ಹಿಂದಿ ಮಂದಿಗೆ ಪರಿಚಯಗೊಳ್ಳಲು ಹೊಸ ತಂತ್ರದ ಮೊರೆ ಹೋದ ಜೂನಿಯರ್ ಎನ್​ಟಿಆರ್

| Updated By: ರಾಜೇಶ್ ದುಗ್ಗುಮನೆ

Updated on: Mar 12, 2024 | 9:29 AM

‘ದೇವರ’ ಚಿತ್ರದ ಶೂಟ್​ನಲ್ಲಿ ಜೂನಿಯರ್​ ಎನ್​ಟಿಆರ್ ಬ್ಯುಸಿ ಆಗಿದ್ದಾರೆ. ಈ ಚಿತ್ರದ ಕೆಲಸ ಮುಗಿದ ಬಳಿಕ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈಗ ಅವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ. ಈ ಬಗ್ಗೆ ಚರ್ಚೆ ಆಗುತ್ತಿದೆ.

ಹಿಂದಿ ಮಂದಿಗೆ ಪರಿಚಯಗೊಳ್ಳಲು ಹೊಸ ತಂತ್ರದ ಮೊರೆ ಹೋದ ಜೂನಿಯರ್ ಎನ್​ಟಿಆರ್
ಜೂನಿಯರ್ ಎನ್​ಟಿಆರ್
Follow us on

ಜೂನಿಯರ್​ ಎನ್​ಟಿಆರ್ (Jr. NTR) ಅವರ ಖ್ಯಾತಿ ದಿನಕಳೆದಂತೆ ಹೆಚ್ಚುತ್ತಲೇ ಇದೆ. 96ನೇ ಸಾಲಿನ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ‘ನಾಟು ನಾಟು..’ ಚಿತ್ರದ ಹಾಡಿನ ದೃಶ್ಯವನ್ನು ಪ್ರಸಾರ ಮಾಡಲಾಗಿದೆ. ಅಷ್ಟೇ ಅಲ್ಲ ಆ್ಯಕ್ಷನ್ ದೃಶ್ಯಗಳನ್ನು ತೋರಿಸುವಾಗ ‘ಆರ್​ಆರ್​ಆರ್’ ಚಿತ್ರಕ್ಕೂ ಗೌರವ ನೀಡಲಾಗಿದೆ. ಈ ಎಲ್ಲಾ ಕಾರಣದಿಂದ ಜೂನಿಯರ್ ಎನ್​ಟಿಆರ್ ಅಭಿಮಾನಿಗಳು ಖುಷಿಯಾಗಿದ್ದಾರೆ. ಬಾಲಿವುಡ್​ಗೆ ಕಾಲಿಡುತ್ತಿರುವ ಜೂನಿಯರ್​ ಎನ್​ಟಿಆರ್ ಅವರು ಹೊಸ ಪ್ಲ್ಯಾನ್ ಒಂದನ್ನು ರೂಪಿಸಿದ್ದಾರೆ. ‘ವಾರ್ 2’ ಕೆಲಸ ಆರಂಭಕ್ಕೂ ಮುನ್ನ ಅವರು ಹೊಸ ತಂತ್ರದ ಮೊರೆ ಹೋಗಿದ್ದಾರೆ.

‘ಆರ್​ಆರ್​ಆರ್​’ ಚಿತ್ರದ ಬಳಿಕ ಜೂನಿಯರ್ ಎನ್​ಟಿಆರ್ ಖ್ಯಾತಿ ಹೆಚ್ಚಾಗಿದೆ. ಈ ಚಿತ್ರದ ಬಳಿಕ ಮುಂದಿನ ಸಿನಿಮಾದ ಕೆಲಸ ಆರಂಭಿಸಲು ಅವರು ಸ್ವಲ್ಪ ಸಮಯ ತೆಗೆದುಕೊಂಡರು. ಈಗ ‘ದೇವರ’ ಚಿತ್ರದ ಶೂಟ್​ನಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಚಿತ್ರದ ಕೆಲಸ ಮುಗಿದ ಬಳಿಕ ಅವರು ‘ವಾರ್ 2’ ಚಿತ್ರದ ಕೆಲಸಗಳಲ್ಲಿ ತೊಡಗಿಕೊಳ್ಳಲಿದ್ದಾರೆ. ಬಾಲಿವುಡ್​ನ ದೊಡ್ಡ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದೆ. ಈಗ ಅವರು ಹೊಸ ಪ್ರಯೋಗಕ್ಕೆ ಮುಂದಾಗಿದ್ದಾರೆ.

