Jr NTR
ಜೂನಿಯರ್ ಎನ್ಟಿಆರ್, ನಂದಮೂರಿ ತಾರಕ ರಾಮರಾವ್ ಎಂದೂ ಕರೆಯಲ್ಪಡುವ ಇವರು, ತೆಲುಗು ಚಿತ್ರರಂಗದ ಜನಪ್ರಿಯ ನಟ. ಜೂನಿಯರ್ ಎನ್ಟಿಆರ್ ಜನಿಸಿದ್ದು 1983ರ ಮೇ 20ರಂದು. ಹೈದರಾಬಾದ್ನಲ್ಲಿ ಜನಿಸಿದ ಅವರು ಫಿಲ್ಮಿ ಹಿನ್ನೆಲೆ ಕುಟುಂಬದಿಂದ ಬಂದವರು. ಜೂನಿಯರ್ ಎನ್ಟಿಆರ್ ಬಾಲ ಕಲಾವಿದನಾಗಿ ಬಣ್ಣದ ಲೋಕಕ್ಕೆ ಎಂಟ್ರಿ ನೀಡಿದರು. ನಂತರ ಹೀರೋ ಪಾತ್ರಗಳಲ್ಲಿನ ಬಹುಮುಖ ಅಭಿನಯಕ್ಕಾಗಿ ಅಪಾರ ಮನ್ನಣೆಯನ್ನು ಗಳಿಸಿದರು. ಅವರ ಖಾತೆಯಲ್ಲಿ ಅನೇಕ ಹಿಟ್ ಸಿನಿಮಾಗಳಿವೆ. ಅವರು ನಟಿಸಿದ ‘ಆರ್ಆರ್ಆರ್’ ಸಿನಿಮಾ ಜಾಗತಿಕ ಮಟ್ಟದಲ್ಲಿ ಸದ್ದು ಮಾಡಿತು. ಆ ಸಿನಿಮಾದ ‘ನಾಟು ನಾಟು..’ ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕಿತು. ಆ ಮೂಲಕ ಜೂನಿಯರ್ ಎನ್ಟಿಆರ್ ಹೆಸರು ಇನ್ನಷ್ಟು ಫೇಮಸ್ ಆಯಿತು. ನಟನೆ ಮಾತ್ರವಲ್ಲದೇ ಡ್ಯಾನ್ಸ್ನಲ್ಲಿಯೂ ಅವರ ಪ್ರತಿಭೆ ಅಪಾರ. ಇನ್ನು, ಕೆಲವು ಟಿವಿ ಶೋಗಳನ್ನು ಕೂಡ ಅವರು ನಡೆಸಿಕೊಟ್ಟಿದ್ದಾರೆ. ಕನ್ನಡವನ್ನು ಅವರು ಚೆನ್ನಾಗಿ ಮಾತನಾಡಬಲ್ಲರು. ಅವರ ತಾಯಿ ಶಾಲಿನಿ, ಕರ್ನಾಟಕದ ಕುಂದಾಪುರದವರು.
ಇನ್ನೂ ಹೆಚ್ಚು ಓದಿಒಟ್ಟಿಗೆ ನಾಲ್ಕು ಸ್ಟಾರ್ ನಟರಿಗೆ ಇಂಜೂರಿ; ಆತಂಕ್ಕೆ ಒಳಗಾದ ಟಾಲಿವುಡ್ ಫ್ಯಾನ್ಸ್
ಟಾಲಿವುಡ್ನ ಖ್ಯಾತ ನಟರಾದ ಎನ್ಟಿಆರ್, ರಾಮ್ ಚರಣ್, ಬಾಲಕೃಷ್ಣ ಮತ್ತು ಪವನ್ ಕಲ್ಯಾಣ್ ಸಾಲು ಸಾಲಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ನೆಚ್ಚಿನ ತಾರೆಯರ ಆರೋಗ್ಯದ ಏರುಪೇರಿನಿಂದ ಅಭಿಮಾನಿಗಳು ಆತಂಕಗೊಂಡಿದ್ದಾರೆ. ಈ ಘಟನೆಗಳು ಸಿನಿಮಾ ಸೆಟ್ಗಳಲ್ಲಿನ ಸುರಕ್ಷತಾ ಕ್ರಮಗಳ ಜಾಗೃತಿಗೆ ಎಚ್ಚರಿಕೆಯ ಗಂಟೆಯಾಗಿವೆ.
