AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್​ ಬಾಸ್​ ಮನೆಯಿಂದ ಹೊರ ಬಂದರೂ ನಿಂತಿಲ್ಲ ಟಾಸ್ಕ್​; ಪ್ರಿಯಾಂಕಾ ತಿಮ್ಮೇಶ್ ವಿಡಿಯೋ ವೈರಲ್​

ಬಿಗ್​ ಬಾಸ್​ ಮನೆಯಲ್ಲಿ ಬಿಸ್ಕತ್​ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಹಣೆಯ ಮೇಲೆ ಬಿಸ್ಕತ್​ ಇಟ್ಟುಕೊಂಡು ಅದನ್ನು ಕೈನಲ್ಲಿ ಮುಟ್ಟದೇ ಜಾರಿಸುತ್ತಾ ಬಾಯಿಗೆ ಹಾಕಿಕೊಳ್ಳಬೇಕು. ಈ ಟಾಸ್ಕ್​ ಸ್ಪರ್ಧಿಗಳಿಗೆ ಸಾಕಷ್ಟು ಮಜ ನೀಡಿತ್ತು.

ಬಿಗ್​ ಬಾಸ್​ ಮನೆಯಿಂದ ಹೊರ ಬಂದರೂ ನಿಂತಿಲ್ಲ ಟಾಸ್ಕ್​; ಪ್ರಿಯಾಂಕಾ ತಿಮ್ಮೇಶ್ ವಿಡಿಯೋ ವೈರಲ್​
ಪ್ರಿಯಾಂಕಾ ತಿಮ್ಮೇಶ್
ರಾಜೇಶ್ ದುಗ್ಗುಮನೆ
| Edited By: |

Updated on: May 27, 2021 | 4:04 PM

Share

ಬಿಗ್​ ಬಾಸ್​ ಮನೆಯಲ್ಲಿ ಸ್ಪರ್ಧಿಗಳಿಗೆ ನಿತ್ಯ ಒಂದೊಂದು ಟಾಸ್ಕ್​ ನೀಡಲಾಗುತ್ತಿತ್ತು. ಎಲ್ಲಾ ಸ್ಪರ್ಧಿಗಳು ಇದನ್ನು ಖುಷಿಯಿಂದಲೇ ಮಾಡಿದ್ದರು. ಕೆಲವರು ಈ ಟಾಸ್ಕ್​​ ಯಶಸ್ವಿಗೊಳಿಸಲು ವಿಫಲರಾಗಿದ್ದರು.  ಹೀಗಾಗಿ, ಬಿಗ್​ ಬಾಸ್​ನಿಂದ ಹೊರಬಂದ ನಂತರದಲ್ಲಿ ಕೆಲ ಟಾಸ್ಕ್​ಗಳನ್ನು ಮನೆಯಲ್ಲೇ ಪ್ರಯತ್ನಿಸಿದ್ದಾರೆ​. ಪ್ರಿಯಾಂಕಾ ತಿಮ್ಮೇಶ್​ ಮನೆಯಲ್ಲೇ ಬಿಸ್ಕತ್​ ಟಾಸ್ಕ್​ ಮಾಡುತ್ತಿರುವ ಫನ್​ ವಿಡಿಯೋ ಒಂದು ಈಗ ಸಾಕಷ್ಟು ವೈರಲ್​ ಆಗಿದೆ.

ಬಿಗ್​ ಬಾಸ್​ ಮನೆಯಲ್ಲಿ ಬಿಸ್ಕತ್​ ಟಾಸ್ಕ್​ ಒಂದನ್ನು ನೀಡಲಾಗಿತ್ತು. ಹಣೆಯ ಮೇಲೆ ಬಿಸ್ಕತ್​ ಇಟ್ಟುಕೊಂಡು ಅದನ್ನು ಕೈನಲ್ಲಿ ಮುಟ್ಟದೇ ಜಾರಿಸುತ್ತಾ ಬಾಯಿಗೆ ಹಾಕಿಕೊಳ್ಳಬೇಕು. ಈ ಟಾಸ್ಕ್​ ಸ್ಪರ್ಧಿಗಳಿಗೆ ಸಾಕಷ್ಟು ಮಜ ನೀಡಿತ್ತು. ಇದು ನೋಡಿದಷ್ಟು ಸುಲಭವಿಲ್ಲ ಎಂಬುದೂ ಸ್ಪಷ್ಟವಾಗಿತ್ತು.

ಬಿಗ್​ ಬಾಸ್​ ಮನೆಯಲ್ಲಿ ನಡೆದ ಈ ಟಾಸ್ಕ್​ನಲ್ಲಿ ರಘು ಗೌಡ ಹಾಗೂ ಪ್ರಿಯಾಂಕಾ ತಿಮ್ಮೇಶ್​ ಕಾಂಪಿಟೇಷನ್​ಗೆ ಇಳಿದಿದ್ದರು. ಎಲ್ಲರೂ ರಘು ಗೌಡ ಗೆಲ್ಲುತ್ತಾರೆ ಎಂದೇ ಭಾವಿಸಿದ್ದರು. ಆದರೆ, ಹಾಗಾಗಲೇ ಇಲ್ಲ. ಪ್ರಿಯಾಂಕಾ ತಿಮ್ಮೇಶ್​ ಅತ್ಯುತ್ತಮವಾಗಿ ಟಾಸ್ಕ್​ ಆಡುವ ಮೂಲಕ ಗೆದ್ದರು. ಈ ಮೂಲಕ ಮನೆಯವರ ಮೆಚ್ಚುಗೆಗೆ ಪಾತ್ರರಾದರು.

