ರಣವೀರ್ ಡಾನ್ ಆದ ಬಗ್ಗೆ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಫರ್ಹಾನ್ ಅಖ್ತರ್

‘ಡಾನ್ 2’ ರಿಲೀಸ್ ಆಗಿ 12 ವರ್ಷಗಳ ಬಳಿಕ ‘ಡಾನ್ 3’ ಸಿನಿಮಾ ಘೋಷಣೆ ಆಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ನಟಿಸುವುದಿಲ್ಲ ಅನ್ನೋದು ಇತ್ತೀಚೆಗೆ ಖಚಿತವಾಯಿತು. ಡಾನ್ ಪಾತ್ರದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಘೋಷಿಸಿದರು.

ರಣವೀರ್ ಡಾನ್ ಆದ ಬಗ್ಗೆ ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಫರ್ಹಾನ್ ಅಖ್ತರ್
ಶಾರುಖ್​-ರಣವೀರ್ ಸಿಂಗ್
Edited By:

Updated on: Aug 17, 2023 | 11:05 AM

ಭಾರತದ ಸಿನಿಮಾ ಇತಿಹಾಸದಲ್ಲಿ ‘ಡಾನ್’ (Don) ಪಾತ್ರ ಸಖತ್ ವಿಶೇಷ ಎನಿಸಿಕೊಂಡಿದೆ. ಈಗಾಗಲೇ ಈ ಪಾತ್ರದಲ್ಲಿ ಅಮಿತಾಭ್ ಬಚ್ಚನ್ ಹಾಗೂ ಶಾರುಖ್ ಖಾನ್ ನಟಿಸಿದ್ದಾರೆ. ಈಗ ರಣವೀರ್ ಸಿಂಗ್ ಅವರು ಈ ಪಾತ್ರವನ್ನು ಮಾಡಲು ರೆಡಿ ಆಗುತ್ತಿದ್ದಾರೆ. ರಣವೀರ್ ಸಿಂಗ್ ಅವರು ‘ಡಾನ್ 3’ ಚಿತ್ರದಲ್ಲಿ ಮುಖ್ಯಭೂಮಿಕೆ ನಿರ್ವಹಿಸುತ್ತಿದ್ದಾರೆ. ಇದರ ಟೀಸರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಬಗ್ಗೆ ಅನೇಕರು ಟೀಕೆ ಮಾಡಿದ್ದಾರೆ. ಶಾರುಖ್ ಸ್ಥಾನವನ್ನು ರಣವೀರ್ (Ranveer Singh) ಹೇಗೆ ತುಂಬಲು ಸಾಧ್ಯ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಈ ಟೀಕೆಗಳಿಗೆ ನಿರ್ದೇಶಕ ಫರ್ಹಾನ್ ಅಖ್ತರ್ ಅವರು ತಿರುಗೇಟು ಕೊಟ್ಟಿದ್ದಾರೆ.

‘ಡಾನ್’ ಸಿನಿಮಾದಲ್ಲಿ ಅಮಿತಾಭ್ ಬಚ್ಚನ್ ನಟಿಸಿದ್ದರು. ಈ ಸಿನಿಮಾ 1978ರಲ್ಲಿ ರಿಲೀಸ್ ಆಗಿ ಯಶಸ್ಸು ಕಂಡಿತು. ಇದಾದ ಬಳಿಕ ‘ಡಾನ್’ ಚಿತ್ರದಲ್ಲಿ ಶಾರುಖ್ ಖಾನ್ ನಟಿಸಿದರು. ಈ ಸಿನಿಮಾ ರಿಲೀಸ್ ಆಗಿದ್ದು 2006ರಲ್ಲಿ. ‘ಡಾನ್ 2’ ಚಿತ್ರ 2011ರಲ್ಲಿ ಬಿಡುಗಡೆ ಆಯಿತು. ಎರಡೂ ಸಿನಿಮಾಗಳು ಹಿಟ್ ಆದವು. ಈಗ ‘ಡಾನ್ 2’ ರಿಲೀಸ್ ಆಗಿ 12 ವರ್ಷಗಳ ಬಳಿಕ ‘ಡಾನ್ 3’ ಸಿನಿಮಾ ಘೋಷಣೆ ಆಗಿದೆ. ಶಾರುಖ್ ಖಾನ್ ಅವರು ಈ ಚಿತ್ರದಲ್ಲಿ ನಟಿಸುವುದಿಲ್ಲ ಅನ್ನೋದು ಇತ್ತೀಚೆಗೆ ಖಚಿತವಾಯಿತು. ಡಾನ್ ಪಾತ್ರದಲ್ಲಿ ರಣವೀರ್ ಕಾಣಿಸಿಕೊಳ್ಳಲಿದ್ದಾರೆ ಎಂದು ನಿರ್ದೇಶಕ ಫರ್ಹಾನ್ ಅಖ್ತರ್ ಘೋಷಿಸಿದರು.

