AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆ ಹಿಂದಿ ಸಿನಿಮಾ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’; ಕನ್ನಡ ಚಿತ್ರಕ್ಕೆ ಸ್ಕ್ರೀನ್ ಸಿಗದೇ ನೋವು ಹೊರಹಾಕಿದ ನಿರ್ದೇಶಕ

Hareesha Vayassu 36 | Gururaj Jyesta: ‘ಹರೀಶ ವಯಸ್ಸು 36’ ಮಾರ್ಚ್ 11ರಂದು ತೆರೆಕಂಡಿತ್ತು. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆಗಳೂ ಲಭ್ಯವಾಗಿತ್ತು. ಆದರೆ ಇದೀಗ ಹಿಂದಿ ಸಿನಿಮಾವೊಂದರ ಕಾರಣದಿಂದ ಚಿತ್ರಕ್ಕೆ ಸ್ಕ್ರೀನ್​ಗಳ ಸಮಸ್ಯೆ ಆಗಿದೆ. ಈ ಬಗ್ಗೆ ನಿರ್ದೇಶಕ ಗುರುರಾಜ್ ಜ್ಯೇಷ್ಠ ನೋವು ತೋಡಿಕೊಂಡಿದ್ದಾರೆ.

‘ಆ ಹಿಂದಿ ಸಿನಿಮಾ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’; ಕನ್ನಡ ಚಿತ್ರಕ್ಕೆ ಸ್ಕ್ರೀನ್ ಸಿಗದೇ ನೋವು ಹೊರಹಾಕಿದ ನಿರ್ದೇಶಕ
‘ಹರೀಶ ವಯಸ್ಸು 36’ ಪೋಸ್ಟರ್, ನಿರ್ದೇಶಕ ಗುರುರಾಜ್ ಜ್ಯೇಷ್ಠ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 15, 2022 | 7:34 PM

ಬೇರೆ ಭಾಷೆಯ ಸಿನಿಮಾಗಳಿಂದ ಕನ್ನಡ ಸಿನಿಮಾಗಳ ಪ್ರದರ್ಶನಕ್ಕೆ ಆಗುತ್ತಿರುವ ಸಮಸ್ಯೆಯ ಬಗ್ಗೆ ಈ ಹಿಂದೆ ಹಲವು ನಿರ್ದೇಶಕರು, ನಿರ್ಮಾಪಕರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದರು. ಬೇರೆ ಭಾಷೆಯ ದೊಡ್ಡ ಚಿತ್ರಗಳು ಪ್ರಾದೇಶಿಕ ಭಾಷೆಯ ಸಣ್ಣ ಸಣ್ಣ ಚಿತ್ರಗಳ ಸ್ಕ್ರೀನ್​ಗಳನ್ನು ಕಸಿದುಕೊಳ್ಳುತ್ತಿದೆ ಎನ್ನುವುದು ಮೊದಲಿನಿಂದ ಕೇಳಿಬರುತ್ತಿರುವ ಮಾತು. ಇದೀಗ ಹಿಂದಿ ಭಾಷೆಯ ಚಿತ್ರವೊಂದರಿಂದ ಕನ್ನಡದ ಚಿತ್ರವೊಂದು ಸಮಸ್ಯೆ ಎದುರಿಸುತ್ತಿದೆ ಎಂದು ನಿರ್ದೇಶಕರೋರ್ವರು ನೋವು ತೋಡಿಕೊಂಡಿದ್ದಾರೆ.  ಮಾರ್ಚ್ 11ರಂದು ತೆರೆಕಂಡಿದ್ದ ಕನ್ನಡದ ‘ಹರೀಶ ವಯಸ್ಸು 36’ (Hareesha Vayassu 36) ಚಿತ್ರ ಈ ಪರಿಸ್ಥಿತಿ ಎದುರಿಸುತ್ತಿದ್ದು, ನಿರ್ದೇಶಕರು ನೋವು ತೋಡಿಕೊಂಡಿದ್ದಾರೆ. ‘ಹರೀಶ್ ವಯಸ್ಸು 36’ ಚಿತ್ರವನ್ನು ನಿರ್ದೇಶಿಸಿದವರು ಗುರುರಾಜ್ ಜ್ಯೇಷ್ಠ. ತಮ್ಮ ಚಿತ್ರದ ಸ್ಕ್ರೀನ್ ಗಳನ್ನು ಕಸಿದು ಮತ್ತೊಂದು ಚಿತ್ರಕ್ಕೆ ನೀಡುತ್ತಿರುವುದರ ಬಗ್ಗೆ ಅವರು ನೋವು ತೋಡಿಕೊಂಡಿದ್ದಾರೆ. ಗುರುರಾಜ್ (Gururaj Jyesta) ಅವರ ಮಾತುಗಳು ಇಲ್ಲಿವೆ.

“ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಹಲವು ಪ್ರದರ್ಶನ ನೀಡಿ ‘ಹರೀಶ ವಯಸ್ಸು 36’ ಗೆದ್ದಿದೆ. ಮಂಗಳೂರಿನ ಮಾಲ್ ಒಂದರಲ್ಲಿ ಹೌಸ್ ಫುಲ್ ಆಗಿದ್ದು, ಮತ್ತೊಂದು ಮಲ್ಟಿಪ್ಲೆಕ್ಸ್​ಗೆ ಬಂದಿದ್ದೇವೆ. ಇಲ್ಲಿ ಸಿಹಿಸುದ್ದಿ ಹಾಗೂ ಕಹಿಸುದ್ದಿ ಎರಡೂ ಸಿಕ್ಕಿದೆ’’ ಎಂದು ಮಾತು ಆರಂಭಿಸಿದ್ದಾರೆ ಗುರುರಾಜ್.

‘‘ನಿನ್ನೆ (ಭಾನುವಾರ) ಚಿತ್ರ ಹೌಸ್ ಫುಲ್ ಆಗಿತ್ತು. ಇಂದು 50 ಪ್ರತಿಶತ ಭರ್ತಿಯಾಗಿದೆ. ಆದರೆ ನಾಳೆ (ಮಂಗಳವಾರ) ಯಾವುದೇ ಶೋಗಳಿಲ್ಲ. ಕಾರಣ, ಒಂದು ಹಿಂದಿ ಸಿನಿಮಾ ಬಂದಿದೆ. ಆ ಚಿತ್ರ ನಮ್ಮೆಲ್ಲರನ್ನೂ ಕೊಲ್ಲುತ್ತಿದೆ’’ ಎಂದು ನೋವು ಹೊರಹಾಕಿದ್ದಾರೆ ನಿರ್ದೇಶಕರು.

ಮುಂದುವರೆದು ಮಾತನಾಡಿರುವ ಅವರು, ‘‘ಆ ಹಿಂದಿ ಚಿತ್ರವನ್ನು ಎಲ್ಲರೂ ನೋಡಿ, ಅದರ ಬಗ್ಗೆ ಎರಡು ಮಾತಿಲ್ಲ. ಆದರೆ, ನಮಗೆ ಏನು ಪರಿಸ್ಥಿತಿ ಬಂದಿದೆ ಎಂದರೆ, ನಿರ್ಮಾಪಕರು ಹಾಕಿದ ದುಡ್ಡಿಗೆ ಕನ್ನಡದ ಜನತೆ ಎಷ್ಟೇ ಕಷ್ಟಪಟ್ಟರೂ ಹಣ ಹಿಂದಿರುಗಿಸಲು ಸಾಧ್ಯವಾಗುತ್ತಿಲ್ಲ. ನಿರ್ಮಾಪಕರು ಇನ್ನು ಮುಂದೆ ಕನ್ನಡ ಸಿನಿಮಾ ಮಾಡುವುದಕ್ಕೆ ಸಾಧ್ಯವಿಲ್ಲವೇ ಎಂಬ ಪ್ರಶ್ನೆ ಮೂಡಿದೆ. ಇದು ಬಹಳ ಬೇಸರದ ಸುದ್ದಿ’’ ಎಂದು ಗುರುರಾಜ್ ನೋವು ತೋಡಿಕೊಂಡಿದ್ದಾರೆ.