- Rajesh Duggumane
- Updated on: Jul 28, 2026
- 1:35 pm
‘ಡ್ರ್ಯಾಗನ್’ ಶೂಟಿಂಗ್ ವೇಳೆ ಜೂ. ಎನ್ಟಿಆರ್ ಭುಜಕ್ಕೆ ಗಾಯ; 2 ತಿಂಗಳು ವಿಶ್ರಾಂತಿ ಅಗತ್ಯ
ಪ್ರಶಾಂತ್ ನೀಲ್ ನಿರ್ದೇಶನ ಮಾಡುತ್ತಿರುವ ‘ಡ್ರ್ಯಾಗನ್’ ಸಿನಿಮಾದ ಶೂಟಿಂಗ್ ವೇಳೆ ಖ್ಯಾತ ನಟ ಜೂನಿಯರ್ ಎನ್ಟಿಆರ್ ಅವರಿಗೆ ಪೆಟ್ಟಾಗಿದೆ. ಇದರಿಂದಾಗಿ ಅವರು ಸುಮಾರು 2 ತಿಂಗಳು ವಿಶ್ರಾಂತಿ ಪಡೆಯಬೇಕು ಎಂದು ವೈದ್ಯರು ಸಲಹೆ ನೀಡಿದ್ದಾರೆ. ಆ ಬಗ್ಗೆ ಇಲ್ಲಿದೆ ಪೂರ್ತಿ ವಿವರ..
- Madan Kumar
- Updated on: Jul 27, 2026
- 10:41 pm
ಜೂನಿಯರ್ ಎನ್ಟಿಆರ್ ಸಿಎಂ ಆಗೋದು ಯಾವಾಗ? ಅವರಿಂದ ಸಿಕ್ಕ ಉತ್ತರ ಏನು?
ಹಳೇ ಸಂದರ್ಶನವೊಂದರಲ್ಲಿ ಜೂನಿಯರ್ ಎನ್ಟಿಆರ್ ತಮ್ಮ ರಾಜಕೀಯ ಆಕಾಂಕ್ಷೆಗಳು ಹಾಗೂ ಸಿಎಂ ಆಗುವ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಲು ಕೇವಲ ಆಸೆ ಇದ್ದರೆ ಸಾಲದು, ಅದಕ್ಕೆ ತಕ್ಕ ಅನುಭವ ಮತ್ತು ಮುತ್ಸದ್ದಿತನ ಬೇಕು ಎಂದು ಅವರು ಪ್ರತಿಪಾದಿಸಿದ್ದಾರೆ. ಇದೇ ವೇಳೆ ತಮ್ಮ ಚಿಕ್ಕಪ್ಪ ನಂದಮೂರಿ ಬಾಲಕೃಷ್ಣ ಮೇಲಿನ ಪ್ರೀತಿ ಹಾಗೂ ತೆಲುಗು ದೇಶಂ ಪಕ್ಷದ (TDP) ಬಗೆಗಿನ ನಿಷ್ಠೆಯನ್ನು ಅವರು ಬಿಚ್ಚಿಟ್ಟಿದ್ದಾರೆ.
- Shreelaxmi H
- Updated on: Jul 6, 2026
- 12:07 pm
ಲಾರ್ಡ್ ಮುರುಗನ್ ಕಥೆಯಲ್ಲಿ ಜೂನಿಯರ್ ಎನ್ಟಿಆರ್; ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನ
ಜೂನಿಯರ್ ಎನ್ಟಿಆರ್ ಹಾಗೂ ತ್ರಿವಿಕ್ರಮ್ ಶ್ರೀನಿವಾಸ್ ಕಾಂಬಿನೇಷನ್ನಲ್ಲಿ ಹೊಸ ಪೌರಾಣಿಕ ಚಿತ್ರ ಘೋಷಣೆಯಾಗಿದೆ. ನಂದಮೂರಿ ಕಲ್ಯಾಣ್ ರಾಮ್ ಅವರ 'ಎನ್ಟಿಆರ್ ಆರ್ಟ್ಸ್' ನಿರ್ಮಿಸಲಿರುವ ಈ ಬಹುಕೋಟಿ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ. ಪೋಸ್ಟರ್ ನೋಡಿದರೆ ಇದು ಮುರುಗನ್ ದೇವರ ಕಥೆ ಇರಬಹುದೆಂಬ ಸುಳಿವು ಸಿಕ್ಕಿದೆ. ಎನ್ಟಿಆರ್ ಸದ್ಯ 'ಡ್ರ್ಯಾಗನ್' ಚಿತ್ರದಲ್ಲಿ ಬ್ಯುಸಿ.
