ಅಲ್ಲು ಅರ್ಜುನ್​ ರೀತಿ ‘ತಗ್ಗೆದೆಲೇ’ ಎನ್ನುತ್ತಿರುವ ‘ಪುಷ್ಪ’ ಗಣಪ: ಕೆಲವರಿಂದ ಕೇಳಿಬಂತು ಟೀಕೆ

Ganesh Chaturthi 2022: ‘ತಗ್ಗೆದೆಲೇ..’ ರೀತಿಯ ಗಣಪನ ಕುರಿತು ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ.

ಅಲ್ಲು ಅರ್ಜುನ್​ ರೀತಿ ‘ತಗ್ಗೆದೆಲೇ’ ಎನ್ನುತ್ತಿರುವ ‘ಪುಷ್ಪ’ ಗಣಪ: ಕೆಲವರಿಂದ ಕೇಳಿಬಂತು ಟೀಕೆ
‘ತಗ್ಗೆದೆಲೇ..’ ಗಣಪ, ಅಲ್ಲು ಅರ್ಜುನ್
Edited By:

Updated on: Aug 31, 2022 | 9:58 AM

ವಿಘ್ನ ವಿನಾಶಕ ಗಣೇಶನಿಗೆ ಅಸಂಖ್ಯಾತ ರೂಪ. ಎಲ್ಲ ರೀತಿಯಲ್ಲೂ ಗಣಪನ (Lord Ganesha) ಮೂರ್ತಿ ಸಿದ್ಧಗೊಳ್ಳುತ್ತದೆ. ಪ್ರತಿ ವರ್ಷ ಗಣೇಶ ಚತುರ್ಥಿ ಸಂದರ್ಭದಲ್ಲಿ ವಿಧವಿಧವಾದ ಗಣಪನ ವಿಗ್ರಹಗಳ ರಾರಾಜಿಸುತ್ತವೆ. ಸಿನಿಮಾಗಳ ಶೈಲಿಯಲ್ಲೂ ಗಣೇಶನ ಮೂರ್ತಿಯನ್ನು ತಯಾರಿಸಲಾಗುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಪುನೀತ್​ ರಾಜ್​ಕುಮಾರ್​ ಅವರ ರೀತಿಯಲ್ಲಿ ವಿನಾಯಕನ ಮೂರ್ತಿ ಸಿದ್ಧವಾದ ಬೆನ್ನಲ್ಲೇ ‘ಪುಷ್ಪ’ (Pushpa Movie) ಸಿನಿಮಾದ ಸ್ಟೈಲ್​ನಲ್ಲೂ ಗಣಪನನ್ನು ತಯಾರಿಸಲಾಗಿದೆ. ಅಲ್ಲು ಅರ್ಜುನ್​ (Allu Arjun) ಅವರು ‘ತಗ್ಗೆದೆಲೇ..’ ಎಂದು ಡೈಲಾಗ್​ ಹೊಡೆದ ರೀತಿಯಲ್ಲೇ ಈ ಗಣೇಶ ಮೂಡಿಬಂದಿದ್ದಾನೆ. ಆ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿವೆ. ಅಲ್ಲು ಅರ್ಜುನ್​ ಅಭಿಮಾನಿಗಳು ಇದನ್ನು ನೋಡಿ ಖುಷಿ ಪಟ್ಟಿದ್ದಾರೆ. ಆದರೆ ಒಂದು ವರ್ಗದ ಜನರಿಂದ ಟೀಕೆ ವ್ಯಕ್ತವಾಗಿದೆ.

ಅಲ್ಲು ಅರ್ಜುನ್​, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಸಿನಿಮಾ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಬಾಕ್ಸ್​ ಆಫೀಸ್​ನಲ್ಲಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದ ಈ ಚಿತ್ರವನ್ನು ಹಿಂದಿ ಪ್ರೇಕ್ಷಕರು ಕೂಡ ಮೆಚ್ಚಿಕೊಂಡರು. ಅದರ ಕ್ರೇಜ್​ ಇನ್ನೂ ನಿಂತಿಲ್ಲ. ಗಣಪತಿ ಹಬ್ಬದ ಸಂದರ್ಭದಲ್ಲೂ ‘ಪುಷ್ಪ’ ಚಿತ್ರದ ಛಾಯೆ ಪಸರಿಸಿದೆ. ಈ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಮಾಡಿದ ಪುಷ್ಪ ರಾಜ್​ ಎಂಬ ಪಾತ್ರದ ರೀತಿಯಲ್ಲಿ ಗಣೇಶನ ಮೂರ್ತಿ ತಯಾರಿಸಿ, ಪೂಜೆ ಮಾಡಲಾಗುತ್ತಿದೆ.

