Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?

Rakshit Shetty: ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ನಿರ್ಮಾಪಕ ರಕ್ಷಿತ್ ಶೆಟ್ಟಿ, ತಮ್ಮಿಬ್ಬರಿಗಿಂತಲೂ ಆ ನಟಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿದ ಎಂದು ಯೋಗಿ-ದಿಗಂತ್ ಅಳಲು ತೋಡಿಕೊಂಡಿದ್ದಾರೆ. ಯಾರು ಆ ನಟಿ?

ನಮಗಿಂತ ಆ ನಟಿಯನ್ನು ರಕ್ಷಿತ್ ಶೆಟ್ಟಿ ಕಾಳಜಿ ಮಾಡಿದ: ಯೋಗಿ-ದಿಗಂತ್ ಅಳಲು, ಯಾರು ಆ ನಟಿ?
Follow us
ಮಂಜುನಾಥ ಸಿ.
|

Updated on:Jan 18, 2024 | 12:01 AM

ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣ ಮಾಡಿದ ದಿಗಂತ್ ಹಾಗೂ ಯೋಗಿ ಒಟ್ಟಿಗೆ ನಟಿಸಿರುವ ‘ಬ್ಯಾಚುಲರ್ ಪಾರ್ಟಿ’ ಸಿನಿಮಾ ಜನವರಿ 26ಕ್ಕೆ ತೆರೆಗೆ ಬರಲಿದೆ. ಯೋಗಿ ಹಾಗೂ ದಿಗಂತ್ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ನಿರ್ಮಾಪಕರು ಸೆಟ್​ಗೆ ಬರ್ತಿದ್ದರಾ? ಎಂಬ ಪ್ರಶ್ನೆಗೆ ಯೋಗಿ, ಶೂಟಿಂಗ್​ ಸಮಯದಲ್ಲಿ ಸೆಟ್​ನಲ್ಲಿ ಒಂದು ಭಾರಿ ಮಾತ್ರ ನಾನು ರಕ್ಷಿತ್ ಅನ್ನು ಭೇಟಿ ಮಾಡಿದೆ ಎಂದರು. ಅದಕ್ಕೆ ದಿಗಂತ್ ಅಂದು ಆ ನಟಿ ಸೆಟ್​ಗೆ ಬಂದಿದ್ದರು ಅದಕ್ಕೆ ಬಂದಿದ್ದ ಎಂದರು. ಅದಕ್ಕೆ ಯೋಗಿ ಅಯ್ಯೋ ಹೌದು, ನೋಡಿ ಬಹುಷಃ ಆ ನಟಿ ಸೆಟ್​ಗೆ ಬಂದಿದ್ದರು ಎಂಬ ಕಾರಣಕ್ಕೆ ರಕ್ಷಿತ್ ಶೆಟ್ಟಿ ಸೆಟ್​ಗೆ ಬಂದಿದ್ದ ಅನ್ನಿಸುತ್ತದೆ ಎಂದರು. ಅಂದಹಾಗೆ ಆ ಹುಡುಗಿ ಯಾರು?

‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ಸಿನಿಮಾ ನಟರ ಜೊತೆಗೆ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಹಲವರನ್ನು ಬಳಸಿಕೊಳ್ಳಲಾಗಿದೆ. ಕನ್ನಡದ ಜನಪ್ರಿಯ ಕಂಟೆಂಟ್ ಕ್ರಿಯೇಟರ್ ವಿಕ್ಕಿಪೀಡಿಯಾ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಒಬ್ಬ ಅಂತರಾಷ್ಟ್ರೀಯ ಯೂಟ್ಯೂಬರ್ ಸಹ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ ಅವರೇ ಅಚಾರಾ ಕರ್ಕ್.

ಬಾಯ್​ಫ್ರೆಂಡ್ ಜೊತೆ ಸೇರಿಕೊಂಡು ರಿಯಾಕ್ಷನ್ ವಿಡಿಯೋಗಳನ್ನು ಮಾಡುತ್ತಾ ಬಹಳ ಜನಪ್ರಿಯತೆ ಗಳಿಸಿರುವ ಅಚಾರಾ ಕರ್ಕ್ ಅವರು ‘ಬ್ಯಾಚುಲರ್ ಪಾರ್ಟಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಭಾರತಕ್ಕೆ ಬಂದು ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು. ಯೋಗಿ ತಮಾಷೆಯಾಗಿ ಹೇಳಿದ್ದು ಇದೇ ನಟಿಯ ಬಗ್ಗೆ.

ಅಚಾರಾ ಕರ್ಕ್ ಹಾಗೂ ಜಾಬಿ ಕೇ ಒಟ್ಟಿಗೆ ಭಾರತೀಯ ಸಿನಿಮಾ, ಟ್ರೈಲರ್, ಭಾರತದ ವೈರಲ್ ಕಂಟೆಂಟ್​ ಗಳ ಬಗ್ಗೆ ರಿಯಾಕ್ಷನ್ ವಿಡಿಯೋಗಳನ್ನು ಕೆಲವು ವರ್ಷಗಳಿಂದ ಮಾಡುತ್ತಿದ್ದಾರೆ. ಭಾರತದ ಕೆಲವು ಯೂಟ್ಯೂಬರ್​ಗಳು, ಸಿನಿಮಾ ಕರ್ಮಿಗಳ ಜೊತೆಗೆ ಬಾಂಧವ್ಯವನ್ನೂ ಹೊಂದಿದ್ದಾರೆ. ಭಾರತದ ಕೆಲವು ಸಿನಿಮಾಗಳ ಪ್ರೀಮಿಯರ್ ಶೋಗೂ ಅವರಿಗೆ ಆಹ್ವಾನ ಹೋಗುತ್ತದೆ. ಅವರೂ ಸಹ ಆಸಕ್ತಿಯಿಂದ ಭಾಗವಹಿಸುತ್ತಾರೆ. ಈ ಇಬ್ಬರಿಗೂ ಭಾರತದ ಕಂಟೆಂಟ್ ಬಗ್ಗೆ ಸಿನಿಮಾ ರಂಗಗಳ ಬಗ್ಗೆ ಅತೀವ ಆಸಕ್ತಿ ಹಾಗೂ ಗೌರವಗಳಿವೆ. ಇದೇ ಕಾರಣಕ್ಕೆ ‘ಬ್ಯಾಚುಲರ್ ಪಾರ್ಟಿ’ ಸಿನಿಮಾದ ಪಾತ್ರವೊಂದಕ್ಕೆ ಅಚಾರ ಕರ್ಕ್ ಅನ್ನು ಪರಮವಃ ಆಯ್ಕೆ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:57 pm, Wed, 17 January 24

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ
ಬಿಜೆಪಿ ಶಾಸಕರು ಪೀಠಕ್ಕೆ ಅಗೌರವ ತೋರಿಲ್ಲ,ಸದನ ದೇಗುಲವಿದ್ದಂತೆ: ಸುರೇಶ್ ಗೌಡ