ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ್ರಾ ನಟ ದಿಲೀಪ್ ರಾಜ್?

ಎದೆ ನೋವು ಕಾಣಿಸಿಕೊಂಡ ಬಳಿಕ ದಿಲೀಪ್ ರಾಜ್ ಅವರು ಸ್ಮಾರ್ಟ್ ವಾಚ್​ನಲ್ಲಿ ಹೃದಯ ಬಡಿತದ ಪ್ರಮಾಣವನ್ನು ನೋಡಿಕೊಂಡಿದ್ದರು. ಅಲ್ಲಿ ಎಲ್ಲವೂ ಸರಿಯಾಗಿಯೇ ತೋರಿಸಿತ್ತು. ಆದರೆ ಬೆಳಗಾಗುವುದರಲ್ಲಿ ಅವರ ಪ್ರಾಣ ಹೋಯಿತು. ಸ್ಮಾರ್ಟ್ ವಾಚ್ ತೋರಿಸುವ ಮಾಹಿತಿಯನ್ನು ಎಷ್ಟರಮಟ್ಟಿಗೆ ನಂಬಲು ಸಾಧ್ಯ ಎಂಬ ಚರ್ಚೆ ಈಗ ಜೋರಾಗಿದೆ.

ಸ್ಮಾರ್ಟ್ ವಾಚ್ ನಂಬಿ ಎದೆ ನೋವು ನಿರ್ಲಕ್ಷ್ಯ ಮಾಡಿದ್ರಾ ನಟ ದಿಲೀಪ್ ರಾಜ್?
Dileep Raj

Updated on: May 14, 2026 | 5:09 PM

ನಟ ದಿಲೀಪ್ ರಾಜ್ (Dileep Raj) ಅವರು ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಿದ್ದರು. ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ. ಹಾಗಿದ್ದರೂ ಕೂಡ ಅವರು ಹೃದಯಾಘಾತದಿಂದ ನಿಧನರಾದರು. ಮೇ 13ರಂದು ದಿಲೀಪ್ ರಾಜ್ ಅವರ ಮರಣದ ಸುದ್ದಿ ಕೇಳಿ ಎಲ್ಲರಿಗೂ ಆಘಾತ ಆಯಿತು. ಫಿಟ್ ಆಗಿದ್ದ ಅವರು 47ನೇ ವಯಸ್ಸಿಗೆ ಕೊನೆಯುಸಿರು ಎಳೆದಿದ್ದು ನೋವಿನ ಸಂಗತಿ. ಮೇ 12ರ ರಾತ್ರಿಯೇ ದಿಲೀಪ್ ರಾಜ್ ಅವರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ಆದರೆ ಸ್ಮಾರ್ಟ್ ವಾಚ್ (Smartwatch) ನಂಬಿ ಅವರು ತಪ್ಪು ಮಾಡಿದರು ಎನ್ನಲಾಗಿದೆ.

ಎದೆ ನೋವು ಕಾಣಿಸಿಕೊಂಡಿದ್ದರಿಂದ ತಮ್ಮ ಹೃದಯಬಡಿತ ಹೇಗಿದೆ ಎಂಬುದನ್ನು ಸ್ಮಾರ್ಟ್ ವಾಚ್ ಮೂಲಕ ದಿಲೀಪ್ ರಾಜ್ ಅವರು ನೋಡಿಕೊಂಡಿದ್ದರು. ಅದರಲ್ಲಿ ಎಲ್ಲವೂ ನಾರ್ಮಲ್ ಎಂದು ತೋರಿಸಿದ್ದರಿಂದ ಅವರು ಸುಮ್ಮನಾಗಿದ್ದಾರೆ. ಮೇ 13ರ ಬೆಳಗ್ಗೆ ವೈದ್ಯರ ಅಪಾಯಿಂಟ್​ಮೆಂಟ್ ತೆಗೆದುಕೊಂಡಿದ್ದರು. ಆದರೆ ಚೆಕಪ್ ಮಾಡಿಸುವುದರೊಳಗೆ ಅವರಿಗೆ ತೀವ್ರ ಹೃದಯಾಘಾತ ಆಯಿತು.

ದಿಲೀಪ್ ರಾಜ್ ಅವರು ಹಾರ್ಟ್ ಬೀಟ್ ಸರಿಯಾಗಿದೆ ಎಂದು ಸ್ಮಾರ್ಟ್ ವಾಚ್ ತೋರಿಸಿದ್ದನ್ನು ನಂಬಿಕೊಂಡು ಸುಮ್ಮನಾಗುವ ಬದಲು, ರಾತ್ರಿಯೇ ವೈದ್ಯರ ಬಳಿ ಹೋಗಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೆ ಅವರು ನಿರ್ಲಕ್ಷ್ಯ ಮಾಡಿದರು. ಅದು ಅವರ ಪ್ರಾಣಕ್ಕೆ ಮುಳುವಾಯಿತು. ದಿಲೀಪ್ ರಾಜ್ ಅಗಲಿಕೆಯಿಂದ ಅವರ ಕುಟುಂಬಕ್ಕೆ ತೀವ್ರ ನೋವಾಗಿದೆ.

ಆರೋಗ್ಯದ ಕಾಳಜಿ ಇರುವ ಅನೇಕರು ಸ್ಮಾರ್ಟ್ ವಾಚ್ ಬಳಸುತ್ತಾರೆ. ಹೃದಯ ಬಡಿತ, ರಕ್ತದಲ್ಲಿನ ಆಮ್ಲಜನಕ ಮಟ್ಟ, ನಿದ್ರೆಯ ಅವಧಿ, ದೈಹಿಕ ಚುಟುವಟಿಕೆಗಳ ಲೆಕ್ಕ, ದೇಹದ ಉಷ್ಣಾಂಶ ಸೇರಿದಂತೆ ಹಲವು ಬಗೆಯ ಮಾಹಿತಿಯನ್ನು ಸ್ಮಾರ್ಟ್ ವಾಚ್​ಗಳು ನೀಡುತ್ತವೆ. ಆದರೆ ಅವುಗಳು ತೋರಿಸುವ ಮಾಹಿತಿಯನ್ನು ಎಷ್ಟರಮಟ್ಟಿಗೆ ನಂಬಬೇಕು ಎಂಬ ಚರ್ಚೆ ಈಗ ಜೋರಾಗಿದೆ.

ಇದನ್ನೂ ಓದಿ: ‘ದಿಲೀಪ್ ರಾಜ್ ನಿಧನದ ಸುದ್ದಿ ಬಂದಾಗ ನಾನು ನಂಬಲಿಲ್ಲ’: ಎಸ್. ನಾರಾಯಣ್

ಕಿರುತೆರೆ ಮತ್ತು ಸಿನಿಮಾಗಳಲ್ಲಿ ದಿಲೀಪ್ ರಾಜ್ ಅವರು ಫೇಮಸ್ ಆಗಿದ್ದರು. ನಟನೆ ಮಾತ್ರವಲ್ಲದೇ ಡಬ್ಬಿಂಗ್ ಕಲಾವಿದನಾಗಿ, ಧಾರಾವಾಹಿ ನಿರ್ಮಾಪಕನಾಗಿ ಅವರು ಗುರುತಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಸಾಧನೆ ಮಾಡಬೇಕು ಎಂಬ ಅಪಾರ ಕನಸು ಕಟ್ಟಿಕೊಂಡಿದ್ದ ಅವರು ಈಗ ಬಾರದ ಲೋಕಕ್ಕೆ ತೆರಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us