‘ನನ್ನನ್ನು ಬಿಟ್ಟುಬಿಡಿ’ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ಗರಂ

ಪವನ್ ಕಲ್ಯಾಣ್ ಮಾಜಿ ಪತ್ನಿ ರೇಣು ದೇಸಾಯಿ ಪವನ್ ಕಲ್ಯಾಣ್ ಅಭಿಮಾನಿಗಳ ಬಳಿ ಮನವಿಯೊಂದನ್ನು ಮಾಡಿದ್ದಾರೆ. ಪವನ್ ಅಭಿಮಾನಿಯೊಬ್ಬನಿಗೆ ಮಾಡಿರುವ ಕಮೆಂಟ್ ಹಂಚಿಕೊಂಡಿರುವ ನಟಿ, ಒಬ್ಬಂಟಿಯಾಗಿ ಬಿಟ್ಟುಬಿಡಿ ಎಂದು ಕೋರಿದ್ದಾರೆ.

‘ನನ್ನನ್ನು ಬಿಟ್ಟುಬಿಡಿ’ ಪವನ್ ಕಲ್ಯಾಣ್ ಅಭಿಮಾನಿಗಳ ಮೇಲೆ ಮಾಜಿ ಪತ್ನಿ ರೇಣು ಗರಂ
Follow us
|

Updated on: May 18, 2024 | 5:34 PM

ಪವನ್ ಕಲ್ಯಾಣ್ (Pawan Kalyan) ದೇಶದಲ್ಲಿಯೇ ಅತಿ ಹೆಚ್ಚು ಅಭಿಮಾನಿಗಳು ಹೊಂದಿರುವ ನಟರಲ್ಲಿ ಒಬ್ಬರು. ರಾಜಕೀಯಕ್ಕೂ ಧುಮಿಕಿರುವ ಪವನ್​ ಕಲ್ಯಾಣ್ ಅಭಿಮಾನಿಗಳನ್ನು ಇನ್ನಷ್ಟು ಹೆಚ್ಚು ಮಾಡಿಕೊಂಡಿದ್ದಾರೆ. ಪವನ್​ರಂತೆ ಅವರ ಅಭಿಮಾನಿಗಳಿಗೂ ಸಹ ತುಸು ಆವೇಶ ಹೆಚ್ಚು. ಇತರೆ ನಟರೊಟ್ಟಿಗೆ, ರಾಜಕೀಯ ಪಕ್ಷಗಳೊಟ್ಟಿಗೆ ಸಾಮಾಜಿಕ ಜಾಲತಾಣದಲ್ಲಿ ಜಗಳ ಮಾಡಿಕೊಳ್ಳುತ್ತಿರುತ್ತಾರೆ. ಕೆಲವೊಮ್ಮೆ ಇವರ ಕಮೆಂಟ್​ಗಳು, ಪೋಸ್ಟ್​ಗಳು ಅತಿರೇಕಕ್ಕೆ ಹೋಗುವುದು ಸಹ ಉಂಟು. ಪವನ್​ರ ಮಾಜಿ ಪತ್ನಿ ರೇಣುದೇಸಾಯಿ ಕುರಿತಾಗಿಯೂ ಇದೇ ರೀತಿ ಕಮೆಂಟ್​ಗಳನ್ನು ಮಾಡುತ್ತಲೇ ಇರುತ್ತಾರೆ ಪವನ್​ ಅಭಿಮಾನಿಗಳು. ಇವರ ವರ್ತನೆಯಿಂದ ತಾಳ್ಮೆ ಕಳೆದುಕೊಂಡಿರುವ ರೇಣು ದೇಸಾಯಿ ಪವನ್ ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

