ರಾಜಮೌಳಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಶ್ರೀದೇವಿ: ಕಾರಣ?

SS Rajamouli: ರಾಜಮೌಳಿ ಯಾರೊಂದಿಗೆ ವಿವಾದ ಮಾಡಿಕೊಳ್ಳದ, ವಿನಮ್ರ, ಶಾಂತಚಿತ್ತದ ಸ್ಟಾರ್ ನಿರ್ದೇಶಕ, ಆದರೆ ದಿವಂಗತ ನಟಿ ಶ್ರಿದೇವಿ ಒಮ್ಮೆ ರಾಜಮೌಳಿ ಬಗ್ಗೆ ಬಹಿರಂಗವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಅದಕ್ಕೆ ಕಾರಣವೂ ಇದೆ.

ರಾಜಮೌಳಿ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದ ಶ್ರೀದೇವಿ: ಕಾರಣ?
Follow us
|

Updated on: Aug 13, 2024 | 6:31 PM

ರಾಜಮೌಳಿ, ಭಾರತದ ಟಾಪ್ ನಿರ್ದೇಶಕ. ಈಗ ಪ್ಯಾನ್ ವರ್ಲ್ಡ್ ನಿರ್ದೇಶಕರೂ ಆಗಿದ್ದಾರೆ. ದೊಡ್ಡ ದೊಡ್ಡ ಸ್ಟಾರ್ ನಟರು ರಾಜಮೌಳಿ ಜೊತೆ ಕೆಲಸ ಮಾಡಲು ತುದಿ ಗಾಲಲ್ಲಿ ನಿಂತಿದ್ದಾರೆ. ಹಾಲಿವುಡ್​ನ ಗ್ರೇಟೆಸ್ಟ್ ನಿರ್ದೇಶಕರುಗಳೇ ರಾಜಮೌಳಿಗೆ ಹಾಲಿವುಡ್​ನಲ್ಲಿ ಬಂದು ಕೆಲಸ ಮಾಡುವಂತೆ ಆಫರ್ ನೀಡಿದ್ದಾರೆ. ಅಹಂಕಾರ ಪಡಲು ರಾಜಮೌಳಿಗೆ ಬಹಳ ಕಾರಣಗಳು, ಅವಕಾಶಗಳಿವೆ, ಹಾಗಿದ್ದರೂ ರಾಜಮೌಳಿ ವಿನಯದಿಂದಲೇ ವರ್ತಿಸುತ್ತಾರೆ. ತಮ್ಮ ಸಿನಿಮಾಗಳ ಜೊತೆಗೆ ತಮ್ಮ ವಿನಯತೆಯಿಂದಲೂ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಅವರು ಸಂಪಾದಿಸಿದ್ದಾರೆ. ರಾಜಮೌಳಿ ಅಜಾತ ಶತ್ರುವಾಗಿದ್ದಾರೆ. ಆದರೆ ಮಾಜಿ ಸ್ಟಾರ್ ನಟಿ, ದಿವಂಗತ ಶ್ರೀದೇವಿ ಮಾತ್ರ ಒಮ್ಮೆ ಬಹಿರಂಗವಾಗಿಯೇ ರಾಜಮೌಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಎಲ್ಲರಿಗೂ ಗೊತ್ತಿರುವಂತೆ ‘ಬಾಹುಬಲಿ’ ರಾಜಮೌಳಿಯ ಈವರೆಗಿನ ಅತ್ಯುತ್ತಮ ಸಿನಿಮಾ ಎನ್ನಲಾಗುತ್ತದೆ. ಭಾರತದ ಸಿನಿಮಾ ಇತಿಹಾಸದಲ್ಲಿ ಬಾಹುಬಲಿಗೆ ವಿಶೇಷ ಸ್ಥಾನವಿದೆ. ಆ ಸಿನಿಮಾದ ಪ್ರತಿ ಪಾತ್ರವೂ ಅದ್ಭುತ. ಪ್ರತಿ ಪಾತ್ರಗಳನ್ನು ರಾಜಮೌಳಿ ತೆರೆಗೆ ತಂದಿದ್ದ ರೀತಿ ಅತ್ಯದ್ಭುತವಾಗಿತ್ತು. ಸಿನಿಮಾದ ಹಲವು ಪಾತ್ರಗಳು ಇಂದಿಗೂ ಪ್ರೇಕ್ಷಕರಿಗೆ ನೆನಪಿವೆ. ಪ್ರಭಾಸ್​ರ ಪಾತ್ರದಷ್ಟೆ ಮಿಂಚಿದ್ದ ಮತ್ತೊಂದು ಪಾತ್ರವೆಂದರೆ ಅದು ಶಿವಗಾಮಿ ಪಾತ್ರ. ಆ ಪಾತ್ರವನ್ನು ರಮ್ಯಕೃಷ್ಣ ನಿರ್ವಹಿಸಿದ್ದರು. ಅಸಲಿಗೆ ರಾಜಮೌಳಿ, ಶಿವಗಾಮಿ ಪಾತ್ರಕ್ಕೆ ಮೊದಲು ಕೇಳಿದ್ದು ನಟಿ ಶ್ರೀದೇವಿಯನ್ನು!

