AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೆಣ್ಣಿನ ಶಾಪ; ಈ ವಾರ ಮನೆಯಿಂದ ಹೊರ ಹೋಗೋ ಸ್ಪರ್ಧಿ ಶಮಂತ್?

ಕಳಪೆ ಪಟ್ಟ ಪಡೆದು ಜೈಲು ಸೇರಿದ ನಂತರದಲ್ಲಿ ಪ್ರಿಯಾಂಕಾ ಅವರನ್ನು ಶಮಂತ್​ ಮಾತನಾಡಿಸೋಕೆ ಬಂದಿದ್ದಾರೆ. ಆಗ ಪ್ರಿಯಾಂಕಾ ಸಿಡುಕಿನಿಂದಲೇ ಉತ್ತರಿಸಿದ್ದಾರೆ.

ಹೆಣ್ಣಿನ ಶಾಪ; ಈ ವಾರ ಮನೆಯಿಂದ ಹೊರ ಹೋಗೋ ಸ್ಪರ್ಧಿ ಶಮಂತ್?
ಬಿಗ್​ಬಾಸ್​ ಸ್ಪರ್ಧಿ ಶಮಂತ್​
ರಾಜೇಶ್ ದುಗ್ಗುಮನೆ
| Edited By: |

Updated on:May 03, 2021 | 2:57 PM

Share

ಶಮಂತ್​ ಬ್ರೋ ಗೌಡ ಬಿಗ್​ ಬಾಸ್​ ಮನೆಯಲ್ಲಿ ಹೆಚ್ಚು ಆ್ಯಕ್ಟಿವ್​ ಆಗಿದ್ದಾರೆ. ಎಲಿಮಿನೇಷನ್​ನಿಂದ ಜಸ್ಟ್​ ಬಚಾವ್​ ಆಗಿದ್ದ ಅವರು, ಒಂಬತ್ತನೇ ವಾರ ಅತ್ಯುತ್ತಮ ಪರ್ಫಾರ್ಮೆನ್ಸ್​ ತೋರಿ ಪದಕ ಗಳಿಸಿಕೊಂಡಿದ್ದಾರೆ. ಆದಾಗ್ಯೂ ಶಮಂತ್​ ಮೇಲೆ ಪ್ರಿಯಾಂಕಾ ತಿಮ್ಮೇಶ್​ ಅಸಮಾಧಾನ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, 10ನೇ ವಾರ ನೀನೇ ಮನೆಯಿಂದ ಹೊರಹೋಗು ಎಂದು ಶಾಪ ಹಾಕಿದ್ದಾರೆ.

ಈ ವಾರ ಕಳಪೆ ಪಟ್ಟ ನೀಡುವಾಗ ಎಲ್ಲರೂ ಪ್ರಿಯಾಂಕಾ ತಿಮ್ಮೇಶ್​ ಹೆಸರನ್ನು ತೆಗೆದುಕೊಂಡರು. ಇದಕ್ಕೆ ಶಮಂತ್​ ಕೂಡ ಹೊರತಾಗಿರಲಿಲ್ಲ. ಪ್ರಿಯಾಂಕಾ ಯಾರ ಜತೆಯೂ ಅಷ್ಟಾಗಿ ಬೆರೆಯುತ್ತಿಲ್ಲ ಎನ್ನುವ ಕಾರಣ ನೀಡಿ ಅವರಿಗೆ ಕಳಪೆ ಪಟ್ಟ ಕಟ್ಟಿದರು ಶಮಂತ್. ಅತಿ ಹೆಚ್ಚು ವೋಟ್​ ಬಿದ್ದ ಕಾರಣ ಪ್ರಿಯಾಂಕಾ ಜೈಲು ಪಾಲಾದರು. ಇದು ಪ್ರಿಯಾಂಕಾಗೆ ಅವಮಾನ ತಂದಿದೆ. ಅಲ್ಲದೆ, ಈ ಬಗ್ಗೆ ಅವರು ಸಿಟ್ಟಾಗಿದ್ದಾರೆ.

ಕಳಪೆ ಪಟ್ಟ ಪಡೆದು ಜೈಲು ಸೇರಿದ ನಂತರದಲ್ಲಿ ಪ್ರಿಯಾಂಕಾ ಅವರನ್ನು ಶಮಂತ್​ ಮಾತನಾಡಿಸೋಕೆ ಬಂದಿದ್ದಾರೆ. ಆಗ ಪ್ರಿಯಾಂಕಾ ಸಿಡುಕಿನಿಂದಲೇ ಉತ್ತರಿಸಿದ್ದಾರೆ. ನಾನು ಜೈಲಿನಿಂದ ಹೊರ ಬಂದಮೇಲೆ ನಿನ್ನ ಜೊತೆ ಸೇರುವುದಿಲ್ಲ. ನನಗೆ ಇಷ್ಟಬಂದವರ ಜೊತೆಗೆ ನಾನು ಇರುತ್ತೇನೆ. ನಾನಿಲ್ಲಿಗೆ ಸಂಬಂಧಗಳನ್ನು ಹುಟ್ಟುಹಾಕೋಕೆ ಬಂದಿಲ್ಲ. ಹೊರ ಜಗತ್ತಿಗೆ ನಾನು ಏನು ಎಂಬುದನ್ನು ತೋರಿಸಬೇಕಿದೆ ಎಂದರು.