ರೇಣು ದೇಸಾಯಿ ತಮ್ಮ ಹಾಕಿದ್ದ ಪೋಸ್ಟ್ ಒಂದಕ್ಕೆ ಕಮೆಂಟ್ ಮಾಡಿದ್ದ ಪವನ್ ಕಲ್ಯಾಣ್ ಅಭಿಮಾನಿಯೊಬ್ಬ, ‘ಪವನ್ ಕಲ್ಯಾಣ್ ರೀತಿ ಇವರು ಸಹ ವಿಶಾಲ ಹೃದಯವಂತರು’ ಎಂದು ಕಮೆಂಟ್ ಮಾಡಿದ್ದರು. ಆ ಕಮೆಂಟ್​ಗೆ ಪ್ರತಿಕ್ರಿಯಿಸಿರುವ ರೇಣು ದೇಸಾಯಿ, ‘ಯಾಕೆ ಪ್ರತಿ ಬಾರಿ ನಾನು ಪೋಸ್ಟ್ ಹಾಕಿದಾಗಲೂ ಕೆಲವರು ಬಂದು ನನ್ನ ಮಾಜಿ ಪತಿಯ ಜೊತೆಗೆ ನನ್ನನ್ನು ಹೋಲಿಸಲಾಗುತ್ತದೆ. ಈ ವರೆಗೂ ನಾನು ನೂರಾರು ಮಂದಿ ಇಂಥಹವರನ್ನು ಬ್ಲಾಕ್ ಮಾಡಿದ್ದೇನೆ. ನಾನು 10 ವರ್ಷದವಳಾಗಿದ್ದಾಗಿನಿಂದಲೂ ನಾನು ಪ್ರಾಣಿಗಳ ಸಂರಕ್ಷಣೆಯಲ್ಲಿ ತೊಡಗಿದ್ದೇನೆ. ಅದಕ್ಕೂ ನನ್ನ ಮಾಜಿ ಪತಿಗೂ ಯಾವುದೇ ಸಂಬಂಧವಿಲ್ಲ. ಪ್ರತಿ ಬಾರಿ ನನ್ನನ್ನು ಆತನೊಂದಿಗೆ (ಪವನ್ ಕಲ್ಯಾಣ್) ಹೋಲಿಸಬೇಡಿ, ನನ್ನಂತೆ ಆತ ಪ್ರಾಣಿಗಳನ್ನು ಪ್ರೀತಿಸುವುದಿಲ್ಲ’ ಎಂದಿದ್ದಾರೆ.

ಇದನ್ನೂ ಓದಿ:ಮುನಿಸು ಮರೆತು ಪವನ್ ಕಲ್ಯಾಣ್​ಗೆ ಬೆಂಬಲ ಸೂಚಿಸಿದ ಅಲ್ಲು ಅರ್ಜುನ್

ಬಳಿಕ ಅದೇ ಕಮೆಂಟ್​ನ ಸ್ಕ್ರೀನ್ ಶಾಟ್ ಅನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರೇಣು ದೇಸಾಯಿ, ‘ಈ ಪ್ರತಿಕ್ರಿಯೆಯನ್ನು ನಾನು ಕೊಟ್ಟಿರುವುದು ಕೋಪದಿಂದಲ್ಲ ಬದಲಿಗೆ ಹತಾಷೆಯಿಂದ. ಹಲವು ವರ್ಷಗಳಿಂದಲೂ ನಾನು ಏನನ್ನಾದರೂ ಮಾಡಿದರೆ ಅದರ ಕ್ರೆಡಿಟ್ ಅನ್ನು ನನ್ನ ಮಾಜಿ ಪತಿಗೆ ನೀಡಲಾಗುತ್ತಿದೆ, ಅಥವಾ ಆತನೊಂದಿಗೆ ನನ್ನನ್ನು ಹೋಲಿಸಿ ನೋಡಲಾಗುತ್ತಿದೆ. ಅವರೊಂದಿಗೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಆದರೆ ಅವರ ಬೆಂಬಲಿಗರಲ್ಲಿ ನಾನು ಮನವಿ ಮಾಡುತ್ತಿದ್ದೇನೆ, ನನ್ನ ಇನ್​ಸ್ಟಾಗ್ರಾಂ ಅನ್ನು ನನ್ನ ಪಾಲಿಗೆ ಬಿಟ್ಟು ಬಿಡಿ’ ಎಂದು ಮನವಿ ಮಾಡಿದ್ದಾರೆ ರೇಣು ದೇಸಾಯಿ.