ರಾಜಮೌಳಿ, ಶ್ರೀದೇವಿ ಅವರನ್ನು ಶಿವಗಾಮಿ ಪಾತ್ರಕ್ಕಾಗಿ ಕೇಳಿದರಂತೆ. ಆದರೆ ಶ್ರೀದೇವಿ ಆ ಸಿನಿಮಾದಲ್ಲಿ ನಟಿಸಲು ಕೆಲವು ಡಿಮ್ಯಾಂಡ್​ಗಳನ್ನು ಇರಿಸಿದರಂತೆ. ಇದು ರಾಜಮೌಳಿಗೆ ಇಷ್ಟವಾಗಲಿಲ್ಲ. ಅಲ್ಲದೆ ಭಾರಿ ಬಜೆಟ್​ ಸಿನಿಮಾ ಆಗಿರುವ ಕಾರಣ, ನಟ-ನಟಿಯರ ಕಂಫರ್ಟ್​ಗೆ ಹೆಚ್ಚು ಹಣ ಸುರಿಯುವುದು ಸ್ವತಃ ರಾಜಮೌಳಿಗೆ ಇಷ್ಟವಿರಲಿಲ್ಲ. ಹಾಗೂ ಕತೆ, ಉಡುಪುಗಳಲ್ಲಿಯೂ ಶ್ರೀದೇವಿ ಬದಲಾವಣೆ ಕೇಳಿದ್ದರಂತೆ. ಇದೆಲ್ಲ ರಾಜಮೌಳಿಗೆ ಇಷ್ಟವಾಗದ ಕಾರಣ ಅವರನ್ನು ಕೈಬಿಟ್ಟು ರಮ್ಯಕೃಷ್ಣರನ್ನು ರಾಜಮೌಳಿ ಹಾಕಿಕೊಂಡರು.

ಇದನ್ನೂ ಓದಿ:ಮಗನ ಪ್ರತಿಸ್ಪರ್ಧಿಗೆ ರಾಜಮೌಳಿ ತಂದೆ ಹೇಳಿದ ಚಿನ್ನದಂಥಹಾ ಮಾತು

ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದ ರಾಜಮೌಳಿ, ‘ನಾವು ರಮ್ಯಕೃಷ್ಣ ಅವರನ್ನು ಕೇಳಿದ ಕೂಡಲೇ ನಟಿಸುವುದಾಗಿ ಒಪ್ಪಿಕೊಂಡರು, ಮಾತ್ರವಲ್ಲದೆ ವರ್ಷಗಳ ಕಾಲ ನೆನಪುಳಿಯುವಂತೆ ಪಾತ್ರವನ್ನು ನಿರ್ವಹಿಸಿದರು. ನಾವು ಶ್ರೀದೇವಿಯನ್ನು ಕೈಬಿಡುವ ನಿರ್ಣಯ ಮಾಡಿದ್ದು ಬಹಳ ಒಳಿತಾಯಿತು, ಅದೃಷ್ಟವಶಾತ್ ನಾವು ಶ್ರೀದೇವಿಯನ್ನು ನಮ್ಮ ಸಿನಿಮಾಕ್ಕೆ ಹಾಕಿಕೊಳ್ಳಲಿಲ್ಲ’ ಎಂದಿದ್ದರು.

