AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಪಾನ್​ನಲ್ಲಿ ಭೂಕಂಪಕ್ಕೆ ಬೆಚ್ಚಿದ ರಾಜಮೌಳಿ, ಕಾರ್ತಿಕೇಯ: ನಂತರ ಏನಾಯ್ತು?

‘ನಮಗೆ ಜಪಾನ್​ನಲ್ಲಿ ಈಗತಾನೆ ಭಯಂಕರ ಭೂಕಂಪದ ಅನುಭವ ಆಯಿತು. ನಾವು 28ನೇ ಫ್ಲೋರ್​ನಲ್ಲಿ ಇದ್ದೆವು. ನಿಧಾನವಾಗಿ ನೆಲ ಅಲುಗಾಡಲು ಆರಂಭಿಸಿತು’ ಎಂಬ ಆ ಅನುಭವವನ್ನು ರಾಜಮೌಳಿ ಪುತ್ರ ಎಸ್.ಎಸ್​. ಕಾರ್ತಿಕೇಯ ವಿವರಿಸಿದ್ದಾರೆ. ಸದ್ಯ ಅವರು ಸೇಫ್​ ಆಗಿದ್ದಾರೆ ಎಂಬುದು ತಿಳಿದು ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

ಜಪಾನ್​ನಲ್ಲಿ ಭೂಕಂಪಕ್ಕೆ ಬೆಚ್ಚಿದ ರಾಜಮೌಳಿ, ಕಾರ್ತಿಕೇಯ: ನಂತರ ಏನಾಯ್ತು?
ಕಾರ್ತಿಕೇಯ, ರಾಜಮೌಳಿ
ಮದನ್​ ಕುಮಾರ್​
|

Updated on: Mar 21, 2024 | 3:51 PM

Share

2022ರ ಮಾರ್ಚ್​ ತಿಂಗಳಲ್ಲಿ ಬಿಡುಗಡೆಯಾದ ‘ಆರ್​ಆರ್​ಆರ್​’ (RRR) ಸಿನಿಮಾ ಜಾಗತಿಕ ಮಟ್ಟದಲ್ಲಿ ಅಬ್ಬರಿಸಿತು. ರಿಲೀಸ್​ ಆಗಿ ಎರಡು ವರ್ಷ ಕಳೆದರೂ ಈ ಸಿನಿಮಾದ ಹವಾ ಕಡಿಮೆ ಆಗಿಲ್ಲ. ಜಪಾನ್​ನಲ್ಲಿ ಈಗಲೂ ಈ ಚಿತ್ರ ಪ್ರದರ್ಶನ ಕಾಣುತ್ತಿದೆ. ಅಲ್ಲಿನ ಪ್ರೇಕ್ಷಕರಿಗೆ ‘ಆರ್​ಆರ್​ಆರ್​’ ಸಿನಿಮಾ ತುಂಬ ಇಷ್ಟ ಆಗಿದೆ. ಇತ್ತೀಚೆಗೆ ನಿರ್ದೇಶಕ ರಾಜಮೌಳಿ (Rajamouli), ಅವರ ಪುತ್ರ ಕಾರ್ತಿಕೇಯ ಮುಂತಾದವರು ಜಪಾನ್​ಗೆ ಭೇಟಿ ನೀಡಿದ್ದಾರೆ. ಅಲ್ಲಿ ಅವರಿಗೆ ಭೂಕಂಪದ ಅನುಭವ ಆಗಿದೆ. ಆ ಬಗ್ಗೆ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅಚ್ಚರಿ ಏನೆಂದರೆ ಭೂಕಂಪ (Earthquake) ಆದಾಗ ಅವರು 28ನೇ ಮಹಡಿಯಲ್ಲಿ ಇದ್ದರು!

