ಸಿನಿಮಾ ಬೇಗ ರಿಲೀಸ್ ಮಾಡಲು ಹೊಸ ತಂತ್ರದ ಮೊರೆ ಹೋದ ರಾಜಮೌಳಿ

ಕೆಲವು ವರದಿಗಳ ಪ್ರಕಾರ ಸದ್ಯ ಈ ಚಿತ್ರಕ್ಕೆ ವರ್ಕ್​​ಶಾಪ್ ನಡೆಯುತ್ತಿದೆ. ರಾಜಮೌಳಿ ಅವರು ಸಿನಿಮಾದ ಪಾತ್ರವರ್ಗವನ್ನು ಬಹುತೇಕ ಫೈನಲ್ ಮಾಡಿದ್ದಾರೆ. ರಾಜಮೌಳಿ ಅವರು ಈ ಬಾರಿ ವಿಎಫ್​​ಎಕ್ಸ್​ಗೆ ಸಂಬಂಧಿಸಿದ ದೃಶ್ಯಗಳನ್ನು ಮೊದಲು ಶೂಟ್ ಮಾಡಲು ನಿರ್ಧರಿಸಿದ್ದಾರೆ.

ಸಿನಿಮಾ ಬೇಗ ರಿಲೀಸ್ ಮಾಡಲು ಹೊಸ ತಂತ್ರದ ಮೊರೆ ಹೋದ ರಾಜಮೌಳಿ
ಮಹೇಶ್​ ಬಾಬು-ರಾಜಮೌಳಿ
Follow us
|

Updated on: Sep 20, 2024 | 12:01 PM

ಮಹೇಶ್ ಬಾಬು ಹಾಗೂ ಎಸ್​ಎಸ್ ರಾಜಮೌಳಿ ಸಿನಿಮಾ ಅಧಿಕೃತ ಮಾಡಿ ಬಹಳ ಸಮಯ ಕಳೆದಿದೆ. ಆದರೆ, ಈವರೆಗೆ ಸಿನಿಮಾ ಕಡೆಯಿಂದ ಯಾವುದೇ ಅಪ್​ಡೇಟ್ ಕೊಟ್ಟಿಲ್ಲ. ರಾಜಮೌಳಿ ಎಂದರೆ ಪರ್ಫೆಕ್ಷನಿಸ್ಟ್. ಏನೇ ಕೆಲಸ ಆರಂಭಿಸಿದರೂ ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಾರೆ. ಪ್ರತಿ ಸಿನಿಮಾಗೂ ಸಾಕಷ್ಟು ಸಿದ್ಧತೆ ಮಾಡಿಕೊಳ್ಳುತ್ತಾರೆ. ಈಗಾಗಲೇ ಅವರು ಚಿತ್ರಕ್ಕಾಗಿ ಎರಡು ವರ್ಷ ಮೀಸಲಿಟ್ಟಿದ್ದಾರೆ. ಈಗ ಅವರು ಸಿನಿಮಾನ ಬೇಗ ರಿಲೀಸ್ ಮಾಡಲು ಹೊಸ ತಂತ್ರ ಒಂದನ್ನು ಉಪಯೋಗಿಸಿದ್ದಾರೆ.

ಕೆಲವು ವರದಿಗಳ ಪ್ರಕಾರ ಸದ್ಯ ಈ ಚಿತ್ರಕ್ಕೆ ವರ್ಕ್​​ಶಾಪ್ ನಡೆಯುತ್ತಿದೆ. ರಾಜಮೌಳಿ ಅವರು ಸಿನಿಮಾದ ಪಾತ್ರವರ್ಗವನ್ನು ಬಹುತೇಕ ಫೈನಲ್ ಮಾಡಿದ್ದಾರೆ. ರಾಜಮೌಳಿ ಅವರು ಈ ಬಾರಿ ವಿಎಫ್​​ಎಕ್ಸ್​ಗೆ ಸಂಬಂಧಿಸಿದ ದೃಶ್ಯಗಳನ್ನು ಮೊದಲು ಶೂಟ್ ಮಾಡಲು ನಿರ್ಧರಿಸಿದ್ದಾರೆ. ಆ ಬಳಿಕ ಉಳಿದ ದೃಶ್ಯಗಳ ಶೂಟ್ ನಡೆಯಲಿದೆ.

ರಾಜಮೌಳಿ- ಮಹೇಶ್ ಬಾಬು ಸಿನಿಮಾ ಅಡ್ವೆಂಚರ್ ಡ್ರಾಮಾ ಶೈಲಿಯಲ್ಲಿ ಮೂಡಿ ಬರುತ್ತಿದೆ. ಇದರಲ್ಲಿ ವಿಎಫ್​ಎಕ್ಸ್ ಕೆಲಸ ಹೆಚ್ಚಿರಲಿದೆ. ಈ ಕಾರಣಕ್ಕೆ ರಾಜಮೌಳಿ ಹಾಲಿವುಡ್ ಸ್ಟುಡಿಯೋಗಳ ಜೊತೆ ಕೈ ಜೋಡಿಸಿದ್ದಾರೆ. ಅವರು ವಿಎಫ್​ಎಕ್ಸ್​​ ಕೆಲಸಗಳಿರುವ ದೃಶ್ಯಗಳನ್ನು ಮೊದಲು ಶೂಟ್ ಮಾಡಿ ಪೋಸ್ಟ್ ಪ್ರೊಡಕ್ಷನ್​ಗೆ ಚಾಲನೆ ನೀಡಲಿದ್ದಾರೆ. ಇದರಿಂದ ವಿಎಫ್​ಎಕ್ಸ್ ಕೆಲಸಗಳನ್ನು ಬೇಗ ಆರಂಭಿಸಲು ಸಹಕಾರಿ ಆಗಲಿದೆ. ಇದರಿಂದ ಸಿನಿಮಾದ ಕೆಲಸಗಳು ಕೂಡ ಬೇಗ ಪೂರ್ಣಗೊಳ್ಳಲಿವೆ.

