; ರೋಹಿತ್​ಗೆ ಸಿರಾಜ್ ತಿರುಗೇಟು
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
ಮಹಿಳೆಯರನ್ನು ಕೋಟ್ಯಾಧಿಪತಿ ಮಾಡುತ್ತೇವೆ;WITT ಶೃಂಗಸಭೆಯಲ್ಲಿ ಸ್ಮೃತಿ ಇರಾನಿ
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
2025 ಅಂತ್ಯದೊಳಗೆ ದೇಶಿ ಸೆಮಿಕಂಡಕ್ಟರ್ ಚಿಪ್, ಎಐ ಆರಂಭ;ಅಶ್ವಿನಿ ವೈಷ್ಣವ್
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಹೋಟೆಲ್​ನವರು ಚೆನ್ನಾಗಿ ನೋಡಿಕೊಂಡರು: ಬ್ಯಾಂಕಾಕ್​ನಿಂದ ವಾಪಸ್ಸಾದವರು
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಅರ್ಜುನ್ ಜನ್ಯಗೆ ಹಾಡು ಹೊಳೆಯುವುದೆಲ್ಲಿ: ಸಂಗತಿ ವಿವರಿಸಿದ ಪ್ರೇಮ್
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಮ್ಯಾನ್ಮಾರ್​ಗೆ ಸಹಾಯ ಮಾಡುವ ಆಪರೇಷನ್​ಗೆ ಸರ್ಕಾರ ದೇವರ ಹೆಸರಿಟ್ಟಿದ್ದೇಕೆ?
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಕೆಲ ಸೆಕೆಂಡ್​​ಗಳ ರೀಲ್ಸ್​ಗೆ ಬಳಸಿದ ಮಚ್ಚು ಫೈಬರ್​ದ್ದಾಗಿತ್ತು: ವಿನಯ್ ಗೌಡ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ
ಯುಗಾದಿ: ಕೆಆರ್​ ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಶಾಕ್, ಹೂವಿನ ದರ ಏರಿಕೆ