‘ಶಿವಣ್ಣ, ಪ್ರಕಾಶ್ ರೈ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ’; ಸಿದ್ದಾರ್ಥ್

|

Updated on: Oct 07, 2023 | 6:36 AM

ಈ ಘಟನೆಯನ್ನು ಪ್ರಕಾಶ್ ರಾಜ್ ಹಾಗೂ ಶಿವರಾಜ್​ಕುಮಾರ್ ಖಂಡಿಸಿದರು. ಸೋಶಿಯಲ್ ಮೀಡಿಯಾ ಮೂಲಕ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದರು. ಶಿವರಾಜ್​ಕುಮಾರ್ ಅವರು ಬಂದ್ ದಿನ ಈ ಘಟನೆಯನ್ನು ಖಂಡಿಸಿದರು. ಕನ್ನಡಿಗರ ಪರವಾಗಿ ಇವರು ಕ್ಷಮೆ ಕೇಳಿದರು. ಇದಕ್ಕೆ ಸಿದ್ದಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಶಿವಣ್ಣ, ಪ್ರಕಾಶ್ ರೈ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ’; ಸಿದ್ದಾರ್ಥ್
ಪ್ರಕಾಶ್-ಸಿದ್ದಾರ್ಥ್-ಶಿವಣ್ಣ
Follow us on

ಕೆಲ ದಿನಗಳ ಹಿಂದೆ ತಮಿಳು ನಟ ಸಿದ್ದಾರ್ಥ್ ಅವರು ಬೆಂಗಳೂರಿಗೆ ಬಂದಿದ್ದರು. ಈ ವೇಳೆ ಕೆಲ ಕನ್ನಡ ಪರ ಸಂಘಟನೆಗಳು ಅವರ ಸುದ್ದಿಗೋಷ್ಠಿಗೆ ಅಡಚಣೆ ಉಂಟು ಮಾಡಿದ್ದರು. ಇದರಿಂದ ಅವರು ಸುದ್ದಿಗೋಷ್ಠಿಯಿಂದ ಅರ್ಧಕ್ಕೆ ಹೊರ ನಡೆಯಬೇಕಾದ ಪರಿಸ್ಥಿತಿ ಬಂದೊದಗಿತ್ತು. ಈ ವಿಚಾರ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಪ್ರಕಾಶ್ ರಾಜ್ (Prakash Raj) ಹಾಗೂ ಶಿವರಾಜ್​ಕುಮಾರ್ ಅವರ ಸಿದ್ದಾರ್ಥ್​ಗೆ ಕ್ಷಮೆ ಕೇಳಿದರು. ಈ ಕುರಿತು ಸಿದ್ದಾರ್ಥ್ ಮಾತನಾಡಿದ್ದಾರೆ. ಅವರ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ತಮಿಳುನಾಡಿಗೆ ಕಾವೇರಿ ನೀರು ಬಿಡುವ ವಿಚಾರದಲ್ಲಿ ಭಾರೀ ಪ್ರತಿಭಟನೆಗಳು ನಡೆದವು. ತಮಿಳು ಸಿನಿಮಾಗಳನ್ನು ಬ್ಯಾನ್ ಮಾಡಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂತು. ಈ ಸಂದರ್ಭದಲ್ಲಿ ಎಸ್​ಆರ್​ವಿ ಥಿಯೇಟರ್​ನಲ್ಲಿ ಸಿದ್ದಾರ್ಥ್ ಸುದ್ದಿಗೋಷ್ಠಿ ಆಯೋಜನೆ ಮಾಡಿದ್ದರು. ಅವರು ನಟಿಸಿ, ನಿರ್ಮಿಸಿರುವ ‘ಚಿಕ್ಕು’ ಸಿನಿಮಾದ ಶೋ ಕೂಡ ಇತ್ತು. ಆದರೆ, ಕನ್ನಡ ಪರ ಹೋರಾಟಗಾರರು ಸುದ್ದಿಗೋಷ್ಠಿಗೆ ಅಡಚಣೆ ಮಾಡಿದರು. ಹೀಗಾಗಿ, ಸಿದ್ದಾರ್ಥ್ ಅವರು ಅರ್ಧಕ್ಕೆ ಹೊರ ನಡೆದರು.

ಈ ಘಟನೆಯನ್ನು ಪ್ರಕಾಶ್ ರಾಜ್ ಹಾಗೂ ಶಿವರಾಜ್​ಕುಮಾರ್ ಖಂಡಿಸಿದರು. ಸೋಶಿಯಲ್ ಮೀಡಿಯಾ ಮೂಲಕ ಪ್ರಕಾಶ್ ರಾಜ್ ಧ್ವನಿ ಎತ್ತಿದ್ದರು. ಶಿವರಾಜ್​ಕುಮಾರ್ ಅವರು ಬಂದ್ ದಿನ ಈ ಘಟನೆಯನ್ನು ಖಂಡಿಸಿದರು. ಕನ್ನಡಿಗರ ಪರವಾಗಿ ಇವರು ಕ್ಷಮೆ ಕೇಳಿದರು. ಇದಕ್ಕೆ ಸಿದ್ದಾರ್ಥ್ ಸಂತಸ ವ್ಯಕ್ತಪಡಿಸಿದ್ದಾರೆ.

‘ಶಿವರಾಜ್​ಕುಮಾರ್ ಹಾಗೂ ಪ್ರಕಾಶ್ ರಾಜ್ ಅವರ ಕ್ಷಮೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ಆದರೆ, ಅವರು ಯಾವುದೇ ತಪ್ಪು ಮಾಡಿಲ್ಲ. ಇದು ಅವರಿಂದ ಆದ ದೋಷ ಕೂಡ ಅಲ್ಲ. ಅವರು ಕ್ಷಮೆ ಕೇಳುವ ಅಗತ್ಯವೇ ಇರಲಿಲ್ಲ. ಆದರೂ ಅವರು ಸಾರಿ ಎಂದರು. ಇದಕ್ಕೆ ಅವರ ಉದಾರ ಹೃದಯವೇ ಕಾರಣ. ಇದಕ್ಕೆ ನಾನು ಅವರಿಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಸಿದ್ದಾರ್ಥ್.

ಇದನ್ನೂ ಓದಿ: ‘​ನಮ್ಮ ಇಂಡಸ್ಟ್ರಿ ಪರವಾಗಿ ಸಿದ್ದಾರ್ಥ್​ಗೆ ನಾನು ಕ್ಷಮೆ ಕೇಳುತ್ತೇನೆ’; ನೇರ ಮಾತಲ್ಲಿ ಹೇಳಿದ ಶಿವಣ್ಣ

‘ಚಿಕ್ಕು’ ಪ್ರದರ್ಶನ ಕಾಣುವ ಸಂದರ್ಭದಲ್ಲಿ ಕರ್ನಾಟಕದಲ್ಲಿ ಬಂದ್ ಇತ್ತು ಎಂದು ಕೆಲವರು ಸುದ್ದಿ ಹಬ್ಬಿಸಿದ್ದರು. ಇದಕ್ಕೆ ಅವರು ಸ್ಪಷ್ಟನೆ ನೀಡಿದ್ದಾರೆ. ನಮ್ಮ ಸಿನಿಮಾ ರಿಲೀಸ್ ಆದಾಗ ಬಂದ್ ಇರಲಿಲ್ಲ ಎಂದಿದ್ದಾರೆ ಸಿದ್ದಾರ್ಥ್.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:06 pm, Fri, 6 October 23