AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿಗೆ ದಚ್ಚು ಡಿಚ್ಚಿ, ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ಸಲ್ಲಿಸಿದ ರಾಬರ್ಟ್​ ನಿರ್ಮಾಪಕರು

ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ. ಆಂಧ್ರದಲ್ಲಿ ತೆಲುಗು ಸಿನಿಮಾ ರಿಲೀಸ್ ಆದ್ರೆ ಕನ್ನಡ ಸಿನಿಮಾಗಳಿಗೆ ಅವಕಾಶವೇ ಸಿಗೋದಿಲ್ಲ. ತೆಲುಗು ಸಿನಿಮಾ ರಿಲೀಸ್ ಆದ ದಿನ ಕನ್ನಡ ಸಿನಿಮಾ ರಿಲೀಸ್ ಮಾಡುವಂತಿಲ್ಲ. ತೆಲುಗು ಚಿತ್ರರಂಗದ ಹೊಸ ನೀತಿಯಿಂದ ದರ್ಶನ್ ಕೆಂಡಾಮಂಡಲರಾಗಿದ್ದಾರೆ.

ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿಗೆ ದಚ್ಚು ಡಿಚ್ಚಿ, ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ದೂರು ಸಲ್ಲಿಸಿದ ರಾಬರ್ಟ್​ ನಿರ್ಮಾಪಕರು
ಚಲನಚಿತ್ರ ವಾಣಿಜ್ಯ ಮಂಡಳಿಗೆ ಆಗಮಿಸಿದ ದರ್ಶನ್
ಆಯೇಷಾ ಬಾನು
|

Updated on:Jan 29, 2021 | 1:22 PM

Share

ಬೆಂಗಳೂರು: ಕೊರೊನಾ ಬಳಿಕ ಥಿಯೇಟರ್​ಗಳಲ್ಲಿ ಸಿನಿಮಾ ರಿಲೀಸ್ ಆಗುವಷ್ಟರಲ್ಲಿ ಮತ್ತೊಂದು ಕುತ್ತು ಎದುರಾಗಿದೆ. ತೆಲುಗು ಚಿತ್ರರಂಗದ ಸ್ವಜನ ಪಕ್ಷಪಾತ ನೀತಿ ವಿರುದ್ಧ ನಟ ದರ್ಶನ್ ಸಿಡಿದೆದ್ದಿದ್ದಾರೆ. ಆಂಧ್ರದಲ್ಲಿ ತೆಲುಗು ಸಿನಿಮಾ ರಿಲೀಸ್ ಆದ್ರೆ ಕನ್ನಡ ಸಿನಿಮಾಗಳಿಗೆ ಅವಕಾಶವೇ ಸಿಗೋದಿಲ್ಲ. ತೆಲುಗು ಸಿನಿಮಾ ರಿಲೀಸ್ ಆದ ದಿನ ಕನ್ನಡ ಸಿನಿಮಾ ರಿಲೀಸ್ ಮಾಡುವಂತಿಲ್ಲ. ತೆಲುಗು ಚಿತ್ರರಂಗದ ಇಂತಹ ಹೊಸ ನೀತಿಯಿಂದ ದರ್ಶನ್ ಕೆಂಡಾಮಂಡಲರಾಗಿದ್ದಾರೆ. ಹೀಗಾಗಿ ನಟ ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿ ನೀಡಿ ಈಗಲೇ ಸಮಸ್ಯೆಗಳನ್ನ ಬಗೆಹರಿಸಬೇಕು ಎಂದು ಮನವಿ ಮಾಡಿದರು.

