AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೀತಸಾಹಿತಿ ಕವಿರಾಜ್​ ಜನ್ಮದಿನ: ದೊಡ್ಡ ಪಾರ್ಟಿ ಬೇಡ, ಬೈಟೂ ಟೀ ಸಾಕು ಅಂತಿದೆ ‘ಭೀಮ’ ತಂಡ

ಅನೇಕ ಸ್ಟಾರ್​ ನಟರ ಸಿನಿಮಾಗಳಿಗೆ ಕವಿರಾಜ್​ ಅವರು ಸಾಂಗ್​ ಬರೆದು ಸೈ ಎನಿಸಿಕೊಂಡಿದ್ದಾರೆ. ದುನಿಯಾ ವಿಜಯ್​ ಮತ್ತು ಕವಿರಾಜ್​ ಅವರದ್ದು ಹಿಟ್​ ಜೋಡಿ. ‘ಭೀಮ’ ಸಿನಿಮಾದಲ್ಲೂ ಅವರ ಕಾಂಬಿನೇಷನ್​ ಇರುವುದರಿಂದ ನಿರೀಕ್ಷೆ ಹೆಚ್ಚಿದೆ.

ಗೀತಸಾಹಿತಿ ಕವಿರಾಜ್​ ಜನ್ಮದಿನ: ದೊಡ್ಡ ಪಾರ್ಟಿ ಬೇಡ, ಬೈಟೂ ಟೀ ಸಾಕು ಅಂತಿದೆ ‘ಭೀಮ’ ತಂಡ
‘ಭೀಮ’ ಸಿನಿಮಾ ತಂಡದ ಜೊತೆ ಕವಿರಾಜ್​
ಮದನ್​ ಕುಮಾರ್​
|

Updated on: Aug 11, 2023 | 6:47 PM

Share

ಕನ್ನಡ ಚಿತ್ರರಂಗದಲ್ಲಿ ಗೀತಸಾಹಿತಿಯಾಗಿ, ನಿರ್ದೇಶಕನಾಗಿ ಕವಿರಾಜ್​ (Kavi Raj) ಅವರು ಗುರುತಿಸಿಕೊಂಡಿದ್ದಾರೆ. ಅವರ ಲೇಖನಿಯಿಂದ ನೂರಾರು ಸೂಪರ್​ ಹಿಟ್​ ಗೀತೆಗಳು ಮೂಡಿಬಂದಿವೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅವರು ಇಂದಿಗೂ ಬಹುಬೇಡಿಕೆಯ ಲಿರಿಸಿಸ್ಟ್​ ಆಗಿ ಮಿಂಚುತ್ತಿದ್ದಾರೆ. ಇಂದು (ಆಗಸ್ಟ್​ 11) ಅವರಿಗೆ ಜನ್ಮದಿನದ ಸಂಭ್ರಮ. ಅವರಿಗೆ ಎಲ್ಲರೂ ಶುಭಾಶಯ ತಿಳಿಸುತ್ತಿದ್ದಾರೆ. ಅನೇಕ ಸಿನಿಮಾಗಳಿಗೆ ಕವಿರಾಜ್​ ಅವರು ಸಾಹಿತ್ಯ ಬರೆಯುತ್ತಿದ್ದಾರೆ. ಆ ಪೈಕಿ ‘ಭೀಮ’ ಸಿನಿಮಾ (Bheema Movie) ಮೇಲೆ ವಿಶೇಷವಾದ ನಿರೀಕ್ಷೆ ಇದೆ. ದುನಿಯಾ ವಿಜಯ್​ (Duniya Vijay) ನಟನೆಯ ಈ ಸಿನಿಮಾ ತಂಡದಿಂದ ಇತ್ತೀಚೆಗಷ್ಟೇ ಒಂದು ಸುದ್ದಿ ಹೊರಬಿದ್ದಿದೆ. ‘ಬೇಡ ದೊಡ್ಡ ದೊಡ್ಡ ಪಾರ್ಟಿ, ಕುಡಿಸು ನೀ ಸಾಕು ಬೈಟೂ ಟೀ..’ ಎಂಬ ಸ್ಪೆಷಲ್​ ಸಾಂಗ್​ ಸಿದ್ಧವಾಗುತ್ತಿದೆ.