ಸದ್ಯ ಈ ಸಿನಿಮಾದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ರಣವೀರ್ ಸಿಂಗ್ ಅವರ ಆಯ್ಕೆಯ ಬಗ್ಗೆ ಕೆಲವರು ತಕರಾರು ತೆಗೆದಿದ್ದಾರೆ. ಈ ಆಯ್ಕೆ ತಪ್ಪು ಎಂದು ಅನೇಕರು ಹೇಳಿದ್ದಾರೆ. ಈ ಬಗ್ಗೆ ಫರ್ಹಾನ್ ಅಖ್ತರ್ ಮಾತನಾಡಿದ್ದಾರೆ. ‘ರಣವೀರ್ ಸಿಂಗ್ ಈ ಪಾತ್ರಕ್ಕೆ ಸೂಕ್ತರು. ಅವರು ಈ ಪಾತ್ರ ಮಾಡಲು ಎಗ್ಸೈಟ್ ಹಾಗೂ ನರ್ವಸ್ ಎರಡೂ ಆಗಿದ್ದಾರೆ. ಮಹಾನ್ ನಟರು ಮಾಡಿದ ಪಾತ್ರವನ್ನು ರಣವೀರ್ ಮಾಡುತ್ತಿದ್ದಾರೆ. ಆರಂಭದಲ್ಲಿ ಶಾರುಖ್ ಖಾನ್ ಡಾನ್ ಪಾತ್ರ ಮಾಡುವಾಗ ಇದೇ ರೀತಿಯ ಮಾತು ಕೇಳಿ ಬಂದಿತ್ತು. ಅಮಿತಾಭ್ ಬಚ್ಚನ್​ನ ಬದಲು ಶಾರುಖ್ ಖಾನ್ ಹೇಗೆ ನಟಿಸಲು ಸಾಧ್ಯ ಎಂದು ಕೇಳಿದ್ದರು. ನಂತರ ಸಿನಿಮಾ ಹಿಟ್ ಆಯಿತು’ ಎಂದಿದ್ದಾರೆ ಫರ್ಹಾನ್.

ಇದನ್ನೂ ಓದಿ: ‘ಸುಮ್ಮನೆ ಇರು, ಚಪ್ಪಲಿ ಏಟು ತಿಂತೀಯ’: ದೀಪಿಕಾ ಜೊತೆ ಸಿನಿಮಾ ನೋಡಲು ಬಂದ ರಣವೀರ್​ ಸಿಂಗ್​ಗೆ ಈ ಪರಿಸ್ಥಿತಿ ಯಾಕೆ?

‘ರಣವೀರ್ ಸಿಂಗ್ ಅವರು ಈ ಚಿತ್ರಕ್ಕೆ ಸೂಕ್ತರು. ಅವರು ಒಳ್ಳೆಯ ಕೆಲಸ ಮಾಡುತ್ತಾರೆ. ಒಳ್ಳೆಯ ಸ್ಕ್ರಿಪ್ಟ್​ ಮಾಡುವ ಜವಾಬ್ದಾರಿ ನನ್ನದಿದೆ’ ಎಂದು ಅವರು ಹೇಳಿದ್ದಾರೆ. ಸೀಕ್ವೆಲ್​ನಲ್ಲಿ ಹೀರೋಗಳನ್ನು ಬದಲಿಸಿದರೆ ಸಹಜವಾಗಿಯೇ ಒಂದು ವರ್ಗದ ಜನರಿಗೆ ಇಷ್ಟವಾಗುವುದಿಲ್ಲ. ಅದೇ ರೀತಿ ಶಾರುಖ್ ಖಾನ್ ಬದಲು ರಣವೀರ್ ಸಿಂಗ್ ಬಂದಿದ್ದು ಹಲವರಿಗೆ ಇಷ್ಟವಾಗಿಲ್ಲ. ರಣವೀರ್ ಸಿಂಗ್ ಬ್ಯಾಕ್ ಟು ಬ್ಯಾಕ್ ಸೋಲು ಕಾಣುತ್ತಿದ್ದಾರೆ. ಅವರಿಗೆ ಈ ಚಿತ್ರದ ಮೂಲಕ ಗೆಲುವು ಸಿಗಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Shreelaxmi H

ಪತ್ರಕರ್ತೆ ಆಗಬೇಕು ಅಂದುಕೊಂಡವಳು. ಮನೆಯವರ ಒತ್ತಾಯಕ್ಕೆ ಅಕೌಂಟ್ ತೆಗೆದುಕೊಂಡೆ. ಈಗ ಬ್ಯಾಂಕ್ ಎಕ್ಸಾಂಗಳನ್ನು ಬರೆಯುತ್ತಿದ್ದೇನೆ. ಸಮಯ ಸಿಕ್ಕಾಗ ಸುತ್ತಾಡುತ್ತೇನೆ. ಓದಿನ ಬಗ್ಗೆ ಅತೀವ ಆಸಕ್ತಿ. ರವಿ ಬೆಳಗೆರೆ, ತೇಜಸ್ವಿ ನೆಚ್ಚಿನವರು. ಅವರ ಪುಸ್ತಕಗಳನ್ನು ಮತ್ತೆ ಮತ್ತೆ ಓದುತ್ತೇನೆ. ಸಮಯ ಸಿಕ್ಕಾಗ ಪತ್ರಿಕೆಗಳಿಗೆ ಕಥೆಗಳನ್ನು ಬರೆಯುತ್ತೇನೆ. ಸಿನಿಮಾ ಬಗ್ಗೆ ಅತೀವ ಆಸಕ್ತಿ. ಈಗ ಟಿವಿ9 ಕನ್ನಡಕ್ಕೆ ಸಿನಿಮಾ ಸುದ್ದಿಗಳನ್ನು ಬರೆಯುತ್ತಿದ್ದೇನೆ.

Read More
Follow Us