AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರನ್ನು ಬೈದು ಹೋದವರ ಕಣ್ತೆರೆಸಲು ಸಿದ್ಧವಾಯ್ತು ‘ಡೋಂಟ್​ ಬ್ಲೇಮ್ ಬೆಂಗಳೂರು’ ಸಾಂಗ್​

ಖಾಸಗಿ ಸುದ್ದಿ ವಾಹಿನಿಯಲ್ಲಿ ಕ್ರೈಮ್​ ರಿಪೋರ್ಟರ್​ ಆಗಿದ್ದ ತಿಮ್ಮೇಗೌಡ ಅವರಿಗೆ ಸಂಗೀತದ ಮೇಲೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ, ಕೆಲಸ ತೊರದು ಹಂಸಲೇಖ ಅವರ ಶಿಷ್ಯರಾದರು. ಅಲ್ಲಿ 2 ವರ್ಷ ಕಲಿತ ನಂತರ, ಅವರ ಬತ್ತಳಿಕೆಯಿಂದ ಮೂಡಿ ಬಂದ ಮೊದಲ ಹಾಡು ಇದಾಗಿದೆ.

ಬೆಂಗಳೂರನ್ನು ಬೈದು ಹೋದವರ ಕಣ್ತೆರೆಸಲು ಸಿದ್ಧವಾಯ್ತು ‘ಡೋಂಟ್​ ಬ್ಲೇಮ್ ಬೆಂಗಳೂರು’ ಸಾಂಗ್​
ಬೆಂಗಳೂರನ್ನು ಬೈದು ಹೋದವರ ಕಣ್ತೆರೆಸಲು ಸಿದ್ಧವಾಯ್ತು ‘ಡೋಂಟ್​ ಬ್ಲೇಮ್ ಬೆಂಗಳೂರು’ ಸಾಂಗ್​
Follow us
ರಾಜೇಶ್ ದುಗ್ಗುಮನೆ
|

Updated on:Jun 10, 2021 | 9:45 PM

ಬದುಕು ಕಟ್ಟಿಕೊಳ್ಳಬೇಕು ಎನ್ನುವ ಕಾರಣಕ್ಕೆ ಸಾಕಷ್ಟು ಜನರು ಬೆಂಗಳೂರಿಗೆ ತೆರಳಿದ್ದಾರೆ. ಆದರೆ, ಕೊವಿಡ್​ ಕಾಣಿಸಿಕೊಂಡ ನಂತರದಲ್ಲಿ ಅನೇಕರು ಹುಟ್ಟೂರಿಗೆ ಮರಳಿದ್ದಾರೆ. ಅಷ್ಟೇ ಅಲ್ಲ, ಬೆಂಗಳೂರಿನಿಂದ ಮರಳುವಾಗ ಬದುಕು ಕೊಟ್ಟ ಊರನ್ನು ತೆಗಳಿದ್ದಾರೆ. ಈ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆಗಳು ನಡೆದಿದ್ದವು. ತಿಮ್ಮೇಗೌಡ ಎಂಜೆ ಅವರು ಈ ಬಗ್ಗೆ ಹಾಡನ್ನೇ ಸಿದ್ಧಪಡಿಸಿದ್ದಾರೆ. ಈ ಮೂಲಕ ಜನರ ಕಣ್ತೆರಿಸುವ ಪ್ರಯತ್ನ ಮಾಡಿದ್ದಾರೆ.

ಹಾಡಿನ ಪರಿಕಲ್ಪನೆ ಹುಟ್ಟಿದ್ದರ ಬಗ್ಗೆ ತಿಮ್ಮೇಗೌಡ ಟಿವಿ9 ಕನ್ನಡ ಡಿಜಿಟಲ್​ ಜತೆಗೆ ಮಾತನಾಡಿದ್ದಾರೆ. ‘ಬೆಂಗಳೂರಿಗೆ ಬಂದು ಸಾಕಷ್ಟು ಜನರು ಬದುಕು ಕಟ್ಟಿಕೊಂಡಿದ್ದಾರೆ. ಕೊರೊನಾ ಬಂತು ಎನ್ನುವ ಒಂದೇ ಕಾರಣಕೊಟ್ಟು ಅನೇಕರು ಬದುಕು ಕೊಟ್ಟ ಊರಿಗೆ ಬೈದು ಹೋದರು. ಇದನ್ನು ಸುದ್ದಿವಾಹಿನಿಗಳಲ್ಲಿ ನೋಡಿದಾಗ ನನಗೆ ಬೇಸರವಾಯಿತು. ಜನ್ಮಕೊಟ್ಟ ತಾಯಿ- ಬದುಕು ಕೊಟ್ಟ ನಗರ ಎರಡೂ ಒಂದೇ. ಆಗ ನನಗೆ ಈ ಕಲ್ಪನೆ ಹುಟ್ಟಿಕೊಂಡಿತು’ ಎನ್ನುತ್ತಾರೆ ಅವರು.

