ಸಿನಿಮಾ ಅಪ್​ಡೇಟ್ ಕೇಳಿದ್ದಕ್ಕೆ ಹೊಡೆಯಲು ಬಂದ ರಾಜಮೌಳಿ

ರಾಜಮೌಳಿ, ಮಹೇಶ್ ಬಾಬು ಜೊತೆ ಸಿನಿಮಾ ಘೋಷಣೆ ಮಾಡಿ ಎರಡು ವರ್ಷವಾಗಿದೆ, ಸಿನಿಮಾದ ಮುಹೂರ್ತ ಸಹ ಇನ್ನೂ ನಡೆದಿಲ್ಲ. ಇದೀಗ ರಾಜಮೌಳಿಯನ್ನು ಹೊಸ ಸಿನಿಮಾದ ಅಪ್​ಡೇಟ್ ಕೇಳಿದ್ದಕ್ಕೆ ದೊಣ್ಣೆಯಲ್ಲಿ ಹೊಡೆಯಲು ಮುಂದಾಗಿದ್ದಾರೆ!

ಸಿನಿಮಾ ಅಪ್​ಡೇಟ್ ಕೇಳಿದ್ದಕ್ಕೆ ಹೊಡೆಯಲು ಬಂದ ರಾಜಮೌಳಿ
Follow us
|

Updated on: Sep 11, 2024 | 6:10 PM

ರಾಜಮೌಳಿ, ಮಹೇಶ್ ಬಾಬು ಜೊತೆಗೆ ಸಿನಿಮಾ ಘೋಷಿಸಿ ವರ್ಷಗಳೇ ಆಗಿವೆ. ‘ಆರ್​ಆರ್​ಆರ್’ ಸಿನಿಮಾ ಬಿಡುಗಡೆಗೂ ಮುಂಚೆಯೇ ಮಹೇಶ್ ಬಾಬು ಜೊತೆಗೆ ಸಿನಿಮಾ ಮಾಡುತ್ತಿರುವುದಾಗಿ ಮಹೇಶ್ ಬಾಬು ಘೋಷಣೆ ಮಾಡಿದ್ದರು. ‘ಆರ್​ಆರ್​ಆರ್’ ಸಿನಿಮಾ ಬಿಡುಗಡೆ ಆಗಿಯೇ ಎರಡು ವರ್ಷವಾಗುತ್ತಾ ಬಂತು, ಆದರೆ ರಾಜಮೌಳಿ-ಮಹೇಶ್ ಬಾಬು ಸಿನಿಮಾದ ಮುಹೂರ್ತ ಸಹ ಇನ್ನೂ ಆಗಿಲ್ಲ. ಸಿನಿಮಾದ ಪ್ರೀ ಪ್ರೊಡಕ್ಷನ್​ಗೆ ಸುಮಾರು ಒಂದು ವರ್ಷ ಸಮಯ ತೆಗೆದುಕೊಂಡಿದ್ದಾರೆ ರಾಜಮೌಳಿ. ಸಿನಿಮಾ ಯಾವಾಗ ಪ್ರಾರಂಭವಾಗುತ್ತದೆ, ಮಹೇಶ್ ಬಾಬು ಬಿಟ್ಟರೆ ಇನ್ಯಾರು ಇರಲಿದ್ದಾರೆ ಯಾವ ಸುದ್ದಿಯೂ ಇಲ್ಲ. ಇದೀಗ ಸಿನಿಮಾ ಬಗ್ಗೆ ಅಪ್​ಡೇಟ್ ಕೇಳಿದ್ದಕ್ಕೆ ದೊಣ್ಣೆಯಲ್ಲಿ ಹೊಡೆಯಲು ಮುಂದಾಗಿದ್ದಾರೆ ರಾಜಮೌಳಿ! ಆದರೆ ತಮಾಷೆಗೆ.

