AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Puneeth Rajkumar: ಪುನೀತ್​ಗೆ ಅಂತಿಮ ನಮನ ಸಲ್ಲಿಸಿದ ಚಿರಂಜೀವಿ, ನಾಗಾರ್ಜುನ; ಶಿವಣ್ಣಗೆ ಸಾಂತ್ವನ ಹೇಳಿದ ನಟರು

Chiranjeevi | Nagarjuna: ಪುನೀತ್ ರಾಜಕುಮಾರ್ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಟಾಲಿವುಡ್​ನ ಹಲವು ತಾರೆಯರು ಆಗಮಿಸಿ ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ.

Puneeth Rajkumar: ಪುನೀತ್​ಗೆ ಅಂತಿಮ ನಮನ ಸಲ್ಲಿಸಿದ ಚಿರಂಜೀವಿ, ನಾಗಾರ್ಜುನ; ಶಿವಣ್ಣಗೆ ಸಾಂತ್ವನ ಹೇಳಿದ ನಟರು
ಶಿವಣ್ಣಗೆ ಸಾಂತ್ವನ ಹೇಳುತ್ತಿರುವ ಚಿರಂಜೀವಿ (ಎಡ), ಶಿವಣ್ಣಗೆ ಸಾಂತ್ವನ ಹೇಳುತ್ತಿರುವ ನಾಗಾರ್ಜುನ
TV9 Web
| Edited By: |

Updated on:Oct 30, 2021 | 5:40 PM

Share

ನಟ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನಕ್ಕೆ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ತೆಲುಗು ಚಿತ್ರರಂಗದ ಖ್ಯಾತ ನಟರು ಬೆಂಗಳೂರಿಗೆ ಆಗಮಿಸಿ ಪುನೀತ್ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ, ವಿಕ್ಟರಿ ವೆಂಕಟೇಶ್, ಶ್ರೀಕಾಂತ್, ಹಾಸ್ಯ ನಟ ಅಲಿ ಅಪ್ಪುಗೆ ನಮನ ಸಲ್ಲಿಸಿ ಶಿವರಾಜ್​ ಕುಮಾರ್ ಅವರಿಗೆ ಸಾಂತ್ವನ ಹೇಳಿದ್ದಾರೆ. ಇದಕ್ಕೂ ಮುನ್ನ ನಂದಮೂರಿ ಬಾಲಕೃಷ್ಣ, ಪ್ರಭುದೇವ, ಜ್ಯೂ ಎನ್​ಟಿಆರ್ ಮೊದಲಾದವರು ಆಗಮಿಸಿ ಅಂತಿಮ ನಮನ ಸಲ್ಲಿಸಿದ್ದರು. ಅಂತಿಮ ನಮನ ಸಲ್ಲಿಸಿದ ಬಳಿಕ ದುಃಖ ವ್ಯಕ್ತಪಡಿಸಿದ ನಾಗಾರ್ಜುನ, ಪುನೀತ್ ನಿಧನ ಚಿತ್ರರಂಗಕ್ಕೆ ಅತ್ಯಂತ ದೊಡ್ಡ ನಷ್ಟ ಎಂದಿದ್ದಾರೆ.

ಪುನೀತ್ ನಿಧನ ಬಹಳ ಅನ್ಯಾಯ: ಚಿರಂಜೀವಿ ಕಂಬನಿ ‘‘ರಾಜ್‌ಕುಮಾರ್ ಕುಟುಂಬ ಎಲ್ಲ ಕಾರ್ಯಕ್ರಮಕ್ಕೆ ಆಹ್ವಾನಿಸುತ್ತಿದ್ದರು. ಪುನೀತ್ ಅಕಾಲಿಕ ನಿಧನ ಬಹಳ ಅನ್ಯಾಯ. ಒಪ್ಪಿಕೊಳ್ಳಲು ಕಷ್ಟಕರವಾಗಿದೆ. ಭಗವಂತ ಪುನೀತ್​ಗೆ ಅನ್ಯಾಯ ಮಾಡಿದ್ದಾರೆ’’ ಎಂದು ಚಿರಂಜೀವಿ ಕಂಬನಿ ಮಿಡಿದಿದ್ದಾರೆ. ‘‘ಆ ದೇವರೇ ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ತುಂಬಬೇಕು. ಬೆಂಗಳೂರಿಗೆ ಯಾವಾಗ ಬಂದರೂ ಅವರನ್ನ ಭೇಟಿಯಾಗುತ್ತಿದ್ದೆ. ಡಾ.ರಾಜ್‌ಕುಮಾರ್ ಇದ್ದಾಗ ಅವರ ಮನೆಗೆ ಹೋಗುತ್ತಿದ್ದೆ. ಅವರ ಕುಟುಂಬಸ್ಥರ ಜತೆ ಯಾವಾಗಲೂ ಮಾತನಾಡುತ್ತಿದ್ದೆ. ಇತ್ತೀಚೆಗೆ ಪುನೀತ್, ಶಿವರಾಜ್‌ಕುಮಾರ್‌ರನ್ನು ಭೇಟಿಯಾಗಿದ್ದೆ. ಪುನೀತ್ ಬಹಳ ವಿನಯದಿಂದ ನಡೆದುಕೊಳ್ಳುತ್ತಿದ್ದರು. ಪುನೀತ್ ಆತ್ಮಕ್ಕೆ ಶಾಂತಿ ನೀಡುವಂತೆ ಪ್ರಾರ್ಥನೆ ಮಾಡುತ್ತೇನೆ’’ ಎಂದು ಚಿರಂಜೀವಿ ಸಂತಾಪ ಸೂಚಿಸಿದ್ದಾರೆ.