‘ಈ ಕಲ್ಪನೆ ಬಗ್ಗೆ ನಮ್ಮ ಟೀಂ ಜತೆ ಮಾತನಾಡಿದೆ. ಎಲ್ಲರೂ ಈ ಕಾನ್ಸೆಪ್ಟ್​ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗಾಗಿ, ನಾನು ಈ ಪರಿಕಲ್ಪನೆಗೆ ಸಾಹಿತ್ಯ ಬರೆದು, ಸಂಗೀತ ಸಂಯೋಜನೆ ಮಾಡಿದೆ. ಗಾಯಕ ಅಶ್ವಿನ್ ಶರ್ಮಾ ಈ ಹಾಡನ್ನು ಹಾಡಿದರು. ಪ್ರಣಿತಾ ಸುಭಾಷ್​, ವಸಿಷ್ಠ ಸಿಂಹ ಸೇರಿ ಸಾಕಷ್ಟು ಸೆಲೆಬ್ರಿಟಿಗಳು ಬೈಟ್​ ಕಳುಹಿಸಿಕೊಟ್ಟರು. ಈ ಹಾಡು ತುಂಬಾನೇ ಕಡಿಮೆ ಬಜೆಟ್​ನಲ್ಲಿ ಸಿದ್ಧಗೊಂಡಿದೆ. ಇದಕ್ಕೆ ಕಾರಣ ನನ್ನ ಟೀಂ. ಅವರೆಲ್ಲರಿಗೂ ನಾನು ಈ ಸಂದರ್ಭದಲ್ಲಿ ಧನ್ಯವಾದ ಅರ್ಪಿಸಲೇಬೇಕು. ಈ ಹಾಡಿಗೆ ಎಲ್ಲ ಕಡೆಯಿಂದ ಒಳ್ಳೆಯ ರೆಸ್ಪಾನ್ಸ್​ ಬರುತ್ತಿದೆ ಎಂದು ಸಂತಸ ಹಂಚಿಕೊಳ್ಳುತ್ತಾರೆ’ ತಿಮ್ಮೇಗೌಡ.

ಈ ಹಾಡಿನ ಪರಿಕಲ್ಪನೆ, ಸಾಹಿತ್ಯ ಮತ್ತು ಸಂಗೀತ ಸಂಯೋಜನೆಯನ್ನು ತಿಮ್ಮೇಗೌಡ ಮಾಡಿದ್ದಾರೆ. ಹಾಡಿಗೆ ಗಾಯಕ ಅಶ್ವಿನ್ ಶರ್ಮ ಧ್ವನಿ ನೀಡಿದ್ದಾರೆ. ಪಂಕಜ್ ಅವರು ಸಂಗೀತ ನಿರ್ಮಾಣ ಮಾಡಿದ್ದು, ಕ್ರಿಯೇಟಿವ್ ಹೆಡ್ ಆಗಿ ಅಭಿಷೇಕ್, ಎಡಿಟಿಂಗ್‌ನಲ್ಲಿ ಕಿರಣ್, ಪ್ರೊಡಕ್ಷನ್ ವಿನ್ಯಾಸಕಾರರಾಗಿ ಮಮತಾ ಮಾರ್ದಲ ಕೆಲಸ ಮಾಡಿದ್ದಾರೆ.