‘ಮತ್ತು ವದಲರಾ’ ಹೆಸರಿನ ತೆಲುಗು ಕಾಮಿಡಿ ಸಿನಿಮಾ ಕೆಲ ವರ್ಷಗಳ ಹಿಂದೆ ಬಿಡುಗಡೆ ಆಗಿ ಸೂಪರ್ ಹಿಟ್ ಆಗಿತ್ತು. ಕಡಿಮೆ ಬಜೆಟ್​ನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ ತಮ್ಮ ನಿರೂಪಣೆ ಹಾಗೂ ಕಾಮಿಡಿ ಸನ್ನಿವೇಶಗಳಿಂದ ಸೆಳೆದಿತ್ತು. ಒಟಿಟಿಯಲ್ಲಂತೂ ಬ್ಲಾಕ್ ಬಸ್ಟರ್ ಆಗಿತ್ತು. ಇದೀಗ ಈ ಸಿನಿಮಾದ ಎರಡನೇ ಭಾಗ ತೆರೆಗೆ ಬರುತ್ತಿದೆ. ಸಿನಿಮಾದ ಪ್ರಚಾರದಲ್ಲಿ ಚಿತ್ರತಂಡ ನಿರತರಾಗಿದ್ದು, ಸಿನಿಮಾದ ಥೀಮ್​ನಂತೆಯೇ ಹಾಸ್ಯಮಯವಾಗಿ ಪ್ರಚಾರ ಮಾಡುತ್ತಿದ್ದಾರೆ.

ಇದನ್ನೂ ಓದಿ: ರಾಜಮೌಳಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಶ್ರೀದೇವಿ: ಕಾರಣ?

ಪ್ರಚಾರದ ಭಾಗವಾಗಿ ಸಿನಿಮಾದ ನಾಯಕ ರಾಜಮೌಳಿಯವರ ಬಳಿ ಹೋಗಿದ್ದರು. ಮೊದಲು ರಾಜಮೌಳಿ ಪುತ್ರ ಕಾರ್ತಿಕೇಯ ಅನ್ನು ಭೇಟಿಯಾಗಿ ಸಿನಿಮಾದ ಪ್ರಚಾರಕ್ಕೆ ರಾಜಮೌಳಿಯ ಸಹಾಯ ಕೇಳಿದ್ದಾರೆ. ಕಾರ್ತಿಕೇಯ ಬಳಿ ಮಾತನಾಡುವಾಗಲೇ ಬರುವ ರಾಜಮೌಳಿ, ತಮ್ಮ ಎಂದಿನ ಶೈಲಿಗಿಂತಲೂ ಭಿನ್ನವಾಗಿ ಆಯ್ತು ಎಲ್ಲರೂ ಬಂದು ಸಿನಿಮಾ ನೋಡಿ ಎಂದು ದಾರ್ಷ್ಯದಿಂದ ಹೇಳಿ ನಾಯಕನನ್ನು ಸಾಗಹಾಕಲು ನೋಡುತ್ತಾರೆ ಕೊನೆಯಲ್ಲಿ ‘ಮತ್ತು ವದಲರಾ’ ಸಿನಿಮಾದ ನಾಯಕ, ಸರ್, ನಿಮ್ಮ ಹಾಗೂ ಮಹೇಶ್ ಬಾಬು ಸಿನಿಮಾ ಅಪ್​ಡೇಟ್ ಇದ್ದರೆ ಕೊಡಿ ಎಂದಾಗ ರಾಜಮೌಳಿ, ದೊಣ್ಣೆ ಎತ್ತುಕೊಂಡು ನಾಯಕನ್ನು ಹೊಡೆಯಲು ಮುಂದಾಗುತ್ತಾರೆ ಕೂಡಲೇ ನಾಯಕ ಅಲ್ಲಿಂದ ಪರಾರಿ! ಆದರೆ ಈ ವಿಡಿಯೋವನ್ನು ತಮಾಷೆಗೆಂದು ಮಾಡಿದ್ದಾರೆ ಚಿತ್ರತಂಡ.

