ಕೃಷ್ಣನ ಲೀಲಾಳಾದ ಶ್ರದ್ಧಾ ಶ್ರೀನಾಥ್

ಒಂದ್ ಕಾಲ ಇತ್ತು. ಯಾವ್ ಸಿನಿಮಾ ನೋಡೋದು. ಯಾವ ಸಿನಿಮಾ ಬಿಡೋದು ಅನ್ನೊ ಕಾಲವಿತ್ತು. ಆದ್ರೀಗ ಕೊರೊನಾ ಸಿನಿಮಾ ರಸಿಕರ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದೆ. ಹೊಚ್ಚ ಹೊಸ ಸಿನಿಮಾಗಳು ಥಿಯೇಟರ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಇಂತಹ ಸಿನಿಮಾಗಳಲ್ಲೊಂದು ಕೃಷ್ಣ ಆ್ಯಂಡ್ ಹಿಸ್ ಲೀಲಾ.. ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕಳೆದ ವರ್ಷದಿಂದ್ಲೇ ಪ್ರಚಾರ ಆರಂಭಿಸಿತ್ತು. ಆದ್ರೆ ಇನ್ನೇನು ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿ, ಎಲ್ಲಾ ಆಸೆಗಳಿಗೂ ತಣ್ಣೀರು ಸುರಿಸಿದೆ. ಅಂದ್ಹಾಗೆ ಈ […]

ಕೃಷ್ಣನ ಲೀಲಾಳಾದ ಶ್ರದ್ಧಾ ಶ್ರೀನಾಥ್
ಸಾಧು ಶ್ರೀನಾಥ್​

Updated on: Jun 22, 2020 | 6:57 PM

ಒಂದ್ ಕಾಲ ಇತ್ತು. ಯಾವ್ ಸಿನಿಮಾ ನೋಡೋದು. ಯಾವ ಸಿನಿಮಾ ಬಿಡೋದು ಅನ್ನೊ ಕಾಲವಿತ್ತು. ಆದ್ರೀಗ ಕೊರೊನಾ ಸಿನಿಮಾ ರಸಿಕರ ಈ ಸಂಭ್ರಮಕ್ಕೆ ತಣ್ಣೀರು ಸುರಿಸಿದೆ. ಹೊಚ್ಚ ಹೊಸ ಸಿನಿಮಾಗಳು ಥಿಯೇಟರ್​ನಲ್ಲಿ ಓಟಿಟಿಯಲ್ಲಿ ಬಿಡುಗಡೆಗೆ ತುದಿಗಾಲಲ್ಲಿ ನಿಂತಿವೆ. ಇಂತಹ ಸಿನಿಮಾಗಳಲ್ಲೊಂದು ಕೃಷ್ಣ ಆ್ಯಂಡ್ ಹಿಸ್ ಲೀಲಾ..

ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾ ಕಳೆದ ವರ್ಷದಿಂದ್ಲೇ ಪ್ರಚಾರ ಆರಂಭಿಸಿತ್ತು. ಆದ್ರೆ ಇನ್ನೇನು ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲಿ ಕೊರೊನಾ ವಕ್ಕರಿಸಿ, ಎಲ್ಲಾ ಆಸೆಗಳಿಗೂ ತಣ್ಣೀರು ಸುರಿಸಿದೆ. ಅಂದ್ಹಾಗೆ ಈ ಸಿನಿಮಾ ಬಗ್ಗೆ ಯಾಕಿಷ್ಟು ಕುತೂಹಲ ಅಂದ್ರೆ, ಕನ್ನಡದ ನಟಿ ಶ್ರದ್ಧಾ ಶ್ರೀನಾಥ್ ನಟಿಸಿದ್ದಾರೆ ಅನ್ನೋದು ಒಂದೆಡೆಯಾದ್ರೆ, ಇನ್ನೊಂದೆಡೆ ರಾಣಾ ದಗ್ಗುಬಾಟಿ ನಿರ್ಮಾಣ ಹಾಗೂ ರವಿಕಾಂತ್ ಪೆರುಪು ಅವರ ನಿರ್ದೇಶನವಿದೆ.

ನ್ಯಾಚುರಲ್ ಸ್ಟಾರ್ ನಾನಿ ಜೊತೆ ನಟಿಸಿದ್ದ ಶ್ರದ್ಧಾ ಶ್ರೀನಾಥ್​ಗೆ ತೆಲುಗು ಮಂದಿ ಭೇಷ್ ಅಂದಿದ್ರು. ಈ ವೇಳೆ ನಟಿಸಿದ ಮತ್ತೊಂದು ಸಿನಿಮಾನೇ ಕೃಷ್ಣ ಆ್ಯಂಡ್ ಹಿಸ್ ಲೀಲಾ. ಆದ್ರೆ, ಇನ್ನೇನು ಸಿನಿಮಾ ರಿಲೀಸ್ ಆಗ್ಬೇಕು ಅನ್ನುವಷ್ಟರಲ್ಲೇ ಕೊರೊನಾ ಮಾಹಾಮಾರಿ ಎಂಟ್ರಿ ಕೊಟ್ಟಿತ್ತು. ಹೀಗಾಗಿ ಈ ಸಿನಿಮಾ ಕಾದೂ ಕಾದು ಕೊನೆಗೂ ಓಟಿಟಿಯಲ್ಲಿ ಬಿಡುಗಡೆ ಸಿದ್ಧತೆ ನಡೆಸಿದೆ.

ಶ್ರದ್ಧಾ ಶ್ರೀನಾಥ್ ಜೊತೆ ಸೀರತ್ ಕಪೂರ್, ಶಾಲಿನಿ ವದ್ನಿಕಟ್ಟಿ ನಟಿಸಿದ್ರೆ, ಮೂವರಿಗೂ ಹೀರೋ ಆಗಿ ಸಿದ್ದು ಜಿನ್ನಲಗಡ್ಡ ಕಾಣಿಸಿಕೊಂಡಿದ್ದಾರೆ. ಮೂವರು ಯುವತಿಯರೊಂದಿಗೆ ಪ್ರೀತಿಯಲ್ಲಿ ಬೀಳುವ ನಾಯಕ ಯಾರನ್ನ ಆಯ್ಕೆ ಮಾಡಿಕೊಳ್ಳುತ್ತಾನೆ. ಅವರ ಭಾವನೆಗಳೇನು? ಅನ್ನೋದ ಸಿನಿಮಾದ ಕಥೆ. ಕೃಷ್ಣ ಆ್ಯಂಡ್ ಹಿಸ್ ಲೀಲಾ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಮಾಡಿರೋ ಚಿತ್ರತಂಡ, ಎಲ್ಲಿ ಬಿಡುಗಡೆಯಾಗುತ್ತೆ ಅಂತ ಹೇಳಿದ್ದಾರೆ. ಆದ್ರೆ, ಬಿಡುಗಡೆ ದಿನಾಂಕವನ್ನ ಮಾತ್ರ ರಿವೀಲ್ ಮಾಡಿಲ್ಲ -ಮುರಳಿ

Published On - 6:56 pm, Mon, 22 June 20

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us