ತಿಮ್ಮೇಗೌಡ

ಖಾಸಗಿ ಸುದ್ದಿ ವಾಹಿನಿಯಲ್ಲಿ ಕ್ರೈಮ್​ ರಿಪೋರ್ಟರ್​ ಆಗಿದ್ದ ತಿಮ್ಮೇಗೌಡ ಅವರಿಗೆ ಸಂಗೀತದ ಮೇಲೆ ಎಲ್ಲಿಲ್ಲದ ಆಸಕ್ತಿ. ಹೀಗಾಗಿ, ಕೆಲಸ ತೊರೆದು ಹಂಸಲೇಖ ಅವರ ಶಿಷ್ಯರಾದರು. ಅಲ್ಲಿ 2 ವರ್ಷ ಕಲಿತ ನಂತರ, ಅವರ ಬತ್ತಳಿಕೆಯಿಂದ ಮೂಡಿ ಬಂದ ಮೊದಲ ಹಾಡು ಇದಾಗಿದೆ. ತಿಮ್ಮೇಗೌಡ ಅವರಿಗೆ ಮ್ಯೂಸಿಕ್​ ವಿಡಿಯೋಗಳನ್ನು ಮಾಡುವ ಕನಸು ಇದೆ. ಈ ಮೊದಲು ಅವರು ‘ತಂಬೂರಿ’ ಹೆಸರಿನ ಕಿರುಚಿತ್ರ ಮಾಡಿದ್ದರು.

ಇದನ್ನೂ ಓದಿ: Bengaluru Unlock : ಸೋಮವಾರ ಬೆಳಗ್ಗೆ 6 ಗಂಟೆಯಿಂದಲೇ ಬೆಂಗಳೂರು ಅನ್​ಲಾಕ್

Published On - 9:35 pm, Thu, 10 June 21

ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನೆಲಮಂಗಲದಲ್ಲಿ ಭಾರೀ ಮಳೆ: ರಾಷ್ಟ್ರೀಯ ಹೆದ್ದಾರಿ ಜಲಾವೃತ, ಟ್ರಾಫಿಕ್ ಜಾಮ್
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ನಾಗೇಶ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಸ್ನೇಹಿತರೊಂದಿಗೆ ಸೇರಿ ತಂದೆಯನ್ನೇ ಕೊಂದ ಮಗ: ಪ್ರಕರಣದ ಅಸಲಿಯತ್ತು ಇಲ್ಲಿದೆ
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಹಿಂದೊಮ್ಮೆ ಪಾಕಿಸ್ತಾನ ಫೈರ್ ಮಾಡಿದ ಮಿಸೈಲ್ 5 ವರ್ಷದ ನಂತರ ಸಿಡಿದಿತ್ತು!
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಆಡಿದ ಮಾತಿಗೆ ಕ್ಷಮೆ ಯಾಚಿಸಿದ ಮಧ್ಯಪ್ರದೇಶದ ಮಂತ್ರಿ ವಿಜಯ್ ಶಾ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ಒಪ್ಪಿಕೊಂಡಷ್ಟು ಅನುದಾನವನ್ನು ಕೇಂದ್ರ ಬಿಡುಗಡೆ ಮಾಡಬೇಕು: ಸಿದ್ದರಾಮಯ್ಯ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ರಾಮನ ಹಾಡು ಹಾಡಿ ಮಗುವ ಮಲಗಿಸಿದ ನಟಿ ಹರಿಪ್ರಿಯಾ, ವಿಡಿಯೋ ನೋಡಿ
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ಸಿಂದಗಿ ಡಿಪೋದಲ್ಲಿ ಡೀಸೆಲ್​​ ಸಮಸ್ಯೆ, ನಿಂತಲ್ಲೇ ನಿಂತ ಬಸ್​ಗಳು..!
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ರೌಡಿಶೀಟರ್ ಎಂದ ಮಾತ್ರಕ್ಕೆ ಎಲ್ಲರೂ ರೌಡಿಶೀಟರ್​​ಗಲ್ಲ: ಸಿಟಿ ರವಿ
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​
ಅನೀಸುದ್ದೀನ್ ಹೆಸರಿನ ವ್ಯಕ್ತಿಯಿಂದ ಎಕ್ಸ್ ಹ್ಯಾಂಡಲ್​ನಲ್ಲಿ ಪೋಸ್ಟ್​