ಬಿಗ್​ ಬಾಸ್​ ಮನೆಯಲ್ಲಿ ಟಾಸ್ಕ್​ ಮುಗಿದ ನಂತರ ಅದಕ್ಕೆ ಸಂಬಂಧಿಸಿದ ವಸ್ತುಗಳನ್ನು ಯಾರೂ ಮುಟ್ಟುವಂತಿರಲಿಲ್ಲ. ಹೀಗಾಗಿ, ಮತ್ತೊಮ್ಮೆ ಈ ಟಾಸ್ಕ್​ ಮಾಡಬೇಕು ಎಂದರೆ ಅದು ಅಸಾಧ್ಯವೇ ಆಗಿತ್ತು. ಹೀಗಾಗಿ, ಸ್ಪರ್ಧಿಗಳು ಬಿಗ್​ ಬಾಸ್​ ಮನೆಯಿಂದ ಹೊರ ಬಂದ ನಂತರದಲ್ಲಿ ಅಲ್ಲಿ ನೀಡಿದ್ದ ಟಾಸ್ಕ್​ಗಳನ್ನು ಪ್ರಯತ್ನ ಮಾಡುತ್ತಿದ್ದಾರೆ.

ಪ್ರಿಯಾಂಕಾ ತಿಮ್ಮೇಶ್​ ಕೆಲವರ ಜತೆಗೂಡಿ ಬಿಸ್ಕತ್​ ಟಾಸ್ಕ್​ ಮಾಡಿದ್ದಾರೆ. ಆದರೆ, ಉಳಿದವರಿಗೆ ಈ ಟಾಸ್ಕ್​ ಪೂರ್ಣಗೊಳಿಸೋಕೆ ಸಾಧ್ಯವೇ ಆಗಿಲ್ಲ. ಆದರೆ, ಪ್ರಿಯಾಂಕಾ ತಿಮ್ಮೇಶ್​ ಮಾತ್ರ ಸುಲಭವಾಗಿ ಬಿಸ್ಕತ್​ ತಿಂದರು. ಈ ಮೂಲಕ ಮನೆಯಿಂದ ಹೊರಬಂದ ಮೇಲೂ ಅವರು ಟಾಸ್ಕ್​ ಗೆದ್ದರು.

ಇದನ್ನೂ ಓದಿ: Bigg Boss Kannada 8: ಬಿಗ್​ ಬಾಸ್​ ಮನೆಯಿಂದ ಹೊರಬಂದ ಮೇಲೆ ಬದಲಾದ ವೈಷ್ಣವಿ ಗೌಡ; ಬೇಸರಗೊಂಡ ರಘು

ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಮೋದಿಯಿಂದ ನಾಳೆ ಉದ್ಘಾಟನೆಯಾಗಲಿದೆ ಅಸ್ಸಾಂನ ಅತಿದೊಡ್ಡ ವಿಮಾನ ನಿಲ್ದಾಣ
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಶಾಲೆಗೆ ಬರುವ ಮಕ್ಕಳನ್ನ ಗಾರೆ ಕೆಲಸಕ್ಕಚ್ಚಿದ ಮೇಸ್ಟ್ರು, ವಿಡಿಯೋ ವೈರಲ್
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಸಂಸತ್ ಅಧಿವೇಶನ ಮುಕ್ತಾಯ; ಮೋದಿ ಸೇರಿ ಎಲ್ಲ ಸಂಸದರಿಗೆ ಸ್ಪೀಕರ್ ಟೀ ಪಾರ್ಟಿ
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ಬಾಲಕನನ್ನು ಫುಟ್ಬಾಲ್​​ನಂತೆ ಒದ್ದ ಜಿಮ್ ಟ್ರೈನರ್​​ನ ಮತ್ತಷ್ಟು ಕೃತ್ಯಗಳು
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ‌ ಮಧ್ಯೆ ಬಡಿದಾಟ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ದೇವಿ ದರ್ಶನ ಬಳಿಕ ಡಿಸಿಎಂ ಸ್ಫೋಟಕ ಹೇಳಿಕೆ: ಸಂಚಲನ ಮೂಡಿಸಿದ ಡಿಕೆಶಿ ಸಂದೇಶ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಕುರ್ಚಿ ಕದನದ ನಡುವೆ ಅಂಕೋಲದಲ್ಲಿ ಶಕ್ತಿ ದೇವತೆ ಮೊರೆ ಹೋದ ಡಿಕೆಶಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ
ಹಾವೇರಿ: ದೇವರ ಮೂರ್ತಿ ಭಗ್ನಗೊಳಿಸಿದ ಕಿಡಿಗೇಡಿಗಳು; ವಿಡಿಯೋ ನೋಡಿ