ಶೀಘ್ರವೇ ಈ ಚಿತ್ರಕ್ಕೆ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾದಲ್ಲಿ ಯಾರೆಲ್ಲ ನಟಿಸುತ್ತಾರೆ ಎನ್ನುವ ಕುತೂಹಲ ಮೂಡಿದೆ. ಕೇವಲ ತೆಲುಗು ಮಾತ್ರವಲ್ಲದೆ ಪರಭಾಷೆಯಿಂದಲೂ ಕಲಾವಿದರನ್ನು ಕರೆತರುವ ಕೆಲಸ ಆಗುತ್ತಿದೆ. ಈ ಚಿತ್ರದ ಬಗ್ಗೆ ನಿರೀಕ್ಷೆ ಇದೆ.

ಇದನ್ನೂ ಓದಿ: ಮಹೇಶ್ ಬಾಬು ಮಗಳು ಸಿತಾರಾ ಶಾಪಿಂಗ್ ಮಾಡೋದೆಲ್ಲಿ ಗೊತ್ತಾ?

ಮಹೇಶ್ ಬಾಬು ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ‘ಗುಂಟೂರು ಖಾರಂ’ ಚಿತ್ರದಲ್ಲಿ. ಈ ಸಿನಿಮಾ ಹೇಳಿಕೊಳ್ಳುವಂಥ ಯಶಸ್ಸು ಸಾಧಿಸಿಲ್ಲ. ಇದಾದ ಬಳಿಕ ಅವರು ಒಪ್ಪಿಕೊಂಡಿದ್ದು ರಾಜಮೌಳಿ ಚಿತ್ರ. ಈ ಸಿನಿಮಾ ಪೂರ್ಣಗೊಳ್ಳುವವರೆಗೆ ಅವರು ಯಾವುದೇ ಸಿನಿಮಾ ಒಪ್ಪಿಕೊಳ್ಳುತ್ತಿಲ್ಲ. ರಾಜಮೌಳಿ ಅವರು ‘ಆರ್​ಆರ್​ಆರ್’ ಸಿನಿಮಾ ಬಳಿಕ ಒಪ್ಪಿಕೊಂಡ ಚಿತ್ರ ಇದು. ಅವರು ಸಂಪೂರ್ಣ ಸಮಯವನ್ನು ಸ್ಕ್ರಿಪ್ಟ್ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ರೈಲಿನಡಿ ಬೀಳಲಿದ್ದ ಮಹಿಳೆ ಸ್ವಲ್ಪದರಲ್ಲೇ ಬಚಾವ್
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
ಮನೆಯ ಬಾಗಿಲಿಗೆ ಸ್ಪಟಿಕ ಕಟ್ಟುವುದರ ಹಿಂದಿನ ಕಾರಣ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
Nithya Bhavishya: ಭಾದ್ರಪದ ಮಾಸ ಮೂರನೇ ಶುಕ್ರವಾರದ ರಾಶಿಭವಿಷ್ಯ ತಿಳಿಯಿರಿ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹುಬ್ಬಳ್ಳಿ: ಕಚ್ಚಿದ ಹಾವಿನೊಂದಿಗೆ ಆಸ್ಪತ್ರೆಗೆ ಬಂದ ಯುವಕ
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ಹಳೆ ಬೈಕ್‌ಗೆ ಬಣ್ಣ ಬಳಿದು ಕೊಟ್ಟು ರೈತನಿಗೆ ಮೋಸ ಮಾಡಿದ್ರಾ ಶೋ ರೂಮ್‌ನವರು?
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ನಟ ಮಯೂರ್ ಪಟೇಲ್ ವಿನಯವನ್ನು ಕೊಂಡಾಡಿದ ದುನಿಯಾ ವಿಜಯ್
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ವಿಮಾನ ಟೇಕ್ ಆಫ್ ಆಗುವಾಗ ರನ್​ವೇಯಲ್ಲಿ ಮರಿಗಳ ಜೊತೆ ಕಾಣಿಸಿಕೊಂಡ ಚಿರತೆ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಭರ್ಜರಿ ಸಿಕ್ಸರ್ ಸಿಡಿಸಿದ ಅಶ್ವಿನ್​ಗೆ ಅಜ್ಜಿಯ ಮೆಚ್ಚುಗೆ; ವಿಡಿಯೋ ನೋಡಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಉಜ್ಜಯಿನಿ ಮಹಾಕಾಳೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ರಾಷ್ಟ್ರಪತಿ
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು
ಹಾಲಿನ ದರ ಏರಿಕೆ ಬಿಸಿ: ಎಷ್ಟು ಹೆಚ್ಚಳ? KMF ಅಧ್ಯಕ್ಷ ಹೇಳಿದ್ದಿಷ್ಟು