AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಸ್​ಬಾತ್ ವಿಡಿಯೋ ಹಂಚಿಕೊಂಡ ಸಮಂತಾ: ಐಸ್​ಬಾತ್​ನಿಂದಾಗುವ ಲಾಭಗಳೇನು?

Icebath: ನಟಿ ಸಮಂತಾ ತಾವು 4 ಡಿಗ್ರಿ ತಣ್ಣಗಿನ ನೀರಲ್ಲಿ ಕುಳಿತಿರುವ ಚಿತ್ರ ಹಂಚಿಕೊಂಡಿದ್ದಾರೆ. ಈ ಐಸ್​ಬಾತ್ ಏಕೆ ತೆಗೆದುಕೊಳ್ಳುತ್ತಾರೆ? ಇದರಿಂದಾಗುವ ಪ್ರಯೋಜನಗಳೇನು?

ಐಸ್​ಬಾತ್ ವಿಡಿಯೋ ಹಂಚಿಕೊಂಡ ಸಮಂತಾ: ಐಸ್​ಬಾತ್​ನಿಂದಾಗುವ ಲಾಭಗಳೇನು?
ಸಮಂತಾ
ಮಂಜುನಾಥ ಸಿ.
|

Updated on: Jul 26, 2023 | 8:20 PM

Share

ನಟಿ ಸಮಂತಾ (Samantha) ತಮ್ಮ ಫಿಟ್​ನೆಸ್​ ಬಗ್ಗೆ ಅತಿಯಾದ ಕಾಳಜಿವಹಿಸುತ್ತಾರೆ. ಅನಾರೋಗ್ಯದ ನಡುವೆ ಸಹ ಜಿಮ್ ಮಾತ್ರ ತಪ್ಪಿಸುವುದಿಲ್ಲ ಸಮಂತಾ. ತಮ್ಮ ವ್ಯಾಯಾಮ, ಆಹಾರ ಹವ್ಯಾಸಗಳ ಬಗ್ಗೆಯೂ ಆಗಾಗ್ಗೆ ಚಿತ್ರ, ಮಾಹಿತಿಗಳನ್ನು ಸಮಂತಾ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಸಮಂತಾ ತಾವು 4 ಡಿಗ್ರಿ ಸೆಲ್ಶಿಯಸ್​ನ ಐಸ್​ಬಾತ್​ ತೆಗೆದುಕೊಂಡಿರುವ ವಿಡಿಯೋ ಹಂಚಿಕೊಂಡಿದ್ದಾರೆ. ಐಸ್​ಗಳಿಂದ ತುಂಬಿದ ಟಬ್​ನಲ್ಲಿ ಬರೋಬ್ಬರಿ 6 ನಿಮಿಷ ಕೂತಿದ್ದರಂತೆ ಸಮಂತಾ. ಅಂದಹಾಗೆ ಈ ಕ್ರೀಡಾಪಟುಗಳು, ಅತಿಯಾಗಿ ವ್ಯಾಯಾಮ ಮಾಡುವವರು, ಸೆಲೆಬ್ರಿಟಿಗಳು ಐಸ್​ಬಾತ್ ಮಾಡುವುದು ಏಕೆ? ಅದರಿಂದಾಗುವ ಪ್ರಯೋಜನವೇನು?

ಐಸ್​ಬಾತ್ ಮಾಡುವ ಪದ್ಧತಿ ಇತ್ತೀಚೆಗೆ ತುಸು ಹೆಚ್ಚಾಗಿದೆ. ಕೆಲ ವರ್ಷಗಳ ಹಿಂದೆ ಐಸ್​ಬಕೆಟ್ ಚಾಲೆಂಜ್​ ಚಾಲ್ತಿಗೆ ಬಂದಿತ್ತು. ಬಹಳ ವೈರಲ್ ಆಗಿದ್ದ ಈ ಚಾಲೆಂಜ್ ಆ ನಂತರದಲ್ಲಿ ಮರೆಯಾಯ್ತು. ಇದೀಗ ಐಸ್​ಬಾತ್ ಬಹಳ ಜನಪ್ರಿಯಗೊಂಡಿದೆ. ಸ್ವಿಮ್ಮಿಂಗ್ ಮಾಡುವವರು, ಕಠಿಣವಾದ ಕ್ರೀಡೆಗಳಲ್ಲಿ ಪಾಲ್ಗೊಳ್ಳುವವರು, ಫುಟ್​ಬಾಲ್ ಆಟಗಾರರು, ಅತಿಯಾಗಿ ಜಿಮ್ ಮಾಡುವವರು ಐಸ್​ಬಾತ್ ಮಾಡುತ್ತಾರೆ.

ಹೀಗೆ ವಿಪರೀತ ಕೊರೆಯುವ ನೀರಿನಲ್ಲಿ ಸುಮ್ಮನೆ ಕೂರುವುದರಿಂದ ಕೆಲವು ಆರೋಗ್ಯ ಪ್ರಯೋಜನಗಳಿವೆ. ವ್ಯಾಯಾಮದಿಂದ ದಣಿದ ಮಾಂಸಖಂಡಗಳು ತ್ವರಿತವಾಗಿ ವಿಶ್ರಾಂತ ಸ್ಥಿತಿಗೆ ಹೋಗುತ್ತವೆ ಮತ್ತು ಮತ್ತೊಮ್ಮೆ ವ್ಯಾಯಾಮ ಮಾಡಲು ದೇಹ ಅಣಿಯಾಗುತ್ತದೆ. ಅಲ್ಲದೆ ಇದರಿಂದ ರಕ್ತಪರಿಚಲನೆ ಬೇಗ ಸುಲಲಿತವಾಗಿ ವ್ಯಾಯಾಮದಿಂದ ಎದುರಾಗುವ ಹೃದಯ ಸ್ಥಂಭನ ಸಾಧ್ಯತೆಗಳು ಬಹುಮಟ್ಟಿಗೆ ನಿವಾರಣೆಯಾಗುತ್ತದೆ.

