ಸಿಸಿಬಿ ವಿಚಾರಣೆ: ಸಂತೋಷ್​ ಹಾಗೂ ಅಕುಲ್ ಹೇಳಿಕೆಗೂ, ಆಸ್ತಿ ದಾಖಲಾತಿಗೂ ಮಿಸ್​ಮ್ಯಾಚ್!

[lazy-load-videos-and-sticky-control id=”PUg04Yydkqw”] ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ನಟ ಸಂತೋಷ್ ಕುಮಾರ್ ಹಾಗೂ ಆಂಕರ್ ಅಕುಲ್​ ವಿಚಾರಣೆ ನಡೆಸಲಾಗುತ್ತಿದೆ. ನಟ ಸಂತೋಷ್​ಗೆ ಸೇರಿದ ವಿಲ್ಲಾ ಹಾಗೂ ಅಕುಲ್​ಗೆ ಸೇರಿದ ರೆಸಾರ್ಟ್ ಡಾಕ್ಯುಮೆಂಟ್​​ಗಳನ್ನು ಈ ಇಬ್ಬರು ನಟರು ವಿಚಾರಣೆಗೆ ಹಾಜರಾಗುವಾಗ ತಂದಿದ್ದು, ಸಂತೋಷ್ ಹಾಗೂ ಬಾಲಾಜಿ ತಂದಿದ್ದ ಡಾಕ್ಯುಮೆಂಟ್ಸ್​ನಲ್ಲಿ ಸಿಸಿಬಿ ಅಧಿಕಾರಿಗಳಿಗೆ ವ್ಯತ್ಯಾಸ ಕಂಡು ಬಂದಿದೆ. ನಟ ಸಂತೋಷ್ ದೇವನಹಳ್ಳಿ ಬಳಿಯ ವಿಲ್ಲಾಗೆ ಸಂಬಂಧಿಸಿದ ದಾಖಲೆಗಳನ್ನು ತಂದಿದ್ದು, ಅಕುಲ್ ಬಾಲಾಜಿ ದೊಡ್ಡಬಳ್ಳಾಪುರ […]

ಸಿಸಿಬಿ ವಿಚಾರಣೆ: ಸಂತೋಷ್​ ಹಾಗೂ ಅಕುಲ್ ಹೇಳಿಕೆಗೂ, ಆಸ್ತಿ ದಾಖಲಾತಿಗೂ ಮಿಸ್​ಮ್ಯಾಚ್!
Edited By:

Updated on: Nov 24, 2020 | 6:57 AM

[lazy-load-videos-and-sticky-control id=”PUg04Yydkqw”]

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಅಧಿಕಾರಿಗಳಿಂದ ನಟ ಸಂತೋಷ್ ಕುಮಾರ್ ಹಾಗೂ ಆಂಕರ್ ಅಕುಲ್​ ವಿಚಾರಣೆ ನಡೆಸಲಾಗುತ್ತಿದೆ.

ನಟ ಸಂತೋಷ್​ಗೆ ಸೇರಿದ ವಿಲ್ಲಾ ಹಾಗೂ ಅಕುಲ್​ಗೆ ಸೇರಿದ ರೆಸಾರ್ಟ್ ಡಾಕ್ಯುಮೆಂಟ್​​ಗಳನ್ನು ಈ ಇಬ್ಬರು ನಟರು ವಿಚಾರಣೆಗೆ ಹಾಜರಾಗುವಾಗ ತಂದಿದ್ದು, ಸಂತೋಷ್ ಹಾಗೂ ಬಾಲಾಜಿ ತಂದಿದ್ದ ಡಾಕ್ಯುಮೆಂಟ್ಸ್​ನಲ್ಲಿ ಸಿಸಿಬಿ ಅಧಿಕಾರಿಗಳಿಗೆ ವ್ಯತ್ಯಾಸ ಕಂಡು ಬಂದಿದೆ.

ನಟ ಸಂತೋಷ್ ದೇವನಹಳ್ಳಿ ಬಳಿಯ ವಿಲ್ಲಾಗೆ ಸಂಬಂಧಿಸಿದ ದಾಖಲೆಗಳನ್ನು ತಂದಿದ್ದು, ಅಕುಲ್ ಬಾಲಾಜಿ ದೊಡ್ಡಬಳ್ಳಾಪುರ ಬಳಿಯ ರೆಸಾರ್ಟ್ ಲೀಜ್ ಕುರಿತು ಡಾಕ್ಯುಮೆಂಟ್ಸ್ ತಂದಿದ್ದಾರೆ. ಈ ಇಬ್ಬರು ತಂದಿದ್ದ ದಾಖಲಾತಿಗಳನ್ನು ಸಿಸಿಬಿ ಅಧಿಕಾರಿಗಳು ಪರಿಶೀಲಿಸಿದ್ದಾರೆ.

ಈ ವೇಳೆ, ಸಂತೋಷ್ ಹಾಗೂ ಅಕುಲ್ ಬಾಲಾಜಿ ನೀಡಿರುವ ಹೇಳಿಕೆಗಳಿಗೂ ಹಾಗೂ ಅವರ ಡಾಕ್ಯುಮೆಂಟ್ಸ್ ಕುರಿತು ಗೊಂದಲ ಸೃಷ್ಟಿಯಾಗಿದೆ. ಹೀಗಾಗಿ ಸಿಸಿಬಿ ಅಧಿಕಾರಿಗಳು ಮೊದಲು ದಾಖಲಾತಿಗಳ ಬಗ್ಗೆಯೇ ಪ್ರಶ್ನಿಸುತ್ತಿದ್ದಾರೆ. ಜೊತೆಗೆ ದಾಖಲಾತಿಗಳ ಕುರಿತು ಮೊದಲು ಸ್ಪಷ್ಟನೆ ನೀಡಿ ಅಂತಾ ತಾಕೀತು ಮಾಡಿದ್ದಾರೆ.

Published On - 12:36 pm, Sat, 19 September 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Read More
Follow Us