ಮಗನ ಪ್ರತಿಸ್ಪರ್ಧಿಗೆ ರಾಜಮೌಳಿ ತಂದೆ ಹೇಳಿದ ಚಿನ್ನದಂಥಹಾ ಮಾತು

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್​ಗೆ ಮಗ ರಾಜಮೌಳಿಯ ನಿರ್ದೇಶನಕ್ಕಿಂತಲೂ ಪುರಿ ಜಗನ್ನಾಥ್ ನಿರ್ದೇಶಕನೆಂದರೆ ಬಹಳ ಇಷ್ಟ. ಪುರಿಯ ಸಿನಿಮಾ ಹೀನಾಯವಾಗಿ ಸೋತಾಗ, ವಿಜಯೇಂದ್ರ ಪ್ರಸಾದ್ ತಮ್ಮ ಬಳಿ ಹೇಳಿದ್ದ ಮಾತನ್ನು ಪುರಿ ನೆನಪು ಮಾಡಿಕೊಂಡಿದ್ದಾರೆ.

ಮಗನ ಪ್ರತಿಸ್ಪರ್ಧಿಗೆ ರಾಜಮೌಳಿ ತಂದೆ ಹೇಳಿದ ಚಿನ್ನದಂಥಹಾ ಮಾತು
Follow us
|

Updated on: Aug 13, 2024 | 10:44 AM

ಭಾರತೀಯ ಚಿತ್ರರಂಗದ ಟಾಪ್ ನಿರ್ದೇಶಕ ಎಸ್​ಎಸ್ ರಾಜಮೌಳಿ. ಸೋಲೆ ಕಾಣದ ಸರದಾರ ರಾಜಮೌಳಿ, ಆದರೆ ತೆಲುಗು ಚಿತ್ರರಂಗದಲ್ಲಿ ರಾಜಮೌಳಿಗೆ ಇಬ್ಬರು ಪ್ರಮುಖ ಪ್ರತಿಸ್ಪರ್ಧಿ ನಿರ್ದೇಶಕರಾಗಿದ್ದಾರೆ. ಪುರಿ ಜಗನ್ನಾಥ್ ಮತ್ತು ತ್ರಿವಿಕ್ರಮ್. ಅದರಲ್ಲೂ ವಿಶೇಷವೆಂದರೆ ರಾಜಮೌಳಿ ಸಿನಿಮಾಗಳಿಗೆ ಕತೆ ಬರೆಯುವ ಅವರ ತಂದೆ ವಿಜಯೇಂದ್ರ ಪ್ರಸಾದ್​ಗೆ ಸಹ ತಮ್ಮ ಮಗನ ನಿರ್ದೇಶನಕ್ಕಿಂತಲೂ ಪುರಿ ಜಗನ್ನಾಥ್ ನಿರ್ದೇಶನವೆಂದರೆ ಬಹಳ ಇಷ್ಟವಂತೆ. ಆದರೆ ಪುರಿ ಜಗನ್ನಾಥ್​ರ ಈ ಹಿಂದಿನ ಸಿನಿಮಾ ಹೀನಾಯ ಸೋಲು ಕಂಡಿತು. ಆ ಸಮಯದಲ್ಲಿ ಪುರಿಗೆ ಕರೆ ಮಾಡಿದ್ದ ವಿಜಯೇಂದ್ರ ಒಂದೊಳ್ಳೆ ಸಲಹೆ ನೀಡಿದ್ದರು. ಆ ಬಗ್ಗೆ ಸ್ವತಃ ಪುರಿ ಜಗನ್ನಾಥ್ ಹೇಳಿಕೊಂಡಿದ್ದಾರೆ.

ಪುರಿ ಜಗನ್ನಾಥ್ ನಿರ್ದೇಶಿಸಿರುವ ಹೊಸ ಸಿನಿಮಾ ‘ಡಬಲ್ ಇಸ್ಮಾರ್ಟ್’ ಆಗಸ್ಟ್ 15 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಪ್ರೀ ರಿಲೀಸ್ ಕಾರ್ಯಕ್ರಮ ಇತ್ತೀಚೆಗಷ್ಟೆ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ನಿರ್ದೇಶಕ ಪುರಿ ಜಗನ್ನಾಥ್, ‘ಲೈಗರ್’ ಸಿನಿಮಾ ಸೋಲು ನೆನಪು ಮಾಡಿಕೊಂಡರು. ಆ ಸಿನಿಮಾದ ಫ್ಲಾಪ್ ಆಗಿ ತಾವು ತೀವ್ರ ಖಿನ್ನತೆಯಲ್ಲಿದ್ದಾಗ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ತಮಗೆ ಕರೆ ಮಾಡಿ ಆಡಿದ ಮಾತುಗಳನ್ನು ನೆನಪು ಮಾಡಿಕೊಂಡರು.