ನಟಿ ರೇಣು ದೇಸಾಯಿ, ಪವನ್ ಕಲ್ಯಾಣ್​ರ ಎರಡನೇ ಪತ್ನಿ. ‘ಜಾನಿ’ ಸಿನಿಮಾದಲ್ಲಿ ಈ ಇಬ್ಬರೂ ಒಟ್ಟಿಗೆ ನಟಿಸಿದ್ದರು. ಮೊದಲ ಪತ್ನಿಗೆ ವಿಚ್ಛೇದನ ನೀಡುವ ಮುನ್ನವೇ ರೇಣು ಜೊತೆ ಆಪ್ತ ಬಂಧವನ್ನು ಪವನ್ ಹೊಂದಿದ್ದರು. ಆ ನಂತರ ಅದು ವಿವಾದವಾಗಿ ಮೊದಲ ಪತ್ನಿಗೆ ಭಾರಿ ದೊಡ್ಡ ಮೊತ್ತದ ಜೀವನಾಂಶ ನೀಡಿ ರೇಣು ಅವರನ್ನು ವಿವಾಹವಾದರು. ಬಳಿಕ ರೇಣು ಅವರಿಗೂ ವಿಚ್ಛೇದನ ನೀಡಿ, ರಷ್ಯಾದ ಅನ್ನಾ ಜೊತೆ ವಿವಾಹವಾದರು. ರೇಣು ಪವನ್​ಗೆ ಇಬ್ಬರು ಮಕ್ಕಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಐಟಿಸಿ ಮೌರ್ಯ ಹೋಟೆಲ್​​ನಲ್ಲಿ ​​ಕೇಕ್​​ ಕತ್ತರಿಸಿದ ರಾಹುಲ್ ದ್ರಾವಿಡ್
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಆಷಾಢ ಮಾಸದ ವಿಶೇಷ ರಾಶಿ ಭವಿಷ್ಯ 2024: ಯಾವ ರಾಶಿಗೆ ಏನು ಫಲ? ಇಲ್ಲಿದೆ ವಿವರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಈ ರಾಶಿಯವರು ಮೇಲಿದ ಬಿದ್ದು ಕಾಲು ನೋವು ಮಾಡಿಕೊಳ್ಳುವ ಸಂಭವವಿದೆ, ಎಚ್ಚರ
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಮಕ್ಕಳಿಗೆ ದೃಷ್ಠಿ ಬೊಟ್ಟುಇಡುವುದರ ಅರ್ಥವೇನು ಗೊತ್ತಾ?
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಹೊಸ ಫೋಲ್ಡ್​ ಫೋನ್ ಪ್ರಿ ಬುಕಿಂಗ್ ಆರಂಭಿಸಿದ ಸ್ಯಾಮ್​ಸಂಗ್
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಕಾಶಪ್ಪನವರ್ ಸಿಎಂ ಆಗಬೇಕೆಂದ ನಂದವಾಡಗಿ ವೀರಶೈವ ಲಿಂಗಾಯತ ಮಠದ ಸ್ವಾಮೀಜಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಹಾವೇರಿ ಉಪ ಚುನಾವಣೆಗಾಗಿ ಈಗಿಂದಲೇ ಕೆಲಸ ಶುರುಮಾಡಿದ್ದೇವೆ:ಸತೀಶ್ ಜಾರಕಿಹೊಳಿ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ಈ ನಟಿಯರು ಇಷ್ಟು ದಿನ ಯಾಕೆ ಸುಮ್ಮನಿದ್ರು? ರೇಣುಕಾ ಸ್ವಾಮಿ ತಂದೆ ಪ್ರಶ್ನೆ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ದರ್ಶನ್ ₹22 ಕೋಟಿ ಸಂಭಾವನೆ ಪಡೆಯೋದು ಕೇಳಿ ಶಾಕ್ ಆಯ್ತು: ಸರಿಗಮ ವಿಜಿ
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು
ಕುಡುಕ ಆಟೋರಿಕ್ಷಾ ಸೆಲ್ಫೀ ತೆಗೆಸಿಕೊಂಡ ಬಳಿಕ ಈಶ್ವರಪ್ಪ ಕುಡಿತ ಬಿಡು ಅಂದರು