ರಾಬರ್ಟ್ ಸಿನಿಮಾ ತೆಲುಗಿನಲ್ಲಿ ರಿಲೀಸ್​ಗೆ ಸಮಸ್ಯೆಯಾಗಬಾರದು. ಸಮಸ್ಯೆ ಉಂಟಾಗದಂತೆ ರಿಲೀಸ್​ಗೆ ಅವಕಾಶ ಮಾಡಿಕೊಡಬೇಕು. ಈ ಬಗ್ಗೆ ತೆಲುಗು ಚಲನಚಿತ್ರ ವಾಣಿಜ್ಯ ಮಂಡಳಿಗೂ ತಿಳಿಸಿ. ಈಗಲೇ ಸಮಸ್ಯೆಗಳನ್ನ ಬಗೆಹರಿಸಬೇಕು. ಈಗಲೇ ಸಮಸ್ಯ ಬಗೆಹರಿಯದಿದ್ದರೆ ಮುಂದೆ ಮತ್ತಷ್ಟು ಯುವ ಪ್ರತಿಭೆಗಳ ಸಿನಿಮಾಗಳಿಗೂ ತೊಂದರೆಯಾಗಲಿದೆ ಎಂದು ದರ್ಶನ್ ಚಲನಚಿತ್ರ ವಾಣಿಜ್ಯ ಮಂಡಳಿ ನಡೆದ ಚರ್ಚೆ ವೇಳೆ ಗಮನ ಸೆಳೆದಿದ್ದಾರೆ. ಇದೇ ವೇಳೆ ರಾಬರ್ಟ್ ಸಿನಿಮಾ ನಿರ್ಮಾಪಕರು ಈ ಬಗ್ಗೆ ಅಧಿಕೃತವಾಗಿ ಮಂಡಳಿಗೆ ದೂರು ಸಲ್ಲಿಸಿದರು.

ನಟ ದರ್ಶನ್​ ಜೊತೆ ನಿರ್ಮಾಪಕರು, ನಿರ್ದೇಶಕರು ಸಾಥ್ ನೀಡಿದರು. ರಾಬರ್ಟ್ ರಿಲೀಸ್ ಸಮಸ್ಯೆ ಗೊತ್ತಾದ ತಕ್ಷಣ ವಾಣಿಜ್ಯ ಮಂಡಳಿಗೆ ಪೊಗರು ನಿರ್ಮಾಪಕ ಹಾಗೂ ಕೋಟಿಗೊಬ್ಬ3 ನಿರ್ಮಾಪಕ ಸೂರಪ್ಪ ಬಾಬು ಕೂಡ ಆಗಮಿಸಿದರು. ಕನ್ನಡ ಚಿತ್ರರಂಗದ ಹಿರಿಯರು ಮತ್ತು ಮಂಡಳಿಯ ಸದಸ್ಯರು ಇದೀಗ ಚರ್ಚೆ ನಡೆಸಿದರು. ಇಂದು ಯಾವ ರೀತಿ ಬೆಳವಣಿಗೆ ಆಗುತ್ತೆ ಅನ್ನೋದನ್ನ ಕಾದುನೋಡಬೇಕಿದೆ. ಭಾನುವಾರ ಸ್ಯಾಂಡಲ್​ವುಡ್ ನಿರ್ಮಾಪಕರು ಚೆನ್ನೈನಲ್ಲಿರುವ ಸೌತ್​ ಇಂಡಿಯಾ ಫಿಲ್ಮ್​ ಚೇಂಬರ್ ಜತೆ ಸಭೆ ನಡೆಸಿ ದೂರು ಸಲ್ಲಿಸಲು ನಿರ್ಧರಿಸಿದ್ದಾರೆ.