‘ಪುಷ್ಪ’ ಸಿನಿಮಾದಲ್ಲಿ ಅಲ್ಲು ಅರ್ಜುನ್​ ಅವರು ‘ತಗ್ಗೆದೆಲೇ..’ ಎಂದು ಡೈಲಾಗ್​ ಹೊಡಿದಿದ್ದು ಸಖತ್​ ಫೇಮಸ್​ ಆಗಿತ್ತು. ತೆಲುಗು ಮಂದಿ ಮಾತ್ರವಲ್ಲದೇ ವಿದೇಶದ ಕೆಲವು ಸೆಲೆಬ್ರಿಟಿಗಳು ಕೂಡ ಅದೇ ರೀತಿ ರೀಲ್ಸ್​ ಮಾಡಿ ಗಮನ ಸೆಳೆದಿದ್ದರು. ಅನೇಕ ಸಂದರ್ಭದಲ್ಲಿ ಆ ಶೈಲಿಯಲ್ಲಿ ಸೆಲೆಬ್ರಿಟಿಗಳು ಪೋಸ್​ ನೀಡಿದ್ದುಂಟು. ಈಗ ಗಣಪನ ಮೂರ್ತಿಯನ್ನು ಕೂಡ ‘ತಗ್ಗೆದಲೇ..’ ಶೈಲಿಯಲ್ಲಿ ತಯಾರಿಸಲಾಗಿದೆ.

ಇದನ್ನೂ ಓದಿ
Ganesh Chaturthi: ಮುಖ ಮುಚ್ಕೊಂಡು ಗಣೇಶನ ಹಬ್ಬ ಮಾಡುತ್ತಿರುವ ರಾಜ್​ ಕುಂದ್ರಾ; ಕುಂಟುತ್ತಿರುವ ಶಿಲ್ಪಾ ಶೆಟ್ಟಿ
Puneeth Rajkumar: ಪುನೀತ್ ರಾಜ್​ಕುಮಾರ್ ಹೆಗಲಮೇಲೆ ಕೈ ಹಾಕಿ ನಿಂತ ಗಣಪ; ಮಣ್ಣಿನಲ್ಲಿ ಅರಳಿದ ಅಪ್ಪುಗೆ ಭಾರೀ ಬೇಡಿಕೆ
Puneeth Rajkumar: ಕಲಾವಿದನ ಕಲ್ಪನೆಯಲ್ಲಿ ಪುನೀತ್​-ಗಣಪ; ‘ನಮ್ಮ ಪಾಲಿಗೆ ದೇವರು ಇಲ್ಲ’ ಎಂದ ಫ್ಯಾನ್ಸ್​

ಈ ಕುರಿತಂತೆ ಸೋಶಿಯಲ್​ ಮೀಡಿಯಾದಲ್ಲಿ ಹಲವು ಬಗೆಯ ಅಭಿಪ್ರಾಯ ವ್ಯಕ್ತವಾಗಿದೆ. ಕೆಲವರು ಇದನ್ನು ವಿರೋಧಿಸಿದ್ದಾರೆ. ‘ಓರ್ವ ನಟನ ಮೇಲೆ ಅಭಿಮಾನ ಇರುವುದು ಸಹಜ. ಆದರೆ ಗಣೇಶನಿಗೆ ಈ ರೂಪ ನೀಡಿರುವುದು ಸರಿಯಲ್ಲ. ನೀವು ಗಣಪನನ್ನು ಪೂಜಿಸುತ್ತಿದ್ದೀರೋ ಅಥವಾ ಅಣಕಿಸುತ್ತಿದ್ದೀರೋ’ ಎಂದು ನೆಟ್ಟಿಗರೊಬ್ಬರು ಕಮೆಂಟ್​ ಮಾಡಿದ್ದಾರೆ.

2021ರ ಡಿಸೆಂಬರ್​ 17ರಂದು ‘ಪುಷ್ಪ’ ಸಿನಿಮಾ ತೆರೆಕಂಡಿತು. ಸುಕುಮಾರ್​ ನಿರ್ದೇಶನ ಮಾಡಿದ ಆ ಚಿತ್ರಕ್ಕೆ ಈಗ ಎರಡನೇ ಪಾರ್ಟ್​ ಸಿದ್ಧವಾಗುತ್ತಿದೆ. ‘ಪುಷ್ಪ 2’ ಸಿನಿಮಾದ ಶೂಟಿಂಗ್​ ಇತ್ತೀಚೆಗೆಷ್ಟೇ ಆರಂಭ ಆಗಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 9:58 am, Wed, 31 August 22