- Rajesh Duggumane
- Updated on: Jun 30, 2026
- 6:58 am
ಜೂ. ಎನ್ಟಿಆರ್ ಕೈತಪ್ಪಿದ ದೊಡ್ಡ ಚಿತ್ರ? ತಮಿಳು ನಟ ಸೂರ್ಯನ ಎಂಟ್ರಿ
ನಿರ್ದೇಶಕ ನೆಲ್ಸನ್ ದಿಲೀಪ್ಕುಮಾರ್ ಅವರ 'ಜೈಲರ್ 2' ನಂತರದ ಬಹುನಿರೀಕ್ಷಿತ ಸಿನಿಮಾದ ಬಗ್ಗೆ ಹೊಸ ಚರ್ಚೆ ಶುರುವಾಗಿದೆ. ಆರಂಭದಲ್ಲಿ ಜೂನಿಯರ್ ಎನ್ಟಿಆರ್ ನಾಯಕರಾಗಿ ಕಾಣಿಸಿಕೊಳ್ಳುವ ವದಂತಿಗಳಿದ್ದವು. ಈಗ ಕಾಲಿವುಡ್ ನಟ ಸೂರ್ಯ ಜೂನಿಯರ್ ಎನ್ಟಿಆರ್ ಬದಲಿಗೆ ನಾಯಕರಾಗಿ ನಟಿಸಲಿದ್ದಾರೆ ಎಂಬ ಸುದ್ದಿಯಿದೆ .
- Rajesh Duggumane
- Updated on: Jun 17, 2026
- 10:28 am
‘ಕೆಜಿಎಫ್ 3’ ಸದ್ಯಕ್ಕಿಲ್ಲ, ‘ಡ್ರ್ಯಾಗನ್’ ಬಳಿಕ ‘ಸಲಾರ್ 2’ ಕೆಲಸ ಶುರು; ಪ್ರಶಾಂತ್ ನೀಲ್ ಸ್ಪಷ್ಟನೆ
‘ಕೆಜಿಎಫ್ 3’ ಸಿನಿಮಾ ಯಾವಾಗ ಸೆಟ್ಟೇರಬಹುದು ಎಂದು ಕೇಳುವ ಅಭಿಮಾನಿಗಳಿಗೆ ಕೊಂಚ ನಿರಾಸೆ ಆಗಿದೆ. ಈ ಸಿನಿಮಾ ಬಗ್ಗೆ ಪ್ರಶಾಂತ್ ನೀಲ್ ಅವರು ಸದ್ಯಕ್ಕೆ ಯಾವುದೇ ನಿರ್ಧಾರ ಮಾಡಿಲ್ಲ. ‘ಡ್ರ್ಯಾಗನ್’ ಸಿನಿಮಾ ಕೆಲಸಗಳು ಮುಗಿದ ಬಳಿಕ ಅವರು ‘ಸಲಾರ್ 2’ ಚಿತ್ರದ ಕೆಲಸ ಆರಂಭಿಸಲಿದ್ದಾರೆ.