ಇದನ್ನೂ ಓದಿ:Samantha: 12 ಕೋಟಿ ರೂಪಾಯಿ ಲಾಸ್ ಮಾಡಿಕೊಂಡ ಸಮಂತಾ; ಇದಕ್ಕೂ ಒಂದು ವರ್ಷ ಬ್ರೇಕ್​ಗೂ ಇದೆ ಲಿಂಕ್

ದೇಹದ ಮೇಲಿನ ಹಿಡಿತ ಇದರಿಂದ ಹೆಚ್ಚಾಗುತ್ತದೆ. ಕೊರೆಯುವ ನೀರಿನಲ್ಲಿ ಕೂತಾಗ ಆಗುವ ನಡುಕದ ಅನುಭವ, ಉಸಿರಾಟದ ಏರಿಳಿತ, ಹೃದಯ ಬಡಿತಗಳು ಹೆಚ್ಚುತ್ತವೆ. ಹಾಗಾಗಿ ನಿಯಮಿತವಾಗಿ ಐಸ್​ಬಾತ್ ತೆಗೆದುಕೊಳ್ಳುವುದರಿಂದ ಇವುಗಳನ್ನು ನಿಯಂತ್ರಿಸುವ ಕ್ಷಮತೆ ಹೆಚ್ಚುತ್ತದೆ ಆ ಮೂಲಕ ದೇಹದ ಮೇಲಿನ ವಿಶೇಷವಾಗಿ ಉಸಿರಾಟದ ಮೇಲಿನ ನಿಯಂತ್ರಣ ಹೆಚ್ಚುತ್ತದೆ. ಏಕಾಗ್ರತೆ ಹೆಚ್ಚುತ್ತದೆ. ಹೆಚ್ಚು ಫೋಕಸ್ಡ್​ ಆಗಿ ಇರಲು ಇದು ಸಹಾಯಕಾರಿಯಾಗುತ್ತದೆ.

ಐಸ್​ಬಾತ್ ತೆಗೆದುಕೊಳ್ಳುವುದರಿಂದ ಮಾಂಸಖಂಡಗಳ ಗಾಯಗಳು ಕಡಿಮೆ ಆಗುತ್ತವೆ. ಗಾಯಗಳಿಂದ ಆಗುವ ಊತವನ್ನು, ನೋವನ್ನು ಇದು ಕಡಿಮೆ ಮಾಡುತ್ತದೆ. ಐಸ್​ಬಾತ್​ ತೆಗೆದುಕೊಳ್ಳುವವರು ನಿದ್ರಾಹೀನತೆಯಿಂದ ಪಾರಾಗುತ್ತಾರೆ ಎನ್ನಲಾಗುತ್ತದೆ ಜೊತೆಗೆ ಐಸ್​ಬಾತ್​ನಿಂದಾಗಿ ರೋಗನಿರೋಧಕ ಶಕ್ತಿ ಹೆಚ್ಚುತದೆಯಂತೆ. ಆಟ ಆಡುವುದರಿಂದ, ವ್ಯಾಯಾಮ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗಿರುತ್ತದೆ ಆದರೆ ಐಸ್​ಬಾತ್​ನಿಂದ ದೇಹದ ಉಷ್ಣತೆ ಸರಿಯಾದ ಪ್ರಮಾಣಕ್ಕೆ ಬರುತ್ತದೆ.

ಸಮಂತಾ, ಈ ರೀತಿಯ ಪ್ರಯೋಗಗಳನ್ನು ದೇಹದ ಮೇಲೆ ಮಾಡುತ್ತಿರುತ್ತಾರೆ. ಐಸ್​ಬಾತ್ ಜೊತೆಗೆ ಆಮ್ಲಜನಕದ ವಿಶೇಷ ಚಿಕಿತ್ಸೆಯನ್ನು ಸಮಂತಾ ತೆಗೆದುಕೊಳ್ಳುತ್ತಿದ್ದಾರೆ. ವಿಶೇಷವಾದ ಕೋಣೆಯೊಂದರಲ್ಲಿ ಕೂತು ಮಾಸ್ಕ್​ ಮೂಲಕ ಶುದ್ಧ ಆಮ್ಲಜನಕ ಸೇವಿಸುವ ಪ್ರಕ್ರಿಯೆಗೆ ಸಮಂತಾ ಒಳಗಾಗುತ್ತಿದ್ದಾರೆ. ಇದರಿಂದ ಶ್ವಾಸಕೋಶದ ಆರೋಗ್ಯ ಉತ್ತಮವಾಗುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಳವಾಗುತ್ತದೆಯಂತೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
ಸಿಎಂ ಡಿಕೆಶಿಗೆ ಯಾವುದೇ ಕಂಟಕವಿಲ್ಲ: ನೊಣವಿನಕೆರೆ ಸ್ವಾಮೀಜಿ ಭವಿಷ್ಯ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ
26 ವರ್ಷಗಳ ಬಳಿಕ ಮನೆಗೆ ಮರಳಿದ ಮಗ: ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಧರ್ಮಸ್ಥಳ