AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?

ನಟ ಡಾಲಿ ಧನಂಜಯ್ ಅವರ ಮಾಂಸಾಹಾರ ಸೇವನೆ ವಿಷಯ ವೈರಲ್ ಆಗಿ ಲಿಂಗಾಯತ ಸಮುದಾಯದ ಹೆಸರಿನಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಧನಂಜಯ್, ಆಹಾರ ಪ್ರತಿಯೊಬ್ಬರ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದಾರೆ. ಸಮಾಜದಲ್ಲಿ ಆಹಾರದ ವಿಷಯದಲ್ಲಿ ರಾಜಕೀಯ ಮಾಡುವುದನ್ನು ಖಂಡಿಸಿದ ಅವರು, ನಾನ್ ವೆಜ್ ತಿನ್ನೋದು ಅಪರಾಧವಲ್ಲ ಎಂದಿದ್ದಾರೆ.

ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ?
ಡಾಲಿ
ರಾಜೇಶ್ ದುಗ್ಗುಮನೆ
|

Updated on: Jan 31, 2026 | 7:00 AM

Share

ಡಾಲಿ ಧನಂಜಯ್ ಅವರು (Dhananjay) ಇತ್ತೀಚೆಗೆ ನಾನ್​ ವೆಜ್ ತಿಂದ ವಿಷಯ ಸಾಕಷ್ಟು ಚರ್ಚೆ ಆಯಿತು. ಅವರು ಲಿಂಗಾಯತ ಆಗಿ ನಾನ್​ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಬಹುತೇಕರು ಡಾಲಿ ಅವರನ್ನು ಬೆಂಬಲಿಸಿದ್ದರು. ಆಹಾರ ಅವರ ಆಯ್ಕೆ ಎಂದು ನೇರ ಮಾತುಗಳಲ್ಲಿ ಹೇಳಿದ್ದರು. ಈಗ ಈ ವಿಷಯಕ್ಕೆ ಡಾಲಿ ಧನಂಜಯ್ ಅವರು ಸ್ಪಷ್ಟನೆ ನೀಡಿದ್ದಾರೆ. ಆಹಾರ ಪ್ರತಿಯೊಬ್ಬ ಮನುಷ್ಯನ ಆಯ್ಕೆ ಎಂದಿದ್ದಾರೆ.

ಜನವರಿ 30ರಂದಿ ನಡೆದ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಮಾತನಾಡಿದ್ದಾರೆ. ‘ನಾನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ವಿಷಯ ನೋಡಿದೆ. ಯಾರು ಅದನ್ನು ಎತ್ತಿ ಚರ್ಚೆ ಮಾಡಿದರು ಎಂಬುದು ಗೊತ್ತಿಲ್ಲ. ನನ್ನ ಗೆಳೆಯ ರಾಹುಲ್ ಎಂಬುವವರು ಬಿರಿಯಾನಿ ಶಾಪ್ ಓಪನ್ ಮಾಡಿಕೊಟ್ಟೆ. ಈ ವೇಳೆ ಊಟ ಆಫರ್ ಮಾಡಿದ. ಅದನ್ನು ಮಾಡಿ ಬಂದೆ. ಸುಮಾರು 10-15 ಬಿರಿಯಾನಿ ಶಾಪ್​​​ಗಳನ್ನು ನಾನೇ ಓಪನ್ ಮಾಡಿದ್ದೇನೆ. ಹೆಡ್​ಬುಷ್ ಸಮಯದಲ್ಲಿ ಬಿರಿಯಾನಿ ತಿನ್ನುತ್ತಲೇ ಸಿನಿಮಾ ಪ್ರಚಾರ ಮಾಡಿದ್ದೆ. ಈ ವಿಷಯ ಪಿಕ್ ಆಗಬಹುದು ಎಂಬುದು ಗೊತ್ತಿರಲಿಲ್ಲ. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಯಿತು. ಈ ರೀತಿಯ ವಿಷಯಗಳು ಚರ್ಚೆ ಆದಾಗ ಸಮಾಜ ಹೇಗೆ ಯೋಚಿಸುತ್ತಿದೆ ಎಂಬುದು ಗೊತ್ತಾಗುತ್ತದೆ’ ಎಂದಿದ್ದಾರೆ ಡಾಲಿ.