- Madan Kumar
- Updated on: May 21, 2026
- 8:23 pm
ಜನ್ಮದಿನದಂದೇ ಜೂನಿಯರ್ ಎನ್ಟಿಆರ್ ಗುಡ್ ನ್ಯೂಸ್; ಮನೆಗೆ ಬಂದ ಹೊಸ ಅತಿಥಿಗಳು
ಜೂನಿಯರ್ ಎನ್ಟಿಆರ್ ತಮ್ಮ 43ನೇ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ತಮ್ಮ ಮನೆಗೆ 'ಅಸಾಹಿ' ಮತ್ತು 'ಯೂಹಿ' ಎಂಬ ಎರಡು ಮುದ್ದಾದ ಸಾಕು ಗಿಳಿಗಳನ್ನು ಸ್ವಾಗತಿಸಿದ್ದಾರೆ. ಈ ಹೆಸರುಗಳಿಗೆ ಜಪಾನ್ ಜೊತೆ ವಿಶೇಷ ನಂಟಿದ್ದು, 'ಆರ್ಆರ್ಆರ್' ಮತ್ತು 'ದೇವರ' ಚಿತ್ರದ ಪ್ರಚಾರದ ನಂತರ ಎನ್ಟಿಆರ್ ಜಪಾನ್ ಮೇಲೆ ಹೊಂದಿರುವ ಪ್ರೀತಿಯ ಸಂಕೇತವಾಗಿದೆ.
- Shreelaxmi H
- Updated on: May 21, 2026
- 8:09 am
‘ಇಡೀ ಕುಟುಂಬ ಶಪಿಸಿತು’; ಜೂ. ಎನ್ಟಿಆರ್ ಈ ಸ್ಥಿತಿಗೆ ಪ್ರಶಾಂತ್ ನೀಲ್ ಕಾರಣ
ಜೂನಿಯರ್ ಎನ್ಟಿಆರ್ ಅವರ ತೀವ್ರ ತೂಕ ಇಳಿಕೆ ಅಭಿಮಾನಿಗಳಲ್ಲಿ ಆತಂಕ ಮೂಡಿಸಿತ್ತು. ನಿರ್ದೇಶಕ ಪ್ರಶಾಂತ್ ನೀಲ್, ಇದು ಸಿನಿಮಾದ ಹಂತಕನ ಪಾತ್ರಕ್ಕಾಗಿ ಮಾಡಿದ ಕಠಿಣ ಪರಿಶ್ರಮ ಎಂದಿದ್ದಾರೆ. 15-16 ಕೆಜಿ ತೂಕ ಕಳೆದುಕೊಂಡ NTR ಅವರ ಸಮರ್ಪಣೆ, ಅವರ ಪಾತ್ರದ ಬಗೆಗಿನ ಅಚಲ ಬದ್ಧತೆಯನ್ನು ತೋರಿಸುತ್ತದೆ.
- Rajesh Duggumane
- Updated on: May 21, 2026
- 7:01 am
ಅಂದು ಬಾಡಿ ಶೇಮಿಂಗ್ ಎದುರಿಸಿದ್ದ ಜೂ. ಎನ್ಟಿಆರ್; ಈಗ ಕಟ್ಟುಮಸ್ತಾದ ಫೋಟೋ ವೈರಲ್
ಸಿನಿಮಾ ಸಲುವಾಗಿ ನಟ ಜೂನಿಯರ್ ಎನ್ಟಿಆರ್ ಅವರು ಸಖತ್ ಫಿಟ್ ಆಗಿದ್ದಾರೆ. ಆದರೆ ಒಂದು ಕಾಲದಲ್ಲಿ ಅವರು ಈ ರೀತಿ ಇರಲಿಲ್ಲ. ಅತಿಯಾಗಿ ದಪ್ಪ ಇದ್ದಿದ್ದಕ್ಕೆ ಜೂನಿಯರ್ ಎನ್ಟಿಆರ್ ಅವರಿಗೂ ಬಾಡಿ ಶೇಮಿಂಗ್ ಮಾಡಲಾಗಿತ್ತು. ಬಳಿಕ ಅವರು ಫಿಟ್ನೆಸ್ ಬಗ್ಗೆ ಗಮನ ಹರಿಸಿದರು.
- Madan Kumar
- Updated on: May 20, 2026
- 9:47 pm
ಜೂ.ಎನ್ಟಿಆರ್ಗೆ ವಿಶ್ ಮಾಡಿದ ಹೊಂಬಾಳೆ ಫಿಲ್ಮ್ಸ್; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?