‘ಲೈಗರ್’ ಸಿನಿಮಾ ಫ್ಲಾಪ್ ಆಯ್ತು. ಅದಾಗಿ ಒಂದು ವಾರದ ಬಳಿಕ ನನಗೆ ರಾಜಮೌಳಿಯವರ ತಂದೆ ವಿಜಯೇಂದ್ರ ಪ್ರಸಾದ್ ಕರೆ ಮಾಡಿದರು. ‘ನೀವು ನನಗೆ ಒಂದು ಸಹಾಯ ಮಾಡಬೇಕು’ ಎಂದು ಕೇಳಿಕೊಂಡರು. ‘ನೀವು ಅಪಾರ ಪ್ರತಿಭೆ ಇರುವ ನಿರ್ದೇಶಕ, ನಿಮ್ಮಂಥಹಾ ನಿರ್ದೇಶಕರು ಸೋಲುವುದನ್ನು ನನ್ನಿಂದ ನೋಡಲಾಗುವುದಿಲ್ಲ. ಮುಂದಿನ ಬಾರಿ ಸಿನಿಮಾ ತೆಗೆಯಲು ಮುಂದಾದಾಗ ದಯವಿಟ್ಟು ಆ ಕತೆಯನ್ನು ನನಗೆ ಒಮ್ಮೆ ತೋರಿಸಿ, ಎಲ್ಲರೂ ಸೇರಿ ಸಣ್ಣ-ಪುಟ್ಟ ಕೊರತೆಗಳನ್ನು ಸರಿ ಮಾಡೋಣ’ ಎಂದರು ಎಂದು ಪುರಿ ನೆನಪು ಮಾಡಿಕೊಂಡರು.

ಇದನ್ನೂ ಓದಿ:ಹೊಸ ಲುಕ್​ನಲ್ಲಿ ಕಾಣಿಸಿಕೊಂಡ ಮಹೇಶ್​ ಬಾಬು; ರಾಜಮೌಳಿಗೆ ಹೆಚ್ಚಾಯ್ತು ತಲೆಬಿಸಿ

ಅವರ ಮಗ ದೊಡ್ಡ ನಿರ್ದೇಶಕ, ಸ್ವತಃ ವಿಜಯೇಂದ್ರಪ್ರಸಾದ್ ದೊಡ್ಡ ಕತೆಗಾರ, ಆದರೆ ಅವರು ತಾವಾಗಿಯೇ ನನಗೆ ಕರೆ ಮಾಡಿ ಕಾಳಜಿ ವ್ಯಕ್ತಪಡಿಸಿದ ರೀತಿ ನನ್ನನ್ನು ಭಾವುಕಗೊಳಿಸಿತು. ಅವರು ಹೇಳಿದಂತೆ ಕತೆಯನ್ನು ಅವರಿಗೆ ತೋರಿಸಲು ಆಗಲಿಲ್ಲವಾದರೂ ಈ ಸಿನಿಮಾವನ್ನು ನಾವು ಬಹಳ ಎಚ್ಚರಿಕೆಯಿಂದಲೇ ತೆಗೆದಿದ್ದೇವೆ. ಮೈಯೆಲ್ಲ ಕಣ್ಣಾಗಿ ಈ ಸಿನಿಮಾದ ನಿರ್ಮಾಣ ಮಾಡಿದ್ದೇವೆ. ನನಗೆ ಹಾಗೂ ನಮ್ಮ ತಂಡಕ್ಕೆ ಈ ಸಿನಿಮಾ ಗೆಲ್ಲಲೇ ಬೇಕು ಅಂಥಹಾ ಸನ್ನಿವೇಶದಲ್ಲಿ ನಾವಿದ್ದೇವೆ’ ಎಂದಿದ್ದಾರೆ ಪುರಿ ಜಗನ್ನಾಥ್.

ಪುರಿ ಜಗನ್ನಾಥ್ ತೆಲುಗಿನ ಪ್ರತಿಭಾವಂತ ನಿರ್ದೇಶಕರಲ್ಲಿ ಪ್ರಮುಖರು. ವಿಜಯೇಂದ್ರಪ್ರಸಾದ್​ಗೆ ಪುರಿ ಜಗನ್ನಾಥ್ ಎಂದರೆ ಬಹಳ ಪ್ರೀತಿ. ಅವರ ಪ್ರತಿಭೆ ಬಗ್ಗೆ ಸಿಹಿಯಾದ ಅಸೂಯೆಯೂ ವಿಜಯೇಂದ್ರ ಅವರಿಗಿದೆಯಂತೆ. ಅವರಂತೆ ತನೂ ಆಗಬೇಕು ಎಂಬ ಕಾರಣಕ್ಕೆ ಪುರಿ ಜಗನ್ನಾಥ್ ಚಿತ್ರವನ್ನು ಮೊಬೈಲ್​ನ ವಾಲ್​ಪೇಪರ್ ಆಗಿಟ್ಟುಕೊಂಡಿದ್ದಾರೆ ವಿಜಯೇಂದ್ರ ಪ್ರಸಾದ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