ಅನೇಕ ಸ್ಟಾರ್​ ನಟರ ಸಿನಿಮಾಗಳಿಗೆ ಕವಿರಾಜ್​ ಅವರು ಸಾಂಗ್​ ಬರೆದು ಸೈ ಎನಿಸಿಕೊಂಡಿದ್ದಾರೆ. ದುನಿಯಾ ವಿಜಯ್​ ಮತ್ತು ಕವಿರಾಜ್​ ಅವರದ್ದು ಹಿಟ್​ ಜೋಡಿ. ಈ ಹಿಂದೆ ದುನಿಯಾ ವಿಜಯ್​ ನಟನೆಯ ‘ಜಾನಿ ಮೇರ ನಾಮ್​ ಪ್ರೀತಿ ಮೇರ ಕಾಮ್​’ ಸಿನಿಮಾಗೆ ಕವಿರಾಜ್​ ಅವರು ಸಾಂಗ್​ ಬರೆದಿದ್ದರು. ‘ಊರಿಗೊಬ್ಳೆ ಪದ್ಮಾವತಿ..’ ಹಾಡು ಸೂಪರ್​ ಹಿಟ್​ ಆಗಿತ್ತು. ಆ ಗೀತೆಯಲ್ಲಿ ರಮ್ಯಾ ಅವರು ಡ್ಯಾನ್ಸ್​ ಮಾಡಿದ್ದರು. ಈಗ ‘ಭೀಮ’ ಸಿನಿಮಾದಲ್ಲಿ ಕವಿರಾಜ್ ಬರೆದಿರುವ ‘ಬೇಡ ದೊಡ್ಡ ದೊಡ್ಡ ಪಾರ್ಟಿ, ಕುಡಿಸು ನೀ ಸಾಕು ಬೈಟೂ ಟೀ..’ ಹಾಡು ಯಾವ ರೀತಿ ಮೂಡಿಬಂದಿದೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ.

‘ಭೀಮ’ ಸಿನಿಮಾಗೆ ಚರಣ್​ ರಾಜ್​ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ದುನಿಯಾ ವಿಜಯ್​ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ. ‘ಸಲಗ’ ಚಿತ್ರದಲ್ಲೂ ಚರಣ್ ರಾಜ್​ ಮತ್ತು ದುನಿಯಾ ವಿಜಯ್​ ಮೋಡಿ ಮಾಡಿದ್ದರು. ಈಗ ಅವರ ಜೊತೆಗೆ ಕವಿರಾಜ್​ ಕಾಂಬಿನೇಷನ್​ ಕೂಡ ಸೇರಿಕೊಂಡಿದೆ. ಈ ಸಿನಿಮಾ ಮೇಲೆ ಅಭಿಮಾನಿಗಳು ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ಇದನ್ನೂ ಓದಿ: Duniya Vijay: ಪಕ್ಕಾ ಅಭಿಮಾನಿಗೆ ವಿಶೇಷ ಪ್ರೀತಿ ತೋರಿಸಿದ ನಟ ದುನಿಯಾ ವಿಜಯ್

‘ಭೀಮ’ ಚಿತ್ರತಂಡದ ಬಗ್ಗೆ ಕವಿರಾಜ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಟೀಮ್​ ಜೊತೆ ಫೋಟೋ ಕ್ಲಿಕ್ಕಿಸಿದ ಸಂದರ್ಭ ಯಾವ ರೀತಿ ಇತ್ತು ಎಂಬುದನ್ನು ಅವರು ಕ್ಯಾಪ್ಷನ್​ ಮೂಲಕ ವಿವರಿಸಿದ್ದಾರೆ. ‘ಭೀಮನ ಟೀಂಯಿಂದ ಚರಣ್ ರಾಜ್ ಸಂಗೀತದಲ್ಲಿ ಒಂದು ಖಡಕ್ ಸಾಂಗ್ ಲೋಡಿಂಗ್. ಬೇಡ ಬೇಡವೆಂದರೂ ಛೇರ್ ಮೇಲೆ ನನ್ನ ಕೂರಿಸಿ, ತಾವು ಹಿಂದೆ ನಿಂತು ಒಬ್ಬ ತಂತ್ರಜ್ಞನಿಗೆ ಗೌರವ ನೀಡಿದ್ದು ಹೃದಯವಂತ ವಿಜಯ್ ಸರ್’ ಎಂದು ಕವಿರಾಜ್​ ಬರೆದುಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!