‘ಸಾವಿರ ಗುಂಗಲ್ಲಿ’ ಆಲ್ಬಂ ಹಾಡಿನಲ್ಲಿ ಮಿಂಚಿದ ನಟಿ ಬೃಂದಾ ಆಚಾರ್ಯ

ಬೃಂದಾ ಆಚಾರ್ಯ, ಭರತ್​ ಬೋಪಣ್ಣ ಮುಂತಾದವರು ನಟಿಸಿರುವ ‘ಸಾವಿರ ಗುಂಗಲ್ಲಿ’ ಎಂಬ ಆಲ್ಬಂ ಸಾಂಗ್​ ಮೂಡಿಬಂದಿದೆ. ಪ್ರಮೋದ್​ ಮರವಂತೆ ಅವರು ಸಾಹಿತ್ಯ ಬರೆದಿದ್ದು, ಪೃಥ್ವಿ ಭಟ್​ ಅವರು ಧ್ವನಿ ನೀಡಿದ್ದಾರೆ. ಮ್ಯೂಸಿಕ್​ ವಿಡಿಯೋ ಅಥವಾ ಆಲ್ಬಂ ಸಾಂಗ್​ನ ಟ್ರೆಂಡ್​ ಕಡಿಮೆ ಆಗಿರುವ ಈ ಸಂದರ್ಭದಲ್ಲಿ ‘ಸಾವಿರ ಗುಂಗಲ್ಲಿ’ ಸಾಂಗ್​ ಬಿಡುಗಡೆ ಆಗಿದೆ.

‘ಸಾವಿರ ಗುಂಗಲ್ಲಿ’ ಆಲ್ಬಂ ಹಾಡಿನಲ್ಲಿ ಮಿಂಚಿದ ನಟಿ ಬೃಂದಾ ಆಚಾರ್ಯ
ಭರತ್​ ಬೋಪಣ್ಣ, ಬೃಂದಾ ಆಚಾರ್ಯ
Follow us
|

Updated on: May 12, 2024 | 8:37 PM

ಕೇಳುಗರನ್ನು ಆವರಿಸಿಕೊಳ್ಳುವಂತಹ ಹಾಡಿಗಾಗಿ ಕಾಯುವ ಸಂಗೀತ ಪ್ರೇಮಿಗಳಿಗೆ ಇಲ್ಲೊಂದು ಗುಡ್​ ನ್ಯೂಸ್​ ಇದೆ. ಬೃಂದಾ ಆಚಾರ್ಯ (Brinda Acharya) ಹಾಗೂ ಭರತ್ ಬೋಪಣ್ಣ ಅಭಿನಯಿಸಿರುವ ಮ್ಯೂಸಿಕ್​ ವಿಡಿಯೋ ಬಿಡುಗಡೆ ಆಗಿದೆ. ಸಂಗೀತ, ಸಾಹಿತ್ಯ, ಪರಿಕಲ್ಪನೆ, ಅಭಿನಯಯ ಸೇರಿದಂತೆ ಎಲ್ಲ ಆಯಾಮದಲ್ಲೂ ಈ ಸಾಂಗ್​ ಗಮನ ಸೆಳೆಯುತ್ತಿದೆ. ‘ಸಾವಿರ ಗುಂಗಲ್ಲಿ’ (Saavira Gungalli) ಎಂಬುದು ಈ ಸಾಂಗ್​ನ ಶೀರ್ಷಿಕೆ. ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಆಚೆಗೂ ಹಾಡುಗಳು ಜನಮನ ಸೆಳೆಯುತ್ತಿವೆ.

ಇತ್ತೀಚಿನ ದಿನಗಳಲ್ಲಿ ಆಲ್ಬಂ ಸಾಂಗ್ ಅಥವಾ ಮ್ಯೂಸಿಕ್​ ವಿಡಿಯೋ ಎಂಬ ಕಾನ್ಸೆಪ್ಟ್​ ಕಡಿಮೆ ಆಗುತ್ತಿವೆ. ಆ ಕೊರತೆಯನ್ನು ನೀಗಿಸುವ ರೀತಿಯಲ್ಲಿ ‘ಸಾವಿರ ಗುಂಗಲ್ಲಿ’ ಹಾಡು ಮೂಡಿಬಂದಿದೆ. ಇದೊಂದು ನವಿರಾದ ಹಾಡು. ಈ ಹಾಡಿಗೆ ಮೆಚ್ಚುಗೆ ಸಿಗುತ್ತಿರುವುದು ತಂಡಕ್ಕೆ ಖುಷಿ ನೀಡಿದೆ. ಕೃಷ್ಣ ನಂಜುಂಡಯ್ಯ ಅವರ ಪರಿಕಲ್ಪನೆ ಈ ಹಾಡಿನ ಹಿಂದಿದೆ. ಬೃಂದಾ ಆಚಾರ್ಯ, ಮಯೂರ್ ಸಾಗರ್, ಭರತ್ ಬೋಪಣ್ಣ, ಮಾನಿನಿ ಪಿ. ರಾವ್, ಕೃತಿಕಾ ಗೌಡ ಮುಂತಾದವರು ಈ ಆಲ್ಬಂ ಸಾಂಗ್​ನ ಭಾಗವಾಗಿದ್ದಾರೆ.

