Dwarakish: ದ್ವಾರಕೀಶ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು; ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ನಟ

|

Updated on: Apr 30, 2023 | 2:29 PM

‘ನಿಮ್ಮ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ಗಟ್ಟಿಮುಟ್ಟಾಗಿದ್ದೀನಿ, ಯಾವುದೇ ಚಿಂತೆ ಇಲ್ಲದೇ ನಗುನಗುತ್ತಾ ಇದ್ದೇನೆ’ ಎಂದು ದ್ವಾರಕೀಶ್​ ಹೇಳಿದ್ದಾರೆ.

Dwarakish: ದ್ವಾರಕೀಶ್ ಸಾವಿನ ಬಗ್ಗೆ ಸುಳ್ಳು ಸುದ್ದಿ ಹರಡಿದ ಕಿಡಿಗೇಡಿಗಳು; ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ ನಟ
ದ್ವಾರಕೀಶ್
Follow us on

ಸೋಶಿಯಲ್​ ಮೀಡಿಯಾದಲ್ಲಿ ಎಲ್ಲ ಸುದ್ದಿಗಳು ಬಹುಬೇಗ ಹರಡುತ್ತವೆ. ಅದರಲ್ಲೂ ನೆಗೆಟಿವ್​ ವಿಚಾರಗಳು ಕಾಡ್ಗಿಚ್ಚಿನಂತೆ ಹಬ್ಬುತ್ತವೆ. ಅದನ್ನೇ ಬಂಡವಾಳ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಸುಳ್ಳು ಸುದ್ದಿಗಳನ್ನು (Fake News) ಹಬ್ಬಿಸುತ್ತಾರೆ. ಸೆಲೆಬ್ರಿಟಿಗಳ ಸಾವಿನ ಬಗ್ಗೆಯೂ ವದಂತಿ (Death Hoax) ಹರಡಿಸಲಾಗುತ್ತದೆ. ಕನ್ನಡ ಚಿತ್ರರಂಗದ ಹಿರಿಯ ನಟ ದ್ವಾರಕೀಶ್ ಬಗ್ಗೆಯೂ ಅಂಥ ಸುಳ್ಳು ಸುದ್ದಿ ಹರಡಿದೆ. ಆ ವದಂತಿ ಕೇಳಿದ ಅಭಿಮಾನಿಗಳಿಗೆ ಒಂದರೆಕ್ಷಣ ಆತಂಕ ಆಗಿದ್ದು ನಿಜ. ಆದರೆ ಆ ಕುರಿತಾಗಿ ಸ್ವತಃ ದ್ವಾರಕೀಶ್​ (Dwarakish) ಅವರು ಸ್ವಷ್ಟನೆ ನೀಡಿದ್ದಾರೆ. ‘ನಾನು ಚೆನ್ನಾಗಿದ್ದೀನಿ’ ಎಂದು ಅವರು ಹೇಳಿದ್ದಾರೆ. ಈ ವಿಡಿಯೋ ನೋಡಿದ ಬಳಿಕ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ.

‘ಎಲ್ಲರಿಗೂ ನಮಸ್ಕಾರ.. ನಾನು ನಿಮ್ಮ ದ್ವಾರಕೀಶ್​. ನೀವೇ ಸಾಕಿದ ದ್ವಾರಕೀಶ್​. ನಿಮ್ಮ ಆಶೀರ್ವಾದದಿಂದ ನಾನು ಚೆನ್ನಾಗಿದ್ದೇನೆ. ನಿಮ್ಮ ಆಶೀರ್ವಾದ ನನಗೆ ಬೇಕು. ನಾನು ಗಟ್ಟಿಮುಟ್ಟಾಗಿದ್ದೀನಿ. ಯಾವುದೇ ಚಿಂತೆ ಇಲ್ಲದೇ ನಗುನಗುತ್ತಾ ಇದ್ದೇನೆ. ನಿಮ್ಮ ಪ್ರೀತಿ, ವಿಶ್ವಾಸ ಇದೇ ರೀತಿ ಇರಲಿ. ನಿಮ್ಮ ಆಶೀರ್ವಾದ ಇರುವ ತನಕ ನನಗೆ ಏನೂ ತೊಂದರೆ ಆಗುವುದಿಲ್ಲ. ಐ ಆ್ಯಮ್​ ಫೈನ್​’ ಎಂದು ದ್ವಾರಕೀಶ್​ ಹೇಳಿದ್ದಾರೆ.