ರಾಜಮೌಳಿಯ ಈ ಮಾತಿನ ಬಗ್ಗೆ ಮತ್ತೊಂದು ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದ ಶ್ರೀದೇವಿ, ‘ನನಗೆ ರಾಜಮೌಳಿ ಆಡಿದ ಮಾತಿನಿಂದ ಶಾಕ್ ಆಯ್ತು ಮಾತ್ರವಲ್ಲ ಬಹಳ ಬೇಸರವೂ ಆಯ್ತು. ರಾಜಮೌಳಿ ಬಹಳ ಶಾಂತ ಮತ್ತು ವಿನಮ್ರ ವ್ಯಕ್ತಿ. ಆದರೆ ಆ ಸಂದರ್ಶನದಲ್ಲಿ ನನ್ನ ಬಗ್ಗೆ ಅವರು ಮಾತನಾಡಿದ ರೀತಿ, ನನಗೆ ಬಹಳ ಬೇಸರ ತಂದಿದೆ’ ಎಂದಿದ್ದರು. ಶ್ರೀದೇವಿ 2018ರ ಫೆಬ್ರವರಿ 28 ರಂದು ನಿಧನ ಹೊಂದಿದರು. ಇಂದು (ಆಗಸ್ಟ್ 13) ಅವರ ಜನ್ಮದಿನ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಗದಗ: ಲಂಚದ ಆರೋಪ, ಅಧಿಕಾರಿಗೆ ಸಚಿವ ಎಚ್​ಕೆ ಪಾಟೀಲ್​ ಹಿಗ್ಗಾಮುಗ್ಗಾ ತರಾಟೆ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಪ್ರವಾಹ ಸ್ಥಳದಲ್ಲಿ ಟಿಎಂಸಿ ಶಾಸಕರು, ಸಂಸದರಿದ್ದ ದೋಣಿ ಪಲ್ಟಿ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಒಬ್ಬರೇ ಇದ್ದೀರಾ? ಭಯ ಅನಿಸುತ್ತಿದೆಯಾ? ಈ ವೇಳೆ ಜಪಿಸಬೇಕಾದ ನಾಮಗಳು ಇಲ್ಲಿವೆ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಈ ರಾಶಿಯವರು ಗೊತ್ತಾಗದೇ ಕೆಟ್ಟವರ ಸಹವಾಸವನ್ನು ಮಾಡುವಿರಿ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಚಲಿಸುವಾಗಲೇ ನೀರಿನಲ್ಲಿ ತೇಲಿದ ಕಾರು; ಪ್ರಾಣದ ಹಂಗು ತೊರೆದು ಜನರ ರಕ್ಷಣೆ
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಹೃದಯ ವಿದ್ರಾವಕ ಘಟನೆ: ಬೈಕ್‌ನಲ್ಲೇ ತಂದೆಯ ಶವ ಸಾಗಿಸಿದ ಮಕ್ಕಳು
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಭಾರತದ ಷೇರುಪೇಟೆ ಇನ್ನೆಷ್ಟು ಬೇಗ ಡಬಲ್ ಆಗುತ್ತೆ?
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಸುದ್ದಿಗೋಷ್ಠಿಗೂ ಮುನ್ನ ಸಿಎಂ- ಸಚಿವರುಗಳು ಪಿಸು ಪಿಸು ಮಾತು
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದ ನಿಖಿಲ್ ಕುಮಾರಸ್ವಾಮಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ
ಡ್ರೋನ್​​ನಲ್ಲಿ ಗಣಪತಿಯನ್ನು ವಿಸರ್ಜನೆ ಮಾಡಿದ ಯುವಕರು! ವಿಡಿಯೋ ನೋಡಿ