ಜೂನಿಯರ್ ಎನ್​ಟಿಆರ್ ಅವರು ಇತ್ತೀಚೆಗೆ ಅಗ್ರೆಸ್ಸಿವ್ ಆಗಿ ಟಿವಿ ಕಮರ್ಷಿಯಲ್​ಗಳನ್ನು ಮಾಡುತ್ತಿಲ್ಲ. ಹೊಸ ಬ್ರ್ಯಾಂಡ್​ಗಳಿಗೆ ಅವರು ಅಂಬಾಸಿಡರ್ ಆಗಿಲ್ಲ. ಈಗ ಅವರು ಮತ್ತೆ ಹೊಸ ಹೊಸ ಬ್ರ್ಯಾಂಡ್​ಗಳ ಪ್ರಚಾರಕ್ಕೆ ಮುಂದಾಗಿದ್ದಾರೆ. ಅವರು ಈ ರೀತ ಆಲೋಚಿಸುವುದಕ್ಕೂ ಒಂದು ಕಾರಣ ಇದೆ ಎಂದು ವರದಿ ಆಗಿದೆ.

ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರೆ ಜನರ ಜೊತೆ ಕನೆಕ್ಟ್ ಆದ ಹಾಗೆ ಆಗುತ್ತದೆ. ಸಿನಿಮಾದಲ್ಲಿ ನಟಿಸುವುದಕ್ಕೂ ಮೊದಲು ಜಾಹೀರಾತು ಮಾಡಿದರೆ ಹೊಸ ಮುಖ ಎನ್ನುವ ಭಾವನೆ ಕಾಡುವುದಿಲ್ಲ. ಹೀಗಾಗಿ, ಒಂದೆರಡು ದೊಡ್ಡ ಬ್ರ್ಯಾಂಡ್​ಗಳ ಜೊತೆ ಕೈ ಜೋಡಿಸಲು ಅವರು ಪ್ಲ್ಯಾನ್ ರೂಪಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಅವರು ಮುಂಬೈಗೆ ತೆರಳಿ ಕೆಲವು ಏಜೆನ್ಸಿಗಳ ಜೊತೆ ಮಾತುಕತೆ ನಡೆಸಿದ್ದಾರೆ.

ಬ್ರ್ಯಾಂಡ್​ಗಳು ಕೂಡ ದೊಡ್ಡ ಹೀರೋಗಳ ಜೊತೆ ಕೈ ಜೋಡಿಸಲು ಆಸಕ್ತಿ ತೋರಿಸುತ್ತವೆ. ಹೀಗಿರುವಾಗ ಹೀರೋಗಳೇ ಆಸಕ್ತಿ ತೋರಿಸಿ ಮುಂದೆ ಬಂದಾಗ ಇಂಥ ಅವಕಾಶವನ್ನು ಬ್ರ್ಯಾಂಡ್​ಗಳು ಮಿಸ್ ಮಾಡಿಕೊಳ್ಳುವುದೇ ಇಲ್ಲ. ‘ವಾರ್ 2’ ಶೂಟಿಂಗ್​ಗೂ ಮೊದಲು ಜಾಹೀರಾತು ಶೂಟ್​ನಲ್ಲಿ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ಯಶ್, ರಾಮ್ ಚರಣ್ ಬಳಿಕ ವಿಜಯ್ ದೇವರಕೊಂಡ ಪಾಲಾದ ನರ್ತನ್ ಕತೆ

ಈಗಾಗಲೇ ಮಹೇಶ್ ಬಾಬು, ವಿಜಯ್ ದೇವರಕೊಂಡ, ರಾಮ್ ಚರಣ್ ಮೊದಲಾದ ಸ್ಟಾರ್​ಗಳು ಜಾಹೀರಾತುಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಕೆಲವರದ್ದು ಹಣ ಮಾಡುವ ಉದ್ದೇಶವಾದರೆ ಇನ್ನೂ ಕೆಲವರದ್ದು ಜನರ ಎದುರು ಹೆಚ್ಚು ಕಾಣಿಸಿಕೊಳ್ಳಬೇಕು ಎಂಬುದು. ಜೂನಿಯರ್ ಎನ್​ಟಿಆರ್ ಅವರು ಯಾವ ರೀತಿಯ ಜಾಹೀರಾತು ಒಪ್ಪಿಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

‘ದೇವರ’ ಸಿನಿಮಾಗೆ ಕೊರಟಾಲ ಶಿವ ನಿರ್ದೇಶನ ಮಾಡುತ್ತಿದ್ದಾರೆ. ಬಾಲಿವುಡ್​ನ ಜಾನ್ವಿ ಕಪೂರ್ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾ ಎರಡು ಪಾರ್ಟ್​ಗಳಲ್ಲಿ ಬರಲಿದೆಯಂತೆ. ಅಕ್ಟೋಬರ್ 10ರಂದು ಸಿನಿಮಾ ತೆರೆಗೆ ಬರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