AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು

1973ರ ‘ಬೀಸಿದ ಬಲೆ’ ಸಿನಿಮಾ ಮೂಲಕ ಸುಧೀರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಏಳೆಂಟು ವರ್ಷಗಳಲ್ಲಿ ಕೆಲವೇ ಕೆಲವು ಸಿನಿಮಾ ಮಾಡಿದರು. 1981ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದರು.

ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು
ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು
ರಾಜೇಶ್ ದುಗ್ಗುಮನೆ
|

Updated on: Aug 24, 2024 | 12:48 PM

Share

ನಟ ಸುಧೀರ್ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರಿಗೆ ಬೇಡಿಕೆಯ ಖಳನಟನಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ಅವರ ಮಗ ತರುಣ್ ಈಗ ಚಿತ್ರರಂಗದ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಬದುಕು ಆರಂಭದಲ್ಲಿ ಸಾಮಾನ್ಯ ಕಲಾವಿದರ ರೀತಿಯೇ ಇತ್ತು. ಯಾವಾಗ ರಾಜ್​ಕುಮಾರ್ ಸಿನಿಮಾ ಸಹಿ ಹಾಕಿದರೋ ಅಲ್ಲಿಂದ ಅವರ ಬದುಕು ಬದಲಾಯ್ತು. ಈ ಬಗ್ಗೆ ಸುಧೀರ್ ಪತ್ನಿ ಮಾಲತಿ ಸುಧೀರ್ ಅವರು ಮಾತನಾಡಿದ್ದರು.

1973ರ ‘ಬೀಸಿದ ಬಲೆ’ ಸಿನಿಮಾ ಮೂಲಕ ಸುಧೀರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಏಳೆಂಟು ವರ್ಷಗಳಲ್ಲಿ ಕೆಲವೇ ಕೆಲವು ಸಿನಿಮಾ ಮಾಡಿದರು. 1981ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದರು. ರಾಜ್​ಕುಮಾರ್ ಜೊತೆ ಸುಧೀರ್ ನಟಿಸಬೇಕು ಎಂಬುದು ಪತ್ನಿ ಮಾಲತಿ ಅವರ ಆಸೆಯೂ ಆಗಿತ್ತು.

ರಾಜ್​ಕುಮಾರ್ ಸಿನಿಮಾದಲ್ಲಿ ನನ್ನ ಪತಿ ನಟಿಸಬೇಕಿತ್ತು ಎಂಬುದು ನನ್ನ ಆಸೆ ಆಗಿತ್ತು. ‘ರಾಘವೇಂದ್ರ ಸ್ವಾಮಿ ಇದಾನೆ ಬಿಡು’ ಎಂದು ಸುಧೀರ್ ಅವರು ಮಾಲತಿಗೆ ಹೇಳಿದ್ದರು. ದೇವರ ಮೇಲೆ ಮಾಲತಿಗೆ ಅಷ್ಟಾಗಿ ನಂಬಿಕೆ ಇರಲಿಲ್ಲ. ಹೀಗಾಗಿ, ಈ ಮಾತನ್ನು ಅವರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ ಒಂದು ದಿನ ಚಮತ್ಕಾರ ನಡೆಯಿತು.

ರಾಯರ ವಾರ ಗುರುವಾರವೇ ರಾಜ್​ಕುಮಾರ್ ಅವರು ಸುಧೀರ್ ಮನೆಗೆ ಬಂದರು. ಕಾರು ಬಂದು ನಿಂತಿದ್ದು ನೋಡಿದ ಮಾಲತಿ ಅವರು ಹೋಗಿ ನೋಡಿದರೆ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಕಾರಲ್ಲಿ ಇದ್ದಿದ್ದರು. ‘ಸುಧೀರ್​ಗೆ ಬರೋಕೆ ಹೇಳು. ಇಲ್ಲೇ ವರದಣ್ಣವರ ಮನೆಯಲ್ಲಿ ಇರುತ್ತೇನೆ’ ಎಂದು ಹೇಳಿ ರಾಜ್​ಕುಮಾರ್ ಅವರು ತೆರಳಿದ್ದರು. ಅಲ್ಲಿ ಮಾತನಾಡಿದರು. ಆ ಬಳಿಕ ಕಚೇರಿಗೆ ಬರೋಕೆ ಹೇಳಿದ್ದರು.

ಇದನ್ನೂ ಓದಿ: ತರುಣ್​-ಸೋನಲ್​ ಮದುವೆಗೆ ಚಂದದ ಸೀರೆ ಧರಿಸಿ ಬಂದ ಆಶಿಕಾ ರಂಗನಾಥ್

ಕಚೇರಿಗೆ ಹೋದರೆ ಸುಧೀರ್ ಅವರಿಗೆ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ದಲ್ಲಿ ನಟಿಸಿದ್ದರು. ಇದರಿಂದ ಅವರ ಬದುಕು ಸಂಪೂರ್ಣವಾಗಿ ಬದಲಾಗಿತ್ತು. ಈ ವಿಚಾರವನ್ನು ಮಾಲತಿ ಅವರೇ ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