ಹೊಂಬಾಳೆ ಫಿಲ್ಮ್ಸ್ ಜೂ.ಎನ್ಟಿಆರ್ಗೆ ಜನ್ಮದಿನದ ಶುಭಾಶಯ ಕೋರಿರುವುದು ದೊಡ್ಡ ಲೆಕ್ಕಾಚಾರಕ್ಕೆ ಎಡೆಮಾಡಿಕೊಟ್ಟಿದೆ. ಭವಿಷ್ಯದಲ್ಲಿ ಜೂ.ಎನ್ಟಿಆರ್ ಜೊತೆ ಸಿನಿಮಾ ನಿರ್ಮಾಣದ ಸಾಧ್ಯತೆ ಅಥವಾ ಅವರ 'ಡ್ರ್ಯಾಗನ್' ಚಿತ್ರದ ವಿತರಣೆ ಹಕ್ಕುಗಳನ್ನು ಪಡೆಯುವ ಉದ್ದೇಶವಿರಬಹುದು. ಈಗಾಗಲೇ ಪ್ರಭಾಸ್ ಚಿತ್ರಕ್ಕೆ ಹೂಡಿಕೆ ಮಾಡಿರುವ ಹೊಂಬಾಳೆ, ಮತ್ತೊಬ್ಬ ದೊಡ್ಡ ಸ್ಟಾರ್ನೊಂದಿಗೆ ಕೈಜೋಡಿಸಲು ಸಿದ್ಧವಾಗಿದೆ.
- Rajesh Duggumane
- Updated on: May 20, 2026
- 2:56 pm
ಅಭಿಮಾನಿಗಳು ತಳ್ಳಲು ಬಂದ ಬೌನ್ಸರ್ಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡ ಜೂ.ಎನ್ಟಿಆರ್
ಜೂನಿಯರ್ ಎನ್ಟಿಆರ್ ಹುಟ್ಟುಹಬ್ಬದಂದು ಅಭಿಮಾನಿಗಳೊಂದಿಗೆ ಭದ್ರತಾ ಸಿಬ್ಬಂದಿ ಅಸಭ್ಯವಾಗಿ ವರ್ತಿಸಿದ್ದು, ಇದಕ್ಕೆ ತಾರಕ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಪರ ನಿಂತು ದುರ್ವರ್ತನೆ ತೋರಿದ ಭದ್ರತಾ ಸಿಬ್ಬಂದಿಗೆ ಎಲ್ಲರೆದುರೇ ಕ್ಲಾಸ್ ತೆಗೆದುಕೊಂಡ ವಿಡಿಯೋ ವೈರಲ್ ಆಗಿದೆ. ಎನ್ಟಿಆರ್ ಬಗ್ಗೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
- Rajesh Duggumane
- Updated on: May 20, 2026
- 1:07 pm
500 ಕೋಟಿ ರೂ. ಒಡೆಯ ಜೂ. ಎನ್ಟಿಆರ್; 9999 ನಂಬರ್ ರಹಸ್ಯವೇನು?
ಜೂನಿಯರ್ ಎನ್ಟಿಆರ್ ಜನ್ಮದಿನದ ಸಂಭ್ರಮದಲ್ಲಿದ್ದು, ಅವರ ರಾಯಲ್ ಲೈಫ್ಸ್ಟೈಲ್ ಬಗ್ಗೆ ಮಾಹಿತಿ ಇಲ್ಲಿದೆ. ನಟನೆ ಮತ್ತು ಬ್ರ್ಯಾಂಡ್ ಎಂಡೋರ್ಸ್ಮೆಂಟ್ಗಳ ಮೂಲಕ ತಾರಕ್ ಸುಮಾರು 500 ಕೋಟಿ ರೂ. ಆಸ್ತಿ ಗಳಿಸಿದ್ದಾರೆ. ಐಷಾರಾಮಿ ಕಾರುಗಳ ಬೃಹತ್ ಸಂಗ್ರಹ ಹೊಂದಿರುವ ಇವರು ತಮ್ಮ ಎಲ್ಲಾ ಕಾರುಗಳಿಗೆ '9999' ಸಂಖ್ಯೆಯನ್ನು ಬಳಸುತ್ತಾರೆ. ಈ ಅದೃಷ್ಟದ ನಂಬರ್ ಅವರ ಕುಟುಂಬದ ಸಂಪ್ರದಾಯದ ಭಾಗವಾಗಿದೆ.
- Shreelaxmi H
- Updated on: May 20, 2026
- 8:20 am