‘ಜಪಾನ್​ನಲ್ಲಿ ಈಗಷ್ಟೇ ಭಯಂಕರ ಭೂಕಂಪದ ಅನುಭವ ಆಯಿತು. ನಾವು 28ನೇ ಫ್ಲೋರ್​ನಲ್ಲಿ ಇದ್ದೆವು. ನಿಧಾನವಾಗಿ ನೆಲ ಅಲುಗಾಡಲು ಆರಂಭಿಸಿತು. ಅದು ಭೂಕಂಪ ಅಂತ ತಿಳಿಯಲು ನಮಗೆ ಕೆಲವು ನಿಮಿಷ ಬೇಕಾಯಿತು. ನಾನು ಭಯಗೊಳ್ಳುವವನಿದ್ದೆ. ಆದರೆ ಸುತ್ತಮುತ್ತ ಇದ್ದ ಜಪಾನ್​ ಮಂದಿ ಕಿಂಚಿತ್ತೂ ಅಲ್ಲಾಡಲಿಲ್ಲ. ಇನ್ನೇನು ಮಳೆ ಬರುತ್ತಿದೆ ಎಂಬಷ್ಟು ಸಹಜವಾಗಿ ಅವರಿದ್ದರು’ ಎಂದು ರಾಜಮೌಳಿ ಅವರ ಪುತ್ರ ಎಸ್​ಎಸ್​ ಕಾರ್ತಿಕೇಯ ಅವರು ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕಾರ್ತಿಕೇಯ ಅವರ ಸ್ಮಾರ್ಟ್​ ವಾಚ್​ನಲ್ಲಿ ಭೂಕಂಪದ ಮುನ್ಸೂಚನೆ ಬಗ್ಗೆ ಮೆಸೇಜ್​ ಕಾಣಿಸಿಕೊಂಡಿದೆ. ಅದರ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ. ‘ಭೂಕಂಪದ ಮುನ್ಸೂಚನೆಯ ಎಚ್ಚರಿಕೆ: ಶೀಘ್ರದಲ್ಲೇ ದೊಡ್ಡ ಕಂಪನ ಆಗುವ ಸಾಧ್ಯತೆ ಇದೆ. ಶಾಂತವಾಗಿರಿ ಮತ್ತು ಹತ್ತಿರದಲ್ಲಿ ಆಶ್ರಯ ಪಡೆಯಿರಿ’ ಎಂದು ಜಪಾನ್​ನ ಹವಾಮಾನ ಇಲಾಖೆಯವರು ಕಾರ್ತಿಕೇಯ ಅವರಿಗೆ ಸಂದೇಶ ಕಳಿಸಿದ್ದು ಈ ಫೋಟೋದಲ್ಲಿದೆ.

ಇದನ್ನೂ ಓದಿ: RRR ಶೂಟಿಂಗ್​ ಲೊಕೇಷನ್​ ನೋಡಲು ಜಪಾನ್​ನಿಂದ ಬಂದ ಫ್ಯಾನ್ಸ್​

ರಾಜಮೌಳಿ ಮತ್ತು ಅವರ ತಂಡಕ್ಕೆ ಜಪಾನ್​ನಲ್ಲಿ ಸಾಕಷ್ಟು ಪ್ರೀತಿ ಸಿಕ್ಕಿದೆ. ರಾಜಮೌಳಿಗೆ ಇನ್ನಷ್ಟು ಯಶಸ್ಸು ಮತ್ತು ಆರೋಗ್ಯ ಸಿಗಲಿ ಎಂದು ಹಾರೈಸಿ 83 ವರ್ಷ ವಯಸ್ಸಿನ ಮಹಿಳೆಯೊಬ್ಬರು ವಿಶೇಷ ಉಡುಗೊರೆ ನೀಡಿದ್ದಾರೆ. ಆ ಸಂದರ್ಭದ ಫೋಟೋವನ್ನು ರಾಜಮೌಳಿ ಅವರು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಜಪಾನ್​ನಲ್ಲಿ ‘ಆರ್​ಆರ್​ಆರ್​’ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಾಣುತ್ತಿರುವ ಬಗ್ಗೆ ಇತ್ತೀಚೆಗೆ ಚಿತ್ರತಂಡದವರು ಮಾಹಿತಿ ನೀಡಿದ್ದರು. ಜಪಾನ್​ನಿಂದ ಕೆಲವು ಅಭಿಮಾನಿಗಳು ಭಾರತಕ್ಕೆ ಬಂದು ‘ಆರ್​ಆರ್​ಆರ್​’ ಶೂಟಿಂಗ್​ ಸ್ಥಳಕ್ಕೆ ಭೇಟಿ ನೀಡಿದ್ದು ಕೂಡ ಇತ್ತೀಚೆಗೆ ಸುದ್ದಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!