ಈ ಹಾಡಿನ ಪ್ರಧಾನ ಆಕರ್ಷಣೆಯಾಗಿ ಬೃಂದಾ ಆಚಾರ್ಯ ಕಾಣಿಸುತ್ತಿದ್ದಾರೆ. ಸಾಂಗ್​ನಲ್ಲಿ ಕಥೆಯೊಂದು ಕೂಡ ಇದೆ. ಕೇಳುಗರನ್ನು ಈ ಹಾಡು ಸೆಳೆಯುವಂತಿದೆ. ಕನ್ನಡ ಚಿತ್ರರಂಗದಲ್ಲಿ ಹಿಟ್​ ಹಾಡುಗಳನ್ನು ನೀಡಿರುವ ಪ್ರಮೋದ್ ಮರವಂತೆ ಅವರು ಈ ಸಾಂಗ್​ಗೆ ಸಾಹಿತ್ಯ ಬರೆದಿದ್ದಾರೆ. ಪೃಥ್ವಿ ಭಟ್ ಕಂಠದಲ್ಲಿ ಈ ಹಾಡು ಮೂಡಿಬಂದಿದೆ. ಛಾಯಾಗ್ರಹಣ, ಅದ್ದೂರಿತನ ಕೂಡ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ನಿರೂಪ್ ಭಂಡಾರಿ ಜೊತೆ ಬೃಂದಾ ಆಚಾರ್ಯ ಹೊಸ ಸಿನಿಮಾ; ಶಿವಾನಿಗೆ ಸಖತ್​ ಚಾನ್ಸ್​

ನಟಿ ಬೃಂದಾ ಆಚಾರ್ಯ ಅವರು ಇದೀಗ ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಅವುಗಳ ನಡುವೆ ಇಂಥದ್ದೊಂದು ನವಿರಾದ ಹಾಡಿನಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಗೆ ಹತ್ತಿರ ಆಗಿದ್ದಾರೆ. ಧಾರಾವಾಹಿ ಜಗತ್ತಿನಿಂದ ಈಗ ನಾಯಕನಾಗಿ ಸಕ್ರಿಯವಾಗಿರುವ ಭರತ್ ಬೋಪಣ್ಣ ಸಹ ಅಷ್ಟೇ ಸೂಪರ್​ ಆಗಿ ನಟಿಸಿದ್ದಾರೆ. ಜೋಯ್ ಕಾಸ್ಟಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಎನ್.ಕೆ. ರಾಜ್ ಅವರು ಛಾಯಾಗ್ರಹಣ ಮಾಡಿದ್ದಾರೆ. ತಮಿಳರಸನ್ ಎಂ. ಅವರು ಸಂಕಲನ ಮಾಡಿದ್ದಾರೆ. ಅನಿಲ್ ಸಹ ನಿರ್ದೇಶನ ಈ ಹಾಡಿಗೆ ಇದೆ. ದಿನದಿಂದ ದಿನಕ್ಕೆ ಈ ಸಾಂಗ್​ ಹೆಚ್ಚು ಹೆಚ್ಚು ಜನರನ್ನು ತಲುಪುತ್ತಿರುವುದು ತಂಡಕ್ಕೆ ಖುಷಿ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Daily Devotional: ಯಾವ ಗ್ರಹ ಪೂಜಿಸಿದರೆ ಏನೇನು ಫಲ ಸಿಗುತ್ತೆ?
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
Nithya Bhavishya: ಈ ರಾಶಿಯ ಮಹಿಳೆಯರು ಇಂದು ಉದ್ಯಮದಲ್ಲಿ ಪ್ರಗತಿ ಕಾಣುವರು
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಸ್ತೆಯಲ್ಲಿ ಬಿದ್ದ ಮೀನುಗಳನ್ನು ಕವರ್​ನಲ್ಲಿ ತುಂಬಿಕೊಳ್ಳಲು ಮುಗಿಬಿದ್ದ ಜನ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ರಾಜೀನಾಮೆ ಬಗ್ಗೆ ಕಡ್ಡಿ ಮುರಿದಂತೆ ಮಾತನಾಡಿದ ಸಿದ್ದರಾಮಯ್ಯ
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನೈಸರ್ಗಿಕ ಅನಿಲ ಆಧಾರಿತ ವಿದ್ಯುತ್ ಸ್ಥಾವರ ಲೋಕಾರ್ಪಣೆ, ನೌಕರರಿಗೆ ಬೋನಸ್
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ನಾನಿನ್ನೂ ಮಾತು ನಿಲ್ಲಿಸಿಲ್ಲ..ಸಡನ್ ಸಿಟ್ಟಾದ ಸಿದ್ರಾಮಯ್ಯ ನೋಡಿ DCM ಶಾಕ್​
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
ಜಾಮೀನಿಗೆ ಹೈಕೋರ್ಟ್​ನಲ್ಲಿ ದರ್ಶನ್ ಅರ್ಜಿ ಹಾಕೋದು ಯಾವಾಗ? ವಿವರಿಸಿದ ಲಾಯರ್
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
‘ಪಾಠ ಕಲಿಯಿರಿ’: ಪ್ರಕಾಶ್ ರೈ ವಿರುದ್ಧ ಪವನ್ ಕಲ್ಯಾಣ್ ತೀವ್ರ ಆಕ್ರೋಶ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
ಮುಂಬೈನಲ್ಲಿ ಆರ್ಭಟಿಸಿದ ಮಿಂಚು ಸಹಿತ ಭಾರೀ ಮಳೆ; ಭಯಾನಕ ದೃಶ್ಯ ಸೆರೆ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ
‘ದರ್ಶನ್ ಮಾತ್ರವಲ್ಲ, ಬೇರೆ ಖೈದಿಗಳಿಗೂ ಮೂಲಸೌಕರ್ಯ ನೀಡಬೇಕು’: ಲಾಯರ್​ ಗರಂ