ಮಾರ್ಚ್ 11ರಂದು ರಾಬರ್ಟ್ ಸಿನಿಮಾ ರಿಲೀಸ್ ಮಾಡಲು ನಿರ್ಧಾರ ಮಾಡಲಾಗಿತ್ತು. ತೆಲುಗಿಗೆ ಡಬ್ ಆಗಿರುವ ರಾಬರ್ಟ್ ಸಿನಿಮಾವನ್ನು ಆಂಧ್ರದಲ್ಲಿ ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸಿತ್ತು. ಆದ್ರೆ ಮಾರ್ಚ್ 11ರಂದು ತೆಲುಗಿನ 2 ಚಿತ್ರಗಳು ರಿಲೀಸ್ ಆಗಲಿವೆ. ಹೀಗಾಗಿ ರಾಬರ್ಟ್ ಚಿತ್ರ ರಿಲೀಸ್​ಗೆ ಅಡ್ಡಿ ಉಂಟಾಗಿದೆ. ತೆಲುಗು ಸಿನಿಮಾ ರಿಲೀಸ್ ದಿನ ಕನ್ನಡ ಸಿನಿಮಾ ರಿಲೀಸ್ ಮಾಡದಂತೆ ರೂಲ್ಸ್ ಮಾಡಲಾಗಿದೆ. ಕನ್ನಡದಿಂದ ತೆಲುಗಿಗೆ ಡಬ್ ಆಗಿರುವ ರಾಬರ್ಟ್ ಸಿನಿಮಾ ರಿಲೀಸ್​ಗೆ ಆಂಧ್ರದಲ್ಲಿ ಅಡ್ಡಿ ಉಂಟಾಗಿದೆ. ಹೀಗಾಗಿ ನಟ ದರ್ಶನ್ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ಅವರು ಇಲ್ಲಿಗೆ ಬರಬಹುದು, ನಾವು ಅಲ್ಲಿಗೆ ಹೋಗಬಾರದಾ? ತೆಲುಗು ಚಿತ್ರರಂಗದ ಹೊಸ ನೀತಿ ಬಗ್ಗೆ ಚರ್ಚೆ ನಡೆಸ್ತೇವೆ. ತೆಲುಗು ಚಿತ್ರರಂಗದ ಸಿನಿಮಾ ನಮ್ಮಲ್ಲಿ ರಿಲೀಸ್ ಮಾಡ್ತಾರೆ. ಆದರೆ ಕನ್ನಡ ಸಿನಿಮಾ ಅಲ್ಲಿ ರಿಲೀಸ್​ ಮಾಡಲು ಬಿಡುತ್ತಿಲ್ಲ. ಅವರು ಇಲ್ಲಿಗೆ ಬರಬಹುದು, ನಾವು ಅಲ್ಲಿಗೆ ಹೋಗಬಾರದಾ. ಮುಂದಿನ ದಿನಗಳಲ್ಲಿ ಯುವ ಪ್ರತಿಭೆಗಳಿಗೆ ಸಮಸ್ಯೆಯಾಗಲಿದೆ. ಹೀಗಾಗಿ ನಮ್ಮ ಮೇಲೆ ಹೆಚ್ಚಿನ ಜವಾಬ್ದಾರಿ ಇದೆ. ನಾವು ಫಿಲ್ಮ್​ ಚೇಂಬರ್​ನಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಸ್ಯಾಂಡಲ್​ವುಡ್​ ನಟ ದರ್ಶನ್​ ತಿಳಿಸಿದ್ರು.

ಟಾಲಿವುಡ್​ನಲ್ಲಿ ಮಾರ್ಚ್-11 ಕ್ಕೆ ರಿಲೀಸ್ ಪ್ಲಾನ್ ಆಗಿರೋ ಸಿನಿಮಾಗಳು ಶ್ರೀಕಾರಂ, ಗಾಲಿ ಸಂಪತ್, ಜಾತಿ ರತ್ನಲು ಸೇರಿದಂತೆ ಕೆಲವು ಸಿನಿಮಾಗಳು ಮಾರ್ಚ್ -11 ಕ್ಕೆ ರಿಲೀಸ್ ಆಗಲು ಸಿದ್ಧವಾಗಿವೆ. ಸದ್ಯ ಬಿಗ್ ಸ್ಟಾರ್​ಗಳ ಸಿನಿಮಾ ರಿಲೀಸ್​ಗೆ ಇನ್ನೂ ಪ್ಲಾನ್ ಆಗಿಲ್ಲ. ಹೀಗಾಗಿ ಸಹಜವಾಗಿಯೇ ರಾಬರ್ಟ್ ರಿಲೀಸ್​ಗೆ ಆಗುತ್ತಿರುವ ಸಮಸ್ಯೆ ಏನು ಅನ್ನೋದೆ ತಿಳಿಯುತ್ತಿಲ್ಲ. ಹಾಗಾಗಿ ಈ ಸಮಸ್ಯೆಗೆ ಹೇಗೆ ಪರಿಹಾರ ಸಿಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.

‘ತೆಲುಗಿನಲ್ಲಿ ಯಾವುದೇ ಸಿನಿಮಾ ರಿಲೀಸ್ ಇದ್ರೂ.. ಕನ್ನಡ ಚಿತ್ರಗಳ ಬಿಡುಗಡೆಗೆ ಅವಕಾಶ ನೀಡ್ತಾ ಇಲ್ಲ’

Published On - 12:48 pm, Fri, 29 January 21

ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ಚಿಕ್ಕಬಳ್ಳಾಪುರದಲ್ಲಿ ಸರಣಿ ಅಪಘಾತ: ತಪ್ಪಿದ ಭಾರಿ ಅನಾಹುತ
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ವೇದಿಕೆಯಲ್ಲಿ ವೈದ್ಯೆಯ ಹಿಜಾಬ್ ಎಳೆದ ಸಿಎಂ ನಿತೀಶ್ ಕುಮಾರ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