ಈ ಮಾತನ್ನು ಕೇಳಿ ಶಮಂತ್ ಕಂಗಾಲಾದರು. ಅಷ್ಟೇ ಅಲ್ಲ, ಬೆಣ್ಣೆ ಸವರೋಕೆ ಬಂದರು. ಆದರೆ, ಪ್ರಿಯಾಂಕಾ ಇದಕ್ಕೆ ಸೊಪ್ಪು ಹಾಕಲಿಲ್ಲ. ಮುಂದಿನ ವಾರವೇ ಈ ಮನೆಯಿಂದ ನೀನು ಹೊರಗೆ ಹೋಗು. ನಂದೇ ಶಾಪ. ನೀನು ಬಂದು 10ನೇ ವಾರಕ್ಕೆ ಇವಾಗ ಚೆನ್ನಾಗಿ ಆಡ್ತಾ ಇದ್ದಾನೆ, ಪರವಾಗಿಲ್ಲ ಎಂದು ಹೇಳಿಸಿಕೊಳ್ತೀಯಾ? ನಾಚಿಕೆ ಆಗಬೇಕು ನಿನಗೆ ಥೂ ಎಂದು ಬೈದರು.

ಅಂದಹಾಗೆ ಶಮಂತ್​ ಈ ವಾರ ನಾಮಿನೇಷನ್​ ಲಿಸ್ಟ್​ನಲ್ಲಿ ಇಲ್ಲ. ಮಂಜು ಪಾವಗಡ, ಅರವಿಂದ್ ಕೆ.ಪಿ., ಪ್ರಶಾಂತ್ ಸಂಬರಗಿ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕಾ ತಿಮ್ಮೇಶ್ ನಾಮಿನೇಟ್​ ಆಗಿದ್ದಾರೆ. ಇವರಲ್ಲಿ ಒಬ್ಬರು ಈ ವಾರ ಮನೆಯಿಂದ ಹೊರ ಹೋಗುತ್ತಾರೆ.

ಇದನ್ನೂ ಓದಿ: Bigg Boss Kannada Elimination: ಬಿಗ್​ ಬಾಸ್​ ಒಂಬತ್ತನೇ ವಾರದ ಎಲಿಮಿನೇಷನ್​ಗೆ ಹೊಸ ಟ್ವಿಸ್ಟ್​!

Published On - 2:55 pm, Mon, 3 May 21

Follow Us
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ಬೆಂಗಳೂರಿನಲ್ಲಿ ಸಿಕ್ಕಿಬಿದ್ದ 31 ಬಾಂಗ್ಲಾದೇಶೀಯರ ಗಡಿಪಾರು
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ವಿಷ್ಣುವಿನ ಲಹರಿ ಇರುವ ಈ ದಿನದ ರಾಶಿ ಭವಿಷ್ಯ ಇಲ್ಲಿದೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಸರ್ಕಾರಿ ಕಚೇರಿಗಳ ವಿಳಂಬಕ್ಕೆ ಬ್ರೇಕ್ ಹಾಕಲು ಸರ್ಕಾರದ 'ಪ್ರಜಾಸೇವಾ' ಕಲ್ಪನೆ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಕೂದಲೆಳೆ ಅಂತರದಲ್ಲಿ ಆರ್‌ಎಸ್‌ಎಸ್ ಹಿರಿಯ ಮುಖಂಡ
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಅಖಾಡಕ್ಕಿಳಿದ ಡಿಕೆಶಿ: ಬಳ್ಳಾರಿಯತ್ತ ತೋಳೇರಿಸಿ ಹೊರಟ ಬಿಜೆಪಿಗೆ ಕೌಂಟರ್!
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಕಿರ್ಗಿಸ್ತಾನ್ ಭೇಟಿಯ ಹೈಲೈಟ್ಸ್ ಹಂಚಿಕೊಂಡ ಪ್ರಧಾನಿ ಮೋದಿ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಆರ್‌ಎಸ್‌ಎಸ್ ಕಚೇರಿ ಮುಂದೆ ಮನುಸ್ಮೃತಿ ಸುಟ್ಟ ಕಾಂಗ್ರೆಸ್‌ ನಾಯಕ ಪೊಲೀಸ್ ವಶ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ಮಹಾತ್ಮ ಗಾಂಧೀಜಿ ಹತ್ಯೆಯಾದ ಸ್ಥಳ ಯಾವುದು? ಅದು ಈಗ ಹೇಗಿದೆ ನೋಡಿ
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ನಾನ್ ವೆಜ್​ ಪ್ರಿಯರಿಗೆ ಶಾಕ್:2 ದಿನ ಬೆಂಗಳೂರಲ್ಲಿ ಸಿಗಲ್ಲ ಮಟನ್-ಚಿಕನ್​!
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್
ದರ್ಶನ್ ಭೇಟಿ ಮಾಡಿದ ವಿಜಯಲಕ್ಷ್ಮಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ, ಝೈದ್ ಖಾನ್