ಕನ್ನಡ ಚಿತ್ರರಂಗಕ್ಕೆ ದ್ವಾರಕೀಶ್​ ಅವರು ನೀಡಿದ ಕೊಡುಗೆ ಅಪಾರ. ನಟನಾಗಿ, ನಿರ್ದೇಶಕನಾಗಿ, ನಿರ್ಮಾಪಕನಾಗಿ ಅವರು ತಮ್ಮ ಛಾಪು ಮೂಡಿಸಿದ್ದಾರೆ. 1966ರಿಂದ ಇಂದಿನ ತನಕವೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ‘ದ್ವಾರಕೀಶ್​ ಚಿತ್ರ’ ನಿರ್ಮಾಣ ಸಂಸ್ಥೆ ಮೂಲಕ ಅವರು ಹಲವಾರು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಡಾ. ರಾಜ್​ಕುಮಾರ್​, ಡಾ. ವಿಷ್ಣುವರ್ಧನ್​ ಮುಂತಾದ ಲೆಜೆಂಡರಿ ನಟರ ಜೊತೆ ಕೆಲಸ ಮಾಡಿ ಗಮನ ಸೆಳೆದಿದ್ದಾರೆ.

ಇದನ್ನೂ ಓದಿ
Dwarakish: ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್​​ ಘೋಷಣೆ
ದ್ವಾರಕೀಶ್​ಗೋಸ್ಕರ ವಿಶೇಷ ಹಾಡು ಹಾಡಿದ ನಟಿ ಭವ್ಯಾ
ಸಾಲದ ಹಣ ವಾಪಸ್​ ನೀಡಲು ದ್ವಾರಕೀಶ್​ಗೆ ಕೋರ್ಟ್​ ಆದೇಶ​; ಅವರು ಪಡೆದಿರುವ ಸಾಲ ಎಷ್ಟು?
ಹಿರಿಯ ನಟ ದ್ವಾರಕೀಶ್​ ಪತ್ನಿ ಅಂಬುಜಾ ನಿಧನ! ಚಿತ್ರರಂಗದ ಸಂತಾಪ

ಇದನ್ನೂ ಓದಿ: Dwarakish: ಸಕಲಕಲಾವಲ್ಲಭ ಹಿರಿಯ ನಟ ದ್ವಾರಕೀಶ್ ಅವರಿಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್​​ ಘೋಷಣೆ

ಕನ್ನಡ ಚಿತ್ರಗಳಷ್ಟೇ ಅಲ್ಲದೇ ಹಿಂದಿ ಸಿನಿಮಾಗಳನ್ನು ಸಹ ನಿರ್ಮಾಣ ಮಾಡಿದ್ದಾರೆ. ಚಿತ್ರರಂಗಕ್ಕೆ ಅವರು ಮಾಡಿದ ಸೇವೆಯನ್ನು ಮನಗೊಂಡು ಬೆಂಗಳೂರು ವಿಶ್ವವಿದ್ಯಾನಿಲಯ 2022ರ ಡಿ. 5ರಂದು ನಡೆದ 57ನೇ ಘಟಿಕೋತ್ಸವದಲ್ಲಿ ದ್ವಾರಕೀಶ್​ ಅವರಿಗೆ ಗೌರವ ಡಾಕ್ಟರೇಟ್​ ಪ್ರದಾನ ಮಾಡಿತ್ತು. ದ್ವಾರ​ಕೀಶ್ ಅವರು 80ನೇ ವರ್ಷಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ 2022ರಲ್ಲಿ ಕರ್ನಾಟಕ ಫಿಲ್ಮ್​ ಚೇಂಬರ್​ನಲ್ಲಿ ಸನ್ಮಾನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಆಗ ದ್ವಾರಕೀಶ್ ಅವರು ಭಾವುಕರಾಗಿದ್ದರು. ನಟಿ ಭವ್ಯಾ ಅವರು ದ್ವಾರಕೀಶ್ ಅವರಿಗಾಗಿ ವಿಶೇಷ ಹಾಡನ್ನು ಹಾಡಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 2:27 pm, Sun, 30 April 23