ಇನ್ನು ನಟ ಪ್ರಭಾಸ್ ಬಳಿಯೂ ಟ್ರೈಲರ್​ ಬಿಡುಗಡೆಗೆ ಹೋಗಿತ್ತು ‘ಮತ್ತು ವದಲರಾ’ ಚಿತ್ರತಂಡ. ಪ್ರಭಾಸ್​ ಟ್ರೈಲರ್ ಬಿಡುಗಡೆ ಮಾಡಿದ ವಿಡಿಯೋ ಸಹ ಬಹಳ ಹಾಸ್ಯಮಯವಾಗಿ ಚಿತ್ರೀಕರಣ ಮಾಡಿತ್ತು. ಟ್ರೈಲರ್​ಗಿಂತಲೂ, ಟ್ರೈಲರ್ ಬಿಡುಗಡೆ ವಿಡಿಯೋ ಯೂಟ್ಯೂಬ್​ನಲ್ಲಿ ಸಖತ್ ಟ್ರೆಂಡ್ ಆಗಿತ್ತು. ಪ್ರಭಾಸ್ ಸಹ ತಮ್ಮ ಎಂದಿನ ಮಾಸ್ ಅವತಾರದ ಬದಲು ಮೊದಲಿನಂತೆ ಕಾಮಿಡಿಯಾಗಿ ವಿಡಿಯೋನಲ್ಲಿ ಕಾಣಿಸಿಕೊಂಡಿದ್ದಾರೆ.

‘ಮತ್ತು ವದಲರಾ 2’ ಸಿನಿಮಾನಲ್ಲಿ ಶ್ರೀ ಸಿಂಹ ಕೋಡುರಿ ನಾಯಕರಾಗಿ ನಟಿಸಿದ್ದಾರೆ. ಹಾಸ್ಯ ನಟ ಸತ್ಯ ಸಹ ಇದ್ದಾರೆ. ನಾಯಕಿಯಾಗಿ ಫರಿಯಯಾ ಅಬ್ದುಲ್ಲಾ, ಜನಪ್ರಿಯ ಹಾಸ್ಯನಟ ವೆನ್ನೆಲ ಕಿಶೋರ್ ಇದ್ದಾರೆ. ನಟ ಸುನಿಲ್ ಇನ್ನೂ ಕೆಲವು ಪ್ರತಿಭಾವಂತ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಸೆಪ್ಟೆಂಬರ್ 13ಕ್ಕೆ ಬಿಡುಗಡೆ ಆಗಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಕಗ್ಗತ್ತಲ ರಾತ್ರಿ, ನಡು ರಸ್ತೆಯಲ್ಲಿ ಹುಲಿರಾಯನ ಓಡಾಟ; ವಿಡಿಯೋ ಸೆರೆ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ಬಿಜೆಪಿ ಕಾರ್ಯಾಲಯದಲ್ಲಿ ರಂಗೋಲಿಯಲ್ಲಿ ಅರಳಿದ ಪ್ರಧಾನಿ ಮೋದಿ ಭಾವಚಿತ್ರ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ರಿಲಯನ್ಸ್ ಜಿಯೋ 4G ಫೀಚರ್ ಫೋನ್​ ದೇಶದ ಮಾರುಕಟ್ಟೆಗೆ ಬಿಡುಗಡೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ಧರ್ಮಸ್ಥಳ ಸಂಘದ ಬಗ್ಗೆ ಕಾಂಗ್ರೆಸ್ ಶಾಸಕ ನರೇಂದ್ರಸ್ವಾಮಿ ಆಘಾತಕಾರಿ ಹೇಳಿಕೆ
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
ನಾವು ಸೇಡು ತೀರಿಸಿಕೊಂಡರೆ ಬಿಜೆಪಿಗೆ ಜೈಲುಗಳು ಸಾಕಾಗಲ್ಲ: ಹೆಬ್ಬಾಳ್ಕರ್
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
‘ಕನ್ನಡ ಚಿತ್ರರಂಗಕ್ಕೆ ಸಮಿತಿ ಬೇಡ, ಇದರಿಂದ ಚಿತ್ರರಂಗಕ್ಕೆ ನಷ್ಟ’; ಗೋವಿಂದು
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ತಿರುಮಲ ದೇವಾಲಯದಲ್ಲಿನ ವಿಮಾನ ವೆಂಕಟೇಶ್ವರನ ಮಹತ್ವ ತಿಳಿಯಿರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಈ ರಾಶಿಯವರು ಆಸ್ತಿಯ ವಿಚಾರವಾಗಿ ಕಾನೂನು ಹೋರಾಟ ಮಾಡಲಿದ್ದೀರಿ
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ
ಗ್ಯಾರಂಟಿ ಯೋಜನೆ ಜಾರಿ ನಂತರ ನನ್ನನ್ನು ಮುಗಿಸಲು ಷಡ್ಯಂತ್ರ; ಸಿದ್ದರಾಮಯ್ಯ