ಪುನೀತ್ ನನ್ನನ್ನು ಸದಾ ಅಣ್ಣ ಎಂದು ಕರೆಯುತ್ತಿದ್ದರು; ಅಪ್ಪು ಸ್ಮರಿಸಿದ ಅಲಿ ಪುನೀತ್ ಅಂತಿಮ ದರ್ಶನ ಪಡೆದ ಹಾಸ್ಯ ನಟ ಅಲಿ, ರಾಜ್‌ಕುಮಾರ್ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಒಳ್ಳೆಯವರನ್ನು ದೇವರು ಬೇಗ ಕರೆದುಕೊಂಡು ಹೋಗ್ತಾರೆ. ಭಗವಂತ ಇಚ್ಛೆ ಏನೆಂದು ಯಾರಿಗೂ ಗೊತ್ತಿರುವುದಿಲ್ಲ. ಕನ್ನಡ ಚಿತ್ರರಂಗ ಒಳ್ಳೆಯ ನಟನನ್ನು ಕಳೆದುಕೊಂಡಿದೆ ಎಂದು ಶೋಕ ವ್ಯಕ್ತಪಡಿಸಿದ ಅವರು, ಪುನೀತ್ ಸದಾ ನನ್ನನ್ನು ಅಣ್ಣ ಎಂದು ಕರೆಯುತ್ತಿದ್ದರು ಎಂದು ಅವರು ಸ್ಮರಿಸಿಕೊಂಡಿದ್ದಾರೆ.

ಮಿಸ್ ಯೂ ಅಪ್ಪು ಎಂದ ನಟ ಶ್ರೀಕಾಂತ್ ಪುನೀತ್ ತುಂಬಾ ಒಳ್ಳೆಯ ಮನುಷ್ಯ. ಎಲ್ಲರನ್ನೂ ಗೌರವದಿಂದ ಮಾತನಾಡಿಸುತ್ತಿದ್ದರು. ವಿ ಮಿಸ್ ಯೂ ಅಪ್ಪು ಎಂದು ನಟ ಶ್ರೀಕಾಂತ್ ದುಃಖ ವ್ಯಕ್ತಪಡಿಸಿದ್ದಾರೆ. ಜೇಮ್ಸ್ ಚಿತ್ರದಲ್ಲಿ ನಾನು ನಟನೆ ಮಾಡಿದ್ದೆ. ತೆಲುಗು ಭಾಷೆಯಲ್ಲೂ ಜೇಮ್ಸ್ ಸಿನಿಮಾ ಬರುತ್ತಿತ್ತು. ಆದರೆ ಈಗ ಅವರು ಇಲ್ಲದಿರುವುದು ನೋವಾಗುತ್ತಿದೆ. ಒಂದು ವಾರದ ಹಿಂದೆಯೂ ನನಗೆ ಕರೆ ಮಾಡಿದ್ದರು. ಜೇಮ್ಸ್ ಚಿತ್ರದ ಡಬ್ಬಿಂಗ್ ಸಂಬಂಧ ಮಾತಾಡಿದ್ದರು ಎಂದು ಶ್ರೀಕಾಂತ್ ನೆನಪಿಸಿಕೊಂಡಿದ್ದಾರೆ.

ಇದನ್ನೂ ಓದಿ:

Puneeth Rajkumar: ನಾವು ಒಂದೇ ತಾಯಿ ಮಕ್ಕಳಲ್ಲದಿದ್ದರೂ ಸೋದರರಂತಿದ್ದೆವು; ನಂದಮೂರಿ ಬಾಲಕೃಷ್ಣ ಕಂಬನಿ

ಶಿವರಾಜ್​ಕುಮಾರ್​ ಅವರನ್ನು ಬಿಗಿದಪ್ಪಿ ಅತ್ತ ಜ್ಯೂ.ಎನ್​ಟಿಆರ್​

Published On - 5:28 pm, Sat, 30 October 21