‘ಡಾಲಿ ನಾನ್ ವೆಜ್ ತಿನ್ನುತ್ತಾರಾ ಎಂದು ಕೇಳೋದು ಓಕೆ. ಲಿಂಗಾಯತರು ಹಾಗೂ ಬ್ರಾಹ್ಮಣರು ಮಾಂಸ ತಿಂತಾರಾ ಎಂದು ಪ್ರಶ್ನಿಸೋದು ತಪ್ಪು. ಅದು ಅಗತ್ಯವಿಲ್ಲ. ಇದರ ಹಿಂದೆ ಒಂದಷ್ಟು ಜನರನ್ನು ಎತ್ತಿಕಟ್ಟೋ ಉದ್ದೇಶ ಇದ್ದಿರಬಹುದು’ ಎಂದು ದುಷ್ಟ ಆಲೋಚನೆ ಹೊಂದಿದ್ದವರ ವಿರುದ್ಧ ಡಾಲಿ ಕಿಡಿಕಾರಿದ್ದಾರೆ. ‘ಇದೆಲ್ಲ ಮೊದಲು ನನಗೆ ತೊಂದರೆ ಕೊಡುತ್ತಿತ್ತು. ಆದರೆ, ಈಗ ಹಾಗೆ ಆಗುತ್ತಿಲ್ಲ’ ಎಂದಿದ್ದಾರೆ ಅವರು.

ಇದನ್ನೂ ಓದಿ: ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ

‘ನಾನು ಓಪನ್ ಬುಕ್. ಊಟ, ಚಟ ಎಲ್ಲವೂ ನನ್ನ ಆಯ್ಕೆ. ಅದರಿಂದ ಯಾರಿಗೂ ತೊಂದರೆ ಆಗುತ್ತಿಲ್ಲ ಎಂದರೆ ಸಮಸ್ಯೆಯೇ ಇಲ್ಲವಲ್ಲ. ನಾನು ಸಿನಿಮಾಗಾಗಿ ಸ್ಮೋಕ್ ಮಾಡುತ್ತಿದ್ದೆ. ನಿಜ ಜೀವನದಲ್ಲೂ ಅದನ್ನು ಮುಂದುವರಿಸಿದೆ. ಈಗ ಅದನ್ನು ನಿಲ್ಲಿಸಿದ್ದೇನೆ. ನಾನು ಬಿಯರ್ ಬಾಯ್ ಎಂದೇ ಫೇಮಸ್. ಈಗ ನಾನು ಅಪರೂಪಕ್ಕೆ ಕುಡಿಯುತ್ತೇನೆ ಅಷ್ಟೇ. ನಾನು ಅದನ್ನು ಮಾಡಿ ಎಂದು ಯಾರಿಗೂ ಹೇಳಲ್ಲ. ಏನೇ ಮಾಡಿದರೂ ಇತಮಿತವಾಗಿ ಮಾಡಿ’ ಎಂದು ಧನಂಜಯ್ ಕಿವಿಮಾತು ಹೇಳಿದ್ದಾರೆ.

‘ನನಗೆ ಸಮುದ್ರ ಆಹಾರ ಎಂದರೆ ಇಷ್ಟ. ಕದ್ದು ಮುಚ್ಚಿ ಮಾಡೋಕೆ ಅದು ಕ್ರೈಮ್ ಅಲ್ಲ.ನನಗೆ ಅದು ಇಷ್ಟ. ಡಾಲಿ ಏನು ತಿಂತೀರಾ ಎಂದು ನನಗೆ ಕೇಳಿದರೆ ನಾನು ಖುಷಿಯಿಂದ ಉತ್ತರ ನೀಡುತ್ತೇನೆ’ ಎಂದು ಡಾಲಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಕೊಲ್ಕತ್ತಾ ಅಗ್ನಿ ದುರಂತದ ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಘೋಷಿಸಿದ ಮೋದಿ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!