‘ಹರೀಶ ವಯಸ್ಸು 36’ ಚಿತ್ರದಲ್ಲಿ ಪುನೀತ್ ರಾಜ್​ಕುಮಾರ್ ಹಾಡಿದ್ದಾರೆ. ಅಪ್ಪು ಅವರೇ ಹಾಡಿದ ಕನ್ನಡ ಸಿನಿಮಾವೊಂದಕ್ಕೆ ಕರ್ನಾಟಕದಲ್ಲೇ ವೇದಿಕೆ ಇಲ್ಲವೇ ಎನ್ನುವುದು ಗುರುರಾಜ್ ಅವರ ನೋವಿನ ಪ್ರಶ್ನೆ.

 ಇದನ್ನೂ ಓದಿ:

The Kashmir Files Review: ಕಾಶ್ಮೀರದ ಭಯಾನಕ ಇತಿಹಾಸ ಮರೆಯಬಾರದು; ಮರುಕಳಿಸಲೂಬಾರದು

‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬಳಿಕ ಶಿವಣ್ಣ ಭಾವುಕ ಮಾತು

Published On - 6:06 pm, Mon, 14 March 22

ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ವಿಮಾನ ಬಿದ್ದ ರಭಸಕ್ಕೆ ಮೆಡಿಕಲ್ ಕಾಲೇಜಿನ ಹಾಸ್ಟೆಲ್ ಹೇಗಾಗಿದೆ ನೋಡಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
ಶನಿವಾರದಂದು ಶ್ರೀ ವೆಂಕಟೇಶ್ವರನ ಆರಾಧನೆಯ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
Daily Horoscope: ಈ ರಾಶಿಯವರಿಗೆ ವೈರಾಗ್ಯದ ಭಾವನೆಗಳು ಕಾಡಬಹುದು
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಸೆಲೆಬ್ರಿಟಿಗಳಿಗೆ ‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ ಇಷ್ಟ ಆಯ್ತಾ?
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಗರ್ಭಾವಸ್ಥೆಯ ಹಸುವಿನ ಕೆಚ್ಚಲು ಕತ್ತರಿಸಿ ವಿಕೃತಿ ಮೆರೆದ ದುಷ್ಕರ್ಮಿಗಳು
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಇರಾನ್‌ ಮೇಲಿನ ಕ್ಷಿಪಣಿ ದಾಳಿ, ರಹಸ್ಯ ಕಾರ್ಯಾಚರಣೆಯ ವಿಡಿಯೋ ರಿಲೀಸ್
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
ಮಗಳ ಮದುವೆಗೆಂದು ಇಟ್ಟಿದ್ದ ಚಿನ್ನಾಭರಣ ದೋಚಿದ ಖದೀಮರು, ಕಣ್ಣೀರಿಟ್ಟ ತಾಯಿ
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
51 ಎಸೆತಗಳಲ್ಲಿ 151 ರನ್ ಚಚ್ಚಿದ ಫಿನ್ ಅಲೆನ್
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
‘ಎಡಗೈಯೇ ಅಪಘಾತಕ್ಕೆ ಕಾರಣ’ ಸಿನಿಮಾ: ಪ್ರಮಾಣಿಕ ವಿಮರ್ಶೆ ನೀಡಿದ ಐಂದ್ರಿತಾ
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್
ಇಂಥ ಘಟನೆಗಳು ಜರುಗದಂತೆ ಮುಂಜಾಗ್ರತೆ ಕ್ರಮವಹಿಸಬೇಕು: ಜಗದೀಶ್ ಶೆಟ್ಟರ್